ಮೈಸೂರು: ಮೈಸೂರಿನಲ್ಲಿ ಬುಧವಾರ ರಾತ್ರಿ ಗುಡುಗು ಸಿಡಿಲಿ ನೊಂದಿಗೆ ಧಾರಾಕಾರ ಮಳೆ ಸುರಿಯಿತು. ಇದರಿಂದ ಮರಗಳು ಧರೆಗುರುಳಿದ್ದು, ಕೆಲ ಕಾಲ ವಾಹನ ಸಂಚಾರ ಸ್ಥಗಿತಗೊಂಡು, ಜನಜೀವನ ಅಸ್ತವ್ಯಸ್ತವಾಗಿತ್ತು. ಬುಧವಾರ ರಾತ್ರಿ 7.45 ಗಂಟೆ ವೇಳೆಗೆ ಆರಂಭವಾದ ಮಳೆ 10 ಗಂಟೆಯವರೆಗೂ ಜೋರಾಗಿಯೇ ಸುರಿಯಿತು. ಮಳೆಗೆ ಕನಕದಾಸ ನಗರದ ಕೌಟಿಲ್ಯ ಸ್ಕೂಲ್ ಸಮೀಪದ ರಸ್ತೆಯಲ್ಲಿ 2 ಹಾಗೂ ಯಾದವಗಿರಿಯ ಪರಮಹಂಸ ರಸ್ತೆಯಲ್ಲಿ ಮರಗಳು ಧರೆಗುರುಳಿವೆ. ವಿಷಯ ತಿಳಿದು ಎಂಸಿಸಿ ಅಭಯ ತಂಡ ಸ್ಥಳಕ್ಕಾಗ ಮಿಸಿ ಮರವನ್ನು ತೆರವುಗೊಳಿಸಿ, ರಸ್ತೆ…
ನೇಣು ಹಾಕಿಕೊಂಡು ವ್ಯಕ್ತಿ ಆತ್ಮಹತ್ಯೆ
May 3, 2018ಮೈಸೂರು: ಮಾಡಿದ ಸಾಲಕ್ಕೆ ಹೆದರಿ ವ್ಯಕ್ತಿಯೋರ್ವ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿ ಕೊಂಡಿರುವ ಘಟನೆ ಮೈಸೂರು ತಾಲೂಕು ಹಿನಕಲ್ನಲ್ಲಿ ಕಳೆದ ರಾತ್ರಿ ಸಂಭವಿಸಿದೆ. ಗ್ರಾಮದ ಹುಂಡಿ ಬೀದಿ ನಿವಾಸಿ ಸುಂದರೇಶ್ (30) ಆತ್ಮಹತ್ಯೆಗೆ ಶರಣಾದವರು, ಮೂಲತಃ ಪಾಂಡವಪುರದವರಾದ ಆತ, ಗ್ಯಾಂಬ್ಲಿಂಗ್ ಚಟಕ್ಕೆ ಬಿದ್ದು ಸಾಲ ಮಾಡಿಕೊಂಡಿದ್ದು, ಸಾಲಗಾರರು ಪೀಡಿಸುತ್ತಿದ್ದರಿಂದ ಹೆದರಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ವಿಜಯನಗರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮತದಾನಕ್ಕೆ ಐದು ದಿನ ಮುಂಚೆ ಮತದಾರರ ಚೀಟಿ ಮನೆ ಮನೆಗೆ ಹಂಚಿಕೆ
May 1, 2018ಮೈಸೂರು: ವಿಧಾನ ಸಭಾ ಚುನಾವಣೆಯ ಮತದಾನಕ್ಕೆ ಕೆಲವೇ ದಿನಗಳಿದ್ದು, ಮತದಾರರ ಚೀಟಿಗಳನ್ನು ಮತದಾರರಿಗೆ ತಲುಪಿಸಲು ಚುನಾವಣಾ ಆಯೋಗ ಸಿದ್ಧತೆ ಮಾಡಿಕೊಂಡಿದೆ ಎಂದು ಸ್ವೀಪ್ ಜಿಲ್ಲಾ ಸಮಿತಿ ಅಧ್ಯಕ್ಷರೂ ಆದ ಜಿಪಂ ಸಿಇಓ ಪಿ.ಶಿವಶಂಕರ್ ತಿಳಿಸಿದರು. ಮೈಸೂರು ಜಿಪಂ ಸಭಾಂಗಣದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಮತದಾನದ ದಿನ ದಂದು ಯಾವುದೇ ಗೊಂದಲಕ್ಕೆ ಆಸ್ಪದ ನೀಡಬಾರದೆಂದು ಮತದಾನಕ್ಕೆ ಐದು ದಿನಗಳು ಬಾಕಿ ಇರುವಾಗಲೇ ಬಿಎಲ್ಓ ಗಳ ಮೂಲಕ ಪ್ರತಿ ಮನೆಗೂ ಮತ ದಾರರ ಚೀಟಿ (ವೋಟರ್ಸ್ ಸ್ಲಿಪ್)…
ನಿವೇಶನ ನೀಡುವುದಾಗಿ ವಂಚನೆ ಆರೋಪ: ಮಹದೇಶ್ವರಸ್ವಾಮಿ ಇನ್ಫ್ರಾಟೆಕ್ ಅಂಡ್ ಹೌಸಿಂಗ್ ಡೆವಲಪರ್ಸ್ ಕಂಪನಿ ವಿರುದ್ಧ ಕೇಸ್ ದಾಖಲು
May 1, 2018ಮೈಸೂರು: ಹೌಸಿಂಗ್ ಡೆವಲಪರ್ಸ್ ಕಂಪನಿಯೊಂದು ನಿವೇಶನ ಅಭಿ ವೃದ್ಧಿಪಡಿಸಿ ಗೃಹನಿರ್ಮಾಣ ಸಹಕಾರ ಸಂಘಕ್ಕೆ ನೀಡುವುದಾಗಿ ಮುಂಗಡ ಪಡೆದು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ನಗರದ ಕೆ.ಆರ್.ಮೊಹಲ್ಲಾದ ತ್ಯಾಗ ರಾಜ ರಸ್ತೆಯಲ್ಲಿರುವ ಮಹದೇಶ್ವರ ಸ್ವಾಮಿ ಇನ್ಫ್ರಾಟೆಕ್ ಮತ್ತು ಹೌಸಿಂಗ್ ಡೆವಲ ಪರ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಪಾಲುದಾರರಾದ ಎನ್.ಎಸ್.ನಂಜುಂಡ ಸ್ವಾಮಿ ಹಾಗೂ ಎಂ.ಎಸ್.ನಟರಾಜು ಹಾಗೂ ಗೃಹ ನಿರ್ಮಾಣ ಸಂಘದ ಮಾಜಿ ಅಧ್ಯಕ್ಷ ಎಂ.ಎಸ್.ಮಹದೇವ ಸ್ವಾಮಿ ವಂಚಿಸಿದವರು. ಸದರಿ ಕಂಪನಿ ನಿವೇಶನ ಅಭಿವೃದ್ಧಿ ಕರಾರು ಮಾಡಿಕೊಂಡು ಮುಂಗಡ ಹಣ ಪಡೆದು…
ಪಕ್ಷ ಸೇರ್ಪಡೆಯಿಂದ ಕಾಂಗ್ರೆಸ್ ಗೆಲ್ಲುವ ವಿಶ್ವಾಸ ದ್ವಿಗುಣ ಅಭ್ಯರ್ಥಿ ಡಾ. ಹೆಚ್.ಸಿ. ಮಹದೇವಪ್ಪ
May 1, 2018ತಿ.ನರಸೀಪುರ: ರಾಜಕೀಯವಾಗಿ ಕೈ ಹಿಡಿದು ಅಧಿಕಾರ ಕೊಟ್ಟವರು ಕೆಲವು ವರ್ಷಗಳ ಕಾಲ ದೂರವಾಗಿ ಮುಖಂಡರು ಹಾಗೂ ಕಾರ್ಯಕರ್ತರು ಮರಳಿ ಪಕ್ಷಕ್ಕೆ ಬರುತ್ತಿದ್ದು, ಸಾರ್ವತ್ರಿಕ ವಿಧಾನಸಭಾ ಚುನಾವಣೆ ಯಲ್ಲಿ ಗೆಲ್ಲುವ ವಿಶ್ವಾಸ ದ್ವಿಗುಣಗೊಂಡಿದೆ ಎಂದು ಲೋಕೋಪಯೋಗಿ ಸಚಿವ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಡಾ.ಹೆಚ್.ಸಿ. ಮಹದೇವಪ್ಪ ಹೇಳಿದರು. ಪಟ್ಟಣದ ಕಡ್ಲೆರಂಗಮ್ಮ ಬೀದಿಯಲ್ಲಿ ಪ.ಪಂ ಮಾಜಿ ಅಧ್ಯಕ್ಷ ಎನ್.ಎಸ್.ಬಸವರಾಜು ಸೇರಿದಂತೆ ಜೆಡಿಎಸ್ ಪಕ್ಷದಲ್ಲಿ ಗುರುತಿಸಿ ಕೊಂಡಿದ್ದ ಯುವ ಮುಖಂಡರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಮಾತನಾಡಿ, ಚುನಾವಣಾ ಪ್ರಚಾರದಲ್ಲಿ ಕ್ಷೇತ್ರದಾದ್ಯಂತ ವ್ಯಕ್ತವಾಗುತ್ತಿರುವ…
ಕಾಂಗ್ರೆಸ್ ಅಭ್ಯರ್ಥಿ ಕಳಲೆ ಕೇಶವಮೂರ್ತಿ ಮತಯಾಚನೆ
May 1, 2018ನಂಜನಗೂಡು: ಕಾಂಗ್ರೆಸ್ ಅಭ್ಯರ್ಥಿ ಕಳಲೆ ಕೇಶವಮೂರ್ತಿ ತ್ಯಾಗರಾಜ ಕಾಲೋನಿ ಮತ್ತು ಈದಿಗಾ ಬಡಾವಣೆಯಲ್ಲಿ ಮತಯಾಚಿಸಿದರು. ಅವರು ಈ ಸಂದರ್ಭದಲ್ಲಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ನುಡಿದಂತೆ ನಡೆದಿದ್ದು ಚುನಾವಣೆ ಸಮಯದಲ್ಲಿ ನೀಡಿದ್ದ 165 ಭರವಸೆ ಗಳಲ್ಲಿ 160 ಭರವಸೆಗಳನ್ನು ಪೂರೈಸಿದ್ದಾರೆ ಎಂದರು. ನಂಜನಗೂಡು ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗಾಗಿ ದಾಖಲೆ ಪ್ರಮಾಣದ ಹಣ ಬಿಡುಗಡೆ ಮಾಡಿದರು. ನಗರದ ಎಲ್ಲಾ ವಾರ್ಡುಗಳ ಅಭಿವೃದ್ಧಿಗೆ ಕೋಟ್ಯಾಂತರ ರೂಗಳನ್ನು ಖರ್ಚುಮಾಡಿ ರಸ್ತೆ-ಚರಂಡಿ, ಮತ್ತು ಕುಡಿಯುವ ನೀರು ಮುಂತಾ ದವುಗಳಿಗೆ ಮೊದಲನೇ ಆದ್ಯತೆ ನೀಡುತ್ತಿರು…
ನಂಜನಗೂಡು ನ್ಯಾಯಾಲಯ ಆವರಣದಲ್ಲಿ ಶ್ರೀಗಂಧ ಕಳವಿಗೆ ಯತ್ನ
May 1, 2018ನಂಜನಗೂಡು: ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಬೆಳೆದಿದ್ದ ಬೆಲೆ ಬಾಳುವ ಶ್ರೀಗಂಧ ಕಳವಿಗೆ ಯತ್ನಿಸಿದ ಖದೀಮರು ಅರ್ಧ ಕೊಯ್ದು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಭಾನುವಾರ ಮಧ್ಯರಾತ್ರಿ ಕಳ್ಳರು ನ್ಯಾಯಾಲಯದ ಆವ ರಣದ ಕಾಂಪೌಂಡ್ ಪಕ್ಕದಲ್ಲಿದ್ದ ಮರವನ್ನು ಕೊಯ್ದು ಸಾಗಿಸಲು ಯತ್ನಿಸಿದ್ದಾರೆ. ಅಷ್ಟರಲ್ಲಿ ರಾತ್ರಿ ಪಾಳಿಯಲ್ಲಿದ್ದ ಕಾವಲುಗಾರರು ಎಚ್ಚೆತ್ತ ಪರಿಣಾಮ ಕಳ್ಳರು ಕಡಿದ ಮರದ ಕೊಂಬೆಯನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಈ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.
ಬನ್ನೂರು ಈಗ ಬಿಜೆಪಿ ಭದ್ರಕೋಟೆ: ಶಂಕರ್
May 1, 2018ಬನ್ನೂರು: ಜೆಡಿಎಸ್ ಭದ್ರ ಕೋಟೆಯಾಗಿದ್ದ ಬನ್ನೂರು ಹೋಬಳಿ ಮಾಜಿ ಶಾಸಕಿ ಜೆ.ಸುನೀತಾ ವೀರಪ್ಪಗೌಡ ನೇತೃತ್ವದಲ್ಲಿ ಬಿಜೆಪಿಮಯ ಆಗಿದ್ದು, ವಿಧಾನ ಸಭಾ ಚುನಾವಣೆಯಲ್ಲಿ ಇಲ್ಲಿನ ಮತದಾರರು ಕಮಲವನ್ನು ಆಯ್ಕೆ ಮಾಡಲಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಎಸ್.ಶಂಕರ್ ಹೇಳಿದರು. ತಾಲೂಕಿನ ಬನ್ನೂರು ಪಟ್ಟಣದ ಶ್ರೀ ಶಿವಪಾರ್ವತಿ ಕಲ್ಯಾಣ ಮಂಟಪದಲ್ಲಿ ಜೆಡಿಎಸ್ ಮುಖಂಡರಾದ ಬೀಡನಹಳ್ಳಿ ಗ್ರಾಮದ ಯೋಗಾನಂದ, ಮರೀಗೌಡ, ಸಂತೋಷ, ಹೊಂಬಾಳೆ, ವೆಂಕಟೇಗೌಡ ಹಾಗೂ ಇನ್ನಿತರರನ್ನು ಬಿಜೆಪಿ ಸೇರ್ಪಡೆ ಮಾಡಿಕೊಂಡು ಮಾತನಾಡಿ, ಬನ್ನೂರು ಹೋಬಳಿಯಲ್ಲಿ ಜೆಡಿಎಸ್ ಪ್ರಾಬಲ್ಯ ಕುಗ್ಗಿದ್ದು, ಬಿಜೆಪಿ ಸಂಘಟನೆ…
ಕಾಂಗ್ರೆಸ್, ಬಿಜೆಪಿ ದೂರವಿಟ್ಟು ಜೆಡಿಎಸ್ ಸರ್ಕಾರ ರಚನೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ವಿಶ್ವಾಸ
April 30, 2018ಮೈಸೂರು: ಈ ಚುನಾವಣೆಯಲ್ಲಿ ಜೆಡಿಎಸ್ಗೆ ಬಹುಮತ ಬರಬಹುದು ಅಥವಾ ಬರದೇ ಇರ ಬಹುದು. ಆದರೆ, ಕಾಂಗ್ರೆಸ್ ಮತ್ತು ಬಿಜೆಪಿ ಯನ್ನು ದೂರವಿಟ್ಟು ನಾವೇ ಸರ್ಕಾರ ರಚಿಸು ತ್ತೇವೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮೈಸೂರಿನ ಖಾಸಗಿ ಹೋಟೆಲ್ನಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮತ ನಾಡಿದ ಅವರು, ರಾಜ್ಯದಲ್ಲಿ ಜೆಡಿಎಸ್ಗೆ ಪೂರಕವಾದ ವಾತಾವರಣವಿದೆ. ಈ ಚುನಾವಣೆಯಲ್ಲಿ ನಮ್ಮ ಪಕ್ಷ ಹೆಚ್ಚಿನ ಸ್ಥಾನಗಳಿಸಲಿದೆ. ಕಾಂಗ್ರೆಸ್ ಬಿಜೆಪಿಗಿಂತಲೂ ಹೆಚ್ಚಿನ ಸೀಟು ನಮಗೆ ಸಿಗಲಿದೆ. ಜೆಡಿ ಎಸ್ಗೆ ಬಹುಮತ ಲಭಿಸದಿದ್ದರೂ,…
ಅರಣ್ಯ ಹಕ್ಕು ಕಾಯ್ದೆ ಅಸಮರ್ಪಕ ಅನುಷ್ಠಾನ: ಬುಡಕಟ್ಟು ಸಮುದಾಯದಿಂದ ಚುನಾವಣೆ ಬಹಿಷ್ಕಾರ ಎಚ್ಚರಿಕೆ
April 30, 2018ಮೈಸೂರು: ಅರಣ್ಯ ಹಕ್ಕು ಕಾಯ್ದೆಯ ಸಮರ್ಪಕ ಅನುಷ್ಠಾನ ಗೊಳಿಸದೇ ಅರಣ್ಯವಾಸಿಗಳನ್ನು ಶೋಷಣೆ ಮಾಡಲಾಗುತ್ತಿರುವ ಹಿನ್ನೆಲೆಯಲ್ಲಿ ವಿಧಾನಸಭಾ ಚುನಾವಣೆಯ ಮತದಾನ ವನ್ನು ಆದಿವಾಸಿ ಸಮುದಾಯಗಳು ಒಕ್ಕೊರಲಿನಿಂದ ಬಹಿಷ್ಕಾರ ಮಾಡುತ್ತಿವೆ ಎಂದು ಅರಣ್ಯವಾಸಿ ಬುಡಕಟ್ಟು ಸಮು ದಾಯಗಳ ಒಕ್ಕೂಟ ಪ್ರಕಟಿಸಿದೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಸಂಚಾಲಕ ಬಾಬು, ಅರಣ್ಯವಾಸಿ ಬುಡಕಟ್ಟು ಸಮು ದಾಯಗಳನ್ನು ಓಟ್ ಬ್ಯಾಂಕ್ ಆಗಿ ಬಳಸಿ ಕೊಳ್ಳಲಾಗುತ್ತಿದ್ದು, ನಮ್ಮ ಸಮು ದಾಯಕ್ಕೆ ಸೌಲಭ್ಯ ಮಾತ್ರ ಮರೀಚಿಕೆ ಯಾಗಿದೆ. ಈ…