ಮೈಸೂರು,: ಇಂಡೋ ನೇಷ್ಯಾದ ಜಕಾರ್ತನ ಮಹಕಾ ಸ್ಟೋಟ್ರ್ಸ್ ಮಾಲ್ನಲ್ಲಿ ನ.21 ರಿಂದ 25ರವರೆಗೆ ನಡೆ ಯುವ ‘15ನೇ ಏಷ್ಯಾ ಪೆಸಿಫಿಕ್ ಶಿಟೋ ರಿಯೋ’ ಕರಾಟೆ ಚಾಂಪಿ ಯನ್ಷಿಪ್ಗೆ ಮೈಸೂರಿನ ಕರಾಟೆ ಪಟು ದಿಯಾ ಎಸ್.ಅರಸ್ ಆಯ್ಕೆ ಯಾಗಿದ್ದಾರೆ. ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗದ ತಾಂತ್ರಿಕ ಸಹಾಯಕ ಬಿ.ಎಸ್.ಶ್ರೀನಾಥ್ ಅರಸ್ ಹಾಗೂ ರೂಪಾ ಎಸ್.ಅರಸ್ ದಂಪತಿ ಪುತ್ರಿ ದಿಯಾ ಎಸ್.ಅರಸ್, ವಿದ್ಯಾವರ್ಧಕ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದು, ಹಣೆಯಿಂದ 1 ನಿಮಿಷ ದಲ್ಲಿ 31 ಮಂಗಳೂರು ಹೆಂಚು…
ಫೋರ್ಜರಿ ಪ್ರಕರಣ: ವಕೀಲ ನರಸಿಂಹ ಅಯ್ಯಂಗಾರ್ಗೆ ಹೈಕೋರ್ಟ್ ಜಾಮೀನು
November 18, 2018ಮೈಸೂರು: ಮಹಿಳಾ ಕಕ್ಷಿದಾರರೊಬ್ಬರಿಗೆ ಜಿಲ್ಲಾ ಗ್ರಾಹಕರ ನ್ಯಾಯಾಲಯದ ಆದೇಶ ಮೇರೆಗೆ ದೊರೆತ್ತಿದ್ದ ಪರಿಹಾರ ಹಣವನ್ನು ನಕಲಿ ಮೂಲಕ ತಮ್ಮ ಖಾತೆ ವರ್ಗಾಯಿಸಿ ಕೊಂಡು ವಂಚಿಸಿದ ಪ್ರಕರಣದಲ್ಲಿ ಹಿರಿಯ ವಕೀಲ ಆರ್.ಜಿ. ನರಸಿಂಹ ಅಯ್ಯಂಗಾರ್ ಅವರಿಗೆ ಕೆಳ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಗೆÀ ನ.15 ರಂದು ಹೈಕೋರ್ಟ್ ತಡೆಯಾಜ್ಞೆ ನೀಡಿ, ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ಮೈಸೂರಿನ ನಾಡನಹಳ್ಳಿ ನಿವಾಸಿ ಎಂ.ಬಿ.ಪಾರ್ವತಿ (ಟಿನಿ ಬಿದ್ದಪ್ಪ) ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ನರಸಿಂಹ…
ಕೋರ್ಟ್ ಆದೇಶ ಧಿಕ್ಕರಿಸಿದ ಮೈಸೂರು ವಿವಿ: ರಾಷ್ಟ್ರಪತಿ ಮೊರೆ ಹೋದ ಅಧ್ಯಾಪಕ
November 18, 2018ಮೈಸೂರು: ಮೈಸೂರು ವಿಶ್ವವಿದ್ಯಾನಿಲಯ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕರೊಬ್ಬರಿಗೆ, ಪ್ರೊಫೆಸರ್ ಹುದ್ದೆಗೆ ಕಳೆದ 10 ವರ್ಷಗಳಿಂದ ಬಡ್ತಿ ನೀಡದೆ ಸತಾಯಿಸುತ್ತಿರುವ ವಿವಿ ಆಡಳಿತ ಮಂಡಳಿ ವಿರುದ್ಧ ರಾಷ್ಟ್ರಪತಿಗಳ ಮೊರೆ ಹೋಗಿದ್ದಾರೆ. ಇದಕ್ಕೆ ಸ್ಪಂದಿಸಿರುವ ರಾಷ್ಟ್ರಪತಿಗಳು ಈ ಕೂಡಲೇ ಸಮಸ್ಯೆಯನ್ನು ಬಗೆಹರಿಸುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಗಳಿಗೆ ಸೂಚಿಸಿದ್ದು, ರಾಷ್ಟ್ರಪತಿಗಳ ಪತ್ರವನ್ನು ಮೈಸೂರು ವಿವಿಗೆ ರವಾನಿಸಿದ್ದಾರೆ. ಮಹಾರಾಜ ಪದವಿ ಕಾಲೇಜು ಕನ್ನಡ ವಿಭಾಗದ ಮುಖ್ಯಸ್ಥ, ಸಹ ಪ್ರಾಧ್ಯಾಪಕ ಡಾ.ವಿಶ್ವನಾಥ್ ಅವರಿಗೆ, ಪ್ರೊಫೆಸರ್ ಹುದ್ದೆಗೆ ಬಡ್ತಿ ನೀಡುವಂತೆ 2013ರಲ್ಲೇ…
ಕೆಪಿಎಸ್ಸಿ ನೇರ ನೇಮಕಾತಿಗೂ ಮೀಸಲಾತಿಗೆ ಆಗ್ರಹಿಸಿ ದಸಂಸ ಪ್ರತಿಭಟನೆ
November 18, 2018ಮೈಸೂರು: ಕೆಪಿಎಸ್ಸಿ ನೇರ ನೇಮಕಾತಿಯಲ್ಲೂ ಮೀಸಲಾತಿ ನಿಯಮ ಅನುಸರಿಸಬೇಕು ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು. ಶನಿವಾರ ಕಾಡಾ ಕಚೇರಿ ಆವರಣ ದಿಂದ ಪುರಭವನದ ಡಾ.ಬಿ.ಆರ್.ಅಂಬೇ ಡ್ಕರ್ ಪ್ರತಿಮೆವರೆಗೆ ಪಂಜಿನ ಮೆರವಣಿಗೆ ನಡೆಸಿ, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಂವಿಧಾನದಲ್ಲಿ ಉಲ್ಲೇ ಖಿಸಿರುವಂತೆ ಶಿಕ್ಷಣ, ಉದ್ಯೋಗ, ರಾಜ ಕೀಯದಲ್ಲಿ ಮೀಸಲಾತಿ ನೀಡಲೇಬೇಕು. ಎಸ್ಸಿಗಳಿಗೆ ಶೇ.15, ಎಸ್ಟಿ 3, ಪ್ರವರ್ಗ 1ಕ್ಕೆ 4, ಪ್ರವರ್ಗ 2ಎಗೆ ಶೇ.15, ಪ್ರವರ್ಗ 2ಬಿ ಗೆ ಶೇ.4,…
ಶಬರಿಮಲೆ ಏರುವಾಗ ಹೃದಯಾಘಾತ: ಕನ್ನಡತಿ ಸಾವು; ಬಂಧಿಸಲ್ಪಟ್ಟಿದ್ದ ಶಶಿಕಲಾ ಬಿಡುಗಡೆ
November 18, 2018ತಿರುವನಂತಪುರಂ: ಶಬರಿಮಲೆಯ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ನಿನ್ನೆ ಸಂಜೆಯಿಂದಲೇ ಭಕ್ತರು ಬೆಟ್ಟ ಹತ್ತಲಾರಂಭಿಸಿದ್ದಾರೆ. ಇದೇ ವೇಳೆ, ಅಯ್ಯಪ್ಪಸ್ವಾಮಿ ದರ್ಶನಕ್ಕೆಂದು ಅಪ್ಪಚಿಮೇಡು ಬಳಿ ಬೆಟ್ಟ ಏರುತ್ತಿದ್ದ ಕರ್ನಾಟಕದ ಚಂದ್ರಕಾಂತ ಎಂಬ 50 ವರ್ಷ ವಯಸ್ಸಿನ ಮಹಿಳೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. 3ನೇ ಬಾರಿಗೆ ಶಬರಿಮಲೆ ಅಯ್ಯಪ್ಪಸ್ವಾಮಿಯ ಬಾಗಿಲು ತೆರೆಯಲಾಗಿದ್ದು, ಭಕ್ತರ ದಂಡೇ ಧಾವಿಸುತ್ತಿದೆ. ಯಥಾಪ್ರಕಾರ 50 ವರ್ಷದೊಳಗಿನ ಕೆಲ ಮಹಿಳೆಯರು ಶಬರಿಮಲೆ ಪ್ರವೇಶಕ್ಕೆ ಮುಂದಾಗಿದ್ದು, ಅವರನ್ನು ಹಿಂದು ಕಾರ್ಯಕರ್ತರು ಪ್ರವೇಶ ದ್ವಾರದ ಬಳಿಯೇ ತಡೆ ಹಿಡಿದಿದ್ದಾರೆ. ದೇವಾಲಯದ ಒಳಗೆ ಹೋಗಿ ಅಯ್ಯಪ್ಪಸ್ವಾಮಿ…
ಕರ್ನಾಟಕದ ಅಯ್ಯಪ್ಪ ಭಕ್ತರಿಗೆ ಶಾಕಿಂಗ್ ನ್ಯೂಸ್..!
November 18, 2018ಬೆಂಗಳೂರು: ಅಯ್ಯಪ್ಪನ ಸನ್ನಿಧಾನದ ದರ್ಶನ ಪಡೆಯಲು ಪ್ರತಿ ವರ್ಷದಂತೆ ಈ ವರ್ಷ ತೆರಳುತ್ತಿರುವ ಕರ್ನಾಟಕದ ಭಕ್ತರಿಗೆ ಶಾಕಿಂಗ್ ಮೇಲೆ ಶಾಕಿಂಗ್ ನ್ಯೂಸ್ ಕಾದಿದೆ. ಒಂದು ಕಡೆ ಅಯ್ಯಪ್ಪನ ಸನ್ನಿಧಾನದಲ್ಲಿ ಮಹಿಳೆಯ ಪ್ರವೇಶ ವಿಚಾರಕ್ಕೆ ಸಂಬಂ ಧಿಸಿದಂತೆ ಗಲಾಟೆಯ ವಾತಾವರಣ ಇದ್ದರೆ, ಇನ್ನೊಂದೆಡೆ ಹಳೆ ಬಾಕಿ ಎಲ್ಲಾ ಸೇರಿಸಿ ಕೇರಳ ಸರ್ಕಾರ ರಾಜ್ಯದ ವಾಹನಗಳಿಗೆ ವಿಪರೀತ ಸುಂಕ ವಸೂಲಿಗೆ ನಿಂತುಬಿಟ್ಟಿದೆ. 2014ರಿಂದ ಸತತ 3 ವರ್ಷಗಳ ಕಾಲ ಕರ್ನಾಟಕಕ್ಕೆ ವಾಹನ ಸುಂಕ ವಿನಾಯಿತಿ ಇತ್ತು. ಆದರೆ ಈಗ ಏಕಾಏಕಿ…
ಪ್ರಧಾನಿ ಮೋದಿಯಿಂದ ಜನಪರ ಯೋಜನೆಗಳಿಲ್ಲ ಸಂಸದ ಆರ್.ಧ್ರುವನಾರಾಯಣ್ ವಾಗ್ದಾಳಿ
November 18, 2018ನಂಜನಗೂಡು: ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಅಧಿಕಾರಾವಧಿ ಯಲ್ಲಿ ಈವರೆಗೆ ಯಾವುದೇ ಜನಪರ ಯೋಜನೆಗಳೂ ಜಾರಿಗೊಳಿಸಿಲ.್ಲ ನೋಟ್ ಬ್ಯಾನ್ನಂತಹ ತಪ್ಪು ನಿರ್ಧಾರದಿಂದ ದೇಶದ ಆರ್ಥಿಕ ಶಿಸ್ತನ್ನೇ ಹಾಳು ಮಾಡಿದ್ದಾರೆ ಎಂದು ಸಂಸದ ಆರ್.ಧ್ರುವನಾರಾಯಣ್ ವಾಗ್ದಾಳಿ ನಡೆಸಿದರು. ತಾಲೂಕಿನ ಸಿಂಧುವಳ್ಳಿಯಲ್ಲಿರುವ ಸಂತಾನ ಗಣಪತಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ನಂಜನಗೂಡು ಮತ್ತು ಹುಲ್ಲಹಳ್ಳಿ ಬ್ಲಾಕ್ ಕಾಂಗ್ರೆಸ್ ಬೂತ್ ಸಮಿತಿ ಅಧ್ಯಕ್ಷರು ಹಾಗೂ ಪ್ರತಿನಿಧಿಗಳ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತ ನಾಡಿದರು. 36 ಸಾವಿರ ಕೋಟಿ ರೂ. ಅಂದಾಜು ವೆಚ್ಚದ…
ಶುದ್ಧ ಕುಡಿಯುವ ನೀರಿನ ಘಟಕ ಕಾಮಗಾರಿ ಕಳಪೆ
November 18, 2018ಹುಣಸೂರು: ತಾಲೂಕಿನ ದ್ಯಾಂತ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ಕಳಪೆ ಕಾಮಗಾರಿಯಿಂದ ಕೂಡಿದ್ದು, ಕಾಮಗಾರಿ ಗುತ್ತಿಗೆ ಪಡೆದ ಏಜನ್ಸಿ ಯನ್ನು ಕಪ್ಪುಪಟ್ಟಿಗೆ ಸೇರಿಸಿ, ತನಿಖೆಗೆ ಒಳಪಡಿಸುವಂತೆ ತಾಪಂ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು. ಇಂದು ಪಟ್ಟಣದ ತಾಪಂ ಸಭಾಂಗಣ ದಲ್ಲಿ ಅಧ್ಯಕ್ಷೆ ಪದ್ಮಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ತಾಲೂಕಿನಾದ್ಯಂತ ಏಜೆನ್ಸಿಯೊಂದರಿಂದ ನಿರ್ಮಾಣವಾಗಿ ರುವ ಶುದ್ಧ ಕುಡಿಯುವ ನೀರಿನ ಘಟಕಗಳು ತೀರ ಕಳಪೆ ಕಾಮಗಾರಿಯಿಂದ ಕೂಡಿದ್ದು, ಜನರಿಗೆ ಕುಡಿಯುವ ನೀರು ನೀಡಲು ವಿಫಲ ವಾಗಿವೆ. ಕೂಡಲೇ ಏಜೆನ್ಸಿಯನ್ನು…
ಕೆರೆಗಳನ್ನು ತುಂಬಿಸಲು 10 ಕೋಟಿ ಯೋಜನೆಗೆ ಅನುಮೋದನೆ
November 18, 2018ತಿ.ನರಸೀಪುರ: ರೈತರ ಕೃಷಿ ಭೂಮಿಗೆ ಹೆಚ್ಚಿನ ನೀರಾವರಿ ಸೌಲಭ್ಯವನ್ನು ಕಲ್ಪಿಸುವ ನಿಟ್ಟಿನಲ್ಲಿ ತಾಲೂಕಿನಲ್ಲಿ ಕೆರೆಗಳಿಗೆ ನೀರು ತುಂಬಿಸುವ 10 ಕೋಟಿ ರೂ.ಗಳ ಯೋಜನೆಯೊಂದನ್ನು ರಾಜ್ಯ ಸರ್ಕಾರ ಮಂಜೂರು ಮಾಡಿದೆ ಎಂದು ಶಾಸಕ ಎಂ.ಅಶ್ವಿನ್ ಕುಮಾರ್ ಹೇಳಿದರು. ಪಟ್ಟಣದ ನಂಜನಗೂಡು ರಸ್ತೆಯಲ್ಲಿರುವ ಎಂ.ಮಹದೇವಪ್ಪ ಸ್ಮಾರಕ ಭವನದಲ್ಲಿ ಇಂದು ನಡೆದ 38ನೇ ವರ್ಷದ ಹುಟ್ಟುಹಬ್ಬ ಹಾಗೂ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ಕೆರೆಗಳಿಗೆ ನೀರು ತುಂಬಿಸುವ ಮಹತ್ವದ ಯೋಜನೆಯನ್ನು 10 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ರೂಪಿಸಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ…
ಲ್ಯಾನ್ಸ್ಡೌನ್ ಕಟ್ಟಡ, ದೇವರಾಜ ಮಾರುಕಟ್ಟೆ ನೆಲಸಮ ಬದಲು ನವೀಕರಣಕ್ಕೆ ಪರಂಪರೆ ತಜ್ಞರ ಶಿಫಾರಸು
November 17, 2018ಮೈಸೂರು: ಶಿಥಿಲಾ ವಸ್ಥೆಯಲ್ಲಿರುವ ಮೈಸೂರಿನ ಲ್ಯಾನ್ಸ್ಡೌನ್ ಬಿಲ್ಡಿಂಗ್ ಹಾಗೂ ದೇವರಾಜ ಮಾರುಕಟ್ಟೆಯನ್ನು ನೆಲೆಸಮಗೊಳಿಸದೇ ನವೀಕರಣ ಕಾರ್ಯ ಕೈಗೊಳ್ಳಲು ಪರಂಪರೆ ಇಲಾಖೆಯ ತಜ್ಞರ ಸಮಿತಿ ತನ್ನ ಅಂತಿಮ ವರದಿಯಲ್ಲಿ ಶಿಫಾರಸು ಮಾಡಿದೆ. ಮೈಸೂರು ಪಾರಂಪರಿಕ ಪ್ರದೇಶ ಅಭಿ ವೃದ್ಧಿ ಮತ್ತು ಸಂರಕ್ಷಣಾ ತಜ್ಞರ ಸಮಿತಿಯು ನ.13ರಂದು ಅಂತಿಮ ವರದಿ ಪೂರ್ಣಗೊಳಿಸಿ, ಶುಕ್ರವಾರ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರ ಅಧ್ಯಕ್ಷತೆ ಯಲ್ಲಿ ನಡೆದ ಸಭೆಯಲ್ಲಿ ಮುಂದಿನ ಕ್ರಮಕ್ಕಾಗಿ ಮೈಸೂರು ಮಹಾನಗರಪಾಲಿಕೆ ಆಯುಕ್ತ ಕೆ.ಹೆಚ್.ಜಗದೀಶ್ ಅವರಿಗೆ ಸಲ್ಲಿಸಿದೆ. ಮೈಸೂರು ಜಿಲ್ಲಾಧಿಕಾರಿ ಕಚೇರಿ…