ಕಂಪಲಾಪುರ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕ ಸ್ಥಾನಗಳನ್ನು ಗೆದ್ದುಅಧಿಕಾರದ ಚುಕ್ಕಾಣ ಹಿಡಿಯಲಿದೆ. ಸಿದ್ದರಾಮಯ್ಯ ಮತ್ತೆ ಮುಖ್ಯ ಮಂತ್ರಿಯಾಗಲಿದ್ದಾರೆ ಎಂದು ಮಾಜಿ ಸಂಸದ ಸಿ.ಹೆಚ್. ವಿಜಯಶಂಕರ್ ನುಡಿದರು. ಅವರು ಕಾಂಗ್ರೆಸ್ ಅಭ್ಯರ್ಥಿ ಕೆ.ವೆಂಕ ಟೇಶ್ ಪರ ಕಂಪಲಾಪುರ ಕೊಪ್ಪಲಿನಲ್ಲಿ ಮತಯಾಚಿಸಿ ಮಾತನಾಡಿದರು. ಸಿದ್ದ ರಾಮಯ್ಯನವರು ಮುಖ್ಯ ಮಂತ್ರಿಯಾಗಿ ಕಳೆದ 5 ವರ್ಷಗಳಲ್ಲಿ ಜನರ ಆಶೋತ್ತರ ಗಳನ್ನು ಈಡೇರಿಸಿದ್ದಾರೆ. ಜೊತೆಗೆ ಯಾವುದೇ ಕಪ್ಪು ಚುಕ್ಕೆ ಬರದ ಹಾಗೆ ದೀರ್ಘಾ ವಧಿಯ ಮುಖ್ಯ ಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದರು….
ನಂಜನಗೂಡಿನಲ್ಲಿ ಭಗೀರಥ ಜಯಂತಿ ಆಚರಣೆ
April 26, 2018ನಂಜನಗೂಡು: ತಾಲೂಕು ಉಪ್ಪಾರ ಜನಾಂಗದ ವತಿ ಯಿಂದ (ಮೇಲು ಸಕ್ಕರೆ ಶೆಟ್ಟರು) ನಗರದ ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿರುವ ಉಪ್ಪಾರರ ಕಲ್ಯಾಣ ಮಂಟಪದಲ್ಲಿ ಶ್ರೀ ಭಗೀರಥ ಮಹರ್ಷಿ ಜಯಂತಿ ಆಚರಿಸಲಾಯಿತು. ಸಮಾಜದ ತಾಲೂಕು ಅಧ್ಯಕ್ಷ ಹಾಗೂ ತಾ.ಪಂ ಸದಸ್ಯ ಹಗಿನವಾಳು ಮೂಗಶೆಟ್ಟಿ ಮಾತನಾಡಿ, ಭಗೀರಥ, ಡಾ.ಬಿ.ಆರ್.ಅಂಬೇಡ್ಕರ್, ಬಸವಣ್ಣ, ಸಂಗೊಳ್ಳಿ ರಾಯಣ್ಣ, ವಾಲ್ಮೀಕಿ ಮಹರ್ಷಿ ಗಳ ತತ್ವ ಸಿದ್ದಾಂತಗಳು ಎಂದೆಂದಿಗೂ ಪ್ರಸ್ತುತವಾಗಿವೆ. ಇಂತಹ ಮಹನೀಯ ರನ್ನು ಒಂದು ವರ್ಗಕ್ಕೆ ಸೀಮಿತ ಮಾಡ ಬಾರದು. ಎಲ್ಲಾ ವರ್ಗಗಳವರೂ ಈ ಮಹ ನೀಯರ…
ಏ.28: `ಮಾನಸ ಸರೋವರ- 50’ ಸಂಗೀತ ಕಾರ್ಯಕ್ರಮ
April 26, 2018ಮೈಸೂರು: ಕನ್ನಡ ಚಿತ್ರರಂಗದ ಹಿರಿಯ ನಟ ಪ್ರಣಯರಾಜ ಡಾ.ಶ್ರೀನಾಥ್ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ 50 ವಸಂತಗಳು ತುಂಬಿ ರುವ ಹಿನ್ನೆಲೆಯಲ್ಲಿ ನಿನಾದ ಮ್ಯೂಸಿಕಲ್ ಟ್ರಸ್ಟ್ ವತಿಯಿಂದ ಶ್ರೀನಾಥ್ರ ಗೌರApril 28: `Mansa Lake – 50 ‘music program ವಾರ್ಥ `ಮಾನಸ ಸರೋವರ-50’ ಶೀರ್ಷಿಕೆಯಡಿ ಏ.28ರಂದು ಸಂಗೀತ ಕಾರ್ಯ ಕ್ರಮ ಆಯೋಜಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಎ.ಎಸ್.ಪ್ರಸನ್ನಕುಮಾರ್ ಹೇಳಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಂಜೆ 5.30ಕ್ಕೆ ಮೈಸೂರಿನ…
ಏ.28, ರಾಜು ಅನಂತಸ್ವಾಮಿ ಸ್ಮರಣಾರ್ಥ `ರಾಜು ಗಾನಲಹರಿ’
April 26, 2018ಮೈಸೂರು: ಕುವೆಂಪುನಗರದ ನಾದಾಮೃತ ಸಂಗೀತ ವಿದ್ಯಾಲಯವು ರಾಜು ಅನಂತಸ್ವಾಮಿ ಸ್ಮರಣಾರ್ಥ ಏ.28ರಂದು ಸಂಜೆ 5.30 ಗಂಟೆಗೆ ಮೈಸೂರಿನ ಗಾನಭಾರತಿ ವೀಣೆ ಶೇಷಣ್ಣ ಭವನದಲ್ಲಿ `ರಾಜು ಗಾನಲಹರಿ’ ಕಾರ್ಯ ಕ್ರಮ ಆಯೋಜಿಸಿದೆ ಎಂದು ವಿದ್ಯಾಲಯದ ಪ್ರಾಂಶುಪಾಲ ನಿತಿನ್ ರಾಜಾರಾಂ ಶಾಸ್ತ್ರಿ ತಿಳಿಸಿದರು. ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಕಾರ್ಯಕ್ರಮಕ್ಕೆ ಸಾಹಿತಿ ಡಾ.ಜಯಪ್ಪ ಹೊನ್ನಾಳಿ ಚಾಲನೆ ನೀಡಲಿದ್ದು, ರಂಗಾ ಯಣ ಮಾಜಿ ನಿರ್ದೇಶಕ ಎಚ್.ಜನಾರ್ದನ್ (ಜನ್ನಿ) ಅಧ್ಯಕ್ಷತೆ ವಹಿಸುವರು. ಮೈಸೂರು ಅನಂತಸ್ವಾಮಿಯವರ ಪತ್ನಿ ಶಾಂತಾ ಅನಂತಸ್ವಾಮಿ ಭಾಗವಹಿಸುವರು ಎಂದರು….
ಸುಭದ್ರ ಉದ್ಯೋಗ ಕುರಿತು ಪ್ರಧಾನಿ ಪ್ರಶ್ನಿಸಲು `ಉದ್ಯೋಗಕ್ಕಾಗಿ ಯುವ ಜನರು’ ವೇದಿಕೆ ನಿರ್ಧಾರ
April 26, 2018ಮೈಸೂರು: ಉದ್ಯೋಗ ಭದ್ರತೆಯೇ ಇಲ್ಲದಂತೆ ಮಾಡುವ ನಿಟ್ಟಿನಲ್ಲಿ ಕಾನೂನಿಗೆ ತಿದ್ದುಪಡಿ ತಂದಿರುವ ಹಿನ್ನೆಲೆಯಲ್ಲಿ ಸುಭದ್ರ ಉದ್ಯೋಗ ಕುರಿತ ಪ್ರಶ್ನೆಗಳಿಗೆ ಉತ್ತರ ಕೊಡದೇ ತಪ್ಪಿಸಿ ಕೊಳ್ಳುತ್ತಿರುವ ಪ್ರಧಾನಿ ಮೋದಿ ಅವರನ್ನು ತಡೆದು ಪ್ರಶ್ನಿಸಲು `ಉದ್ಯೋಗಕ್ಕಾಗಿ ಯುವ ಜನರು’ ವೇದಿಕೆ ನಿರ್ಧರಿಸಿದೆ. ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಸೋಮಶೇಖರ್ ಚಲ್ಯ, ಮುತ್ತುರಾಜ್, ಉದ್ಯೋಗ ಸೃಷ್ಟಿಯ ದೊಡ್ಡ ಭರವಸೆಯನ್ನು ಕೊಟ್ಟ ನರೇಂದ್ರ ಮೋದಿಯವರು ಈಗ ಎಷ್ಟು ಉದ್ಯೋಗ ಸೃಷ್ಟಿ ಮಾಡಿದ್ದೀರಿ ಎಂಬ ಪ್ರಶ್ನೆ ಹಾಕಿದರೆ, ಪಕೋಡಾ ಮಾರಿ ಎನ್ನುತ್ತಿದ್ದಾರೆ….
ನಾಳೆ, ನಾಡಿದ್ದು ಮೈಸೂರಿನ ಕೆಲವೆಡೆ ನೀರು ಸರಬರಾಜು ವ್ಯತ್ಯಯ
April 26, 2018ಮೈಸೂರು: ತುರ್ತು ಕಾಮಗಾರಿ ನಿಮಿತ್ತ ಏ. 27 ಹಾಗೂ 28 ರಂದು ವಾರ್ಡ್ ನಂ. 19 ರಿಂದ 45 ರವರೆಗೆ, ಇದಕ್ಕೆ ಸಂಬಂಧಪಟ್ಟ ಡಿಎಂಎ ಪ್ರದೇಶಗಳು, ಹೊರವಲಯಗಳಾದ ಆರ್ಎಂಪಿ, ಬಿಇಎಂಎಲ್, ವಿಜಯನಗರ 3ನೇ ಹಂತ, ಹೆಬ್ಬಾಳು 1ನೇ ಹಂತ, 2ನೇ ಹಂತ ಮತ್ತು 3ನೇ ಹಂತ, ಕೆಹೆಚ್ಬಿ ಕಾಲೋನಿ, ಹೂಟಗಳ್ಳಿ, ಕುಂಬಾರಕೊಪ್ಪಲು, ಲೋಕನಾಯಕನಗರ, ಬಿ.ಎಂ.ಶ್ರೀನಗರ, ಬೃಂದಾವನ ಬಡಾವಣೆ, ವಿವಿ ಮೊಹಲ್ಲಾ, ಒಂಟಿಕೊಪ್ಪಲು, ವಿನಾಯಕನಗರ, ಮಂಜುನಾಥಪುರ, ಮಂಡಿಮೊಹಲ್ಲಾ, ಲಷ್ಕರ್ ಮೊಹಲ್ಲಾ, ವಿಜಯನಗರ 1 ಮತ್ತು 2ನೇ ಹಂತ, ಗೋಕುಲಂ,…
ಇಬ್ಬರು ಪೊಲೀಸ್ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಲು ಕೋರ್ಟ್ ಆದೇಶ
April 26, 2018ಮೈಸೂರು: ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿದ ಆರೋಪ ಸಂಬಂಧ ಮೈಸೂರಿನ ಅರಮನೆ ಭದ್ರತಾ ವಿಭಾಗದ ಇಬ್ಬರು ಪೊಲೀಸ್ ಸಿಬ್ಬಂದಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ನ್ಯಾಯಾಲಯ ಆದೇಶ ನೀಡಿದೆ. ಕಾನ್ಸ್ಟೇಬಲ್ ಕೆಂದಪ್ಪ ಹಾಗೂ ಹೆಡ್ಕಾನ್ಸ್ಟೇಬಲ್ ನಾಗರಾಜು ಹಲ್ಲೆ ಆರೋಪ ಎದುರಿಸುತ್ತಿರುವ ಸಿಬ್ಬಂದಿ. 2014ರಂದು ಆರ್ಟಿಐ ಕಾರ್ಯಕರ್ತ ರಾಜೇಶ್ ಎಂಬುವರು ಅರಮನೆ ಭದ್ರತಾ ವಿಭಾಗದ ಕಚೇರಿಗೆ ಹೋಗಿದ್ದ ವೇಳೆ ಈ ಇಬ್ಬರು ಸಿಬ್ಬಂದಿ ಹಲ್ಲೆ ನಡೆಸಿದ್ದು, ಈ ಸಂಬಂಧ ದೇವರಾಜ ಠಾಣೆ ಪೊಲೀಸರು ಪ್ರಕ ರಣ ದಾಖಲಿಸಿಕೊಂಡಿದ್ದರಾದರೂ, ನಂತರ…
ವಿಧಾನಸಭಾ ಚುನಾವಣೆ: ದೂರುಗಳಿದ್ದಲ್ಲಿ ಸಲ್ಲಿಸಿ
April 26, 2018ಮೈಸೂರು: ಕರ್ನಾಟಕ ವಿಧಾನಸಭಾ ಚುನಾವಣೆ-2018 ಸಂಬಂಧ ಚುನಾವಣಾ ಆಯೋಗವು ಮೈಸೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಿಗೆ ಸಾಮಾನ್ಯ ವೀಕ್ಷಕರನ್ನು ನೇಮಕ ಮಾಡಿದೆ. ಸಾರ್ವಜನಿಕರು ಚುನಾವಣಾ ಸಂಬಂಧ ದೂರುಗಳನ್ನು ಕೆಳಕಂಡ ದೂರವಾಣ ಗಳಿಗೆ ಸಂಪರ್ಕಿಸಿ ನೀಡಬಹುದಾಗಿದೆ. ವೀಕ್ಷಕರು ಸಂಬಂಧಪಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಮತ್ತು ಮೈಸೂರಿನ ಹುಣಸೂರು ರಸ್ತೆಯಲ್ಲಿರುವ ಕೇಂದ್ರಿಯ ಭಾರತೀಯ ಭಾಷಾ ವಿಜ್ಞಾನ ಸಂಸ್ಥೆಯ ಅತಿಥಿ ಗೃಹದಲ್ಲಿ ಲಭ್ಯವಿರುತ್ತಾರೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ. 210-ಪಿರಿಯಾಪಟ್ಟಣ, 211-ಕೃಷ್ಣರಾಜನಗರ: ಅಲೋಕ್ ಅವಸ್ತಿ (0821-2411002), ಮೊ: 8277807190, 212-ಹುಣಸೂರು: ಡಾ….
ವಿಶ್ವ ಪಶುವೈದ್ಯ ದಿನಾಚರಣೆ
April 26, 2018ಮೈಸೂರು: ವಿಶ್ವ ಪಶುವೈದ್ಯ ದಿನಾಚರಣೆ ಅಂಗವಾಗಿ ಮೈಪೆಟ್ ಆಸ್ಪತ್ರೆ ವಿರ್ಬಾಕ್ ಸಂಸ್ಥೆ ಸಹಯೋಗದಲ್ಲಿ ಏ.28ರಂದು ಬೆಳಿಗ್ಗೆ 8 ರಿಂದ 10ರವರೆಗೆ ಮುದ್ದು ಪ್ರಾಣ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಮೊ. 9449406770 ಸಂಪರ್ಕಿಸಬಹುದು.
ಎಸ್ಬಿಐ ಕ್ಲರಿಕಲ್, ಪ್ರೊಬೇಷನರಿ ಆಫೀಸರ್ ಪರೀಕ್ಷೆಗೆ ತರಬೇತಿ
April 26, 2018ಮೈಸೂರು: ನವೋದಯ ಫೌಂಡೇಶನ್ ವತಿಯಿಂದ ಎಸ್ಬಿಐ ಕ್ಲರಿಕಲ್, ಪ್ರೊಬೇಷನರಿ ಆಫೀಸರ್ ಪರೀಕ್ಷೆಗೆ ತರಬೇತಿ ಆಯೋಜಿಸಲಾಗಿದೆ. ಆಸಕ್ತರು ಏ. 28ರೊಳಗೆ ರಾಮಸ್ವಾಮಿ ಸರ್ಕಲ್ ಹತ್ತಿರ ಪ್ರತಿದಿನ ಬೆಳಿಗ್ಗೆ 10 ರಿಂದ ರಾತ್ರಿ 8 ಗಂಟೆಯೊಳಗೆ ಹೆಸರು ನೋಂದಾಯಿಸಬಹುದು. ಹೆಚ್ಚಿನ ಮಾಹಿತಿಗೆ ಮೊ. 974186 9722, 9686072224 ಸಂಪರ್ಕಿಸಬಹುದು.