ಬೆಂಗಳೂರು: ಅಧಿಕಾರ ವಹಿಸಿ ಕೊಳ್ಳುವುದಕ್ಕೂ ಮುನ್ನ ರಾಜ್ಯದ ವಿವಿಧ ಶಕ್ತಿ ದೇವತೆಗಳ ಅನುಗ್ರಹ ಪಡೆದ ಹೆಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ ಯಾದ ನಂತರ ವಿವಿಧ ಮಠಾಧೀಶರ ಆಶೀರ್ವಾದ ಪಡೆದರು. ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಮರು ದಿನವೇ ತುಮಕೂರಿಗೆ ತೆರಳಿ ನಡೆದಾಡುವ ದೇವರು ಶಿವಕುಮಾರ ಸ್ವಾಮೀಜಿಯವರ ಆಶೀರ್ವಾದ ಪಡೆದು, ಅವರ ಜೊತೆ ಹತ್ತು ನಿಮಿಷಗಳ ಕಾಲ ಸಮಾಲೋಚನೆ ನಡೆಸಿದರು. ಇದಕ್ಕೂ ಮುನ್ನ ನಗರದ ಹೊರವಲಯ ದಲ್ಲಿರುವ ಉಳ್ಳಾಳದ ನಂಜಾವಧೂತ ಮಠಕ್ಕೆ ತೆರಳಿದ ಕುಮಾರಸ್ವಾಮಿ, ಶ್ರೀಗಳ ಆಶೀರ್ವಾದ ಪಡೆದರು. ನಂಜಾವಧೂತ ಶ್ರೀಗಳ ಭೇಟಿ…
ಇನ್ನೂ ಪಂಜರದ ಹಕ್ಕಿಗಳಾಗಿರುವ ಕಾಂಗ್ರೆಸ್, ಜೆಡಿಎಸ್ ಶಾಸಕರು
May 25, 2018ಬೆಂಗಳೂರು: ಶುಕ್ರ ವಾರ ನಡೆಯಲಿರುವ ವಿಶ್ವಾಸಮತ ಯಾಚನೆ ವೇಳೆ ಶಾಸಕರು ತಪ್ಪಿಸಿ ಕೊಳ್ಳಬಾರದು ಎಂಬ ಉದ್ದೇಶದಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕ ರನ್ನು ನಗರದ ರೆಸಾರ್ಟ್ವೊಂದರಲ್ಲಿ ಇರಿಸಲಾಗಿದೆ. ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ದೊರೆತ ನಂತರ ಕಳೆದ ಒಂಬತ್ತು ದಿನಗಳಿಂದಲೂ ಶಾಸಕರು ಅವರ ಕುಟುಂಬದಿಂದ ದೂರ ಉಳಿದಿದ್ದಾರೆ. ದೊಮ್ಮಲೂ ರಿನ ಹಿಲ್ಟನ್ ಎಂಬೆಸಿ ಗಲ್ಪ್ ಲಿಂಕ್ಸ್ನಲ್ಲಿ ಕಾಂಗ್ರೆಸ್ ಶಾಸಕರು ತಂಗಿದ್ದರೆ, ನಗರದ ಹೊರವಲಯ ದೇವನಹಳ್ಳಿಯ ಪ್ರಸ್ಟಿಜ್ ಗಲ್ಪ್ ಸೈರ್ ನಲ್ಲಿ ಜೆಡಿಎಸ್ ಶಾಸಕರು ವಾಸ್ತವ್ಯ ಹೂಡಿದ್ದಾರೆ. ವಿಶ್ವಾಸಮತ ಯಾಚನೆವರೆಗೂ…
ಸಾರ್ಥಕತೆ ಇಲ್ಲದ ರೈತ ಸಂತೆಗಳು: ಸಾರ್ವಜನಿಕರ ತೆರಿಗೆ ಹಣ ಹೀಗೂ ಪೋಲಾಗುತ್ತಿದೆ…
May 25, 2018ಮೈಸೂರು: ಕಟ್ಟಿ ನಿಲ್ಲಿಸಿ ಉದ್ಘಾಟಿಸುವುದಕ್ಕೆ ಎಲ್ಲಿಲ್ಲದ ಉತ್ಸಾಹ. ಬಳಸಿಕೊಳ್ಳಲೇಕೊ ನಿರುತ್ಸಾಹ! ಇದರ ಪರಿಣಾಮ ಲಕ್ಷಾಂತರ ಹಣ ವ್ಯಯಿಸಿ ನಿರ್ಮಿಸಿದ ಕಟ್ಟಡಗಳು ಹಾಳು ಕೊಂಪೆಗಳಾಗುತ್ತಿವೆಯೇ ಹೊರತು ಬಳಕೆಗೆ ಮಾತ್ರ ಬಾರದಾಗಿವೆ. ಮೈಸೂರಿನ ವಿಜಯನಗರದ 2ನೇ ಹಂತದಲ್ಲಿರುವ ರೈತ ಸಂತೆ ಕಟ್ಟಡ ಸೇರಿದಂತೆ ಮೈಸೂರು ನಗರದ ವಿವಿಧ ಭಾಗಗಳಲ್ಲಿ ನಿರ್ಮಿಸಿರುವ ಕಿರು ಮಾರುಕಟ್ಟೆಗಳು ಹಲವು ವರ್ಷಗಳಿಂದ ಪ್ರಯೋಜನಕ್ಕೆ ಬಾರದಾಗಿವೆ. ಇದಕ್ಕೆ ಕಾರಣ, ಸಂಬಂಧಿಸಿದ ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗದ ನಿರ್ಲಕ್ಷ್ಯ ಎಂಬುದು ಸಾರ್ವಜನಿಕರ ವಲಯದಲ್ಲಿ ಕೇಳಿ ಬರುತ್ತಿರುವ ಆರೋಪ. ರೈತ…
ಮೈಸೂರಿಗರ ಬಾಯಾರಿಕೆ ನೀಗಲು ಸ್ಥಾಪನೆಯಾಗುತ್ತಿವೆ 15 ಶುದ್ಧ ಕುಡಿಯವ ನೀರು ಘಟಕ
May 25, 2018ಮೈಸೂರು: ಮೈಸೂರು ನಗರದ ನಾಗರಿಕರ ಬಾಯಾರಿಕೆ ನೀಗಿಸಲು ಈಗಾಗಲೇ 13 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದ್ದು, ಇದೀಗ ಇನ್ನು 15 ಘಟಕಗಳನ್ನು ಸ್ಥಾಪಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಮೈಸೂರು ನಗರದಲ್ಲಿ ಮಹಾನಗರ ಪಾಲಿಕೆ ಸ್ಥಾಪಿಸಿದ ಶುದ್ಧ ಕುಡಿಯುವ ನೀರಿನ ಘಟಕಗಳ ಬಳಕೆಯಲ್ಲಿ ನಾಗರಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರದ ವಿವಿಧ ಭಾಗಗಳಲ್ಲಿ ಸ್ಥಾಪಿಸಿರುವ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ 5 ರೂ.ಗಳ ಚಿನ್ನದ ಬಣ್ಣ ಲೇಪನದ ನಾಣ್ಯವನ್ನು ಹಾಕಿದರೆ, 20 ಲೀಟರ್ ಶುದ್ಧ ಕುಡಿಯುವ ನೀರು ದೊರೆಯಲಿದೆ….
ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಶ್ರೀ ದತ್ತ ವೆಂಕಟೇಶ್ವರ ಸ್ವಾಮಿ ತೆಪ್ಪೋತ್ಸವ
May 25, 2018ಮೈಸೂರು: ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿರುವ ಸಪ್ತರ್ಷಿ ಸರೋವರ ಕೊಳದಲ್ಲಿ ಶ್ರೀ ದತ್ತ ವೆಂಕಟೇಶ್ವರ ಸ್ವಾಮಿ ತೆಪ್ಪೋತ್ಸವವು ಸಾವಿರಾರು ಮಂದಿ ಭಕ್ತಾದಿಗಳ ಸಮ್ಮುಖದಲ್ಲಿ ಗುರುವಾರ ಸಂಜೆ ವಿಜೃಂಭಣೆಯಿಂದ ನೆರವೇರಿತು. ಗುರುವಾರ ಸಂಜೆ 6.30ರ ವೇಳೆಗೆ ದೇವಸ್ಥಾನದಿಂದ ಹೊರಟ ಶ್ರೀ ದತ್ತ ವೆಂಕಟೇಶ್ವರ ಸ್ವಾಮಿ ಪಲ್ಲಕ್ಕಿ ಉತ್ಸವ 6.45ರ ವೇಳೆಗೆ ಸಪ್ತರ್ಷಿ ಸರೋವರ ಕೊಳದ ಅಂಗಳಕ್ಕೆ ತರಲಾಯಿತು. ನಂತರ ಶ್ರೀ ದತ್ತ ವೆಂಕಟೇಶ್ವರ ಸ್ವಾಮಿಗೆ ಪೂಜೆ ಮತ್ತು ಮಹಾಮಂಗಳಾರತಿ ಮಾಡಲಾಯಿತು. ನಂತರ 7 ಗಂಟೆಗೆ ಹೂವು, ತಳಿರು ತೋರಣ…
ಒಣಗಿರುವ ಮರಗಳ ತೆರವು ಕಾರ್ಯಾಚರಣೆ ಆರಂಭ
May 25, 2018ಮೈಸೂರು: ಒಣಗಿರುವ ಅಪಾಯಕಾರಿ ಮರಗಳು ಹಾಗೂ ಕೊಂಬೆಗಳ ತೆರವಿಗೆ ಮೈಸೂರು ನಗರ ಪಾಲಿಕೆ ಕಾರ್ಯಾಚರಣೆ ಆರಂಭಿಸಿದೆ. ಕಳೆದ ನಾಲ್ಕೈದು ದಿನಗಳಿಂದ ಗಾಳಿ-ಮಳೆಗೆ ಮರಗಳು ಉರುಳಿ ಬೀಳುತ್ತಿರುವ ಹಿನ್ನೆಲೆಯಲ್ಲಿ ನಗರ ಪಾಲಿಕೆ ಒಣಗಿರುವ ಮರಗಳು ಹಾಗೂ ಕೊಂಬೆಗಳನ್ನು ತೆರವು ಗೊಳಿಸುವ ಕಾರ್ಯಾಚರಣೆಯನ್ನು ಚುರುಕುಗೊಳಿಸಿದೆ. ಹಾಗೆಯೇ ನೀಲಗಿರಿ ರಸ್ತೆ, ಅರಮನೆ ಕಡೆಯ ಫುಟ್ಪಾತ್ಗೆ ಹೊಂದಿಕೊಂಡಂತಿದ್ದ ಭಾರೀ ಗಾತ್ರದ ಮರವೊಂದನ್ನು ಗುರುವಾರ ತೆರವು ಗೊಳಿಸಲಾಯಿತು. ನಗರ ಪಾಲಿಕೆ ತೋಟ ಗಾರಿಕೆ ವಿಭಾಗದ ಸಹಾಯಕ ನಿರ್ದೇಶಕ ಮುರುಳೀಧರ ಅವರ ನೇತೃತ್ವದಲ್ಲಿ ಇಂದು ಜೆಸಿಬಿ…
ಮೇ 26ರಂದು ಮೈಸೂರು ವಿವಿ 5ನೇ ಹಂಗಾಮಿ ಕುಲಪತಿ ನೇಮಕ ಸಂಭವ
May 25, 2018ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ 4ನೇ ಹಂಗಾಮಿ ಕುಲಪತಿ ಪ್ರೊ. ನಿಂಗಮ್ಮ ಸಿ. ಬೆಟ್ಸೂರ್ ಅವರ ಅಧಿಕಾರಾವಧಿ ಶನಿವಾರ ಅಂತ್ಯಗೊಳ್ಳಲಿದ್ದು, 5ನೇ ಹಂಗಾಮಿ ಕುಲಪತಿಗಳು ಅಧಿಕಾರ ವಹಿಸಿಕೊಳ್ಳುವ ಸಂಭವವಿದೆ. 15 ತಿಂಗಳ ಹಿಂದೆಯಷ್ಟೇ ಶತಮಾನೋತ್ಸವ ಆಚರಿಸಿಕೊಂಡ ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯವು ಈವರೆಗೂ ಪೂರ್ಣಾವಧಿ ಕುಲಪತಿಯನ್ನು ಕಂಡಿಲ್ಲ. 2017ರ ಜನವರಿ 10 ರಂದು ಪ್ರೊ.ಕೆ.ಎಸ್.ರಂಗಪ್ಪ ಅವರು ಕುಲಪತಿ ಸ್ಥಾನದಿಂದ ನಿರ್ಗಮಿಸಿದ ನಂತರ ಈವರೆಗೂ ಪೂರ್ಣಾವಧಿ ಕುಲಪತಿಗಳು ನೇಮಕವಾಗದಿರುವುದು ಬೇಸರದ ಸಂಗತಿಯಾಗಿದೆ ಪ್ರೊ. ನಿಂಗಮ್ಮ ಸಿ. ಬೆಟ್ಸೂರ್ ಅವರ ಅವಧಿಯು ಮೇ…
ಪೋಕ್ಸೋ ಆರೋಪಿ ನೇಣಿಗೆ ಶರಣು
May 25, 2018ಮೈಸೂರು: ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿರುವ ಆರೋಪ ಎದುರಿಸುತ್ತಿದ್ದ ಯುವಕನೋರ್ವ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿ ಕೊಂಡಿರುವ ಘಟನೆ ಮೈಸೂರಿನ ಎನ್.ಆರ್.ಮೊಹಲ್ಲಾದಲ್ಲಿ ನಡೆದಿದೆ. ಎನ್.ಆರ್.ಮೊಹಲ್ಲಾ, ನಾಯ್ಡು ನಗರ 2ನೇ ಹಂತದ ನಿವಾಸಿ ವಿಜಯೇಂದ್ರ (22), ಬುಧವಾರ ರಾತ್ರಿ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿ ಕೊಂಡಿದ್ದಾನೆ. ಅಮೆಜಾನ್ ಕಂಪನಿಯಲ್ಲಿ ಡೆಲಿವರಿ ಬಾಯ್ ಆಗಿದ್ದ ವಿಜಯೇಂದ್ರ, ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿರುವ ಆರೋಪ ಎದುರಿಸುತ್ತಿದ್ದ. ಈ ಸಂಬಂಧ ವಿಜಯೇಂದ್ರನ ವಿರುದ್ಧ ಪೋಕ್ಸೋ ಕಾಯ್ದೆಯಡಿ ವರ್ಷದ ಹಿಂದೆ ಪ್ರಕರಣ ದಾಖಲಿಸಿಕೊಂಡಿದ್ದ ಎನ್.ಆರ್.ಠಾಣೆ ಪೊಲೀಸರು,…
ಪ್ರೊ.ಕೆ.ಎಸ್.ರಂಗಪ್ಪ ಅವರನ್ನು ಎಂಎಲ್ಸಿ ಮಾಡಿ, ಸಚಿವ ಸ್ಥಾನ ಕಲ್ಪಿಸಲು ಮನವಿ
May 25, 2018ಮೈಸೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೈಸೂರಿನ ಚಾಮರಾಜ ಕ್ಷೇತ್ರದಲ್ಲಿ ಪರಾಜಿತಗೊಂಡ ಜೆಡಿಎಸ್ನ ಪ್ರೊ.ಕೆ.ಎಸ್. ರಂಗಪ್ಪ, ಶಿಕ್ಷಣ ಕ್ಷೇತ್ರದಲ್ಲಿ ನುರಿತವರಾಗಿದ್ದು, ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿ, ಉನ್ನತ ಶಿಕ್ಷಣ ಸಚಿವರನ್ನಾಗಿ ನೇಮಕ ಮಾಡಿಕೊಳ್ಳುವಂತೆ ಮೈಸೂರು ಜಿಲ್ಲಾ ಕನ್ನಡ ಚಳವಳಿ ಗಾರರ ಸಂಘದ ಅಧ್ಯಕ್ಷ ಬಿ.ಎ.ಶಿವಶಂಕರ್ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಒತ್ತಾಯಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ವಿವಿಯಲ್ಲಿ ಅಧ್ಯಾಪಕ, ನಿರ್ದೇಶಕ, ಸಂಶೋಧಕ ಹಾಗೂ ಕುಲಪತಿಯಾಗಿ ಸೇವೆ ಸಲ್ಲಿಸಿರುವ ಪ್ರೊ….
ಮೈಸೂರಿನಲ್ಲಿ ಜೂನ್ 1ರಿಂದ 5ರವರೆಗೆ ಮಾವು ಮೇಳ ಕರ್ಜನ್ ಪಾರ್ಕ್ನಲ್ಲಿ ಮೇಳ ಆಯೋಜನೆ
May 25, 2018ಮೈಸೂರು: ಸಾಂಸ್ಕøತಿಕ ನಗರಿ ಮೈಸೂರಿನ ಜನತೆಗೆ ವಿವಿಧ ತಳಿಯ ಮಾವಿನ ಹಣ ್ಣನ ರುಚಿ ತಣ ಸಲು ತೋಟಗಾರಿಕಾ ಇಲಾಖೆ ಜೂನ್ 1ರಿಂದ 5ರವರೆಗೆ ಕರ್ಜನ್ ಪಾರ್ಕ್ನಲ್ಲಿ ‘ಮಾವು ಮೇಳ’ ನಡೆಸಲು ನಿರ್ಧರಿಸಿದೆ ಎಂದು ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಜಿ.ಡಿ.ದಿನೇಶ್ಕುಮಾರ್ ತಿಳಿಸಿದ್ದಾರೆ. ಈ ಸಾಲಿನ ಮಾವು ಮೇಳ ನಡೆಸುವುದಕ್ಕೆ ಸಂಬಂಧಿಸಿದಂತೆ ಮಾವು ಬೆಳೆಗಾರರೊಂದಿಗೆ ನಡೆಸಿದ ಸಭೆಯಲ್ಲಿ ಮೈಸೂರು ಜಿಲ್ಲೆಯ ವಿವಿಧೆಡೆಯಿಂದ ಸುಮಾರು 40ಕ್ಕೂ ಹೆಚ್ಚು ಮಂದಿ ಮಾವು ಬೆಳೆಗಾರರು ಆಗಮಿಸಿದ್ದರು. ಈ ಸಭೆಯಲ್ಲಿ ಜೂನ್…