ಮೈಸೂರು: ಮೈಸೂರಿನ ಪೊಲೀಸ್ ಠಾಣೆಯೊಂದರಲ್ಲಿ ರೌಡಿಶೀಟ್ ತೆರೆದಿರುವ ವ್ಯಕ್ತಿ, ಮತ್ತೊಂದು ಠಾಣೆಯಿಂದ ಎನ್ಓಸಿ ಪಡೆದು, ಗನ್ ಲೈಸೆನ್ಸ್ ಪಡೆದಿದ್ದ ವಿಷಯ ಇದೀಗ ಬೆಳಕಿಗೆ ಬಂದಿದೆ. ಇತ್ತೀಚೆಗೆ ವಿಜಯನಗರ 4ನೇ ಹಂತದಲ್ಲಿ ಗುಂಡು ಹಾರಿಸಿ, ಟ್ಯಾಕ್ಸಿ ಚಾಲಕನಿಗೆ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಬಂಧಿತನಾಗಿರುವ ಜಯ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಸತೀಶ್ ಗೌಡ ಕೆಆರ್ ಠಾಣೆಯಲ್ಲಿ ರೌಡಿ ಶೀಟರ್ ಆಗಿದ್ದರೂ ಅದನ್ನು ಮರೆಮಾಚಿ ಕುವೆಂಪುನಗರ ಠಾಣೆಯಿಂದ ಎನ್ಓಸಿ ಪಡೆದು ನಗರ ಪೊಲೀಸ್ ಕಮೀಷ್ನರ್ ಕಚೇರಿಯಲ್ಲಿ ಗನ್ ಲೈಸೆನ್ಸ್ ಗಿಟ್ಟಿಸಿದ್ದಾರೆ ಎಂಬುದು…
ರಾಜ್ಯಾದ್ಯಂತ ಆಂಗ್ಲ ಮಾಧ್ಯಮದ 175 ಪಬ್ಲಿಕ್ ಶಾಲೆ ಆರಂಭ
July 18, 2018ಬೆಂಗಳೂರು: ರಾಜ್ಯಾದ್ಯಂತ 175 ಪಬ್ಲಿಕ್ ಶಾಲೆಗಳನ್ನು ಪ್ರಾರಂಭಿಸುವುದಾಗಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎನ್.ಮಹೇಶ್ ಇಂದಿಲ್ಲಿ ತಿಳಿಸಿದ್ದಾರೆ. ಗ್ರಾಮೀಣ ಭಾಗದಲ್ಲಿ ಆಂಗ್ಲ ಮಾಧ್ಯಮ ಕಲಿಕೆಗೆ ಹೆಚ್ಚು ಆಸಕ್ತಿ ತೋರುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಮೂಲಸೌಕರ್ಯ ಒಳಗೊಂಡ ಶಾಲೆಗಳನ್ನು ತೆರೆಯುವುದಾಗಿ ಹೇಳಿ ದ್ದಾರೆ. ಒಂದೇ ಸೂರಿ ನಡಿ 1 ರಿಂದ 10ನೇ ತರಗತಿವರೆಗೆ ಖಾಸಗಿ ಶಾಲೆಗಳ ಶಿಕ್ಷಣ ಗುಣ ಮಟ್ಟದಲ್ಲೇ ನಮ್ಮ ಪಬ್ಲಿಕ್ ಶಾಲೆಗಳು ಸೌಲಭ್ಯ ಹೊಂದಿರುತ್ತವೆ. ಸರ್ಕಾರಿ ಶಾಲೆಗಳ ಶಿಕ್ಷಕರು ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳೆಂದು ಭಾವಿಸಿ ಪಾಠ ಕಲಿಸಬೇಕು,…
ಫಾ. ನರೋನ್ಹ ಅಂತ್ಯಕ್ರಿಯೆ
July 18, 2018ಮೈಸೂರು: ಸೋಮವಾರ ನಿಧನರಾದ ಧರ್ಮಗುರು ಫಾದರ್ ಡೆನಿಸ್ ವಿಕ್ಟರ್ ನರೋನ್ಹ ಅವರ ಅಂತ್ಯಕ್ರಿಯೆಯನ್ನು ಇಂದು ಬೆಳಿಗ್ಗೆ ಮೈಸೂರಿನ ಗಾಂಧಿನಗರದ ಮಹದೇವಪುರ ರಸ್ತೆಯಲ್ಲಿರುವ ಕ್ಯಾಥೋಲಿಕ ಸಿಮೆಟ್ರಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದ ಸ್ವಾಮೀಜಿ, ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರು ಅಗಲಿದ ಧರ್ಮಗುರು ಫಾ. ನರೋನ್ಹ ಅವರ ಪಾರ್ಥಿವ ಶರೀರದ ದರ್ಶನ ಪಡೆದು, ಅಂತಿಮ ನಮನ ಸಲ್ಲಿಸಿದರು. ಅಂತ್ಯಕ್ರಿಯೆಗೂ ಮುನ್ನ ಫಾ.ನರೋನ್ಹ ಅವರ ಪಾರ್ಥಿವ ಶರೀರವನ್ನು ಮೈಸೂರಿನ ಮಿಲೇನಿಯಂ ಸರ್ಕಲ್ನಲ್ಲಿರುವ ಸೆಂಟ್ ಮೆರೀಸ್ ಸಭಾಂಗಣದಲ್ಲಿ ಸಾರ್ವಜನಿಕರ…
ಸಂಸದರಿಗೆ ಐಫೋನ್, ಬ್ಯಾಗ್ ಗಿಫ್ಟ್!
July 18, 2018ಬೆಂಗಳೂರು: ರೈತರ ಸಾಲ ಮನ್ನಾಗೆ ಹಣ ಹೊಂದಿಸಲು ಪರದಾಡು ತ್ತಿರುವ ಕರ್ನಾಟಕದ ಮೈತ್ರಿ ಸರ್ಕಾರ ರಾಜ್ಯದ ಸಂಸದರಿಗೆ ದುಬಾರಿ ಐಫೋನ್ ಮತ್ತು ಮೂಚಿ ಲೆದರ್ ಬ್ಯಾಗ್ನ್ನು ಉಡುಗೊರೆಯನ್ನಾಗಿ ನೀಡಿದೆ. ಕಾವೇರಿ ಸಮಸ್ಯೆ ಕುರಿತು ಕರೆದಿರುವ ರಾಜ್ಯದ ಸಂಸದರ ಸಭೆಯ ಆಮಂತ್ರಣದ ಜೊತೆಗೆ ದುಬಾರಿ ಬೆಲೆಯ ಐಫೋನ್ ಹಾಗೂ ಲೆದರ್ ಬ್ಯಾಗ್ನ್ನು ನೀಡಲಾಗಿರುವುದು ರಾಜೀವ್ ಚಂದ್ರ ಶೇಖರ್ ಅವರ ಪತ್ರದ ಮೂಲಕ ಬಹಿರಂಗಗೊಂಡಿದೆ. Dear @CMofKarnataka @hd_kumaraswamy – Thnk u 4 convng all MPs tmrw…
ಮುಖ್ಯಮಂತ್ರಿ ಕುಮಾರಸ್ವಾಮಿ ಭಾವನಾತ್ಮಕ ಜೀವಿ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್
July 18, 2018ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಭಾವನಾತ್ಮಕ ಜೀವಿ, ಅವರು ಕಾರ್ಯ ಕ್ರಮವೊಂದರಲ್ಲಿ ಕಣ್ಣೀರು ಹಾಕಿದ ಬಗ್ಗೆ ಕಾಂಗ್ರೆಸ್ ನಾಯಕರು ನಾನಾ ಹೇಳಿಕೆಗಳನ್ನು ನೀಡಿದ್ದು ಸರಿಯಲ್ಲ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಪ್ರತಿಕ್ರಿಯಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಅವರಿಗೆ ಆಡಳಿತ ನಡೆಸಲು ನಾವೆಲ್ಲ ಸಹಕರಿಸೋಣ, ಚಿಕ್ಕಂದಿನಿಂದಲೂ ಮುಖ್ಯಮಂತ್ರಿ ಗಳನ್ನು ನೋಡಿದ್ದೇನೆ. ಈ ಹಿಂದೆ ಸಾಕಷ್ಟು ವಿಚಾರಗಳಲ್ಲಿ ಕಣ್ಣೀರು ಹಾಕಿದ್ದು ಇದೆ ಎಂದರು. ಮುಖ್ಯಮಂತ್ರಿ ಸಂತೋಷವಾಗಿ ದ್ದರೆ ರಾಜ್ಯವೂ ಸಂತೋಷವಾಗಿರುತ್ತದೆ, ನಾವೆಲ್ಲರೂ ಸೇರಿ ಸರ್ಕಾರ ವನ್ನು ಬಲಪಡಿಸಬೇಕಿದೆ….
ರಾಜ್ಯದಲ್ಲಿ 22ರಿಂದ 23 ಲೋಕಸಭಾ ಸ್ಥಾನ ಗೆಲ್ಲುವುದು ಅಮಿತ್ ಷಾ ಗುರಿ
July 18, 2018ಬೆಂಗಳೂರು: ಕೇಂದ್ರ ದಲ್ಲಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿ ಯಲು ಮುಂದಾಗಿರುವ ಬಿಜೆಪಿ ಕರ್ನಾ ಟಕದಿಂದ ಹೆಚ್ಚು ಸ್ಥಾನಗಳನ್ನು ಗಳಿಸಲು ಈಗಿನಿಂದಲೇ ತಂತ್ರಗಾರಿಕೆ ಆರಂಭಿಸಿದೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಕನಿಷ್ಠ 22ರಿಂದ 23 ಸ್ಥಾನಗಳಲ್ಲಿ ಜಯಗಳಿಸಲೇಬೇಕೆಂಬ ಗುರಿಯೊಂದಿಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಮತ್ತೆ ಕರ್ನಾಟಕ ಪ್ರವಾಸ ಆರಂಭಿಸುತ್ತಿದ್ದಾರೆ. ಕಳೆದ ಎರಡು ತಿಂಗಳ ಹಿಂದೆ ರಾಜ್ಯ ವಿಧಾನಸಭಾ ಚುನಾವಣೆಗಾಗಿ ಇಲ್ಲೇ ಬಿಡಾರ ಹೂಡಿದ್ದ ಷಾ, ಇದೀಗ ಲೋಕಸಭಾ ಚುನಾವಣೆ ಕಡೆ ಗಮನಹರಿಸಿದ್ದಾರೆ. ಇದೇ…
ಹಳೇ ಉಂಡವಾಡಿ ಯೋಜನೆಗೆ ತಿಂಗಳಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ಪೂರೈಸಿ: ಅಧಿಕಾರಿಗಳಿಗೆ ಸಚಿವ ಜಿಟಿಡಿ ಸೂಚನೆ
July 18, 2018ಮೈಸೂರು: ಅಂದಾಜು 545 ಕೋಟಿ ರೂ. ವೆಚ್ಚದ ಕೆಆರ್ಎಸ್ ಹಿನ್ನೀರಿನ ಹಳೇ ಉಂಡವಾಡಿ ಯೋಜನೆ ಅನುಷ್ಠಾನಕ್ಕೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು ಒಂದೇ ಹಂತದಲ್ಲಿ ತಿಂಗಳೊಳಗೆ ಪೂರ್ಣಗೊಳಿಸುವಂತೆ ಚಾಮುಂಡೇಶ್ವರಿ ಕ್ಷೇತ್ರದ ಶಾಸಕರೂ ಆದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅಧಿಕಾರಿಗಳಿಗೆ ಸೂಚಿಸಿದರು. ಮೈಸೂರಿನ ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಚಾಮುಂಡೇ ಶ್ವರಿ ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿ ಕುರಿತು ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮೈಸೂರು…
ಕಾವೇರಿ ಜಲಾನಯನ ಪ್ರದೇಶದ ಅಣೆಕಟ್ಟೆಗಳಿಗೆ ಜು.19, 20ರಂದು ಸಿಎಂ ಬಾಗಿನ
July 18, 2018ಬೆಂಗಳೂರು: ರಾಜ್ಯ ಕಾವೇರಿ ಜಲಾನಯನ ಪ್ರದೇಶದ ಅಣೆಕಟ್ಟುಗಳು ತುಂಬಿ ಹರಿಯುತ್ತಿರುವ ಹಿನ್ನೆಲೆ ಯಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇದೇ 19 ಮತ್ತು 20ರಂದು ಜಲಾಶಯಗಳಿಗೆ ಬಾಗಿನ ಅರ್ಪಿಸಲಿದ್ದಾರೆ. ದೆಹಲಿ ಪ್ರವಾಸದಿಂದ ಹಿಂದಿರುಗುತ್ತಿ ದ್ದಂತೆ 19ರಂದು ಕೊಡಗು ಜಿಲ್ಲೆಯ ಹಾರಂಗಿ ಜಲಾಶಯದಲ್ಲಿ ಬಾಗಿನ ಅರ್ಪಿಸಿ, ಅಂದು ಸಂಜೆ ಜಿಲ್ಲೆಯ ಅಧಿಕಾರಿಗಳ ಜೊತೆ ಪರಿಶೀಲನಾ ಸಭೆ ನಡೆಸಲಿದ್ದಾರೆ. ಇತ್ತೀಚೆಗೆ ಸುರಿದ ಭಾರೀ ಮಳೆ ಮತ್ತು ಪ್ರವಾಹದಿಂದ ಉಂಟಾಗಿರುವ ನಷ್ಟ ಮತ್ತು ಪರಿಹಾರ ಕಲ್ಪಿಸುವ ಸಂಬಂಧ ಸ್ಥಳದಲ್ಲೇ ನಿರ್ಧಾರ ಕೈಗೊಳ್ಳಲಿದ್ದಾರೆ. ಕೊಡಗಿನಲ್ಲಿನ ಸ್ಥಿತಿಗತಿಗಳ…
ಜು.21ಕ್ಕೆ ಮಹಿಳೆಯರು ಸ್ವಯಂ ಉದ್ಯೋಗ ಆರಂಭಿಸಲು ಸರ್ಕಾರದ ಯೋಜನೆಗಳ ಮಾಹಿತಿ ನೀಡಲು ಸಭೆ
July 18, 2018ಮೈಸೂರು: ಮಹಿಳಾ ಸಂಘ-ಸಂಸ್ಥೆಗಳ ಸದಸ್ಯರು ಮನೆಯಲ್ಲಿ ಸ್ವಂತ ಉದ್ಯೋಗ ಆರಂಭಿಸಲು ಆರ್ಥಿಕ ಸಹಾಯ ಸೇರಿದಂತೆ ಸರ್ಕಾರದ ಯೋಜನೆ ಗಳ ಸಂಬಂಧ ಮಾಹಿತಿ ಒದಗಿಸಲು ಜು.21 ರಂದು ಲೀಡ್ ಬ್ಯಾಂಕ್ ಅಧಿಕಾರಿಗಳು ಹಾಗೂ ವಿವಿಧ ಇಲಾಖೆ ಅಧಿಕಾರಿಗಳ ಸಭೆ ಏರ್ಪಡಿಸುವುದಾಗಿ ಮಾಜಿ ಸಚಿವರೂ ಆದ ಶಾಸಕ ಎಸ್.ಎ. ರಾಮದಾಸ್ ಹೇಳಿದರು. ಮೈಸೂರಿನ ಕೃಷ್ಣರಾಜ ಕ್ಷೇತ್ರದ ವ್ಯಾಪ್ತಿಯ 15 ಮತ್ತು 17ನೇ ವಾರ್ಡಿನಲ್ಲಿ (ಈಗ 59ನೇ ವಾರ್ಡ್) ಸಾರ್ವಜನಿಕರ ಕುಂದು ಕೊರತೆ ಆಲಿಸುವ ಸಂಬಂಧ ಮಂಗಳವಾರ ಪಾದಯಾತ್ರೆ ನಡೆಸಿದ ಅವರು,…
ಮನೆ ಕಿಟಕಿ ಸರಳು ಮುರಿದು 2.5 ಲಕ್ಷ ರೂ. ನಗದು, ಆಭರಣ ಕಳವು
July 18, 2018ಮೈಸೂರು: ಮನೆಯ ಕಿಟಕಿ ಸರಳು ಮುರಿದು 2.5 ಲಕ್ಷ ರೂ. ಮೌಲ್ಯದ ನಗದು ಹಾಗೂ ಚಿನ್ನಾಭರಣ ಕಳವು ಮಾಡಿರುವ ಘಟನೆ ಮೈಸೂರಿನ ಜೆ.ಪಿ.ನಗರದಲ್ಲಿ ಜುಲೈ 13 ರಂದು ಸಂಭವಿಸಿದೆ. ಜೆಪಿ ನಗರ ‘ಎಫ್’ ಬ್ಲಾಕ್ ನಿವಾಸಿಯಾದ ನಿವೃತ್ತ ಅಬಕಾರಿ ಇನ್ಸ್ಪೆಕ್ಟರ್ ಚಂದ್ರಶೇಖರ್ ಎಂಬುವರ ಮನೆಯಲ್ಲಿ ಕಳವು ಮಾಡಲಾಗಿದೆ. ಸಮಾರಂಭವೊಂದರ ಕಾರಣ, ಮನೆಗೆ ಬೀಗ ಹಾಕಿಕೊಂಡು ಕುಟುಂಬ ಸಮೇತ ಜುಲೈ 11 ರಂದು ಬೆಂಗಳೂರಿಗೆ ತೆರಳಿದ ಅವರು, ಜುಲೈ 14 ರಂದು ವಾಪಸ್ ಬಂದಾಗ ಕಿಟಕಿ ಸರಳು ಮುರಿದಿರುವುದು…