ಮೈಸೂರು: ಅಂಚೆ ಇಲಾಖೆ ವತಿಯಿಂದ ರಾಷ್ಟ್ರೀಯ ಮಟ್ಟದಲ್ಲಿ ಪತ್ರ ಬರೆಯುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ನಂಜನಗೂಡು ವಿಭಾಗದ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ. ಪತ್ರ ಬರೆಯುವ ಸ್ಪರ್ಧೆಗೆ ವಿಷಯ Letter to my motherland (ನನ್ನ ತಾಯಿನಾಡಿಗೆ ಪತ್ರ) ಯಾಗಿರುತ್ತದೆ. ಪತ್ರವನ್ನು ಇಂಗ್ಲಿಷ್/ಹಿಂದಿ/ ಸ್ಥಳೀಯ ಭಾಷೆಯಲ್ಲಿ ಬರೆಯಬಹುದು. ಸ್ಪರ್ಧೆಯು 18 ವರ್ಷದೊಳಗಿನವರಿಗೆ ಹಾಗೂ 18 ವರ್ಷ ಮೇಲ್ಪಟ್ಟ ಅಭ್ಯರ್ಥಿಗಳಿಗೆ ಎರಡು ವಿಭಾಗದಲ್ಲಿ ನಡೆಯಲಿದೆ. ಇನ್ಲಂಡ್ ಲೆಟರ್ ಕಾರ್ಡ್ ವಿಭಾಗದಲ್ಲಿ 500 ಪದ ಹಾಗೂ ಎನ್ವಲಪ್ ವಿಭಾಗದಲ್ಲಿ 1000 ಪದಗಳ…
ಪಾರ್ಲಿಮೆಂಟ್ ಎಲೆಕ್ಷನ್ ಆಗೋವರೆಗೂ ಇರ್ತಾರೆ…
June 27, 2018ಮೈತ್ರಿ ಸರ್ಕಾರದ ಆಯಸ್ಸಿನ ಬಗ್ಗೆ ಶಾಂತಿವನದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಕವಡೆ…! ಆಪ್ತರೊಂದಿಗಿನ ಸಿದ್ದರಾಮಯ್ಯರ ‘ಆಪ್ತ ಸಮಾಲೋಚನೆ’ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ದೋಸ್ತಿಗಳಲ್ಲಿ ಸಿಡಿಮಿಡಿ, ಡಿಸಿಎಂ ಡಾ. ಪರಮೇಶ್ವರ್ ಮಾಧ್ಯಮದ ಮುಂದೆ ಅಬ್ಬರ ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರೂ ಆದ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು, ತಾವು ಚಿಕಿತ್ಸೆ ಪಡೆಯುತ್ತಿರುವ ಧರ್ಮಸ್ಥಳದ ಶಾಂತಿವನ ಪ್ರಕೃತಿ ಚಿಕಿತ್ಸಾಲಯದಲ್ಲಿ ತಮ್ಮ ಆಪ್ತರ ಜೊತೆ ಔಪಚಾರಿಕವಾಗಿ ಮಾತನಾಡಿರುವ ಕೆಲವು ಸಂಭಾಷಣೆಯ ವೀಡಿಯೋ ವೈರಲ್ ಆಗಿದ್ದು,…
ಸಿದ್ದರಾಮಯ್ಯ ಸೈಲೆಂಟ್ ಬಾಂಬ್… ಬಿಜೆಪಿಗೆ ಪಥ್ಯ!?
June 27, 2018ಬೆಂಗಳೂರು: ಧರ್ಮಸ್ಥಳದ ಶಾಂತಿವನದಲ್ಲಿ ವಿಶ್ರಾಂತಿ ಪಡೆಯುತ್ತಿ ರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈತ್ರಿ ಸರ್ಕಾರದ ಬಗ್ಗೆ ನೀಡುತ್ತಿರುವ ಹೇಳಿಕೆಗಳು ಹತ್ತು-ಹಲವು ಅನುಮಾನ ಹಾಗೂ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಸಿದ್ದರಾಮಯ್ಯರ ಸೈಲೆಂಟ್ ಬಾಂಬ್ಗಳು ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರಿಗೆ ಅಪಥ್ಯವಾದರೆ, ಬಿಜೆಪಿ ನಾಯಕರಿಗೆ ಪಥ್ಯವೆಂಬಂತೆ ಕಂಡುಬರುತ್ತಿದೆ. ಸಿದ್ದರಾಮಯ್ಯನವರ ಹೇಳಿಕೆಗಳ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿ ರಾಜಕೀಯ ವಿದ್ಯಮಾನಗಳು ಗರಿಗೆದರಿವೆ. ಸಿದ್ದರಾಮಯ್ಯನವರ ಹೇಳಿಕೆಯ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷರೂ ಆದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರನ್ನು…
ಮಾರ್ಗಸೂಚಿ, ಮೀಸಲಾತಿ ನೀತಿ ಉಲ್ಲಂಘಿಸಿ ನೇಮಕ: ಮೈಸೂರು ವಿಶ್ವವಿದ್ಯಾಲಯದ 124 ಬೋಧಕೇತರ ಸಿಬ್ಬಂದಿಗೆ ಕುತ್ತು
June 27, 2018ತಕ್ಷಣ ಕರ್ತವ್ಯದಿಂದ ತೆಗೆದುಹಾಕುವಂತೆ ಉನ್ನತ ಶಿಕ್ಷಣ ಇಲಾಖೆ ಸೂಚನೆ ನೇಮಕಾತಿಗೆ ಕಾರಣರಾದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ನಿರ್ದೇಶನ ಮುಂದೆ ಮಾರ್ಗಸೂಚಿ, ಆದೇಶ, ಮೀಸಲಾತಿ ನೀತಿಯನ್ವಯ ನೇಮಕಾತಿಗೆ ಕಟ್ಟಾಜ್ಞೆ ತನಿಖಾ ಸಮಿತಿ ವರದಿ ಶಿಫಾರಸ್ಸಿನಂತೆ ಕ್ರಮಕ್ಕೆ ಸರ್ಕಾರದ ಆದೇಶ ಮೈಸೂರು: 2016ರ ಡಿಸೆಂಬರ್ ಮತ್ತು 2017ರ ಜನ ವರಿ ಮಾಹೆಯ ಅವಧಿಯಲ್ಲಿ ನೇಮಕ ಗೊಂಡು ಕಾರ್ಯನಿರ್ವಹಿಸುತ್ತಿರುವ ಮೈಸೂರು ವಿಶ್ವವಿದ್ಯಾನಿಲಯದ 124 ಮಂದಿ ಬೋಧಕೇತರ ಸಿಬ್ಬಂದಿಯ ಭವಿಷ್ಯ ಡೋಲಾಯಮಾನವಾಗಿದೆ. ನೇಮಕಾತಿ ಪ್ರಕ್ರಿಯೆಯಲ್ಲಿ ಚಾಲ್ತಿಯಲ್ಲಿರುವ ನಿಯಮ, ಮಾರ್ಗಸೂಚಿ, ಆದೇಶ ಮತ್ತು…
ನೇಣು ಬಿಗಿದ ಸ್ಥಿತಿಯಲ್ಲಿ ಬ್ಯೂಟೀಷಿಯನ್: ಅನುಮಾನಾಸ್ಪದ ಸಾವು
June 27, 2018ಸ್ನೇಹಿತನೇ ಕೊಲೆಗೈದಿದ್ದಾನೆಂದು ಆಕೆ ತಾಯಿ ಪೊಲೀಸರಿಗೆ ದೂರು ಅದರಂತೆ ಕೊಲೆ ಪ್ರಕರಣ ದಾಖಲಿಸಿರುವ ಆಲನಹಳ್ಳಿ ಠಾಣೆ ಪೊಲೀಸರು ಮೈಸೂರು: ನೇಣು ಬಿಗಿದ ಸ್ಥಿತಿಯಲ್ಲಿ ಬ್ಯೂಟೀಷಿಯನ್ವೊಬ್ಬರು ಸಂಶಯಾಸ್ಪದ ರೀತಿ ಸಾವನ್ನಪ್ಪಿರುವ ಘಟನೆ ಮೈಸೂರಿನ ಆಲನಹಳ್ಳಿಯ ದಾಮೋದರ ಬಡಾವಣೆಯಲ್ಲಿ ಸೋಮವಾರ ಸಂಜೆ ಸಂಭವಿಸಿದೆ. ಆನಂದ್ ಎಂಬುವರ ಪತ್ನಿ ಶ್ರೀಮತಿ ರಮ್ಯ(26) ಅನುಮಾನಾಸ್ಪದ ರೀತಿ ಸಾವನ್ನಪ್ಪಿದವರಾಗಿದ್ದು, ತನ್ನ ಮಗಳನ್ನು ಆಕೆಯ ಸ್ನೇಹಿತ ಸುನಿಲ್ ಕುಮಾರ್ ಕೊಲೆ ಮಾಡಿದ್ದಾನೆ ಎಂದು ರಮ್ಯ ತಾಯಿ, ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲೂಕು, ಜನಿ ವಾರ ಗ್ರಾಮದ…
ಮೈಸೂರು ನಗರ ಪಾಲಿಕೆ ವಾರ್ಡ್ ಮೀಸಲಾತಿ: ಜನಪ್ರತಿನಿಧಿಗಳು, ಸಾರ್ವಜನಿಕರಿಂದ 187 ಆಕ್ಷೇಪಣೆ ಸಲ್ಲಿಕೆ
June 27, 2018ಮೈಸೂರು: ಮೈಸೂರು ಮಹಾನಗರ ಪಾಲಿಕೆಯ 65 ವಾರ್ಡ್ಗಳಿಗೆ ನಿಗದಿಪಡಿಸಿರುವ ಮೀಸಲಾತಿಗೆ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರಿಂದ ಒಟ್ಟು 187 ಲಿಖಿತ ಆಕ್ಷೇಪಣೆಗಳು ಬಂದಿವೆ ಎಂದು ಮೈಸೂರು ಜಿಲ್ಲಾಧಿ ಕಾರಿ ಕಚೇರಿಯ ಚುನಾವಣಾ ಶಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಮೈಸೂರು ನಗರದ ಎಲ್ಲಾ 65 ವಾರ್ಡ್ಗಳ ಮೀಸಲಾತಿ ಪಟ್ಟಿಯನ್ನು ಸರ್ಕಾರ ಜೂನ್ 19ರಂದು ಪ್ರಕಟಿಸಿ, ಜೂನ್ 25ರೊಳ ಗಾಗಿ ಲಿಖಿತ ಆಕ್ಷೇಪಗಳನ್ನು ಆಹ್ವಾನಿಸಲಾಗಿತ್ತು. ಮೀಸಲಾತಿ ನಿಗದಿ ಅವೈಜ್ಞಾನಿಕವಾಗಿದ್ದು, ಯಾವುದೋ ವರ್ಗ ಹಾಗೂ ವ್ಯಕ್ತಿಗೆ ಅನುಕೂಲ ಮಾಡಿಕೊಡಲು ಸರ್ಕಾರ ಮುಂದಾಗಿದೆ ಎಂದು ಕೆಲ…
ಪಾದಯಾತ್ರೆ ಮೂಲಕ ಶಾಸಕ ರಾಮದಾಸ್ರಿಂದ ನಾಗರಿಕರ ಸಮಸ್ಯೆಗಳ ಪರಿಹಾರ ಸೂತ್ರ
June 27, 2018ಮೈಸೂರು: ಮೈಸೂರಿನ ಕೆಆರ್ ಕ್ಷೇತ್ರ ವ್ಯಾಪ್ತಿಯ ವಾರ್ಡ್ ಸಂಖ್ಯೆ 2ರಲ್ಲಿ ಮಂಗಳವಾರ ಕ್ಷೇತ್ರದ ಶಾಸಕರೂ ಆದ ಮಾಜಿ ಸಚಿವ ಎಸ್.ಎ.ರಾಮದಾಸ್ ಜನಸ್ಪಂದನಾ ಯಾತ್ರೆ ನಡೆಸಿ, ನಾಗರಿಕ ಸಮಸ್ಯೆಗಳನ್ನು ಆಲಿಸಿ ನಿಗದಿತ ಸಮಯದೊಳಗೆ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ವಾರ್ಡ್ ಸಂಖ್ಯೆ 2ರ (ಪುನರ್ ವಿಂಗಡಣೆ ಬಳಿಕ ವಾರ್ಡ್ ಸಂಖ್ಯೆ-50) ವ್ಯಾಪ್ತಿಯಲ್ಲಿ ಪಾಲಿಕೆ, ಸ್ಲಂ ಬೋರ್ಡ್ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳೊಂದಿಗೆ ಪಾದಯಾತ್ರೆ ಮೂಲಕ ನಾಗರಿಕರ ಸಮಸ್ಯೆಗಳನ್ನು ಆಲಿಸಿದ ಶಾಸಕರು, ಒಳಚರಂಡಿ ವ್ಯವಸ್ಥೆ, ರಸ್ತೆ ದುರಸ್ತಿ ಸೇರಿದಂತೆ ನಾನಾ ಮೂಲಭೂತ…
ಆಂಧ್ರ ಮಾದರಿ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ಪದ್ಧತಿ ಜಾರಿಗೆ ರಾಜ್ಯ ಸರ್ಕಾರದ ಗಂಭೀರ ಚಿಂತನೆ
June 27, 2018ರೈತ ಮುಖಂಡ ಬಡಗಲಪುರ ನಾಗೇಂದ್ರ ವಿಶ್ವಾಸ ಮೈಸೂರು: ಆಂಧ್ರಪ್ರದೇಶ ಅಳವಡಿಸಿಕೊಂಡಿರುವ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ಪದ್ಧತಿಯನ್ನು ರಾಜ್ಯದಲ್ಲೂ ಜಾರಿಗೊಳಿಸಬೇಕೆಂಬ ರಾಜ್ಯ ರೈತ ಸಂಘದ ಮನವಿಗೆ ಪೂರಕವಾಗಿ ಸ್ಪಂದಿಸಿರುವ ರಾಜ್ಯ ಸರ್ಕಾರ ಈ ಸಂಬಂಧ ಗಂಭೀರ ಚಿಂತನೆ ನಡೆಸಿದೆ ಎಂದು ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಇಸ್ರೇಲ್ ಕೃಷಿ ಪದ್ಧತಿಯನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಲು ಉತ್ಸುಕರಾಗಿದ್ದರು. ಈ…
ಹುಣಸೂರು ರಸ್ತೆ ನೇರ, ಅಗಲೀಕರಣ ಕಾಮಗಾರಿ ಮುಂದುವರೆಸಿದರೆ ಕೋರ್ಟ್ ಆದೇಶ ಉಲ್ಲಂಘನೆ: ಎಂಜಿಪಿ ಎಚ್ಚರಿಕೆ
June 27, 2018ಮೈಸೂರು: ಪುನರಾರಂಭ ವಾಗಿರುವ ಹುಣಸೂರು ರಸ್ತೆಯನ್ನು ನೇರ ಹಾಗೂ ಅಗಲೀಕರಣ ಮಾಡುವ ಕಾಮ ಗಾರಿಯನ್ನು ತಕ್ಷಣವೇ ನಿಲ್ಲಿಸದಿದ್ದರೆ ಲೋಕೋ ಪಯೋಗಿ ಇಲಾಖೆಯಿಂದ ನ್ಯಾಯಾ ಲಯಕ್ಕೆ ಬರೆದುಕೊಟ್ಟಿರುವ ಮುಚ್ಚಳಿಕೆ ಉಲ್ಲಂಘನೆಯಾಗುತ್ತದೆ ಎಂದು ಮೈಸೂರು ಗ್ರಾಹಕ ಪರಿಷತ್ (ಎಂಜಿಪಿ) ಎಚ್ಚರಿಸಿದೆ. ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿ ರುವ ಎಂಜಿಪಿಯ ಎಸ್.ಶೋಭನ ಮತ್ತು ನಿವೃತ್ತ ಮೇಜರ್ ಜನರಲ್ ಎಸ್.ಜಿ. ಒಂಬತ್ಕೆರೆ ಅವರುಗಳು, ಈ ರಸ್ತೆ ಕಾಮ ಗಾರಿಯ ಮೂಲ ಯೋಜನೆಯು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮೈಸೂರು ಮಹಾ ಯೋಜನೆ-2031ಕ್ಕೆ ವಿರುದ್ಧ…
ಜಯಚಾಮರಾಜ ಒಡೆಯರ್ ವೃತ್ತದ ಕಟ್ಟೆಯ ಮಾರ್ಬಲ್ಗೆ ಧಕ್ಕೆ
June 27, 2018ಮೈಸೂರು: ಮೈಸೂರಿನ ಜಯ ಚಾಮರಾಜ ಒಡೆಯರ್ ವೃತ್ತದ ಸುತ್ತಲೂ ರಸ್ತೆಗಿಂತ ಅರ್ಧ ಅಡಿಗೂ ಕಡಿಮೆ ಎತ್ತರಕ್ಕೆ ಕಟ್ಟೆ ನಿರ್ಮಿಸಿದ್ದು, ವಾಹನಗಳ ಟೈರ್ ಹರಿದು, ಒಂದು ಭಾಗದಲ್ಲಿ ಜಖಂಗೊಂಡಿದೆ. ಪ್ರತಿಮೆಯ ಎಡಭಾಗಕ್ಕಿರುವ ಕಟ್ಟೆಯ ಮೇಲೆ ವಾಹನಗಳು ಚಾಲಿಸಿರುವುದರಿಂದ ಅನೇಕ ಮಾರ್ಬಲ್ಗಳು ಒಡೆದು, ಪುಡಿಯಾಗಿವೆ. ಕೂಡಲೇ ಇದನ್ನು ದುರಸ್ತಿ ಮಾಡಬೇಕಿದೆ. ಇಲ್ಲವಾದರೆ ಗನ್ಹೌಸ್ ಕಡೆಯಿಂದ ಹಾಗೂ ಲೋಕರಂಜನ್ ರಸ್ತೆ ಹಾಗೂ ನಜರ್ಬಾದ್ ಕಡೆಯಿಂದ ಬರುವ ವಾಹನಗಳು ವೃತ್ತವನ್ನು ಸುತ್ತುವಾಗ ಜಖಂ ಅಗಿರುವ ಭಾಗಕ್ಕೆ ಟೈರ್ ತಗುಲಿ, ಮತ್ತಷ್ಟು ಮಾರ್ಬಲ್ಗಳು ಹಾಳಾಗಲಿವೆ….