ಕಾಲೇಜಿನಲ್ಲಿ ಇ-ಟಾಯ್ಲೆಟ್, ಆವರಣದಲ್ಲಿ ಬೆಂಚ್ ಅಳವಡಿಸಲು ಸೂಚನೆ ಮೈಸೂರು: ನಮ್ಮ ಕಾಲೇಜಿನಲ್ಲಿ ಶೌಚಾಲಯ ಸರಿಯಿಲ್ಲ.. ಕುಡಿಯುವ ನೀರಿಲ್ಲ.. ಕೊಠಡಿ ಕೊರತೆ, ಸ್ಮಾರ್ಟ್ ಕ್ಲಾಸ್ ಸರಿಯಾಗಿ ನಡೆಯುತ್ತಿಲ್ಲ… ಬಸ್ ಪಾಸ್ ಇಲ್ಲ… ವಿಶ್ರಾಂತಿ ಕೊಠಡಿಯೂ ಇಲ್ಲ.. ಒಟ್ಟಾರೆ ಹೆಣ್ಣು ಮಕ್ಕಳು ತುಂಬಾ ತೊಂದರೆ ಅನುಭವಿಸುತ್ತಿದ್ದೇವೆ…. ಮೈಸೂರಿನ ಪ್ರತಿಷ್ಠಿತ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ಕೇಳಿ ಬಂದ ವ್ಯಾಪಕ ದೂರುಗಳ ಹಿನ್ನೆಲೆ ಯಲ್ಲಿ ಕಾಲೇಜಿಗೆ ಇಂದು ಭೇಟಿ ಕೊಟ್ಟು, ಪರಿಶೀಲನೆ ನಡೆಸಿದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರಿಗೆ ವಿದ್ಯಾರ್ಥಿನಿಯರು ದೂರಿನ…
ಕಾವೇರಿಗೆ ಮೇಲ್ಮನವಿ ಸಲ್ಲಿಸದಿರಲು ನಿರ್ಧಾರ
July 19, 2018ನವದೆಹಲಿ: ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ರಚನೆ ಬಗ್ಗೆ ಸಂಸತ್ನಲ್ಲಿ ವಿಷಯ ಪ್ರಸ್ತಾಪಿಸಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ರಾಜ್ಯ ಸಂಸದರ ಸಭೆಯಲ್ಲಿ ಮೇಲ್ಮನವಿ ಸಲ್ಲಿಸದಿರಲು ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದೆ. ಬುಧವಾರ ಸಂಜೆ ಎಚ್.ಡಿ.ಕುಮಾರ ಸ್ವಾಮಿ ಅವರು ದೆಹಲಿಯ ಕರ್ನಾಟಕ ಭವನದಲ್ಲಿ ರಾಜ್ಯದ ಸಂಸದರ ಜೊತೆ ಸಭೆ ನಡೆಸಿದರು. ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ, ಕಾವೇರಿ ಸ್ಕೀಮ್ ಬಗ್ಗೆ ಸಂಸತ್ನಲ್ಲಿ ಪ್ರಸ್ತಾಪಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಪ್ರಧಾನಿ…
ಜಯಚಾಮರಾಜ ಒಡೆಯರ್ ಜನ್ಮ ಶತಾಬ್ದಿ: ಮೈಸೂರು ಪಾಲಿಕೆ ನಿರ್ಲಕ್ಷ್ಯಕ್ಕೆ ಖಂಡನೆ
July 19, 2018ಮೈಸೂರು: ಮೈಸೂರು ಸಂಸ್ಥಾನದ ಕೊನೆಯ ಅರಸ ಜಯ ಚಾಮರಾಜೇಂದ್ರ(ಜಯಚಾಮರಾಜ) ಒಡೆಯರ್ ಅವರ 100ನೇ ಜನ್ಮ ದಿನವನ್ನು ಜಿಲ್ಲಾಡಳಿತ ಅಥವಾ ಪಾಲಿಕೆ ವತಿಯಿಂದ ಆಚರಿಸದೆ ಇರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಕಳೆದ ವರ್ಷವಷ್ಟೇ ಮೈಸೂರಿನ ಹಾರ್ಡಿಂಗ್ ವೃತ್ತದಲ್ಲಿ ಜಯಚಾಮರಾಜ ಒಡೆಯರ್ ಅವರ ಪ್ರತಿಮೆಯನ್ನು ಪ್ರತಿಷ್ಠಾಪಿಸಿ, ಪುನರ್ ನಿರ್ಮಿಸಿದ್ದ ಈ ವೃತ್ತವನ್ನು ಸರ್ಕಾರವೇ ಉದ್ಘಾಟಿಸಿತ್ತು. ಆದರೆ ಇಂದು ಮೈಸೂರು ಸಂಸ್ಥಾನದ ಕೊನೆಯ ರಾಜರಾಗಿ ಆಳ್ವಿಕೆ ನಡೆಸಿದ್ದ ಜಯಚಾಮರಾಜ ಒಡೆಯರ್ ಅವರ 100ನೇ ಜನ್ಮ ದಿನ. ಈ ಹಿನ್ನೆಲೆಯಲ್ಲಿ ಅರಸು…
ಮೈಸೂರಲ್ಲಿ ಜಯಚಾಮರಾಜ ಒಡೆಯರ್ ಜನ್ಮ ದಿನಾಚರಣೆ
July 19, 2018ಮೈಸೂರು: ಮಹಾರಾಜ ಜಯಚಾಮರಾಜ ಒಡೆಯರ್ ಜನಪರ ಆಡಳಿತಕ್ಕೆ ಹೆಸರಾಗಿದ್ದೂ ಮಾತ್ರವಲ್ಲ, ಕಲೆ, ಸಾಹಿತ್ಯ ಹಾಗೂ ಸಂಗೀತಕ್ಕೆ ಪ್ರೋತ್ಸಾಹ ನೀಡಿದ್ದರು. ವಿವಿಧ ಪ್ರಕಾರದ ಗೀತೆಗಳ 20 ಸಾವಿರಕ್ಕೂ ಹೆಚ್ಚು ಧ್ವನಿ ಮುದ್ರಿಕೆಗಳನ್ನು ಸಂಗ್ರಹಿಸಿದ್ದರು ಎಂದು ಎಸ್ಬಿಆರ್ಆರ್ ಮಹಾಜನ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಭೀಮರಾಜ್ ಸ್ಮರಿಸಿದರು. ಮೈಸೂರಿನ ನಜರ್ಬಾದಿನ ಶ್ರೀವಾಣಿವಿಲಾಸ ಅರಸು ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಶ್ರೀಜಯಚಾಮರಾಜ ಅರಸು ಎಜುಕೇಷನ್ ಟ್ರಸ್ಟ್ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಶ್ರೀ ಜಯಚಾಮರಾಜ ಒಡೆಯರ್ ಅವರ 100ನೇ ಜನ್ಮದಿನಾಚರಣೆಯಲ್ಲಿ ಅವರು…
ಏ.1ರಿಂದ ಜು. 17ರವರೆಗೆ ಒಟ್ಟು 8.76 ಕೋಟಿ ರೂ. ತೆರಿಗೆ ಸಂಗ್ರಹ
July 19, 2018ಮೈಸೂರು: ಬಾಕಿ ಉಳಿಸಿಕೊಂಡಿರುವ ಆಸ್ತಿ ತೆರಿಗೆ ವಸೂಲಾತಿಯನ್ನು ಮೈಸೂರು ಮಹಾನಗರಪಾಲಿಕೆ ಅಧಿಕಾರಿಗಳು ತೀವ್ರಗೊಳಿಸಿದ್ದಾರೆ. ಕುಡಿಯುವ ನೀರು, ಒಳಚರಂಡಿ, ಸ್ವಚ್ಛತೆ, ರಸ್ತೆ, ವಿದ್ಯುತ್ ಸಂಪರ್ಕ ಸೇರಿದಂತೆ ವಸತಿ ಬಡಾವಣೆಗಳಿಗೆ ಮೂಲಸೌಲಭ್ಯ ಒದಗಿಸುವುದರ ಜತೆಗೆ ನಿರ್ವಹಣೆ ಜವಾಬ್ದಾರಿ ಹೊತ್ತಿರುವ ಪಾಲಿಕೆಯು, ಅದಕ್ಕೆ ತಗಲುವ ವೆಚ್ಚ ಭರಿಸಲು ನಾಗರಿಕರಿಂದ ವಿವಿಧ ರೂಪದ ತೆರಿಗೆ ವಸೂಲಿ ಮಾಡದೇ ಅನ್ಯ ಮಾರ್ಗವಿಲ್ಲ. ಮೈಸೂರು ನಗರದಾದ್ಯಂತ ಆಸ್ತಿ ತೆರಿಗೆ ಪಾವತಿಸುವಂತೆ ಮಾಧ್ಯಮಗಳಲ್ಲಿ ಜಾಹೀರಾತು ಮೂಲಕ ನಗರಪಾಲಿಕೆಯು ಸೂಚನೆ ನೀಡಿದರೂ, ನಿರೀಕ್ಷಿತ ಮಟ್ಟದಲ್ಲಿ ಮಾಲೀಕರು ಸ್ಪಂದಿಸದ ಕಾರಣ…
ತಲಕಾಡು ಕಾವೇರಿ ನಿಸರ್ಗಧಾಮ ಜಲಮಯ: ಪ್ರವಾಸಿಗರಿಗೆ ಪ್ರವೇಶಕ್ಕೆ ನಿರ್ಬಂಧ ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿ ಕಟ್ಟೆಚ್ಚರ
July 19, 2018ಮೈಸೂರು: ಕಾವೇರಿ ಹಾಗೂ ಕಪಿಲಾ ನದಿಗಳು ಉಕ್ಕಿ ಹರಿಯುತ್ತಿರುವುದರಿಂದ ತಲಕಾಡು ಕಾವೇರಿ ನಿಸರ್ಗಧಾಮ ಜಲಾವೃತಗೊಂಡಿದ್ದು, ಪ್ರವಾಸಿಗರಿಗೆ ಪ್ರವೇಶ ನಿಷೇಧಿಸಲಾಗಿದೆ. ಕೆಆರ್ಎಸ್ ಹಾಗೂ ಕಬಿನಿ ಜಲಾಶಯದಿಂದ ಅಪಾರ ಪ್ರಮಾಣದ ನೀರು ನದಿಗೆ ಬಿಡಲಾಗುತ್ತಿರುವುದರಿಂದ ಎರಡು ನದಿಯ ನೀರು ತಿ.ನರಸೀಪುರದಲ್ಲಿ ಸಂಗಮವಾಗಿ ತಲಕಾಡಿನ ಮೂಲಕ ಹರಿಯುತ್ತಿರುವುದರಿಂದ ತಗ್ಗು ಪ್ರದೇಶಗಳು ಹಾಗೂ ಕಾವೇರಿ ನಿಸರ್ಗಧಾಮದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ನುಗ್ಗಿದೆ. ತಿ.ನರಸೀಪುರದಿಂದ ಕಾವೇರಿ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿರುವುದರಿಂದ ತಲಕಾಡಿಗೆ ಬರುವ ಪ್ರವಾಸಿಗರು ಮರಳುಗುಡ್ಡ ಹಾಗೂ ಕಾವೇರಿ ದಡಕ್ಕೆ ಹೋಗುವುದನ್ನು ನಿರ್ಬಂಧಿಸಲಾಗಿದೆ….
ಕಂದಾಯ ರಶೀದಿ ಕಡ್ಡಾಯ ಮಾಡದೇ ಸಣ್ಣ, ಮಧ್ಯಮ ವರ್ಗದ ರಹದಾರಿ ಕಲ್ಪಿಸಲು ಸಂದೇಶ್ ಸ್ವಾಮಿ ಆಗ್ರಹ
July 19, 2018ಮೈಸೂರು: ನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಸಣ್ಣ ಹಾಗೂ ಮಧ್ಯಮ ವರ್ಗದ ಉದ್ದಿಮೆದಾರರಿಗೆ ಕಂದಾಯ ರಶೀದಿ ಕಡ್ಡಾಯ ಮಾಡದೇ ರಹದಾರಿ ಅಥವಾ ತಾತ್ಕಾಲಿಕ ರಹದಾರಿ ನೀಡಬೇಕೆಂದು ಮಾಜಿ ಮೇಯರ್ ಸಂದೇಶ್ ಸ್ವಾಮಿ ಆಗ್ರಹಿಸಿದ್ದಾರೆ. ಈ ಸಂಬಂಧ ಪಾಲಿಕೆ ಆಯುಕ್ತರಿಗೆ ಪತ್ರ ಬರೆದಿರುವ ಅವರು, ಉದ್ದಿಮೆ ರಹದಾರಿ ನೀಡುವಾಗ ಅಥವಾ ನವೀಕರಿಸುವಾಗ ಕಂದಾಯ ಪಾವತಿಯ ರಶೀದಿ ಅವಶ್ಯಕವೆಂದು ತಿಳಿಸಿ ಉದ್ದಿಮೆ ನವೀಕರಿಸಲು ಅಧಿಕಾರಿಗಳು ನಿರಾಕರಿಸುತ್ತಿ ರುವುದು ಕಂಡು ಬಂದಿದೆ ಎಂದಿದ್ದಾರೆ. ಮೈಸೂರು ನಗರದಲ್ಲಿ ಸುಮಾರು 2 ಲಕ್ಷದಷ್ಟು ಸಣ್ಣ, ಮಧ್ಯಮ…
ಚಾಮುಂಡಿಬೆಟ್ಟದ ಮೆಟ್ಟಿಲು ಸ್ವಚ್ಛಗೊಳಿಸಿದ ಸರ್ ಎಂ. ವಿಶ್ವೇಶ್ವರಯ್ಯ ನಲ್ಲಿ, ಒಳಚರಂಡಿ ಸಂಘದ ಕಾರ್ಮಿಕರು
July 19, 2018ಮೈಸೂರು: ಆಷಾಢ ಮಾಸದ ಹಿನ್ನೆಲೆಯಲ್ಲಿ ಬುಧವಾರ ಸರ್ ಎಂ.ವಿಶ್ವೇಶ್ವರಯ್ಯ ನಲ್ಲಿ ಮತ್ತು ಒಳಚರಂಡಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಕಾರ್ಮಿಕರು ಬುಧವಾರ ಚಾಮುಂಡಿಬೆಟ್ಟದ ಮೆಟ್ಟಿಲುಗಳನ್ನು ಸ್ವಚ್ಛಗೊಳಿಸಿದರು. ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಬುಧವಾರ ಬೆಳಿಗ್ಗೆ ನಡೆದ ಸ್ವಚ್ಛತಾ ಕಾರ್ಯಕ್ರಮವನ್ನು ಶಾಸಕ ಎಸ್.ಎ.ರಾಮದಾಸ್ ಕಸಗುಡಿಸುವ ಮೂಲಕ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಆಷಾಡ ಮಾಸದ ಶುಕ್ರವಾರದಂದು ನಾಡದೇವಿ ಶ್ರೀ ಚಾಮುಂಡೇಶ್ವರಿ ದೇವಿಯನ್ನು ಆರಾಧಿಸಲು ನಾಡಿನ ವಿವಿಧೆಡೆಯಿಂದ ಭಕ್ತರು ಆಗಮಿಸುತ್ತಾರೆ. ಭಕ್ತರು ಹಾಗೂ ವಿವಿಧ ಹರಕೆ ಹೊತ್ತವರು 1001 ಮೆಟ್ಟಿಲುಗಳನ್ನು ಹತ್ತುವ ಮೂಲಕ…
ಮೋದಿ ಪುನರಾಯ್ಕೆಯಾಗದಿದ್ದರೆ ಭಾರತದ ಅಭಿವೃದ್ಧಿ ಕುಂಠಿತ: ಅಮೆರಿಕದ ಉನ್ನತ ಕೈಗಾರಿಕೋದ್ಯಮಿ ಜಾನ್ ಚೇಂಬರ್ಸ್
July 19, 2018ವಾಷಿಂಗ್ಟನ್: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪುನರಾಯ್ಕೆಯಾಗದಿದ್ದರೆ `ಪ್ರಭಾವಶಾಲಿ ಅಭಿವೃದ್ಧಿ ಮತ್ತು ಅಂತರ್ಗತ ಬೆಳವಣಿಗೆಯಲ್ಲಿ ಕುಂಠಿತವಾಗಲಿದೆ ಎಂದು ಅಮೆರಿಕಾದ ಉನ್ನತ ಕೈಗಾರಿಕೋದ್ಯಮಿ ಜಾನ್ ಚೇಂಬರ್ಸ್ ತಿಳಿಸಿದ್ದಾರೆ. ಸಿಐಎಸ್ಸಿಓ ಸಿಸ್ಟಮ್ಸ್ ಸಿಇಓ ಹಾಗೂ ಮಾಜಿ ಕಾರ್ಯನಿರ್ವಾಹಕ ಅಧ್ಯಕ್ಷರೂ ಆದ ಜಾನ್ ಚೇಂಬರ್ಸ್ ಭಾರತೀಯ ಪತ್ರಕರ್ತರ ಸಮೂಹದೊಂದಿಗೆ ಮಾತನಾಡಿ, ವಿಶ್ವದಲ್ಲೇ ಭಾರತ ಅಂತರ್ಗತವಾಗಿ ಪ್ರಬಲವಾಗಿ ಬೆಳೆಯುವ ಅವಕಾಶ ಹೊಂದಿದೆ ಎಂದರು. “ವಿಶ್ವದಲ್ಲಿ ಭಾರತವು ತನ್ನದೇ ಆದ ಸ್ಥಾನವನ್ನು ಪಡೆಯಲು ಹಲವು ದಶಕಗಳೇ ಬೇಕಿದೆ. ಪ್ರಧಾನಿ ನರೇಂದ್ರ ಮೋದಿಯವರಿಗೆ…
ಗೋಲ್ಡನ್ ಚಾರಿಯಟ್ ರೈಲಿನಿಂದ 10 ವರ್ಷದಲ್ಲಿ 40 ಕೋಟಿ ನಷ್ಟ
July 19, 2018ಪ್ರವಾಸೋದ್ಯಮ ಸಚಿವ ಸಾರಾ ಮಹೇಶ್ ಬಹಿರಂಗ ಈ ವಿಶೇಷ ರೈಲಿನ ವಿನ್ಯಾಸ ಬದಲಾವಣೆ ಮೈಸೂರು: ಕಳೆದ 10 ವರ್ಷದಲ್ಲಿ ಗೋಲ್ಡನ್ ಚಾರಿಯಟ್ ರೈಲಿನಿಂದ ರಾಜ್ಯ ಸರ್ಕಾರಕ್ಕೆ 40 ಕೋಟಿ ನಷ್ಟವಾಗಿದೆ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ತಿಳಿಸಿದರು. ಅಶೋಕಪುರಂನ ರೈಲ್ವೆ ಕಾರ್ಯಗಾರಕ್ಕೆ ಭೇಟಿ ನೀಡಿ, ಹೊಸ ವಿನ್ಯಾಸದಲ್ಲಿ ಸಿದ್ದವಾಗುತ್ತಿರುವ ಗೋಲ್ಡನ್ ಚಾರಿಯಟ್ ರೈಲುಗಾಡಿ ವಿನ್ಯಾಸ ಬದಲಾವಣೆ ಕಾಮಗಾರಿ ವೀಕ್ಷಣೆ ಮಾಡಿದರು. ನಂತರ ಮಾತನಾಡಿದ ಅವರು, ರಾಜ್ಯ ಸರ್ಕಾರ, ರೈಲ್ವೆ ಇಲಾಖೆ, ಖಾಸಗಿ ಸಹಭಾಗಿತ್ವದಲ್ಲಿ ಗೋಲ್ಡನ್ ಚಾರಿಯಟ್ ರೈಲುಗಾಡಿ…