ಮೈಸೂರು: ವರ್ಗಾವಣೆ ಪತ್ರ(ಟಿಸಿ) ತರಲೆಂದು ಶಾಲೆಗೆ ಹೋಗಿದ್ದ ಅಪ್ರಾಪ್ತ ಬಾಲಕಿಯನ್ನು ಯುವಕರಿಬ್ಬರು ಅಪಹರಿಸಿದ್ದಾರೆಂದು ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೈಸೂರು ತಾಲೂಕು, ಇಲವಾಲ ಹೋಬಳಿ ಜಟ್ಟಿ ಹುಂಡಿ ಗ್ರಾಮದವರಾದ ಬಾಲಕಿ ತಂದೆ ಮೇ 22ರಂದು ಇಲವಾಲ ಠಾಣೆಗೆ ಈ ಕುರಿತು ಲಿಖಿತ ದೂರು ನೀಡಿದ್ದಾರೆ. 10ನೇ ತರಗತಿ ಓದುತ್ತಿದ್ದ ಪುತ್ರಿ ಟಿಸಿ ತರಲೆಂದು ಶಾಲೆಗೆ ಹೋಗಿದ್ದಾಗ ಜಟ್ಟಿ ಹುಂಡಿಯ ಪ್ರಕಾಶ ತನ್ನ ಸಹಚರ ಸ್ವಾಮಿ ಎಂಬುವನ ನೆರವಿನಿಂದ ಮೇ 20ರಂದು ಅಪಹರಿಸಿದ್ದಾನೆ ಎಂದು ಅವರು ಆರೋಪಿಸಿದ್ದಾರೆ….
ಮೇ 26ರಂದು ಜನ ಸಂಪರ್ಕ ಸಭೆ
May 25, 2018ಮೈಸೂರು: ಕೇಂದ್ರ ಮತ್ತು ಚಾಮುಂಡಿಪುರಂ ಉಪ ವಿಭಾಗದ ವ್ಯಾಪ್ತಿಯ ಗ್ರಾಹಕರಿಗೆ ಮೇ 26ರಂದು ಬೆಳಿಗ್ಗೆ 11 ಗಂಟೆಗೆ ಕೇಂದ್ರ ಉಪ-ವಿಭಾಗ ಕಚೇರಿಯಲ್ಲಿ ಹಾಗೂ ಮಧ್ಯಾಹ್ನ 3 ಗಂಟೆಗೆ ಚಾಮುಂಡಿಪುರಂ ಉಪ-ವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆಯನ್ನು ನಡೆಸಲಾಗುವುದು. ಗ್ರಾಹಕರು ವಿದ್ಯುತ್ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳೇನಾ ದರೂ ಇದ್ದಲ್ಲಿ ಸಭೆಗೆ ಆಗಮಿಸಿ ಲಿಖಿತ ಅರ್ಜಿಗಳನ್ನು ಸಲ್ಲಿಸಿ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು ಎಂದು ಚಾ.ವಿ.ಸ.ನಿ.ನಿ. ಕಾರ್ಯ ನಿರ್ವಾಹಕ ಇಂಜಿನಿ ಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಂಡಿತ ಡಾ. ರಾಜೀವ ತಾರಾನಾಥ ಅವರಿಗೆ ನಾಡೋಜ ಪದವಿ ಪ್ರದಾನ
May 25, 2018ಮೈಸೂರು: ಕನ್ನಡ ವಿಶ್ವವಿದ್ಯಾಲಯವು ಕೊಡ ಮಾಡುವ ಈ ಸಾಲಿನ ಗೌರವ ನಾಡೋಜ ಪದವಿಯನ್ನು ವಿಶ್ರಾಂತ ಪ್ರಾಧ್ಯಾಪಕರು ಮತ್ತು ಖ್ಯಾತ ಸರೋದ್ ವಾದಕರಾದ ಪಂಡಿತ ಡಾ. ರಾಜೀವ ತಾರಾನಾಥ ಅವರಿಗೆ ಮೇ 29ರಂದು ಬೆಳಗ್ಗೆ 11 ಗಂಟೆಗೆ ಮೈಸೂರಿನ ಅವರ ಸ್ವಗೃಹದಲ್ಲಿ (#154, 11ನೇ ಮುಖ್ಯರಸ್ತೆ, ಸರಸ್ವತಿಪುರಂ, ಮೈಸೂರು-570009 ದೂ.0821-2302932, ಮೊ. 9845641932) ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ.ಮಲ್ಲಿಕಾ ಎಸ್. ಘಂಟಿ ಅವರು ಪ್ರದಾನ ಮಾಡುವರು ಎಂದು ವಿಶ್ವವಿದ್ಯಾ ನಿಲಯ ಮಾಹಿತಿ ಕೇಂದ್ರದ ಉಪನಿದೇರ್ಶಕಿ ಡಾ. ಡಿ.ಮೀನಾಕ್ಷಿ…
ಡಾ. ಹೆಚ್.ಸಿ. ಮಹದೇವಪ್ಪರನ್ನು ಎಂಎಲ್ಸಿ ಮಾಡಿ, ಸಚಿವ ಸ್ಥಾನ ನೀಡುವಂತೆ ಆಗ್ರಹ
May 25, 2018ತಿ.ನರಸೀಪುರ: ಜಿಲ್ಲೆಯಲ್ಲಿನ ಪಕ್ಷದ ಸಂಘಟನೆಯ ಹಿತದೃಷ್ಠಿಯಿಂದ ಮಾಜಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ನೇಮಕ ಮಾಡಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನವನ್ನು ನೀಡಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಮಲ್ಲೇಶ ಚುಂಚನಹಳ್ಳಿ ಕಾಂಗ್ರೆಸ್ ಹೈಕಮಾಂಡನ್ನು ಆಗ್ರಹಿಸಿದರು. ಪಟ್ಟಣದಲ್ಲಿ ಗುರುವಾರ ಕರೆಯ ಲಾಗಿದ್ದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ಮುಂಬರುವ ಲೋಕಸಭಾ ಚುನಾವಣೆಯ ಹಿತದೃಷ್ಠಿಯಿಂದ ನೂತನ ಉಪ ಮುಖ್ಯ ಮಂತ್ರಿ ಡಾ.ಜಿ.ಪರಮೇಶ್ವರ ಅವರಿಂದ ತೆರವಾಗುವ ವಿಧಾನ…
ಕೆ.ಆರ್.ಕ್ಷೇತ್ರದ ಮತದಾರರು, ನನ್ನ ಸಂಬಂಧ ರಾಜಕೀಯವಾದುದಲ್ಲ, ಭಾವನಾತ್ಮಕವಾದುದು
May 7, 2018ಮೈಸೂರು: ನನ್ನ ಮತ್ತು ಜನರ ನಡುವೆ ಒಂದು ರಾಜಕೀಯ ಪಕ್ಷದ ಅಭ್ಯರ್ಥಿ ಹಾಗೂ ಮತದಾರರ ನಡುವಿನ ಸಂಬಂಧವಷ್ಟೇ ಅಲ್ಲ, ಭಾವ ನಾತ್ಮಕ ಸಂಬಂಧವಿದೆ. ನನಗೆ 5 ವರ್ಷ ರಜೆ ಕೊಟ್ಟಿದ್ದರು ಅಷ್ಟೇ. ಈ ಬಾರಿ ಅವರ ಆಶೀರ್ವಾದದಿಂದ ಶಾಸಕನಾಗಿ ಆಯ್ಕೆ ಯಾಗುತ್ತೇನೆ. 2008ರ ಚುನಾವಣೆಗಿಂತಲೂ ಹೆಚ್ಚು ಮತಗಳ ಅಂತರದಿಂದ ಗೆದ್ದು ಬರು ತ್ತೇನೆ ಎಂದು ಮಾಜಿ ಸಚಿವ, ಕೃಷ್ಣರಾಜ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಎ. ರಾಮ ದಾಸ್, ಅತೀವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕ್ಷೇತ್ರದ 6ನೇ ವಾರ್ಡ್ನಲ್ಲಿ ಪಾದ…
ಇದು ಯಡಿಯೂರಪ್ಪ-ಸಿದ್ದರಾಮಯ್ಯ ನಡುವಿನ ಚುನಾವಣೆ ಪತ್ರಿಕಾ ಸಂವಾದದಲ್ಲಿ ಸಿಎಂ ಸಿದ್ದರಾಮಯ್ಯ ಅಭಿಮತ
May 7, 2018ಬೆಂಗಳೂರು: ಇದು ಮೋದಿ- ಸಿದ್ದರಾಮಯ್ಯ ನಡುವಿನ ಚುನಾವಣೆ ಅಲ್ಲ. ಯಡಿಯೂರಪ್ಪ-ಸಿದ್ದರಾಮಯ್ಯ ನಡುವಿನ ಚುನಾವಣೆ. ಮೋದಿ ಮ್ಯಾಜಿಕ್ ಇಲ್ಲಿ ನಡೆಯಲ್ಲ. ರಾಜ್ಯ ವಿಧಾನಸಭೆ ಚುನಾವಣೆ 2019ರ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದು ಸಿಎಂ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ. ಬೆಂಗಳೂರು ಪ್ರೆಸ್ಕ್ಲಬ್ ಹಾಗೂ ವರದಿಗಾರರ ಕೂಟ ಜಂಟಿಯಾಗಿ ಆಯೋಜಿಸಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಪ್ರಸ್ತುತ ವಿಧಾನಸಭೆ ಚುನಾವಣೆಯಲ್ಲಿ ಮೇಲ್ನೋಟಕ್ಕೆ ಮೂರು ಪಕ್ಷಗಳ ನಡುವೆ ಸ್ಪರ್ಧೆ ಕಂಡರೂ ವಾಸ್ತವವಾಗಿ ಎಲ್ಲಾ ಮೂರು ಕಡೆ ಇಲ್ಲ, ಕೆಲವೆಡೆ ಕಾಂಗ್ರೆಸ್, ಬಿಜೆಪಿ ಇನ್ನು…
ನಾನು ಸಿಎಂ ಆಗುವುದು ಮುಖ್ಯವಲ್ಲ, ಕಾಂಗ್ರೆಸ್ ನೀತಿ-ನಿಯಮ ಉಳಿವು ಮುಖ್ಯ ಎನ್.ಆರ್.ಕ್ಷೇತ್ರದ ಅಭ್ಯರ್ಥಿ ತನ್ವೀರ್ ಸೇಠ್ ಪರ ಮಲ್ಲಿಕಾರ್ಜುನ ಖರ್ಗೆ ಮತಯಾಚನೆ
May 7, 2018ಮೈಸೂರು: ಪ್ರಸ್ತುತ ನಾನು ಮುಖ್ಯ ಮಂತ್ರಿಯಾಗುವುದು ಮುಖ್ಯವಲ್ಲ. ಬದಲಾಗಿ ದೇಶದಲ್ಲಿ ಕಾಂಗ್ರೆಸ್ನ ನೀತಿ-ನಿಯಮಗಳು ಉಳಿಯುವುದು ಮುಖ್ಯ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯಪಟ್ಟರು. ಎನ್.ಆರ್.ಕ್ಷೇತ್ರದ ವ್ಯಾಪ್ತಿಯ ಗಾಂಧಿನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ತನ್ವೀರ್ಸೇಠ್ ಪರ ಮತಯಾಚನೆ ಮಾಡಿದ ನಂತರ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು. ಕೆ.ಆರ್.ಕ್ಷೇತ್ರ ವ್ಯಾಪ್ತಿಯ ಅಶೋಕಪುರಂನಲ್ಲಿ ನಾನು ಚುನಾವಣಾ ಪ್ರಚಾರದಲ್ಲಿದ್ದಾಗ ಕೆಲ ನನ್ನ ಅಭಿಮಾನಿಗಳು ನೀವು ಮುಖ್ಯಮಂತ್ರಿಯಾಗಬೇಕು. ಬೇರೆ ಯಾರನ್ನೋ ಮುಖ್ಯಮಂತ್ರಿ ಮಾಡುವುದಾದರೆ, ಕಾಂಗ್ರೆಸ್ಗೆ ಮತ ಹಾಕುವುದಿಲ್ಲ ಎಂದು ಉದ್ವೇಗದಲ್ಲಿ ಮಾತನಾಡಿದ್ದಾರೆ. ಇದು ಅವರ ತಪ್ಪು…
ಹೈವೋಲ್ಟೇಜ್ ಚಾಮುಂಡೇಶ್ವರಿಯಲ್ಲಿ ರಂಗೇರುತ್ತಿದೆ ಚುನಾವಣಾ ಕಣ
May 4, 2018ಮೈಸೂರು: ರಾಜ್ಯವಷ್ಟೇ ಅಲ್ಲದೆ ಇಡೀ ದೇಶವೇ ಎದುರು ನೋಡು ತ್ತಿರುವ ಮೈಸೂರಿನ ಚಾಮುಂಡೇಶ್ವರಿ ಹೈವೋಲ್ಟೇಜ್ ಕ್ಷೇತ್ರದಲ್ಲಿ ದಿನೇ ದಿನೆ ಚುನಾವಣಾ ಕಣ ರಂಗೇರುತ್ತಿದೆ. ಕಾಂಗ್ರೆಸ್ನಿಂದ ಸ್ವತಃ ಮುಖ್ಯಮಂತ್ರಿ ಸಿದ್ದ ರಾಮಯ್ಯ, ಅವರ ಪ್ರತಿಸ್ಪರ್ಧಿಯಾಗಿ ಜೆಡಿಎಸ್ ಅಭ್ಯರ್ಥಿ, ಹಾಲಿ ಶಾಸಕ ಜಿ.ಟಿ. ದೇವೇಗೌಡ ಅವರು ಸ್ಪರ್ಧಿಸಿರುವುದೇ ಚಾಮುಂಡೇಶ್ವರಿ ಕ್ಷೇತ್ರ ಹೈವೋಲ್ಟೇಜ್ ಕಣವಾಗಲು ಪ್ರಮುಖ ಕಾರಣ. ಹಿಂದೊಮ್ಮೆ ಉಪ ಚುನಾವಣೆ ಅನಿ ವಾರ್ಯವಾಗಿ ಜೆಡಿಎಸ್ನ ಶಿವಬಸಪ್ಪ ವಿರುದ್ಧ ಕಣಕ್ಕಿಳಿ ದಿದ್ದ ಸಿದ್ದರಾಮಯ್ಯ, ಬಲು ತ್ರಾಸದಾಯಕವಾಗಿ ಅತ್ಯಲ್ಪ ಮತಗಳಿಂದ ಗೆಲುವು ಸಾಧಿಸಿದ…
ಭಾರೀ ಗಾಳಿಗೆ ಹಲವು ಮನೆಗಳ ಮೇಲ್ಛಾವಣ ಗೆ ಹಾನಿ
May 4, 2018ಮೈಸೂರು: ಬಿರು ಗಾಳಿ ಸಹಿತ ಕಳೆದ ರಾತ್ರಿ ಸುರಿದ ಧಾರಾ ಕಾರ ಮಳೆಗೆ ಮೈಸೂರು ತಾಲೂಕಿನ ಹಲವು ಗ್ರಾಮಗಳಲ್ಲಿ ನೂರಾರು ಮರಗಳು ಧರೆ ಗುರುಳಿದ್ದು, ಕೋಳಿ ಫಾರಂಗಳು ಹಾಗೂ ಮನೆಗಳಿಗೆ ಬಾರೀ ಹಾನಿಯುಂಟಾಗಿದೆ. ಗುಡುಗು, ಸಿಡಿಲು ಹಾಗೂ ಬಿರುಗಾಳಿ ಯೊಂದಿಗೆ ಬುಧವಾರ ಸಂಜೆ ಆರಂಭ ವಾದ ಮಳೆಗೆ ಮೈಸೂರು ತಾಲೂಕಿನ ಮೆಲ್ಲಹಳ್ಳಿ, ಮೂಡಲಹುಂಡಿ, ಕೆಂಪೇ ಗೌಡನಹುಂಡಿ, ವರಕೋಡು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹಲವಾರು ಮರಗಳು ಉರುಳಿ ಬಿದ್ದಿವೆ. ಹೊಲ, ಗದ್ದೆ ಗಳಲ್ಲಿ ಬೆಳೆದಿದ್ದ ಮರಗಳು ಮಾತ್ರವಲ್ಲದೆ, ರಸ್ತೆ…
ಮುಕ್ತ ವಿವಿ ಕೇರಳ ವಿದ್ಯಾರ್ಥಿಗಳಿಗೆ ಪರಿಹಾರಕ್ಕೆ ಸುಪ್ರೀಂಕೋರ್ಟ್ ತಡೆಯಾಜ್ಞೆ
May 4, 2018ಮೈಸೂರು: ವಿವಿಧ ಶೈಕ್ಷ ಣ ಕ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಿದ್ದರಿಂದ ಕೇರಳ ವಿದ್ಯಾರ್ಥಿಗಳಿಗೆ ತಲಾ 3 ಲಕ್ಷ ರೂ. ಪರಿಹಾರ ಕೊಡಬೇಕೆಂಬ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ. ನ್ಯಾಯಮೂರ್ತಿಗಳಾದ ಎಸ್.ಎ.ಬೊಡ್ಡೆ ಮತ್ತು ಎಲ್.ನಾಗೇಶ್ವರ ರಾವ್ ಒಳಗೊಂಡ ಪೀಠವು ಕೇರಳದಲ್ಲಿ ಅಧ್ಯಯನ ಕೇಂದ್ರ ನಡೆಸಲು ಕರ್ನಾ ಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ (KSOU) ದೊಂದಿಗೆ ಒಪ್ಪಂದ ಮಾಡಿಕೊಂಡಿದ್ದ ಬ್ರೈನೆಟ್ ಮತ್ತು ಇತರರಿಗೆ ನೋಟೀಸ್ ನೀಡಿದೆ. 2017ರ ನವೆಂಬರ್ 22ರಂದು ಮುಕ್ತ ವಿವಿ ಸಲ್ಲಿ ಸಿದ್ದ ವಿಶೇಷ ರಿಟ್ ಅರ್ಜಿ…