ಮೈಸೂರು

ಜೆಎಸ್‍ಎಸ್ ಅರ್ಬನ್‍ಹಾತ್‍ನಲ್ಲಿ  `ಗುಜರಾತ್ ಹ್ಯಾಂಡಿ ಕ್ರಾಫ್ಟ್ಸ್ ಉತ್ಸವ’ಕ್ಕೆ ಚಾಲನೆ
ಮೈಸೂರು

ಜೆಎಸ್‍ಎಸ್ ಅರ್ಬನ್‍ಹಾತ್‍ನಲ್ಲಿ `ಗುಜರಾತ್ ಹ್ಯಾಂಡಿ ಕ್ರಾಫ್ಟ್ಸ್ ಉತ್ಸವ’ಕ್ಕೆ ಚಾಲನೆ

July 19, 2021

ಮೈಸೂರು, ಜು.18(ವೈಡಿಎಸ್)- ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ಜೆಎಸ್‍ಎಸ್ ಅರ್ಬನ್ ಹಾತ್‍ನಲ್ಲಿ ಇಂದಿನಿಂದ 8 ದಿನಗಳ ಕಾಲ `ಗುಜರಾತ್ ಹ್ಯಾಂಡಿ ಕ್ರಾಫ್ಟ್ಸ್ ಉತ್ಸವ-2021’ ಕರಕುಶಲ ವಸ್ತುಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಲಾಗಿದೆ. ಜೆಎಸ್‍ಎಸ್ ಅರ್ಬನ್ ಹಾತ್, ಗುಜರಾತ್ ರಾಜ್ಯ ಸರ್ಕಾರ ಅಂಗ ಸಂಸ್ಥೆಯಾದ ಇಂಡೆಕ್ಸ್ಟ್-ಸಿ ಸಹಯೋಗ ದಲ್ಲಿ ಜು.18ರಿಂದ 25ರವರೆಗೆ ಮೇಳವನ್ನು ಆಯೋ ಜಿಸಿದ್ದು, ಗುಜರಾತ್‍ನ ವಿವಿಧ ಭಾಗಗಳ ಪ್ರಸಿದ್ಧ ಹಾಗೂ ಕ್ರಿಯಾಶೀಲರಾಗಿರುವ 50ಕ್ಕೂ ಹೆಚ್ಚು ಕುಶಲಕರ್ಮಿಗಳು ಭಾಗವಹಿಸಿದ್ದು, ಕೊರೊನಾದ ಬಗ್ಗೆ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ….

ಇಂದು ಎಸ್‍ಎಸ್‍ಎಲ್‍ಸಿ ಪರೀಕ್ಷೆ ಮೈಸೂರು ಜಿಲ್ಲೆಯಲ್ಲಿ 38989 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಿ ಸಂಭವ
ಮೈಸೂರು

ಇಂದು ಎಸ್‍ಎಸ್‍ಎಲ್‍ಸಿ ಪರೀಕ್ಷೆ ಮೈಸೂರು ಜಿಲ್ಲೆಯಲ್ಲಿ 38989 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಿ ಸಂಭವ

July 19, 2021

ಮೈಸೂರು, ಜು.18(ಎಂಟಿವೈ)-ಪ್ರಸಕ್ತ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಕೊನೆಗೂ ನಾಳೆ(ಸೋಮವಾರ)ಯಿಂದ ಆರಂಭವಾ ಗುತ್ತಿದ್ದು, ಮೈಸೂರು ಜಿಲ್ಲೆಯಲ್ಲಿ 237 ಕೇಂದ್ರಗಳಲ್ಲಿ 38,989 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದು, ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೊರೊನಾ 2ನೇ ಅಲೆಯ ತೀವ್ರತೆಯ ನಡುವೆ ಹಲವು ಕಟ್ಟೆಚ್ಚರದ ಕ್ರಮಗಳೊಂದಿಗೆ ರಾಜ್ಯದಾದ್ಯಂತ ಜುಲೈ 19 ಮತ್ತು 22 ರಂದು ಈ ಪ್ರಸಕ್ತ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಸ ಲಾಗುತ್ತಿದ್ದು, ಮೈಸೂರು ನಗರದಲ್ಲಿ 72, ಗ್ರಾಮೀಣ ಪ್ರದೇಶದಲ್ಲಿ 165 ಪರೀಕ್ಷಾ ಕೇಂದ್ರಗಳು ಸೇರಿದಂತೆ ಜಿಲ್ಲೆಯಲ್ಲಿ 237 ಪರೀಕ್ಷಾ ಕೇಂದ್ರಗಳನ್ನು ಸಜ್ಜುಗೊಳಿಸ…

ಕೆಆರ್‍ಎಸ್ ಸುತ್ತಮುತ್ತಲ ಅಕ್ರಮ ಗಣಿಗಾರಿಕೆ ವಿರುದ್ಧ  ಸ್ಥಳೀಯರೇ ಹೋರಾಡಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲಿ
ಮೈಸೂರು

ಕೆಆರ್‍ಎಸ್ ಸುತ್ತಮುತ್ತಲ ಅಕ್ರಮ ಗಣಿಗಾರಿಕೆ ವಿರುದ್ಧ ಸ್ಥಳೀಯರೇ ಹೋರಾಡಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲಿ

July 18, 2021

ಮೈಸೂರು, ಜು.17(ಎಂಟಿವೈ)- ಅಣೆಕಟ್ಟೆಯ ಸುರ ಕ್ಷತೆಗಾಗಿ ಕೆಆರ್‍ಎಸ್ ಸುತ್ತಮುತ್ತ ಅಕ್ರಮವಾಗಿ ನಡೆ ಯುತ್ತಿರುವ ಗಣಿಗಾರಿಕೆ ವಿರುದ್ಧ ಸ್ಥಳೀಯರೇ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಿ ಸರ್ಕಾರಕ್ಕೆ ಬಿಸಿಮುಟ್ಟಿಸುವ ಅನಿವಾರ್ಯತೆ ಎದುರಾಗಿದೆ ಎಂದು ಸಮಾಜ ಪರಿ ವರ್ತನಾ ಸಮುದಾಯದ ಸ್ಥಾಪಕ ಅಧ್ಯಕ್ಷ ಎಸ್.ಆರ್. ಹೀರೆಮಠ್ ಅಭಿಪ್ರಾಯಪಟ್ಟಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಈ ಹಿಂದೆ ಬಳ್ಳಾರಿಯಲ್ಲಿ ಅನಿಯಮಿತವಾಗಿ ನಡೆದ ಅಕ್ರಮ ಗಣಿಗಾರಿಕೆಯನ್ನು ಪ್ರಶ್ನಿಸದೇ ಇದ್ದುದರಿಂದ ಭೂಮಿಯ ಒಡಲನ್ನು ಬಗೆದು ಸಂಪತ್ತನ್ನು ಲೂಟಿ ಮಾಡಲಾಗಿತ್ತು. ಲಕ್ಷಾಂತರ…

`ಟ್ರೀ ಪಾರ್ಕ್’ ಪರಿಕಲ್ಪನೆಯಲ್ಲಿ ಹಸಿರೀಕರಣಕ್ಕೆ ಒತ್ತು
ಮೈಸೂರು

`ಟ್ರೀ ಪಾರ್ಕ್’ ಪರಿಕಲ್ಪನೆಯಲ್ಲಿ ಹಸಿರೀಕರಣಕ್ಕೆ ಒತ್ತು

July 18, 2021

ಮೈಸೂರು,ಜು.17(ಪಿಎಂ)-ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿರ್ಮಿ ಸಿರುವ ಹಂಚ್ಯಾ-ಸಾತಗಳ್ಳಿ ಎ ವಲಯ ಬಡಾವಣೆಯಲ್ಲಿ `ಟ್ರೀ ಪಾರ್ಕ್’ ಪರಿಕಲ್ಪನೆ ಯಲ್ಲಿ ಹಸಿರೀಕರಣಕ್ಕೆ ಒತ್ತು ನೀಡಲಾಗಿದೆ. ಇತ್ತೀಚೆಗೆ ಮುಡಾ ವತಿಯಿಂದ ಇಲ್ಲಿನ 10 ಎಕರೆ ಪ್ರದೇಶದಲ್ಲಿ 2 ಸಾವಿರ ಗಿಡ ಗಳನ್ನು ನೆಡಲು ಯೋಜನೆ ರೂಪಿಸಿ, ಈಗಾ ಗಲೇ ಗಿಡ ನೆಡುವ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ. ಆಂಧ್ರಪ್ರದೇಶದ ರಾಜಮಂಡ್ರಿಯಿಂದ 150 ಗಿಡಗಳನ್ನು ತಂದು ಇಲ್ಲಿ ನೆಟ್ಟಿರುವುದು ವಿಶೇಷ. ಇವು ಗಿಡವಾಗಿದ್ದರೂ ಸುಮಾರು 10 ಅಡಿ ಎತ್ತರಕ್ಕೆ ಬೆಳೆದಿವೆ. ಸದರಿ ಪ್ರದೇಶವನ್ನು…

377 ಕೋಟಿ ರೂ. ವೆಚ್ಚದಲ್ಲಿ ಮುಡಾ ಬಡಾವಣೆಗಳ ಸಮಗ್ರ ಅಭಿವೃದ್ಧಿ ಕಾಮಗಾರಿಗೆ ಶೀಘ್ರ ಟೆಂಡರ್ ಪ್ರಕ್ರಿಯೆ
ಮೈಸೂರು

377 ಕೋಟಿ ರೂ. ವೆಚ್ಚದಲ್ಲಿ ಮುಡಾ ಬಡಾವಣೆಗಳ ಸಮಗ್ರ ಅಭಿವೃದ್ಧಿ ಕಾಮಗಾರಿಗೆ ಶೀಘ್ರ ಟೆಂಡರ್ ಪ್ರಕ್ರಿಯೆ

July 18, 2021

ಮೈಸೂರು,ಜು.17(ಪಿಎಂ)-ಮೈಸೂರು ನಗರಾ ಭಿವೃದ್ಧಿ ಪ್ರಾಧಿಕಾರದ (ಮುಡಾ) ಬಡಾವಣೆಗಳಿಗೆ ಸಮರ್ಪಕ ಮೂಲಭೂತ ಸೌಲಭ್ಯ ಕಲ್ಪಿಸಿ, ಸಮಗ್ರ ಅಭಿವೃದ್ಧಿಪಡಿಸಲು ಮುಡಾದ 377 ಕೋಟಿ ರೂ. ಬಳಕೆಗೆ ಸರ್ಕಾರ ಸಮ್ಮತಿಸಿರುವ ಹಿನ್ನೆಲೆಯಲ್ಲಿ ಶೀಘ್ರವೇ ಕಾಮಗಾರಿ ಆರಂಭಿಸುವ ಸಂಬಂಧ ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ತಿಳಿಸಿದರು. ಮೈಸೂರಿನ ಸಾತಗಳ್ಳಿ, ವಸಂತನಗರ, ಲಲಿತಾದ್ರಿ ಪುರದಲ್ಲಿ ಮುಡಾ ಅಭಿವೃದ್ಧಿಪಡಿಸಿರುವ ಬಡಾವಣೆ ಗಳಲ್ಲಿ ಕೈಗೊಳ್ಳಲು ಉದ್ದೇಶಿಸಿರುವ (ಒಂದು ಬಾರಿಯ ಕ್ರಮವಾಗಿ/ಓಟಿಎಂ) ಮೂಲಭೂತ ಸೌಲಭ್ಯ ಕಾಮ ಗಾರಿಗಳ ಸಂಬಂಧ ಬಡಾವಣೆಗಳಲ್ಲಿ ಶನಿವಾರ…

ಜೆಎಸ್‍ಎಸ್ ಅರ್ಬನ್ ಹಾತ್‍ನಲ್ಲಿ ಇಂದಿನಿಂದ ಗುಜರಾತ್ ಕರಕುಶಲ ಉತ್ಸವ
ಮೈಸೂರು

ಜೆಎಸ್‍ಎಸ್ ಅರ್ಬನ್ ಹಾತ್‍ನಲ್ಲಿ ಇಂದಿನಿಂದ ಗುಜರಾತ್ ಕರಕುಶಲ ಉತ್ಸವ

July 18, 2021

ಮೈಸೂರು, ಜು.17(ಎಂಟಿವೈ)- ಮೈಸೂರಿನ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ಜೆಎಸ್‍ಎಸ್ ಮೈಸೂರು ಅರ್ಬನ್ ಹಾತ್‍ನಲ್ಲಿ ಜು.18ರಿಂದ 25ರವರೆಗೆ ಗುಜರಾತ್ ಕರಕುಶಲ ಉತ್ಸವ ಆಯೋಜಿಸಲಾಗಿದೆ ಎಂದು ಜೆಎಸ್‍ಎಸ್ ತಾಂತ್ರಿಕ ಶಿಕ್ಷಣ ವಿಭಾಗ ಜಂಟಿ ನಿರ್ದೇಶಕ ಡಾ.ಎಚ್.ಆರ್.ಮಹದೇವಸ್ವಾಮಿ ತಿಳಿಸಿದ್ದಾರೆ. ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಗುಜರಾತ್ ಸರ್ಕಾರದ ಇಂಡಸ್ಟ್ರಿಯಲ್ ಎಕ್ಸಟೆನ್ಷನ್ ಕಾಟೇಜ್ (ಇಂಡೆಸ್ಟ್ಸ್-ಸಿ) ಸಹಯೋಗದಲ್ಲಿ ಗುಜರಾತ್ ಕರಕುಶಲ ಉತ್ಸವ ನಡೆಸಲಾಗುತ್ತಿದೆ. ಜು.18ರಂದು ಸಂಜೆ 4ಕ್ಕೆ ಇಂಡೆಸ್ಟ್ಸ್-ಸಿ ಕಾರ್ಯನಿರ್ವಾ ಹಕ ನಿರ್ದೇಶಕ ಡಿ.ಎಂ.ಶುಕ್ಲ ಮೇಳಕ್ಕೆ ಚಾಲನೆ ನೀಡಲಿದ್ದಾರೆ. ಜೆಎಸ್‍ಎಸ್…

ನಿರ್ದೇಶಕ ಇಂದ್ರಜಿತ್ ಲಂಕೇಶ್ ವಿರುದ್ಧ ಹರಿಹಾಯ್ದ ನಟ ದರ್ಶನ್
ಮೈಸೂರು

ನಿರ್ದೇಶಕ ಇಂದ್ರಜಿತ್ ಲಂಕೇಶ್ ವಿರುದ್ಧ ಹರಿಹಾಯ್ದ ನಟ ದರ್ಶನ್

July 18, 2021

ಮೈಸೂರು, ಜು.17-ನಿರ್ದೇಶಕ ಇಂದ್ರ ಜಿತ್ ಲಂಕೇಶ್ ಅವರಿಗೆ ತಾಕತ್ತಿದ್ದರೆ ನಾನು ಅವರ ಜೊತೆ ಮಾತನಾಡಿರುವ ಆಡಿಯೋ ವನ್ನು ರಿಲೀಸ್ ಮಾಡಲಿ ಎಂದು ನಟ ದರ್ಶನ್ ಸವಾಲು ಹಾಕಿದರು. ಶನಿವಾರ ತಿ.ನರಸೀಪುರ ರಸ್ತೆಯಲ್ಲಿರುವ ತಮ್ಮ ತೋಟದ ಮನೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಇಂದ್ರಜಿತ್ ಲಂಕೇಶ್ ವಿರುದ್ಧ ಕಿಡಿಕಾರಿದರು. ನಾನು ಕಲಾವಿದ ನಾಗಿ ಹಲವಾರು ಹಿಟ್ ಸಿನಿಮಾಗಳಲ್ಲಿ ನಟಿ ಸಿದ್ದೇನೆ. ನೀನಾಸಂ ವಿದ್ಯಾರ್ಥಿಯಾದ ನಾನು, ರಜನಿಕಾಂತ್, ಶಿವರಾಜ್‍ಕುಮಾರ್ ಅಭಿ ನಯ ಕಲಿತ ಶಾಲೆಯಲ್ಲಿ ನಾನೂ ಕಲಿತ್ತಿದ್ದೇನೆ. ಇಂದ್ರಜಿತ್ ಲಂಕೇಶ್ ಯಾರಿಗೆ…

2.53 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಸಾರಾ ಚಾಲನೆ
ಮೈಸೂರು

2.53 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಸಾರಾ ಚಾಲನೆ

July 18, 2021

ಕೆ.ಆರ್.ನಗರ, ಜು.17- ಪಟ್ಟಣದ ಕನಕ ನಗರದಲ್ಲಿ 2ನೇ ಹಂತದ ಒಳಚರಂಡಿ ಯೋಜನೆಯಡಿ ತೇವಬಾವಿ ಹಾಗೂ ಡಿ.ಜಿ.ರೂಂ ನಿರ್ಮಾಣ, ಒಳಚರಂಡಿ ಕೊಳವೆ ಮಾರ್ಗಗಳ ಲಿಂಕಿಂಗ್ ಸೇರಿದಂತೆ 2.53 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಶಾಸಕ ಸಾ.ರಾ. ಮಹೇಶ್ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಈ ಕೆಲಸ ಪ್ರಾರಂಭವಾಗಿದ್ದು, ಈ ಕಾಮಗಾರಿ ಜೊತೆಗೆ ಸ್ಟೇಡಿಯಂ ಹತ್ತಿರ 150 ಕೆಎಲ್‍ಡಿ ಹಾಗೂ ಕಂಠೇನಹಳ್ಳಿಯಲ್ಲಿ 250 ಕೆಎಲ್‍ಡಿ ಸಾಮಥ್ರ್ಯದ ಎಸ್‍ಬಿಆರ್…

ತಹಸೀಲ್ದಾರ್ ವಜಾಕ್ಕೆ ಆಗ್ರಹಿಸಿ ಪ್ರತಿಭಟನೆ
ಮೈಸೂರು

ತಹಸೀಲ್ದಾರ್ ವಜಾಕ್ಕೆ ಆಗ್ರಹಿಸಿ ಪ್ರತಿಭಟನೆ

July 18, 2021

ಹುಣಸೂರು, ಜು.17(ಕೆಕೆ)- ಸಾರ್ವ ಜನಿಕರ ಕುಂದುಕೊರತೆ ಬಗ್ಗೆ ಗಮನ ಹರಿಸದೆ ಭ್ರಷ್ಟಾಚಾರದಲ್ಲಿ ತೊಡಗಿರುವ ತಹಸೀ ಲ್ದಾರ್ ಬಸವರಾಜ್ ಅವರನ್ನು ಸೇವೆಯಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಮತ್ತು ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪಟ್ಟಣದ ಉಪವಿಭಾಗಾಧಿಕಾರಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು ಕೆಲಕಾಲ ಪ್ರತಿಭಟನೆ ನಡೆಸಿ ಉಪವಿಭಾ ಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಜಿಲ್ಲಾ ರೈತ ಸಂಘದ ಅಧ್ಯಕ್ಷ ಕುಮಾರ್ ಮಾತನಾಡಿ, ತಹಸೀಲ್ದಾರ್ ಬಸವರಾಜು ಕಳೆದ ಎರಡೂವರೆ ವರ್ಷಗಳಿಂದ ಸಾರ್ವ ಜನಿಕರ ಕುಂದುಕೊರತೆಗಳ ಬಗ್ಗೆ ಗಮನ…

ಕೃಷ್ಣ ಆಸ್ಪತ್ರೆಯಿಂದ 575 ಸೋಂಕಿತರಿಗೆ ಉಚಿತ ಚಿಕಿತ್ಸೆ
ಮೈಸೂರು

ಕೃಷ್ಣ ಆಸ್ಪತ್ರೆಯಿಂದ 575 ಸೋಂಕಿತರಿಗೆ ಉಚಿತ ಚಿಕಿತ್ಸೆ

July 18, 2021

ನಂಜನಗೂಡು, ಜು.17- ಕೊರೊನಾ 2ನೇ ಅಲೆ ಸಂದರ್ಭ ನಗರದ ಕೃಷ್ಣ ಆಸ್ಪತ್ರೆ ವತಿಯಿಂದ 575 ಕೋವಿಡ್ ಸೋಂಕಿತರಿಗೆ ಆಯುಷ್ಮಾನ್ ಯೋಜನೆಯಡಿ ಉಚಿತ ಚಿಕಿತ್ಸೆ ನೀಡಲಾಗಿದೆ ಎಂದು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಗೀತಾ ತಿಳಿಸಿದರು. ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಕೋವಿಡ್ ಸಂದರ್ಭ ಕೃಷ್ಣ ಆಸ್ಪತ್ರೆಯ ಶೇ.50ರಷ್ಟು ಹಾಸಿಗೆಗಳನ್ನು ಜಿಲ್ಲಾಡಳಿತದ ವಶಕ್ಕೆ ನೀಡುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದರು. ಆದರೆ ನಂಜನಗೂಡು ತಾಲೂಕಿನಲ್ಲಿ ಕೋವಿಡ್ ಸೋಂಕು ವ್ಯಾಪಕವಾಗಿ ಹರಡಿದ್ದರಿಂದ ತಾಲೂಕಿನ ಜನತೆಗೆ ನೆರವಾಗುವ ನಿಟ್ಟಿನಲ್ಲಿ…

1 206 207 208 209 210 1,611
Translate »