ಬೆಂಗಳೂರು, ಜು.7(ಕೆಎಂಶಿ)-ಕೋವಿಡ್-19 ಹರಡು ವಿಕೆಯನ್ನು ತಡೆಯಲು ಕೆಲವು ಕಠಿಣ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಅಪರ ಕಾರ್ಯದರ್ಶಿ ಆರ್ತಿ ಅಹುಜಾ ಹಾಗೂ ತುರ್ತು ವೈದ್ಯಕೀಯ ಸ್ಪಂದನಾ ಕೇಂದ್ರದ ನಿರ್ದೇಶಕ ಡಾ.ರವೀಂ ದ್ರನ್ ಅವರ ತಂಡ ಮಂಗಳವಾರ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಅವರ ಸಂಪುಟದ ಸಹೋದ್ಯೋಗಿಗಳು, ಅಧಿಕಾರಿಗಳ ಜೊತೆ ನಡೆಸಿದ ಸಮಾಲೋಚನೆಯಲ್ಲಿ ಈ ಸಲಹೆ ಮಾಡಿದೆ. ಕೋವಿಡ್-19 ನಿರ್ವಹಣೆ ಲೋಪದೋಷಗಳನ್ನು ಎಳೆ ಎಳೆಯಾಗಿ…
ಭಾರತದಲ್ಲಿ 7 ಲಕ್ಷ ಗಡಿ ದಾಟಿದ ಸೋಂಕಿತರ ಸಂಖ್ಯೆ ಒಂದೇ ದಿನ 22252 ಮಂದಿಯಲ್ಲಿ ಸೋಂಕು
July 8, 2020ನವದೆಹಲಿ, ಜು.7- ಭಾರತದಲ್ಲಿ ಕೊರೊನಾ ವೈರಸ್ ಆರ್ಭಟ ಮುಂದುವರೆದಿದ್ದು, ಒಂದೇ ದಿನ 22,252 ಮಂದಿಯಲ್ಲಿ ವೈರಸ್ ಪತ್ತೆಯಾಗಿದೆ. ಇದರೊಂದಿಗೆ ದೇಶದಲ್ಲಿ ಸೋಂಕಿತರ ಸಂಖ್ಯೆ 7 ಲಕ್ಷ ಗಡಿ ದಾಟಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಂಗಳವಾರ ಮಾಹಿತಿ ನೀಡಿದೆ. ಕಳೆದ 24 ಗಂಟೆಗಳಲ್ಲಿ 467 ಮಂದಿ ಮಹಾಮಾರಿ ವೈರಸ್ಗೆ ಬಲಿಯಾಗಿದ್ದು, ಇದರೊಂದಿಗೆ ಒಟ್ಟು ಸಾವನ್ನಪ್ಪಿದವರ ಸಂಖ್ಯೆ 20,160ಕ್ಕೆ ಏರಿಕೆಯಾಗಿದೆ. ನಿನ್ನೆ ಒಂದೇ ದಿನ ಬರೋಬ್ಬರಿ 22,252 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ…
ಬಂದ್ ಆಗಿರುವ ಮೈಸೂರು ವಿಕ್ರಂ ಜೇಷ್ಠ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸಾ ವ್ಯವಸ್ಥೆ
July 8, 2020ಮೈಸೂರು, ಜು.7 (ಆರ್ಕೆ)- ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾಡಳಿತವು ಸೋಂಕಿತರ ಚಿಕಿತ್ಸೆಗಾಗಿ ಹೆಚ್ಚುವರಿ ಆಸ್ಪತ್ರೆ ವ್ಯವಸ್ಥೆ ಶೋಧನೆ, ಸಿದ್ಧತೆಯಲ್ಲಿ ತೊಡಗಿದ್ದು, ಕೆಲ ವರ್ಷದಿಂದ ಸೇವೆ ಸ್ಥಗಿತಗೊಳಿಸಿದ್ದ ಪ್ರಸಿದ್ಧ ವಿಕ್ರಂ ಜೇಷ್ಠ ಆಸ್ಪತ್ರೆಯನ್ನು ಈ ಉದ್ದೇಶಕ್ಕೆ ವಶಕ್ಕೆ ಪಡೆಯಲಾಗಿದೆ. ಕೆಆರ್ಎಸ್ ರಸ್ತೆಯಲ್ಲಿರುವ ಜಿಲ್ಲಾ ಕೋವಿಡ್ ಆಸ್ಪತ್ರೆ ಕಟ್ಟಡದಲ್ಲಿ ಇರುವ ಎಲ್ಲಾ 200 ಹಾಸಿಗೆಗಳೂ ಭರ್ತಿಯಾಗಿರುವುದರಿಂದ ಈಗಾಗಲೇ ಇಎಸ್ಐ ಆಸ್ಪತ್ರೆ, ಮಂಡಕಳ್ಳಿ ಬಳಿಯ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯ (ಕೆಎಸ್ಓಯು)ದ…
ರಸ್ತೆಗೆ ವಿಮೆ ಮಾಡಿಸಿದ ಮಾದರಿ ಕ್ಯಾಬ್ ಚಾಲಕ ವಾಸುಗೆ ಸನ್ಮಾನ
July 8, 2020ಮೈಸೂರು, ಜು.7(ಆರ್ಕೆಬಿ)- ರಸ್ತೆಗೆ ವಿಮೆ ಮಾಡಿಸಿ ಇತರರಿಗೆ ಮಾದರಿಯಾದ ಮೈಸೂರಿನ ಬೋಗಾದಿ 2ನೇ ಹಂತದ ಸಿಎಫ್ಟಿಆರ್ಐ ಬಡಾವಣೆಯ ಕ್ಯಾಬ್ ಚಾಲಕ ವಾಸು ಅವರ ಸಾಮಾಜಿಕ ಕಳಕಳಿ ಯನ್ನು ಪ್ರಶಂಸಿಸಿ ಬಿಜೆಪಿ ವತಿಯಿಂದ ಮಂಗಳವಾರ ಸನ್ಮಾನಿಸಲಾಯಿತು. ಮುಖಂಡ ಕೌಟಿಲ್ಯ ರಘು ಅವರ ನೇತೃತ್ವ ದಲ್ಲಿ ಬಿಜೆಪಿ ಕಾರ್ಯಕರ್ತರು ವಾಸು ಅವರ ಮನೆಗೆ ತೆರಳಿ ಫಲ ತಾಂಬೂಲ ನೀಡಿ, ಶಾಲು ಹೊದಿಸಿ ಗೌರವಿಸಿದರು. ವಾಸು ಅವರ ಸಾಮಾಜಿಕ ಕಳಕಳಿಯನ್ನು ಪ್ರಶಂ ಸಿಸಿದರು. ಈ ಸಂದರ್ಭ ಮಾತನಾಡಿದ ಕೌಟಿಲ್ಯ ರಘು, ವಾಸು…
ರಘುಲಾಲ್ ಅಂಡ್ ಕಂಪನಿಯಿಂದ ಮೊಬೈಲ್ ಆ್ಯಪ್ ಮೂಲಕ ಔಷಧಿ ಖರೀದಿಸುವ ಅವಕಾಶ
July 8, 2020ಆರ್ಡರ್ ಮಾಡಿದರೆ ಮನೆ ಬಾಗಿಲಿಗೇ ಸೇವೆ ಮೈಸೂರು, ಜು. 7- ಮೈಸೂರಿನ ಪ್ರತಿಷ್ಠಿತ ಔಷಧಿ ಕಂಪನಿ ರಘುಲಾಲ್ ಅಂಡ್ ಕಂಪನಿಯು ಗೂಗಲ್ ಪ್ಲೇ ಸ್ಟೋರ್ನಲ್ಲಿ ತನ್ನ ಆ್ಯಪ್ಗೆ ಮಂಗಳವಾರ ಬೆಳಗ್ಗೆ ಚಾಲನೆ ನೀಡಿದ್ದು, ಗ್ರಾಹಕರು ಈ ಮೊಬೈಲ್ ಆ್ಯಪ್ ಮೂಲಕ ತಮಗೆ ಅಗತ್ಯವಿರುವ ಔಷಧಿಯನ್ನು ಸುಲಭವಾಗಿ ಆರ್ಡರ್ ಮಾಡಿ ಪಡೆಯ ಬಹುದಾಗಿದೆ. ಪ್ರತಿಯೊಬ್ಬರೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಈ ಆ್ಯಪ್ ಅನ್ನು ಡೌನ್ಲೋಡ್ ಮಾಡಿಕೊಂಡು ಔಷಧಿಗೆ ಆರ್ಡರ್ ಮಾಡಿದಲ್ಲಿ ತಮ್ಮ ಮನೆ ಬಾಗಿಲಿಗೇ ಔಷಧಿ ಬಂದು…
ಶಾಸಕರಿಂದ ಬೀದಿಬದಿ ವ್ಯಾಪಾರಿಗಳ ಥರ್ಮಲ್ ಸ್ಕ್ರೀನಿಂಗ್
July 8, 2020ಮೈಸೂರು, ಜು.7(ಆರ್ಕೆಬಿ)- ಮೈಸೂರಿನಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನಜಾಗೃತಿ ಮೂಡಿಸಲು ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಮಂಗಳ ವಾರ ಮೈಸೂರಿನ ಕೆಲ ಪ್ರದೇಶಗಳಲ್ಲಿ ಪಾದಯಾತ್ರೆ ಕೈಗೊಂಡರು. ಬೀದಿಬದಿ ವ್ಯಾಪಾರಿಗಳಿಗೆ ಕೊರೊನಾ ವಿಚಾರದಲ್ಲಿ ಕೈಗೊಳ್ಳಬೇಕಿರುವ ಮುನ್ನೆಚ್ಚರಿಕೆಗಳ ಕುರಿತು ಅರಿವು ಮೂಡಿಸಿದರು. ನಂಜುಮಳಿಗೆ, ತರಕಾರಿ ಮಾರುಕಟ್ಟೆ, ಮಾನಂದವಾಡಿ ರಸ್ತೆ, ನಾದಬ್ರಹ್ಮ ಸಂಗೀತ ಸಭಾ ಸುತ್ತಮುತ್ತ ಫುಟ್ಪಾತ್ ವ್ಯಾಪಾರಿ ಗಳಿಗೆ ಶಾಸಕರೇ ಥರ್ಮಲ್ ಸ್ಕ್ರೀನಿಂಗ್ ಮಾಡಿದರು. ಕಡ್ಡಾಯವಾಗಿ ಮಾಸ್ಕ್ ಧರಿ ಸುವಂತೆ, ಆಗಾಗ್ಗೆ ಕೈಗಳನ್ನು ಸೋಪಿ ನಿಂದ ತೊಳೆದುಕೊಳ್ಳುವಂತೆ,…
ಮೈಸೂರಿನ ಬಹುತೇಕ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ
July 8, 2020ಮೈಸೂರು,ಜು.7(ಆರ್ಕೆ)- ಕೋವಿಡ್- 19 ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಮೈಸೂರಿನ ಬಹುತೇಕ ಸರ್ಕಾರಿ ಕಚೇರಿಗಳಲ್ಲಿ ಸಾರ್ವ ಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಅಧಿಕಾರಿಗಳು, ಸಿಬ್ಬಂದಿ ಆರೋಗ್ಯ ರಕ್ಷಣೆ ಹಾಗೂ ಮೈಸೂರು ಮಹಾನಗರ ಪಾಲಿಕೆ ಪ್ರಧಾನ ಕಚೇರಿ, ಮೈಸೂರು ವಿಶ್ವವಿದ್ಯಾ ನಿಲಯದ ಕ್ರಾಫರ್ಡ್ ಭವನ, ನಗರ ಸಂಚಾರ ಎಸಿಪಿ ಕಚೇರಿ ಹಾಗೂ ದಕ್ಷಿಣ ವಲಯ ಐಜಿಪಿಯವರ ನಿವಾಸದಲ್ಲಿ ಕರ್ತವ್ಯ ನಿರ್ವ ಹಿಸುತ್ತಿದ್ದ ಸಿಬ್ಬಂದಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದರಿಂದ ಮೈಸೂರು ನಗರದ ಇನ್ನಿತರ ಸರ್ಕಾರಿ ಕಚೇರಿಗಳಲ್ಲಿ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಜಿಲ್ಲಾಧಿಕಾರಿ…
ಮುಂದಿನ ಶೈಕ್ಷಣಿಕ ವರ್ಷಕ್ಕೆ : 9-12 ತರಗತಿಗಳಿಗೆ ಸಿಬಿಎಸ್ಇ ಪಠ್ಯಕ್ರಮ ಶೇ.30ರಷ್ಟು ಕಡಿತ
July 8, 2020ನವದೆಹಲಿ,ಜು.7-ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್ಇ) 2020-21ರ ಶೈಕ್ಷಣಿಕ ವರ್ಷಕ್ಕೆ 9ರಿಂದ 12ನೇ ತರಗತಿಗಳ ಪಠ್ಯಕ್ರಮವನ್ನು ಮಾರಣಾಂತಿಕ ಕೊರೊನಾ ವೈರಸ್ ಕಾರಣದಿಂದಾಗಿ ಶೇ.30 ರಷ್ಟು ಕಡಿತಗೊಳಿಸಲು ನಿಶ್ಚಯಿಸಲಾಗಿದೆ ಎಂದು ಮಾನವ ಸಂಪನ್ಮೂಲ ಸಚಿವ ರಮೇಶ್ ಪೆÇೀಖ್ರಿಯಲ್ ಪ್ರಕಟಿಸಿದ್ದಾರೆ. ಟ್ವೀಟ್ ಮೂಲಕ ಸಚಿವಾಲಯದ ನಿರ್ಧಾರವನ್ನು ಪ್ರಕಟಿಸಿ ರುವ ರಮೇಶ್ ಪೆÇೀಖ್ರಿಯಲ್, ಆದೇಶ ಮತ್ತು ಜಗತ್ತಿನಾದ್ಯಂತ ಅಸಾಮಾನ್ಯ ಸ್ಥಿತಿ ಚಾಲ್ತಿಯಲ್ಲಿದೆ. ಈ ಪರಿಸ್ಥಿತಿಯನ್ನು ಗಮನಿಸಿ ಸಿಬಿಎಸ್ಇಗೆ ಪಠ್ಯಕ್ರಮವನ್ನು ಪರಿಷ್ಕರಿಸಲು ಮತ್ತು 9ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಕೋರ್ಸ್ ಲೋಡ್ ಕಡಿಮೆ…
ಬಸ್ ಸಂಚಾರ ಅಸ್ತವ್ಯಸ್ತ; ಗ್ರಾಮೀಣ ಶಿಕ್ಷಕರಿಗೆ ಸಂಕಷ್ಟ
July 8, 2020ಮೈಸೂರು, ಜು.7(ಎಸ್ಪಿಎನ್)- ಗ್ರಾಮೀಣ ಪ್ರದೇಶದಲ್ಲಿ ಜಿಟಿಜಿಟಿ ಮಳೆ. ಮತ್ತೊಂದೆಡೆ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದೆ. ಪರಿಣಾಮ ಕೆಲ ಹಳ್ಳಿಗಳು ಸ್ವಪ್ರೇರಣೆಯಿಂದ ಲಾಕ್ಡೌನ್ ಆಗುತ್ತಿವೆ. ಇದರಿಂದ ಗ್ರಾಮಾಂತರ ಸಾರಿಗೆ ಸಂಸ್ಥೆ ಬಸ್ಗಳ ಸಂಚಾರ ಅಸ್ತ ವ್ಯಸ್ತಗೊಂಡಿದೆ. ಇದರ ಬಿಸಿ ಮೈಸೂರು ನಗರದಿಂದ ತಾಲೂಕು, ಹೋಬಳಿ ಕೇಂದ್ರಗಳಿಗೆ ನಿತ್ಯ ಸಂಚರಿಸುವ ಸರ್ಕಾರಿ ಕಚೇರಿಗಳ ಸಿಬ್ಬಂದಿ ಮತ್ತು ಗ್ರಾಮೀಣ ಭಾಗದ ಸರ್ಕಾರಿ ಶಾಲಾ ಶಿಕ್ಷಕ ವರ್ಗ ದವರಿಗೆ ತಟ್ಟಿದೆ. ಮೈಸೂರು ನಗರ ಮತ್ತು ತಾಲೂಕು ಕೇಂದ್ರಗಳಿಂದ ಸರ್ಕಾರಿ ನೌಕರರ, ಶಿಕ್ಷಕ ವರ್ಗದವರು ಜಿಲ್ಲೆಯ…
ಶಿಷ್ಯವೇತನ ಹೆಚ್ಚಳಕ್ಕೆ ಆಗ್ರಹ: ಟ್ರೈನಿ ಸ್ಟಾಫ್ನರ್ಸ್ ಪ್ರತಿಭಟನೆ
July 8, 2020ಮೈಸೂರು, ಜು.7(ಎಂಕೆ)- ಕೆ.ಆರ್. ಆಸ್ಪತ್ರೆಯಲ್ಲಿ ಶಿಷ್ಯವೇತನ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಟ್ರೈನಿ ಸ್ಟಾಫ್ನರ್ಸ್ಗಳು 2ನೇ ದಿನವೂ ಪ್ರತಿ ಭಟನೆ ಮುಂದುವರಿಸಿದ್ದು, ಶಿಷ್ಯವೇತನ ಹೆಚ್ಚಳ ಮಾಡುವಂತೆ ಹಾಗೂ ವಿಮಾ ಸೌಲಭ್ಯ ಒದಗಿಸುವಂತೆ ಆಗ್ರಹಿಸಿದರು. ಕೆ.ಆರ್.ಆಸ್ಪತ್ರೆ ಎದುರು ಮಂಗಳವಾರ ಬೆಳಿಗ್ಗೆ ಜಮಾವಣೆಗೊಂಡ ಟ್ರೈನಿ ಸ್ಟಾಫ್ ನರ್ಸ್ಗಳು, ನಾವು 150 ಮಂದಿ ಕಳೆದ 10 ವರ್ಷಗಳಿಂದ ಶಿಷ್ಯವೇತನ ಆಧಾರದ ಮೇಲೆಯೇ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ತಿಂಗಳಿಗೆ ಕೇವಲ 10 ಸಾವಿರ ರೂ. ಶಿಷ್ಯವೇತನ ನೀಡಲಾಗುತ್ತಿದೆ. ಕೊರೊನಾ ಸಂದರ್ಭದಲ್ಲಿ ನಮಗೆ ಯಾವುದೇ ಜೀವವಿಮೆ…










