ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕ್ರೈಸ್ತ ಸಮುದಾಯವನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಹೆಚ್ಚು ನೆರವಾಗಿರುವ ಹಿನ್ನೆಲೆಯಲ್ಲಿ ಕ್ರೈಸ್ತ ಸಮುದಾಯ, ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲು ನಿರ್ಧರಿಸಿದೆ ಎಂದು ಮೈಸೂರು ಜಿಲ್ಲಾ ಕ್ರೈಸ್ತರ ಸಂಘಗಳ ಒಕ್ಕೂಟದ ಮುಖಂಡ, ಕನ್ನಡ ಕ್ರೈಸ್ತ ಸಂಘದ ಪ್ರೊ.ರಾಫೆಲ್ ತಿಳಿಸಿದರು. ಕ್ರೈಸ್ತ ಸಮುದಾಯದ ಇಬ್ಬರಿಗೆ ವಿಧಾನಸಭೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ನೀಡಿದೆ. ಐವಾನ್ ಡಿಸೋಜ ಅವರನ್ನು ವಿಧಾನ ಪರಿಷತ್ ಸದಸ್ಯರಾಗಿ ನೇಮಿಸಿದೆ. ಹಲವರನ್ನು ವಿವಿಧ ನಿಗಮ ಮಂಡಳಿಗಳಿಗೆ ಸದಸ್ಯರಾಗಿ ನೇಮಕ…
ರೈತರಿಗೆ ನೆರವಾಗದ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಬ್ಬು ಬೆಳೆಗಾರರಿಂದ ರೈತ ಜಾಗೃತಿ
May 4, 2018ಮೈಸೂರು: ರೈತ ವಿರೋಧಿ ನಿಲುವು ತಳೆದು, ನೂರಾರು ರೈತರ ಆತ್ಮಹತ್ಯೆಗೆ ಕಾರಣವಾದ ಮುಖ್ಯ ಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯ ಕಬ್ಬು ಬೆಳೆಗಾ ರರ ಸಂಘವು ಮುಖ್ಯಮಂತ್ರಿ ಸಿದ್ದ ರಾಮಯ್ಯ ಸ್ಪರ್ಧಿಸಿರುವ ಚಾಮುಂಡೇ ಶ್ವರಿ ಹಾಗೂ ಸಚಿವ ಡಾ.ಹೆಚ್.ಸಿ. ಮಹದೇವಪ್ಪ ಸ್ಪರ್ಧಿಸಿರುವ ತಿ.ನರಸೀ ಪುರ ಕ್ಷೇತ್ರದಲ್ಲಿ ಅವರ ವಿರುದ್ಧ ರೈತ ಜಾಗೃತಿ ಅಭಿಯಾನ ನಡೆಸುತ್ತಿದೆ. ಮೈಸೂರಿನ ಗನ್ಹೌಸ್ ಬಳಿ ಬಸವೇ ಶ್ವರ ಪ್ರತಿಮೆ ಬಳಿಯಿಂದ ಆರಂಭವಾದ ರೈತ ಜಾಗೃತಿ ಅಭಿಯಾನಕ್ಕೆ ಸಂಘದ ರಾಜ್ಯಾಧ್ಯಕ್ಷ ಕುರುಬೂರು…
ಮೇ 6ರಂದು ವೈಶಾಖ ಬುದ್ಧ ಪೂರ್ಣಿಮ
May 4, 2018ಮೈಸೂರು: ನಗರದ ಮೆಲ್ಲಹಳ್ಳಿಯ ಅರಿವು ಬುದ್ಧ ಧ್ಯಾನ ಕೇಂದ್ರದಲ್ಲಿ ಮೇ 6ರಂದು ಬೆಳಿಗ್ಗೆ 11ಗಂಟೆಗೆ ವೈಶಾಖ ಬುದ್ಧ ಪೂರ್ಣಿಮ ಕಾರ್ಯಕ್ರಮ ಆಯೋಜಿಸಲಾಗಿದೆ. ಬೆಂಗಳೂರಿನ ಮಹಾಬೋಧಿ ಸೊಸೈಟಿಯ ಪೂಜ್ಯ ಬಿಕ್ಕು ಆನಂದ ಬಂತೇಜಿ ಸೇರಿದಂತೆ ಇತರೆ ಬಿಕ್ಕುಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಬಿಕ್ಕುಗಳಿಂದ ಪ್ರವಚನ, ಧ್ಯಾನ ಮತ್ತು ದೀಕ್ಷೆ ನಡೆಯಲಿದೆ. ಮಧ್ಯಾಹ್ನದ ಉಪಹಾರ ಏರ್ಪಡಿಸಲಾಗಿದ್ದು, ಕಾರ್ಯಕ್ರಮಕ್ಕೆ ಹೆಚ್ಚಿನ ಬೌದ್ಧ ಬಾಂಧವರು ಆಗಮಿಸಬೇಕು ಎಂದು ಅರಿವು ಬುದ್ಧ ಧ್ಯಾನ ಕೇಂದ್ರದ ಧಮ್ಮ ಪಾಲ ಎನ್.ಚಂದ್ರಶೇಖರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹರ್ಷವರ್ಧನ್ ಪರ ಅಖಾಡಕ್ಕಿಳಿದ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಮತಯಾಚನೆ
May 4, 2018ನಂಜನಗೂಡು: ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಬಿಜೆಪಿಗೆ ಸ್ಪಷ್ಟ ಬಹುಮತ ಸಿಗಲಿದ್ದು, ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗುವುದು ನಿಶ್ಚಿತ ಎಂದು ಮಾಜಿ ಸಚಿವ ಮತ್ತು ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿ.ಶ್ರೀನಿವಾಸ್ ಪ್ರಸಾದ್ ಭವಿಷ್ಯ ನುಡಿದರು. ಅವರು ನಗರದ ಪ್ರಮುಖ ಬಡಾವಣೆ ಗಳಾದ ಶಂಕರ್ಪುರ, ಶ್ರೀರಾಂಪುರ, ಆನಂದಪುರ ಬೀದಿಗಳಲ್ಲಿ ನೂರಾರು ಕಾರ್ಯಕರ್ತರೊಂದಿಗೆ ಬಿಜೆಪಿ ಅಭ್ಯರ್ಥಿ ಯಾದ ಹರ್ಷವರ್ಧನ್ ಪರವಾಗಿ ಮತಯಾಚನೆ ಮಾಡಿ ಮಾತನಾಡಿದರು. ಸ್ವಾಭಿಮಾನ ಪಣಕ್ಕಿಟ್ಟು ನಡೆದ ಉಪ ಚುನಾವಣೆಯಲ್ಲಿ ಹಣದ ಮುಂದೆ ಸ್ವಾಭಿ ಮಾನ ಕೊಚ್ಚಿ ಹೋಯಿತು. ಆದರೆ ಈ…
ಈ ಬಾರಿ ಬಿಜೆಪಿಗೊಂದು ಅವಕಾಶ ನೀಡಿ
May 4, 2018ತಿ.ನರಸೀಪುರ: ಕಳೆದ 10 ವರ್ಷ ಗಳಿಂದ ಒಬ್ಬರಿಗೆ ಅವಕಾಶ ಮಾಡಿಕೊಟ್ಟು ನೋಡಿದ್ದೀರಿ. ಈ ಬಾರಿ ಹೊಸಬರಿಗೆ ಅವಕಾಶ ಕೊಟ್ಟು ಅಭಿವೃದ್ಧಿಗೆ ಮುನ್ನುಡಿ ಬರೆಯುವಂತೆ ಬನ್ನೂರಿನ ಮಾಜಿ ಶಾಸಕ ಕೆ.ಎಂ. ಚಿಕ್ಕಮಾದನಾಯಕ ಮತದಾರರಲ್ಲಿ ಮನವಿ ಮಾಡಿದರು. ತಾಲೂಕಿನ ಮೇದಿನಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಎಸ್. ಶಂಕರ್ ಅವರು ರೋಡ್ಶೋ ಮಾಡಿದ ಬಳಿಕ ಮಾತ ನಾಡಿದರು. ಈ ಹಿಂದೆ ನಾನು ಶಾಸಕನಾಗಿದ್ದ ವೇಳೆ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೆ. ಇಂದಿಗೂ ಜನ ಸ್ಮರಿಸಿ ಕೊಳ್ಳುತ್ತಾರೆ. ಅದೇ ರೀತಿ ಶಂಕರ್ ಕೂಡ…
ಕಾಂಗ್ರೆಸ್ ಸರ್ಕಾರ ಸಿಲಿಕಾನ್ ಸಿಟಿಯನ್ನು ಕ್ರೈಮ್ ಸಿಟಿಯನ್ನಾಗಿ ಮಾರ್ಪಡಿಸಿದೆ
May 4, 2018ಬೆಂಗಳೂರು: ಮಾಹಿತಿ ತಂತ್ರಜ್ಞಾನದ ರಾಜಧಾನಿಯಾಗಿದ್ದ ಬೆಂಗಳೂರನ್ನು ಐದು ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಸರ್ಕಾರ ಅಪರಾಧಗಳ ನಗರವನ್ನಾಗಿ ಮಾರ್ಪಡಿಸಿದೆ ಎಂದು ಪ್ರಧಾನಿ ನರೇಂದ್ರಮೋದಿ ವಾಗ್ದಾಳಿ ನಡೆಸಿದ್ದಾರೆ. ಕೆಂಗೇರಿ ಬಳಿಯಿಂದು ಆಯೋಜಿಸಿದ್ದ ಬಿಜೆಪಿ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬೆಂಗಳೂರಿಗೆ ಐದು ಉಡುಗೊರೆಗಳನ್ನು ನೀಡಿದೆ ಎಂದು ಹೇಳುವ ಮೂಲಕ ರಾಜ್ಯಸರ್ಕಾರದ ಆಡಳಿತ ವೈಖರಿ ವಿರುದ್ಧ ಕಿಡಿಕಾರಿದರು. ಸಿಲಿಕಾನ್ ವ್ಯಾಲಿ ಪಾಪದ ಕಣ ವೆಯಾಗಿದೆ. ಗಾರ್ಡನ್ ಸಿಟಿ ಗಾರ್ಬೇಟ್ ಸಿಟಿಯಾಗಿದೆ. ಸ್ಟೀಲ್ ಬ್ರಿಡ್ಜ್ ಯೋಜನೆಯಲ್ಲಿ…
ದ್ವಿತೀಯ ಪಿಯು ಸಾಧಕರು
May 4, 2018ಗುಂಡ್ಲುಪೇಟೆ: ದ್ವಿತೀಯ ಪಿಯುಸಿಯಲ್ಲಿ ಪಟ್ಟಣದ ಕೆ. ಎಸ್.ನಾಗರತ್ನಮ್ಮ ಪದವಿ ಪೂರ್ವ ಕಾಲೇಜಿಗೆ ಶೇ.90ರಷ್ಟು ಫಲಿತಾಂಶ ಬಂದಿದೆ. ಕಲಾ ಮತ್ತು ವಾಣ ಜ್ಯ ವಿಭಾಗ ದಿಂದ ಒಟ್ಟು 156 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇದರಲ್ಲಿ 140 ವಿದ್ಯಾರ್ಥಿಗಳು ಉತ್ತೀರ್ಣರಾಗುವುದರೊಂದಿಗೆ ಕಾಲೇಜಿಗೆ ಶೇ.90ರಷ್ಟು ಫಲಿತಾಂಶ ದೊರಕಿದೆ. ಇದರಲ್ಲಿ 13 ಅತ್ಯುನ್ನತ, 92 ಉನ್ನತ ಶ್ರೇಣ , 30 ದ್ವಿತೀಯ ಹಾಗೂ 4 ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ವಾಣ ಜ್ಯ ವಿಭಾಗದ ಸಯ್ಯದ್ ಹಿಬ್ಜು ರೆಹಮಾನ್ 600ಕ್ಕೆ 578 ಅಂಕಗಳಿಸಿ…
ಕಂದಕಕ್ಕೆ ಬಿದ್ದು ಆನೆ ಸಾವು
May 4, 2018ಅಂತರಸಂತೆ: ಕಾಡಿನಿಂದ ಆಹಾರವನ್ನರಸಿ ನಾಡಿಗೆ ಬರುವಾಗ ಕಂದಕಕ್ಕೆ ಬಿದ್ದು ಆನೆ ಸಾವನ್ನಪ್ಪಿರುವ ಘಟನೆ ದಮ್ಮನಕಟ್ಟೆ ಹಾಡಿಯಲ್ಲಿ ಸಂಭವಿಸಿದೆ. ರಾಜೀವ್ಗಾಂಧಿ ರಾಷ್ಟ್ರೀಯ ಉದ್ಯಾನಕ್ಕೆ ಸೇರಿದ ಅಂತರಸಂತೆ ಅರಣ್ಯ ವ್ಯಾಪ್ತಿಯ ದಮ್ಮನಕಟ್ಟೆ ಹಾಡಿಯ ಪಕ್ಕದಲ್ಲಿ ರಾತ್ರಿ ಆಹಾರ ಹುಡುಕಿಕೊಂಡು ಬಂದ ಗಂಡಾನೆ ಕಂದಕ ದಾಟುವಾಗ ಬಿದ್ದು ಸಾವನ್ನಪ್ಪಿದೆ. ಬೆಳಿಗ್ಗೆ ಹಾಡಿಯ ಜನರು ಆನೆ ಬಿದ್ದಿರುವ ಬಗ್ಗೆ ಅರಣ್ಯಾಧಿ ಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ತಕ್ಷಣ ಆಗಮಿಸಿದ ಎಸಿಎಫ್ ಪೂವಯ್ಯ ಸ್ಥಳ ಪರಿಶೀಲಿಸಿ, ನಂತರ ಕಂದಕದಿಂದ ಆನೆ ದೇಹವನ್ನು ಹೊರತೆಗೆದು ಮರಣೋ ತ್ತರ…
ಮದುವೆ ಮನೆಯಲ್ಲಿ ಚಿನ್ನಾಭರಣ, ನಗದು ಕಳವು
May 4, 2018ಬೆಟ್ಟದಪುರ: ಮದುವೆ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಚಿನ್ನ, ಬೆಳ್ಳಿ ಹಾಗೂ ನಗದು ಕಳವಾಗಿರುವ ಘಟನೆ ಇಲ್ಲಿಗೆ ಸಮೀಪದ ಮೇಲೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಪ್ರಸನ್ನ ಹಾಗೂ ಮಹದೇವ್ ಎಂಬುವರ ಮನೆಯಲ್ಲಿ 1 ಕೆ.ಜಿ. ಬೆಳ್ಳಿ, 60 ಗ್ರಾಂ ಚಿನ್ನ ಹಾಗೂ 25 ಸಾವಿರ ರೂ. ನಗದು ಕಳ್ಳತನ ನಡೆದಿದೆ. ಮದುವೆ ಕಾರ್ಯ ನಿರ್ಮಿತ್ತ ಮನೆಯಲ್ಲಿ ಚಿನ್ನ, ಬೆಳ್ಳಿ ಹಾಗೂ ನಗದು ಇಡಲಾಗಿತ್ತು. ಈ ಸಂದರ್ಭದಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿದ ಖದೀಮರು ಕಳವು ಮಾಡಿದ್ದಾರೆ. ಈ ಸಂಬಂಧ…
ಜೆಪಿ ನಗರದಲ್ಲಿ ಬಿಜೆಪಿ ಅಭ್ಯರ್ಥಿ ರಾಮದಾಸ್ ಮತಯಾಚನೆ
May 3, 2018ಮೈಸೂರು: ಕೆ.ಆರ್. ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮಾಜಿ ಸಚಿವ ಎಸ್.ಎ.ರಾಮದಾಸ್ ಬುಧವಾರ ಜೆ.ಪಿ.ನಗರದಲ್ಲಿ ಮನೆ ಮನೆಗೆ ತೆರಳಿ ಮತಯಾಚಿಸಿದರು. ಇಂದು ಬೆಳಿಗ್ಗೆ ಜೆಪಿನಗರದ ಗೊಬ್ಬಳಿ ಮರದ ಬಳಿ ಇರುವ ಶ್ರೀ ಚಾಮುಂಡೇ ಶ್ವರಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿ ಸಿದ ಬಳಿಕ ಪಾದಯಾತ್ರೆ ಆರಂಭಿಸಿದ ಎಸ್.ಎ.ರಾಮದಾಸ್, ಬಡಾವಣೆಯ ಮನೆಮನೆಗೂ ತೆರಳಿ, ಮೇ 12ರಂದು ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿಗೆ ಮತನೀಡುವಂತೆ ಕೋರಿದರು. ಅಲ್ಲದೆ ಈ ಬಾರಿ ಕೆ.ಆರ್.ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುವುದಾಗಿ ವಾಗ್ಧಾನ ಮಾಡಿದರು. ಈ ವೇಳೆ…