ಮೈಸೂರು: ಮೈಸೂ ರಿನ ಚಾಮರಾಜ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿದಂತೆ ಹಲವು ಅಭ್ಯರ್ಥಿಗಳು ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಕ್ಷೇತ್ರದಲ್ಲಿ ಚತುಷ್ಕೋನ ಸ್ಪರ್ಧೆ ಏರ್ಪಡಲಿದೆ ಎನ್ನಲಾಗುತ್ತಿದ್ದು, ಅದರಂತೆ ಕಾಂಗ್ರೆಸ್ನ ವಾಸು, ಜೆಡಿಎಸ್ನ ಪ್ರೊ. ಕೆ.ಎಸ್.ರಂಗಪ್ಪ, ಬಿಜೆಪಿಯ ಎಲ್. ನಾಗೇಂದ್ರ ಹಾಗೂ ಪಕ್ಷೇತರ ಅಭ್ಯರ್ಥಿ ಕೆ.ಹರೀಶ್ಗೌಡ ಗೆಲುವಿನ ನಿರೀಕ್ಷೆಯಲ್ಲಿ ಉರಿ ಬಿಸಿಲನ್ನೂ ಲೆಕ್ಕಿಸದೆ ಬೆಳಿಗ್ಗೆಯಿಂದ ಸಂಜೆವರೆಗೂ ತಮ್ಮ ಬೆಂಬಲಿಗರೊಂದಿಗೆ ಮತ ಯಾಚನೆಯಲ್ಲಿ ತೊಡಗಿದ್ದಾರೆ. ವಾಸು: ಕಾಂಗ್ರೆಸ್ ಅಭ್ಯರ್ಥಿ ವಾಸು ಅವರು, ಇಂದು ಬೆಳಿಗ್ಗೆ ಕೆ.ಆರ್.ಆಸ್ಪತ್ರೆ ಎದುರಿನ ಕುಂಬಾರಗೇರಿಯಲ್ಲಿ…
ಕೆ.ಆರ್. ಕ್ಷೇತ್ರದಲ್ಲಿ ರಾಮದಾಸ್, ಸೋಮಶೇಖರ್, ಮಲ್ಲೇಶ್ ಪಾದಯಾತ್ರೆ ಮೂಲಕ ಮತ ಯಾಚನೆ
April 27, 2018ಮೈಸೂರು: ಮೈಸೂರಿನ ಕೆ.ಆರ್.ಕ್ಷೇತ್ರದಲ್ಲಿ ಗುರುವಾರ ಮೂರೂ ಪಕ್ಷಗಳ ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ವಿವಿಧ ಬಡಾ ವಣೆಗಳಲ್ಲಿ ಪಾದಯಾತ್ರೆ ನಡೆಸಿ ಬಿರುಸಿನ ಮತ ಯಾಚನೆ ಮಾಡಿದರು. ಮೂರೂ ಪಕ್ಷಗಳ ಅಭ್ಯರ್ಥಿಗಳು ಮತ ದಾರರ ಓಲೈಕೆಗೆ ತೀವ್ರ ಕಸರತ್ತು ನಡೆಸು ತ್ತಿದ್ದು, ತಮ್ಮ ಮುಂದಿನ ಗುರಿಯನ್ನು ವಿವ ರಿಸುವುದರೊಂದಿಗೆ ಈ ಹಿಂದೆ ಕ್ಷೇತ್ರಕ್ಕೆ ಮಾಡಿರುವ ಅಭಿವೃದ್ಧಿ ಕಾರ್ಯಗಳ ಮನ ವರಿಕೆ ಮಾಡಿಕೊಡುವ ಮೂಲಕ ಈ ಬಾರಿ ತಮ್ಮನ್ನು ಬೆಂಬಲಿಸುವಂತೆ ಕೋರಿದರು. ಬಿಜೆಪಿ: ಮಾಜಿ ಸಚಿವ, ಬಿಜೆಪಿ ಅಭ್ಯರ್ಥಿ ಎಸ್.ಎ.ರಾಮದಾಸ್ 21ನೇ…
ಹಾಸನದ ಎಲ್ಲಾ ಕ್ಷೇತ್ರದಲ್ಲೂ ಕಾಂಗ್ರೆಸ್ಗೆ ಗೆಲುವು ಸಚಿವ ಎ.ಮಂಜು ವಿಶ್ವಾಸ
April 27, 2018ಮೈಸೂರು: ಹೊಳೆನರಸೀಪುರದ ಕಾಂಗ್ರೆಸ್ ಅಭ್ಯರ್ಥಿ ಬಾಗೂರು ಮಂಜೇಗೌಡ, ಜೆಡಿಎಸ್ ವಿರುದ್ಧ ಮಾಡಿರುವ ಆರೋಪವನ್ನು ಸಮರ್ಥಿಸಿಕೊಂಡ ಸಚಿವ ಎ.ಮಂಜು, ನಾನೂ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇನೆ ಎಂದು ತಿಳಿಸಿದರು. ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲ ಲ್ಲಿರುವ ಸುತ್ತೂರು ಮಠದಲ್ಲಿ ಶ್ರೀಗಳಿಂದ ಆಶೀರ್ವಾದ ಪಡೆದು, ಕೆಲಕಾಲ ಮಾತು ಕತೆ ನಡೆಸಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಹಾಲಿನ ವಾಹನ ಗಳಲ್ಲಿ ಮದ್ಯ ಸಾಗಿಸುತ್ತಾರೆಂದು ಮಂಜೇ ಗೌಡ ಮಾಡಿರುವ ಆರೋಪದಲ್ಲಿ ಸತ್ಯ ವಿದೆ. ಅರಕಲಗೂಡು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎ.ಟಿ.ರಾಮಸ್ವಾಮಿ ಅವರ ಬೀಗ…
ಪ್ರೊ. ಮಹೇಶ್ಚಂದ್ರಗುರು, ಪ್ರೊ. ಅರವಿಂದ ಮಾಲಗತ್ತಿ ಯಾವ ಪಕ್ಷದ ಪರವೂ ಪ್ರಚಾರ ನಡೆಸಿಲ್ಲ ಅಮಾನತು ಆದೇಶ ಹಿಂತೆಗೆದುಕೊಳ್ಳದಿದ್ದರೆ ಹೋರಾಟ: ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಸಿ.ಪುಟ್ಟಸಿದ್ಧಶೆಟ್ಟಿ
April 27, 2018ಮೈಸೂರು, ಏ.26(ಆರ್ಕೆಬಿ)- ಮೈಸೂರು ವಿವಿ ಪತ್ರಿಕೋದ್ಯಮ ವಿಭಾ ಗದ ಪ್ರಾಧ್ಯಾಪಕ ಪ್ರೊ.ಮಹೇಶ್ಚಂದ್ರಗುರು ಮತ್ತು ಪ್ರೊ.ಅರವಿಂದ ಮಾಲಗತ್ತಿ ಅವರನ್ನು ವಜಾಗೊಳಿಸುವ ಮೊದಲು ತನಿಖೆÉ, ಸಿಂಡಿಕೇಟ್ನಲ್ಲಿ ವಿಷಯ ಮಂಡನೆ ಮುಂತಾದ ಕಾನೂನುಬದ್ಧ ನಿಯಮಗಳನ್ನು ಅನುಸರಿಸದೇ ಏಕಪಕ್ಷೀಯವಾಗಿ ಅಮಾ ನತುಗೊಳಿಸಿರುವುದು ಕಾನೂನು ಬಾಹಿರ ಕ್ರಮವಾಗಿದ್ದು, ಕೂಡಲೇ ಅಮಾನತು ಹಿಂಪಡೆಯಬೇಕು ಎಂದು ವಿಧಾನ ಪರಿ ಷತ್ ಮಾಜಿ ಸದಸ್ಯ ಕೆ.ಸಿ.ಪುಟ್ಟಸಿದ್ದಶೆಟ್ಟಿ ಇಂದಿಲ್ಲಿ ಒತ್ತಾಯಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರೊ.ಮಹೇಶ್ಚಂದ್ರಗುರು, ಪ್ರೊ.ಅರವಿಂದ ಮಾಲಗತ್ತಿ, ಚುನಾವಣಾ ಪ್ರಚಾರ ಸಭೆಯಲ್ಲಿ…
ವೀರಶೈವ-ಲಿಂಗಾಯತ ಬೇರೆ ಬೇರೆ ಅಲ್ಲ, ಎರಡೂ ಒಂದೇ ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ ಪುನರುಚ್ಛಾರ
April 27, 2018ಮೈಸೂರು: ವೀರಶೈವ-ಲಿಂಗಾಯತ ಬೇರೆ ಬೇರೆ ಯಲ್ಲ. ಎರಡೂ ಒಂದೇ ಎಂದು ಸಂಶೋ ಧಕ ಡಾ.ಎಂ.ಚಿದಾನಂದಮೂರ್ತಿ ಅಭಿಪ್ರಾಯಪಟ್ಟರು. ಮೈಸೂರು ಮಾನಸ ಗಂಗೋತ್ರಿ ಮಾನವಿಕ ಸಭಾಂಗಣದಲ್ಲಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಬಸವೇಶ್ವರ ಸಾಮಾಜಿಕ ಪರಿಷ್ಕರಣೆ ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರದ ಜಂಟಿ ಆಶ್ರಯದಲ್ಲಿ ಬಸವ ಜಯಂತಿ ಅಂಗವಾಗಿ ಗುರುವಾರ ಏರ್ಪಡಿಸಿದ್ದ `ಶರಣ ಚಳವಳಿ ಮತ್ತು ಆಧುನಿಕ ಸಾಮಾಜಿಕ ಚಳವಳಿಗಳು: ಅನುಸಂಧಾನದ ನೆಲೆಗಳು’ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದರು. ವಿಶ್ವಕ್ಕೆ ಮಾದರಿಯಾದ ಹಾಗೂ ಎಲ್ಲ ಧರ್ಮಗಳನ್ನು ಸಮೀಕರಣಗೊಳಿ ಸುವಂಥ ಧರ್ಮ ಪ್ರಚಾರ…
ಬಂಜಾರ ಸಮುದಾಯ ಕಾಂಗ್ರೆಸ್ ಬೆಂಬಲಿಸಲು ಮನವಿ
April 27, 2018ಮೈಸೂರು: ಬಂಜಾರ ಸಮುದಾಯವು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಬಂಜಾರ ಸಂತ ಸೇವಾಲಾಲ್ ಬಳಗದ ಅಧ್ಯಕ್ಷ ಬಸವರಾಜ ನಾಯ್ಕ್ ಬಂಜಾರ ಸಮುದಾಯಕ್ಕೆ ಮನವಿ ಮಾಡಿದ್ದಾರೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ತಾಂಡಾಭಿವೃದ್ಧಿ ನಿಗಮ ಮಂಡಳಿ ರಚಿಸಿ ವರ್ಷಕ್ಕೆ 200 ಕೋಟಿ ರೂ.ಮೀಸಲಿಟ್ಟು, ಸಮುದಾಯದ ಏಳಿಗೆಗಾಗಿ ಸಮುದಾಯ ಭವನ, ಕಾಂಕ್ರೀಟ್ ರಸ್ತೆ, ಚರಂಡಿ, ಬಂಜಾರರ ಮೂಲ ಕಸುಬಾದ ಕಸೂತಿ, ಗುಡಿ ಕೈಗಾರಿಕೆ, ಶುದ್ಧ ಕುಡಿಯುವ ನೀರಿನ ಘಟಕ ಹೀಗೆ ಹಲವಾರು ಯೋಜನೆಗಳನ್ನು ನೀಡಿದರು. ಮೈಸೂರು ವಿಭಾಗಕ್ಕೆ ಸೇರಿದ ಜಿಲ್ಲೆಗಳಿಗೆ…
ರಾಜ್ಯದಲ್ಲಿ 1994ರ ಫಲಿತಾಂಶ ಪುನರಾವರ್ತನೆ ಕಾಂಗ್ರೆಸ್ ಧೂಳೀಪಟ: ಜಾವ್ಡೇಕರ್ ಭವಿಷ್ಯ
April 27, 2018ಬೆಂಗಳೂರು: ರಾಜ್ಯದ ಜನತೆ ಕಾಂಗ್ರೆಸ್ಗೆ 1994ರ ಫಲಿತಾಂಶ ವನ್ನು ಮರುಕಳಿಸಲಿ ದ್ದಾರೆ ಎಂದು ಕೇಂದ್ರ ಸಚಿವ ಹಾಗೂ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವ್ಡೇಕರ್ ಭವಿಷ್ಯ ನುಡಿದಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂಬ ಭ್ರಮೆಯಲ್ಲಿದೆ. ಆದರೆ ಆ ಪಕ್ಷದ ಮುಖಂಡರಿಗೆ ರಾಜ್ಯದ ಜನತೆಯ ನಾಡಿ ಮಿಡಿತದ ಅರಿವಿಲ್ಲ. ಸಿದ್ದರಾಮಯ್ಯ ನೇತೃತ್ವದಲ್ಲಿ ಕಳೆದ 5 ವರ್ಷಗಳಿಂದ ನಡೆದ ಆಡಳಿತ ರಾಜ್ಯದ ಜನತೆಗೆ ಬೇಸರ ತರಿಸಿದೆ. ಮತದಾರರು ಎಂದು ಚುನಾವಣೆ ಬರುತ್ತದೆ ಎಂದು…
ಮೈಸೂರು ಬಾಲಭವನದಲ್ಲಿ 15 ದಿನಗಳ ಉಚಿತ ಬೇಸಿಗೆ ಶಿಬಿರಕ್ಕೆ ಚಾಲನೆ
April 27, 2018ಮೈಸೂರು: ಮೈಸೂರಿನ ಬನ್ನಿಮಂಟಪದ ಜಿಲ್ಲಾ ಜವಾಹರ್ ಬಾಲಭವನ, ಶಿಶು ಆಭಿವೃದ್ಧಿ ಯೋಜನೆಯ ಜಂಟಿ ಆಶ್ರಯದಲ್ಲಿ ಬಾಲಭವನದ ಸಭಾಂಗಣದಲ್ಲಿ 15 ದಿನಗಳ ಬೇಸಿಗೆ ಶಿಬಿರಕ್ಕೆ ಗುರುವಾರ ಚಾಲನೆ ದೊರೆಯಿತು. ಮೈಸೂರಿನ ಪ್ರಪ್ರಥಮ ಮಹಿಳಾ ಮಾತನಾಡುವ ಗೊಂಬೆ ಕಲಾ ವಿದೆ, ಬಿಗ್ಬಾಸ್ ಖ್ಯಾತಿಯ ಸುಮಾ ರಾಜ್ಕುಮಾರ್ ಅವರು ಶಿಬಿರದ ಮಕ್ಕ ಳೊಂದಿಗೆ ದೀಪ ಬೆಳಗಿಸಿ ಶಿಬಿರವನ್ನು ಉದ್ಘಾಟಿಸಿದರು. ಶಿಬಿರದಲ್ಲಿರುವ ಎಲ್ಲಾ ಮಕ್ಕಳು ಮುಂದೆ ದೊಡ್ಡ ಹುದ್ದೆ ಅಲಂಕರಿಸಿ, ಇತರರಿಗೆ ಆಟೋಗ್ರಾಫ್ ನೀಡುವಂತಾಗ ಬೇಕು ಎಂದು ಶುಭ ಹಾರೈಸಿದರು. ಮಹಿಳಾ ಮತ್ತು…
ಬಿಜೆಪಿ, ಜೆಡಿಎಸ್ ದೂರವಿಟ್ಟು ಕಾಂಗ್ರೆಸ್ಗೆ ಮತ ನೀಡಿ
April 27, 2018ತಿ.ನರಸೀಪುರ: ರಾಜ್ಯದಲ್ಲಿ ಜಾತ್ಯಾತೀತ ಜನತಾದಳ ಪಕ್ಷ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವು ದಿಲ್ಲ. ಜಾತ್ಯಾತೀತತೆಗೆ ಧಕ್ಕೆ ತಂದು ಕೋಮು ಸಾಮರಸ್ಯವನ್ನು ಕದಡುವ ಕೋಮುವಾದಿ ಪಕ್ಷ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕಾಗಿದ್ದರಿಂದ ಈ ಚುನಾವಣೆ ಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿ ಕಾರಕ್ಕೆ ತರಬೇಕೆಂದು ಯುವ ಮುಖಂಡ ಸುನೀಲ್ ಬೋಸ್ ಹೇಳಿದರು. ತಾಲೂಕಿನ ಹೊಸಪುರ ಗ್ರಾಮದಲ್ಲಿ ಗುರುವಾರ ನಾಯಕ ಸಮುದಾಯದ ಮುಖಂಡರು ಹಾಗೂ ಮಹಿಳಾ ಸಂಘಗಳ ಪ್ರತಿನಿಧಿಗಳನ್ನು ಕಾಂಗ್ರೆಸ್ಗೆ ಸೇರ್ಪಡೆ ಮಾಡಿಕೊಂಡು ಮಾತನಾಡಿ, ಐದು ವರ್ಷಗಳ ಕಾಲ ಆಡಳಿತವನ್ನು…
ಬಿಜೆಪಿ ಸಭೆಯಲ್ಲಿ ಮಾರಾಮಾರಿ: ತಾಲೂಕು ಪ್ರಧಾನ ಕಾರ್ಯದರ್ಶಿಗೆ ಗಾಯ
April 27, 2018ಕೆ.ಆರ್.ನಗರ: ಬಿಜೆಪಿಯ ಎರಡು ಬಣಗಳ ನಡುವೆ ನಡೆದ ಮಾರಾಮಾರಿಯಲ್ಲಿ ತಾಲೂಕು ಬಿಜೆಪಿ ಪ್ರಧಾನ ಕಾರ್ಯದಶಿ ಗಾಯಗೊಂಡಿರುವ ಘಟನೆ ನಡೆದಿದೆ. ಗುರುವಾರ ಪಟ್ಟಣದ ಅಕ್ಷತಾ ಹಾಲ್ ನಲ್ಲಿ ಪಕ್ಷದ ವತಿಯಿಂದ ಚುನಾವಣೆ ಹಿನ್ನೆಲೆ ಯಲ್ಲಿ ಕರೆಯಲಾಗಿದ್ದ ಸಮಾಲೋಚನಾ ಸಭೆಯಲ್ಲಿ ಪಕ್ಷದ ವರಿಷ್ಠರ ಮುಂದೆಯೇ ಎರಡು ಬಣದವರು ಹೊಡೆದಾಡಿಕೊಂಡಿದ್ದು, ಈ ಸಂಧರ್ಭದಲ್ಲಿ ಒಂದು ಗುಂಪು ನಡೆಸಿದ ಹಲ್ಲೆಯಿಂದ ಪಕ್ಷದ ತಾಲೂಕು ಪ್ರಧಾನ ಕಾರ್ಯದರ್ಶಿ ಸಿವಿಗುಡಿ ಜಗದೀಶ್ ತಲೆಗೆ ಪೆಟ್ಟುಬಿದ್ದಿದ್ದು, ಅವರು ಪಟ್ಟಣದ ಆಸ್ಪತ್ರೆಗೆ ದಾಖಲಾಗಿದ್ದಾರೆ, ಹೊಡೆದಾಟ ನಡೆಯುವ ಸಂದರ್ಭದಲ್ಲಿ ಜಗದೀಶ್…