ಮೈಸೂರು

ಮೈಸೂರಲ್ಲಿ ಮೇ 31ರಿಂದ ಜೂ.3ರವರೆಗೆ  ರಾಜ್ಯ ಮಟ್ಟದ ಸಬ್ ಜೂನಿಯರ್, ಜೂನಿಯರ್ ಅಕ್ವಾಟಿಕ್‍ಚಾಂಪಿಯನ್‍ಷಿಪ್ ಈಜು ಸ್ಪರ್ಧೆ
ಮೈಸೂರು

ಮೈಸೂರಲ್ಲಿ ಮೇ 31ರಿಂದ ಜೂ.3ರವರೆಗೆ  ರಾಜ್ಯ ಮಟ್ಟದ ಸಬ್ ಜೂನಿಯರ್, ಜೂನಿಯರ್ ಅಕ್ವಾಟಿಕ್‍ಚಾಂಪಿಯನ್‍ಷಿಪ್ ಈಜು ಸ್ಪರ್ಧೆ

May 26, 2018

ಮೈಸೂರು: ಮೈಸೂರು ಜಿಲ್ಲಾ ಈಜು ಸಂಸ್ಥೆಯು ಕರ್ನಾಟಕ ಈಜು ಸಂಸ್ಥೆಯ ಸಹಯೋಗದಲ್ಲಿ ಮೇ 31ರಿಂದ ಜೂ.3ರವರೆಗೆ ಮೈಸೂರು ವಿಶ್ವವಿದ್ಯಾನಿಲಯದ ಈಜುಕೊಳದಲ್ಲಿ ರಾಜ್ಯ ಸಬ್ ಜೂನಿಯರ್ ಮತ್ತು ಜೂನಿಯರ್ ಅಕ್ವಾಟಿಕ್ ಚಾಂಪಿಯನ್ ಷಿಪ್-2018 ಆಯೋಜಿಸಿದೆ ಎಂದು ಮೈಸೂರು ಜಿಲ್ಲಾ ಈಜು ಸಂಸ್ಥೆಯ ಮುಖ್ಯಸ್ಥ ಎಂ.ಆರ್.ವಿಜಯರಾಘವನ್ ಇಂದಿಲ್ಲಿ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಾಂಪಿಯನ್ ಷಿಪ್‍ನಲ್ಲಿ ಈಜು ಸ್ಪರ್ಧೆಗಳು ಮತ್ತು ವಾಟರ್ ಪೋಲೋ ಪಂದ್ಯಗಳು ನಡೆಯಲಿವೆ. ಈ ಬೃಹತ್ ಈಜು ಸ್ಪರ್ಧೆಯಲ್ಲಿ ರಾಜ್ಯಾದ್ಯಂತದಿಂದ…

ನಿಫಾ ವೈರಸ್; ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದೇವೆ, ಆತಂಕ ಬೇಡ
ಮೈಸೂರು

ನಿಫಾ ವೈರಸ್; ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದೇವೆ, ಆತಂಕ ಬೇಡ

May 26, 2018

ಮೈಸೂರು: ಕೇರಳದಲ್ಲಿ ಆತಂಕ ಸೃಷ್ಟಿಸಿರುವ ನಿಫಾ ವೈರಸ್ ಬಗ್ಗೆ ಮೈಸೂರು ನಗರದ ಜನತೆ ಆತಂಕಪಡುವ ಅಗತ್ಯವಿಲ್ಲ. ಇದುವರೆಗೆ ನಿಫಾ ವೈರಸ್‍ನ ಯಾವೊಂದು ಪ್ರಕರಣವೂ ಕಂಡು ಬಂದಿಲ್ಲ. ಆದರೂ ಈ ಬಗ್ಗೆ ಮೈಸೂರು ನಗರಪಾಲಿಕೆ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಸಂಬಂಧ ಗುರುವಾರ ಸಂಜೆ ಪಾಲಿಕೆ ಆಯುಕ್ತ ಕೆ.ಹೆಚ್. ಜಗದೀಶ್ ಅಧ್ಯಕ್ಷತೆಯಲ್ಲಿ ಪಾಲಿಕೆ ಆರೋಗ್ಯಾಧಿಕಾರಿಗಳು, ಪಶುವೈದ್ಯ ಅಧಿಕಾರಿಗಳ ಸಭೆ ನಡೆಸಿ ಚರ್ಚಿಸಲಾಯಿತು. ಪಾಲಿಕೆ ಆಯುಕ್ತ ಕೆ.ಹೆಚ್.ಜಗದೀಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿಫಾ ವೈರಸ್ ಮೈಸೂರು ನಗರದಲ್ಲಿ ಹರಡದಂತೆ ಕೈಗೊಳ್ಳಬಹುದಾದ…

ಅಂತಾರಾಷ್ಟ್ರೀಯ ಮಟ್ಟದಲ್ಲಿ ರೋಟರಿ ಸಂಸ್ಥೆ ಸಾಧನೆ ಹೆಜ್ಜೆ ಗುರುತು
ಮೈಸೂರು

ಅಂತಾರಾಷ್ಟ್ರೀಯ ಮಟ್ಟದಲ್ಲಿ ರೋಟರಿ ಸಂಸ್ಥೆ ಸಾಧನೆ ಹೆಜ್ಜೆ ಗುರುತು

May 26, 2018

ಮೈಸೂರು: ಆರೋಗ್ಯ, ಶಿಕ್ಷಣ ಹಾಗೂ ಸಾಂಸ್ಕøತಿಕ ಚಟುವಟಿಕೆಗಳನ್ನು ಆಯೋಜಿಸುವ ಮೂಲಕ ರೋಟರಿ ಸಂಸ್ಥೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಸಾಧನೆಯ ಹೆಜ್ಜೆ ಗುರುತು ಮೂಡಿಸಿದೆ ಎಂದು ಹಿರಿಯ ರಂಗಕರ್ಮಿ ಪ್ರೊ.ಸಿ.ವಿ.ಶ್ರೀಧರಮೂರ್ತಿ ತಿಳಿಸಿದರು. ಜೆಎಲ್‍ಬಿ ರಸ್ತೆಯ ಐಡಿಯಲ್ ಜಾವಾ ರೋಟರಿ ಸಭಾಂಗಣದಲ್ಲಿ ರೋಟರಿ ಮೈಸೂರು ಉತ್ತರ ವತಿಯಿಂದ ಆಯೋಜಿಸಿದ್ದ ‘ರೋಟರಿ ಮತ್ತು ಸಂಸ್ಕತಿ’ ವಿಷಯ ಕುರಿತು ಮಾತನಾಡಿದರು. ರೋಟರಿ ಅಂತಾರಾಷ್ಟ್ರೀಯ ಮಟ್ಟದ ಸಾಮಾಜಿಕ ಸೇವಾ ಸಂಸ್ಥೆ, ಇಲ್ಲಿ ವಿವಿಧ ಕ್ಷೇತ್ರದಲ್ಲಿರುವ ಗಣ್ಯರು ಈ ಸಂಸ್ಥೆಯ ಸದಸ್ಯರಾಗಿದ್ದಾರೆ. ಜಗತ್ತಿನಾದ್ಯಂತ ಪೋಲಿಯೋ ತಡೆಗಟ್ಟುವಿಕೆ…

ಪ್ಲಾಸ್ಟಿಕ್ ಸಂಸ್ಕರಣೆ, ತಂತ್ರಜ್ಞಾನ ಕುರಿತ ತರಬೇತಿ
ಮೈಸೂರು

ಪ್ಲಾಸ್ಟಿಕ್ ಸಂಸ್ಕರಣೆ, ತಂತ್ರಜ್ಞಾನ ಕುರಿತ ತರಬೇತಿ

May 26, 2018

ಮೈಸೂರು: ನಗರದ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿರುವ ಕೇಂದ್ರೀಯ ಪ್ಲಾಸ್ಟಿಕ್ ಎಂಜಿನಿಯರಿಂಗ್ ತಂತ್ರಜ್ಞಾನ ಸಂಸ್ಥೆಯಲ್ಲಿ ಪ್ಲಾಸ್ಟಿಕ್ ಸಂಸ್ಕರಣೆ ಮತ್ತು ಪರೀಕ್ಷೆ, ಪ್ಲಾಸ್ಟಿಕ್ ಮೌಲ್ಡಿಂಗ್ ತಂತ್ರಜ್ಞಾನ ಮತ್ತು ಪ್ಲಾಸ್ಟಿಕ್ ತಂತ್ರಜ್ಞಾನ ಕುರಿತಂತೆ ತರಬೇತಿ ನೀಡುತ್ತಿದ್ದು, ನಿರುದ್ಯೋಗಿ ಯುವಜನರು ಪ್ರಯೋಜನ ಪಡೆಯಬಹುದಾಗಿದೆ ಎಂದು ಸಂಸ್ಥೆಯ ನಿರ್ದೇಶಕ ಶ್ರೀಕಾಂತ್ ಶಿರಾಲಿ ತಿಳಿಸಿದರು. ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇವು ಒಂದೂವರೆ ವರ್ಷದಿಂದ ಮೂರು ವರ್ಷದವರೆಗಿನ ಕೋರ್ಸ್‍ಗಳಾಗಿದ್ದು, ಬಿಎಸ್ಸಿ- ರಸಾಯನ ಶಾಸ್ತ್ರ, ಹತ್ತನೇ ತರಗತಿ- ಗಣ ತ, ಇಂಗ್ಲಿಷ್, ವಿಜ್ಞಾನ ವಿಷಯಗಳ ಶಿಕ್ಷಣ…

ಮೈಸೂರಿನಲ್ಲಿ ನಿಲ್ಲದ ವರ್ಷಧಾರೆ ಹಲವೆಡೆ ಧರೆಗುರುಳಿದ ಮರಗಳು, ಸಂಚಾರ ಅಸ್ತವ್ಯಸ್ತ
ಮೈಸೂರು

ಮೈಸೂರಿನಲ್ಲಿ ನಿಲ್ಲದ ವರ್ಷಧಾರೆ ಹಲವೆಡೆ ಧರೆಗುರುಳಿದ ಮರಗಳು, ಸಂಚಾರ ಅಸ್ತವ್ಯಸ್ತ

May 26, 2018

ಮೈಸೂರು: ಕೆಲವು ದಿನಗಳಿಂದ ಮೈಸೂರಿನಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ಶುಕ್ರವಾರವೂ ಸುರಿದ ಮಳೆಗೆ ನಗರದ ವಿವಿಧೆಡೆಗಳಲ್ಲಿ ಮರಗಳು ಧರೆಗುರುಳಿ, ವಾಹನ ಸಂಚಾರ, ಜನಜೀವನ ಅಸ್ತವ್ಯಸ್ತವಾಗಿತ್ತು. ಶುಕ್ರವಾರ ಸಂಜೆ 4 ಗಂಟೆ ವೇಳೆಗೆ ಆರಂಭವಾದ ಮಳೆ 1 ಗಂಟೆ ಕಾಲ ಜೋರಾಗಿ ಸುರಿಯಿತು. ಬಳಿಕ ಜಿಟಿಜಿಟಿಯಾಗಿ ತಡರಾತ್ರಿವರೆಗೂ ಸುರಿಯಿತು. ಇದರಿಂದ ಒಂಟಿಕೊಪ್ಪಲಿನ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ರಸ್ತೆ ಪಕ್ಕದಲ್ಲಿ ನಿಂತಿದ್ದ ತಮಿಳುನಾಡು ನೋಂದಣ ಯ (ಟಿಎನ್74 ಎಡಿ3481) ಕಾರಿನ ಮೇಲೆ ಮರದ ಕೊಂಬೆ ಮುರಿದು ಬಿದ್ದ ಪರಿಣಾಮ…

ಡಾ.ಯತೀಂದ್ರಗೆ ವೈದ್ಯಕೀಯ ಶಿಕ್ಷಣ ಖಾತೆ ನೀಡಲು ಒತ್ತಾಯ
ಮೈಸೂರು

ಡಾ.ಯತೀಂದ್ರಗೆ ವೈದ್ಯಕೀಯ ಶಿಕ್ಷಣ ಖಾತೆ ನೀಡಲು ಒತ್ತಾಯ

May 26, 2018

ಮೈಸೂರು:  ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಅತ್ಯಧಿಕ ಮತ ಗಳಿಸಿದವರಲ್ಲಿ ರಾಜ್ಯದಲ್ಲಿಯೇ ನಾಲ್ಕನೇ ಸ್ಥಾನ ಪಡೆದಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪುತ್ರ ಡಾ. ಯತೀಂದ್ರ ಅವರಿಗೆ ನೂತನ ಸಚಿವ ಸಂಪುಟದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಸ್ಥಾನ ನೀಡಬೇಕೆಂದು ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಗುರುಪಾದಸ್ವಾಮಿ ಮನವಿ ಮಾಡಿದರು. ಈ ಕುರಿತಂತೆ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಯಾಗಿದ್ದು, ಡಾ. ಯತೀಂದ್ರ ಅವರು ಸ್ವತಃ ವೈದ್ಯರೂ…

ಆನ್‍ಲೈನ್‍ನಲ್ಲಿ ಆರ್‍ಟಿಓ ಸೇವೆ
ಮೈಸೂರು

ಆನ್‍ಲೈನ್‍ನಲ್ಲಿ ಆರ್‍ಟಿಓ ಸೇವೆ

May 26, 2018

ಮನೆಯಲ್ಲೇ ಕುಳಿತು www.parivahan.gov.in/parivahan ವೆಬ್‍ಸೈಟ್ ಮೂಲಕ ಡಿಎಲ್‍ಗೆ ಅರ್ಜಿ ಸಲ್ಲಿಸಬಹುದು ಮೈಸೂರು, ಮೇ 25(ಆರ್‍ಕೆ)-ಇನ್ನು ಮುಂದೆ ಆರ್‍ಟಿಓ ಸೌಲಭ್ಯ ಪಡೆಯುವುದು ಸುಲಭ. ಮಧ್ಯ ವರ್ತಿಗಳ ಹಾವಳಿ ತಪ್ಪಿಸಿ ಪಾರದರ್ಶಕ ಸೇವೆ ಒದಗಿಸಲು ಸಾರಿಗೆ ಇಲಾಖೆಯು ಇಂದಿನಿಂದ ಆನ್‍ಲೈನ್ ವ್ಯವಸ್ಥೆ ಜಾರಿಗೊಳಿಸಿದೆ. ಈ ಕುರಿತು `ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿದ ಮೈಸೂರಿನ ಆರ್‍ಟಿಓ (ಪಶ್ಚಿಮ) ಎಂ.ಪ್ರಭುಸ್ವಾಮಿ ಅವರು, ಮೈಸೂರು ವಿಭಾಗಕ್ಕೆ ಸೇರಿದ ಮೈಸೂರು, ಚಾಮರಾಜನಗರ, ಕೊಡಗು, ಹಾಸನ ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಇಂದಿ ನಿಂದ ಆರ್‍ಟಿಓ ಕಚೇರಿಯ ಎಲ್ಲಾ…

ಶಿಕ್ಷಕರ ಸಮಸ್ಯೆ ಕಡೆಗಣ ಸುತ್ತಿರುವ ಎಂಎಲ್‍ಸಿಗಳು; ಆರೋಪ
ಮೈಸೂರು

ಶಿಕ್ಷಕರ ಸಮಸ್ಯೆ ಕಡೆಗಣ ಸುತ್ತಿರುವ ಎಂಎಲ್‍ಸಿಗಳು; ಆರೋಪ

May 26, 2018

ಮೈಸೂರು: ಶಿಕ್ಷಣ ಕ್ಷೇತ್ರದಿಂದ ವಿಧಾನ ಪರಿಷತ್‍ಗೆ ಆಯ್ಕೆಯಾದವರು ಶಿಕ್ಷಕರ ಸಮಸ್ಯೆ ಕಡೆಗಣ ಸುತ್ತಿದ್ದಾರೆಂದು ಕರ್ನಾಟಕ ಸಾಮಾಜಿಕ ನ್ಯಾಯ ರಕ್ಷಣಾ ವೇದಿಕೆ ಸಂಚಾಲಕ ಹಂ. ಲಕ್ಕೇಗೌಡ ಬೇಸರ ವ್ಯಕ್ತಪಡಿಸಿದರು. ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಿಕ್ಷಕರು ಅನೇಕ ಸಮಸ್ಯೆ ಎದುರಿಸುತ್ತಿದ್ದರೂ ಶಿಕ್ಷಕರ ಕ್ಷೇತ್ರ ಪ್ರತಿನಿಧಿಸುವವರು ಆ ಬಗ್ಗೆ ಗಮನ ಹರಿಸದಿರುವುದರಿಂದಾಗಿ ಅವರನ್ನು ಕೇಳುವವರು ಯಾರೂ ಇಲ್ಲದಂತಾಗಿದೆ. ಇದೇ ವೇಳೆ ಶಿಕ್ಷಣ ಇಲಾಖೆ ಕಚೇರಿಗಳಲ್ಲಿ ಭ್ರಷ್ಟಾಚಾರ ಮೇರೆ ಮೀರಿದ್ದು, ಅನೇಕ ವರ್ಷಗಳಿಂದ ಭ್ರಷ್ಟ ಸಿಬ್ಬಂದಿ ಒಂದೇ ಕಡೆ ಇದ್ದರೂ…

ಕುಂಬಾರಕೊಪ್ಪಲಿನಲ್ಲಿ ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ, ಜಾಥಾ
ಮೈಸೂರು

ಕುಂಬಾರಕೊಪ್ಪಲಿನಲ್ಲಿ ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ, ಜಾಥಾ

May 26, 2018

ಮೈಸೂರು: ಸೊಳ್ಳೆ ಕಡಿತದಿಂದ ರಕ್ಷಿಸಿಕೊಳ್ಳಿ, ಡೆಂಗ್ಯೂ, ಚಿಕುನ್‍ಗುನ್ಯಾ ಜ್ವರದಿಂದ ದೂರವಿರಿ. ಡೆಂಗ್ಯೂ ಜ್ವರಕ್ಕೆ ನಿರ್ಧಿಷ್ಟ ಚಿಕಿತ್ಸೆ ಇಲ್ಲ ಎಂಬಿತ್ಯಾದಿ ಘೋಷ ವಾಕ್ಯಗಳಿರುವ ಭಿತ್ತಿಪತ್ರಗಳನ್ನು ಹಿಡಿದಿದ್ದ ಆರೋಗ್ಯ ಇಲಾಖೆ ಕಾರ್ಯಕರ್ತರು ಶುಕ್ರವಾರ ಮೈಸೂರಿನ ಕುಂಬಾರಕೊಪ್ಪಲಿನ ವಿವಿಧ ಬೀದಿಗಳಲ್ಲಿ ಜಾಥಾ ನಡೆಸಿದರು. ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ ಅಂಗವಾಗಿ ಮೈಸೂರು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಕಚೇರಿಯಿಂದ ಆಯೋಜಿಸಲಾಗಿದ್ದ ಜಾಥಾಗೆ ಕುಂಬಾರಕೊಪ್ಪಲು ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರು ಮಾಜಿ ಎಂಎಲ್‍ಸಿ ಡಿ.ಮಾದೇಗೌಡ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ…

ಸ್ಕೂಟರ್‍ಗೆ ಟಿಪ್ಪರ್ ಡಿಕ್ಕಿ: ಯುವತಿ ಸಾವು, ಮತ್ತೊಬ್ಬ ಯುವತಿಗೆ ಗಂಭೀರ ಗಾಯ
ಮೈಸೂರು

ಸ್ಕೂಟರ್‍ಗೆ ಟಿಪ್ಪರ್ ಡಿಕ್ಕಿ: ಯುವತಿ ಸಾವು, ಮತ್ತೊಬ್ಬ ಯುವತಿಗೆ ಗಂಭೀರ ಗಾಯ

May 26, 2018

ಮೈಸೂರು: ಸ್ಕೂಟರ್‍ಗೆ ಟಿಪ್ಪರ್ ಹಿಂದಿ ನಿಂದ ಡಿಕ್ಕಿ ಹೊಡೆದ ಪರಿಣಾಮ ಯುವತಿಯೊಬ್ಬರು ಸಾವನ್ನಪ್ಪಿದ್ದು, ಮತ್ತೋರ್ವ ವಿದ್ಯಾರ್ಥಿಗೆ ಗಂಭೀರ ಗಾಯವಾಗಿರುವ ಘಟನೆ ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆ ಸಮೀಪ ಹಳೇ ಟೋಲ್‍ಗೇಟ್ ಬಳಿ ಇಂದು ಮಧ್ಯಾಹ್ನ ಸಂಭವಿಸಿದೆ. ಮೈಸೂರಿನ ಕೃಷ್ಣಮೂರ್ತಿಪುರಂ ನಿವಾಸಿಗಳಾದ ಚಂದ್ರಶೇಖರ್ ಅವರ ಪುತ್ರಿ ನೇಹಾ(19) ಸಾವನ್ನಪ್ಪಿದವರು. ತೀವ್ರ ಗಾಯ ಗೊಂಡಿರುವ ಜ್ಞಾನೇಶ್ವರ್ ಅವರ ಪುತ್ರಿ ಪ್ರಕೃತಿ(21)ಯನ್ನು ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈಗ ತಾನೇ ದ್ವಿತೀಯ ಪಿಯುಸಿ ಪಾಸಾಗಿದ್ದ ನೇಹಾ ಮತ್ತು ಬಿಎಸ್ಸಿ ಓದುತ್ತಿದ್ದ…

1 1,589 1,590 1,591 1,592 1,593 1,611
Translate »