ಮತದಾರರ ನೋಂದಣಿಗೆ ನ.23ರಿಂದ 25ರವರೆಗೆ ವಿಶೇಷ ಆಂದೋಲನ: ಅಭಿರಾಮ್ ಜಿ.ಶಂಕರ್ ಮೈಸೂರು: ದೇಶಾದ್ಯಂತ ನಡೆಯುವ ಮತದಾರರ ವಿಶೇಷ ನೋಂದಣಿ ಆಂದೋಲನ ಮೈಸೂರು ಜಿಲ್ಲೆಯಲ್ಲೂ ಸಹ ನವೆಂಬರ್ 23, 24 ಹಾಗೂ 25 ರಂದು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ. 2019ರ ಜನವರಿ 1ನೇ ತಾರೀಖಿಗೆ 18 ವರ್ಷ ತುಂಬುವ ಎಲ್ಲಾ ಯುವಕ-ಯುವತಿಯರಿಗೆ ಇದೊಂದು ಉತ್ತಮ ಅವಕಾಶ. ಈ ಅವಕಾಶವನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಕೆಲವು ಕಾರಣಗಳಿಗೆ ಮತದಾರರ ಪಟ್ಟಿಯಿಂದ ಹೆಸರು…
ಜಮೀನು, ಭೂ ಒತ್ತುವರಿ, ಅಕ್ರಮ ಕಟ್ಟಡ ತೆರವಿಗೆ ಮನವಿ
November 23, 2018ಮೈಸೂರು: ಮೈಸೂರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರು ವಾರ ನಡೆದ ಸಾರ್ವಜನಿಕ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಭೂ ಒತ್ತುವರಿ, ಅಕ್ರಮ ಕಟ್ಟಡ ನಿರ್ಮಾಣ ಹಾಗೂ ಖಾಲಿ ನಿವೇ ಶನಗಳಲ್ಲಿ ಕಸ, ಕಡ್ಡಿ, ಗಲೀಜು ಇತ್ಯಾದಿ ಸೇರಿದಂತೆ 15 ದೂರುಗಳು ಕೇಳಿ ಬಂದಿತು. ಜಟ್ಟಿಹುಂಡಿ ಗ್ರಾಮದ ಅರುಣ್ಕುಮಾರ್, ಬೆಟ್ಟದಪುರ ಗ್ರಾಮದ ನಟರಾಜು ದೂರ ವಾಣಿ ಮೂಲಕ ತಮ್ಮ ಗ್ರಾಮಗಳಲ್ಲಿ ಜಮೀನು ಮತ್ತು ಭೂ ಒತ್ತುವರಿ ಆಗಿರುವ ಬಗ್ಗೆ ಜಿಲ್ಲಾಧಿಕಾರಿಗಳ ಗಮನ ಸೆಳೆದರು. ಬೆಟ್ಟದ ಪುರದ ನಟರಾಜು, ಸರ್ವೆ…
ಚಾಮುಂಡಿಬೆಟ್ಟದ ನಂದಿ ಮೂರ್ತಿಗೆ ನ.25ರಂದು ಮಹಾಭಿಷೇಕ
November 23, 2018ಮೈಸೂರು: ಚಾಮುಂಡಿಬೆಟ್ಟದ ನಂದಿ ಮೂರ್ತಿಗೆ ನ.25ರಂದು ಬೆಳಿಗ್ಗೆ 9.30ರಿಂದ ಬೆಟ್ಟದ ಬಳಗ ಚಾರಿಟಬಲ್ ಟ್ರಸ್ಟ್ ವತಿಯಿಂದ 13ನೇ ವರ್ಷದ ಮಹಾಭಿಷೇಕ ಕಾರ್ಯಕ್ರಮ ಆಯೋ ಜಿಸಲಾಗಿದೆ ಎಂದು ಟ್ರಸ್ಟ್ನ ಕಾರ್ಯ ದರ್ಶಿ ಗೋವಿಂದ್ ತಿಳಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಹಲವು ವರ್ಷಗಳಿಂದ ಮೆಟ್ಟಿಲುಗಳ ಮೂಲಕ ಬೆಟ್ಟ ಹತ್ತುವ ಭಕ್ತರು ಸೇರಿ ಬೆಟ್ಟದ ಬಳಗ ಚಾರಿಟಬಲ್ ಟ್ರಸ್ಟ್ ರಚಿಸಿಕೊಂಡಿದ್ದು, ಕಳೆದ 13 ವರ್ಷದಿಂದ ಕಾರ್ತೀಕ ಮಾಸದ ಅಂಗವಾಗಿ ಬೆಟ್ಟದ ನಂದಿ…
ಮೈಸೂರಿನ ಓಶೋ ಗ್ಲಿಂಪ್ಸೆಯಲ್ಲಿ ಡಾ. ಅರಣ್ಯಕುಮಾರ್ ಅವರಿಂದ ಹಿಂದೂಸ್ಥಾನಿ ಸಂಗೀತ
November 23, 2018ಮೈಸೂರು: ಮೈಸೂರಿನ ಗೋಕುಲಂ 2ನೇ ಹಂತ, 6ನೇ ಮೇನ್, 16ನೇ ಕ್ರಾಸ್ನಲ್ಲಿರುವ ನಂ. 349 ಇಲ್ಲಿ ಓಶೋ ಗ್ಲಿಂಪ್ಸೆ ಯಲ್ಲಿ ನ.24ರಂದು ಸಂಜೆ 5.30ರಿಂದ 6.30 ರವರೆಗೆ ವಿಶ್ವ ವಿಖ್ಯಾತ ಸಂಗೀತ ಕಲಾವಿದ ಡಾ. ಅರಣ್ಯಕುಮಾರ್ ಅವರಿಂದ ಹಿಂದೂಸ್ಥಾನಿ ಸಂಗೀತ ವಾದ್ಯ ದಿಲ್ರುಬಾ ಮತ್ತು ಈಸ್ರಾಜ್ ಸಂಗೀತ ಕಛೇರಿಯನ್ನು ಆಯೋಜಿಸಲಾ ಗಿದೆ. ಪ್ರವೇಶ ಉಚಿತವಾಗಿದ್ದು, ಸಂಗೀತಾಸಕ್ತರು 10 ನಿಮಿಷ ಮುಂಚಿತವಾಗಿ ಹಾಜರಿರಬೇಕು. ಕಲಾವಿದರ ಪರಿಚಯಡಾ. ಅರಣ್ಯಕುಮಾರ್ ಅವರು `ಟ್ರೀಟ್ ಮೆಂಟ್ ಆಫ್ ಕಂಪೋಸಿಷನ್ ಇನ್ ಡಿಫ ರೆಂಟ್…
ಅನ್ಯ ಭಾಷಿಕರಿಗೂ ಕನ್ನಡ ಕಲಿಸಿ ರಾವಂದೂರಲ್ಲಿ ಶಾಸಕ ಕೆ.ಮಹದೇವ್ ಸಲಹೆ
November 23, 2018ಪಿರಿಯಾಪಟ್ಟಣ: ಕನ್ನಡ ನಾಡು-ನುಡಿ, ಭಾಷೆಯ ವಿಚಾರದಲ್ಲಿ ನನ್ನ ಸಂಪೂರ್ಣ ಸಹಕಾರವಿದ್ದು, ಪ್ರತಿ ಯೊಬ್ಬರೂ ಭಾಷಾಭಿಮಾನ ಹೆಚ್ಚಿಸಿ ಕೊಂಡು ಅನ್ಯಭಾಷಿಕರಿಗೆ ಕನ್ನಡ ಕಲಿ ಸುವ ಕೆಲಸ ಮಾಡಬೇಕು ಎಂದು ಶಾಸಕ ಕೆ.ಮಹದೇವ್ ತಿಳಿಸಿದರು. ತಾಲೂಕಿನ ರಾವಂದೂರು ಗ್ರಾಮಸ್ಥ ರಿಂದ ಪವಿತ್ರ ಗ್ರಂಥಗಳು, ಕಾದಂಬರಿಗಳು ಹಾಗೂ ಸಾಹಿತ್ಯ ಕ್ಷೇತ್ರದ ದಿಗ್ಗಜರುಗಳ ಪುಸ್ತಕಗಳೊಂದಿಗೆ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು. ಗ್ರಾಮದ ಕುಂದು ಕೊರತೆಗಳ ಸಭೆಗೆ ಆಗಮಿಸಿದ ನನಗೆ ಕನ್ನಡ ರಾಜ್ಯೋತ್ಸವದ ನಿಮಿತ್ತ ಗ್ರಾಮದ ಮುಖಂಡರು, ಕನ್ನಡ ಪುಸ್ತಕಗಳನ್ನು ನೀಡಿ ಕನ್ನಡ ಭಾಷಾಭಿ…
ಮೈಸೂರು-ಸರಗೂರು ತಡೆರಹಿತ ಬಸ್ ಸೇವೆ ಸಂಸದ, ಶಾಸಕ, ಜಿಪಂ ಅಧ್ಯಕ್ಷರಿಂದ ಚಾಲನೆ
November 23, 2018ಸರಗೂರು: ಪ್ರಯಾಣಿಕರ ಅನುಕೂಲಕ್ಕಾಗಿ ಸರಗೂರು-ಮೈಸೂರು ನಡುವೆ ಪ್ರತಿ ಒಂದು ಗಂಟೆಗೆ ತಡೆರಹಿತ ಬಸ್ ಓಡಿಸಲಾಗುತ್ತದೆ. ಪ್ರಯಾಣಿಕರು ಈ ಸೇವೆ ಸದುಪಯೋಗ ಪಡಿಸಿಕೊಳ್ಳುವಂತೆ ಸಂಸದ ಆರ್.ಧ್ರುವ ನಾರಾಯಣ್ ತಿಳಿಸಿದರು. ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ತಡೆ ರಹಿತ ಬಸ್ ಸೇವೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಸರಗೂರು ಹಾಗೂ ಗ್ರಾಮೀಣ ಭಾಗದ ಜನಸಾಮಾನ್ಯರ ಕೆಲಸ ಕಾರ್ಯಗಳಿಗೆ ತಡೆರಹಿತ ಬಸ್ನಿಂದ ಅನುಕೂಲವಾಗಲಿದೆ ಎಂದರು. ಶಾಸಕ ಅನಿಲ್ ಚಿಕ್ಕಮಾದು, ಮಾತನಾಡಿ, ವರ್ತಕರ ಹಾಗೂ ವಿವಿಧ ಸಂಘ ಸಂಸ್ಥೆಗಳ ಮನವಿ ಮೇರೆಗೆ ಪ್ರತಿದಿನ…
ಮಧುಮೇಹ ಜಾಗೃತಿಗಾಗಿ ಇಂದು ವಾಕಥಾನ್
November 23, 2018ಮೈಸೂರು: ಮಧುಮೇಹ ದಿನದ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮೈಸೂರಿನ ಕುವೆಂಪುನಗರದಲ್ಲಿರುವ ಭಾನವಿ ಆಸ್ಪತ್ರೆ ಆವರಣ ದಿಂದ ನಾಳೆ(ನ.23) ಬೆಳಿಗ್ಗೆ 7ಕ್ಕೆ ವಾಕಥಾನ್ ಹಾಗೂ ಆಸ್ಪತ್ರೆಯ ನೂತನ ಕೊಠಡಿಗಳ ಉದ್ಘಾಟನೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಆಸ್ಪತ್ರೆಯ ವೈದ್ಯ ಡಾ.ಎನ್. ವಿಜಯ ಚೆಲುವರಾಜ್ ತಿಳಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರು ವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾನವಿ ಆಸ್ಪತ್ರೆಯ ಆವರಣ ದಿಂದ ಬೆಳಿಗ್ಗೆ 7ಕ್ಕೆ ಪ್ರವಾಸೋದ್ಯಮ ಹಾಗೂ ರೇಷ್ಮೆ ಸಚಿವ ಸಾ.ರಾ.ಮಹೇಶ್ ಅವರು ವಾಕಥಾನ್ಗೆ ಚಾಲನೆ…
ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ಸ್ವಾಸ್ಥ್ಯ ಸಮಾಜ ನಿರ್ಮಾಣ: ಜಿಟಿಡಿ
November 23, 2018ಹನಗೋಡು: ರಾಜ್ಯದೆಲ್ಲೆಡೆ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯು ಕೇವಲ ಹಣಕಾಸು ವ್ಯವಹಾರಕ್ಕೆ ಮಾತ್ರ್ರ ಸೀಮಿತವಾಗಿರದೆ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡುವ ಜವಾಬ್ದಾರಿಯುತ ಕೆಲಸ ಮಾಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ತಿಳಿಸಿದರು. ಹನಗೋಡಿನಲ್ಲಿ ಧರ್ಮಸ್ಥಳ ಗ್ರಾಮೀಣಾ ಭಿವೃದ್ಧಿ ಯೋಜನೆ ಹಾಗೂ ವಿವಿಧ ಸಂಘ -ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಜಾಗೃತಿ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿ, ಧರ್ಮ ಸ್ಥಳ ಗ್ರಾಮೀಣಾಭಿವೃದ್ದಿ ಸಂಸ್ಥೆಯು ಪೂಜ್ಯ ಡಿ.ವೀರೇಂದ್ರಹೆಗ್ಗಡೆಯವರ ಮಾರ್ಗದರ್ಶನದಲ್ಲಿ ರಾಜ್ಯದ ಎಲ್ಲಾ ಭಾಗ ಗಳಲ್ಲೂ…
ಮಾವುತರ ಬಿಸಾಡಿ ಪರಾರಿಯಾದ ಸಾಕಾನೆಗಳು: 15 ಕಿಮೀ ದೂರದಲ್ಲಿ ಪತ್ತೆ
November 23, 2018ಎಚ್.ಡಿ.ಕೋಟೆ: ಹುಲಿ ಪತ್ತೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಆನೆಗಳು ದಿಗಿಲುಗೊಂಡು ಮಾವುತರನ್ನು ಕೆಳಕ್ಕೆ ಬೀಳಿಸಿ ಕಾಡಿನತ್ತ ಓಡಿದ ಪ್ರಸಂಗ ಗುರುವಾರ ನಡೆಯಿತು. ತಾಲೂಕಿನ ಅಂತರಸಂತೆ ಅರಣ್ಯ ವ್ಯಾಪ್ತಿಯ ಪೆಂಜಳ್ಳಿ ಗ್ರಾಮದ ಹೊರ ವಲಯದಲ್ಲಿ ಕಾರ್ಯಾ ಚರಣೆ ನಡೆಸುತ್ತಿದ್ದ ಸಮಯದಲ್ಲಿ ಜನರ ಕಿರುಚಾಟ ಮತ್ತು ಪಟಾಕಿಯ ಸಿಡಿತದಿಂದ ರೊಚ್ಚಿ ಗೆದ್ದ ದ್ರೋಣ ಮತ್ತೆ ಅಶೋಕ ಆನೆಗಳು ಅವುಗಳ ಮಾವುತರಾದ ಗುಂಡ ಮತ್ತು ನಂಜುಂಡ ಇಬ್ಬರನ್ನೂ ಕೆಳಕ್ಕೆ ಬೀಳಿಸಿ ಕಾಡಿನತ್ತ ಓಡಿದವು. ಇದರಿಂದ ಅರಣ್ಯ ಇಲಾಖೆಯ ಅಧಿ ಕಾರಿಗಳು ಮತ್ತು ಸಿಬ್ಬಂದಿ…
ಆಲನಹಳ್ಳಿ ಪೊಲೀಸರಿಂದ ಇಬ್ಬರು ಸರಗಳ್ಳರ ಸೆರೆ
November 23, 2018ಮೈಸೂರು: ಇಬ್ಬರು ಸರಗಳ್ಳರನ್ನು ಬಂಧಿಸಿರುವ ಮೈಸೂರಿನ ಆಲನಹಳ್ಳಿ ಠಾಣೆ ಪೊಲೀಸರು, 10.60. ಲಕ್ಷ ರೂ. ಮೌಲ್ಯದ, 332 ಗ್ರಾಂ ತೂಗುವ 8 ಸರಗಳು ಹಾಗೂ ಕೃತ್ಯಕ್ಕೆ ಬಳಸಿದ್ದ 2 ಸ್ಕೂಟರ್ಗಳನ್ನು ವಶಪಡಿಸಿಕೊಂಡಿದ್ದಾರೆ. ಮೈಸೂರಿನ ಎನ್.ಆರ್.ಮೊಹಲ್ಲಾ ನಿವಾಸಿ ಶಬ್ಬೀರ್ ಅಹಮದ್ ಮಗ ಮೊಹ ಮದ್ ಸಾಧು(21) ಹಾಗೂ ಉದಯಗಿರಿ `ಸಿ’ ಬ್ಲಾಕ್ ನಿವಾಸಿ ಲೇಟ್ ಮೊಹಮದ್ ಅನ್ವರ್ ಮಗ ಮೊಹಮದ್ ಮುಯೀಜ್ (24) ಬಂಧಿತ ಖದೀಮರು. ಆಲನಹಳ್ಳಿ ಠಾಣಾ ವ್ಯಾಪ್ತಿಯ ಶುಕ್ರೋ ದಯ ಸರ್ಕಲ್ನ ಪಾರ್ಕ್ ಬಳಿ ಕಾರ್ಯಾಚರಣೆ…