ಬೆಂಗಳೂರು, ಮೇ 22- ರಾಜ್ಯದಲ್ಲಿ `ಹೊಸ ಮರಳು ನೀತಿ-2020’ರ ಅನುಷ್ಠಾನಕ್ಕೆ ಆದೇಶಿಸಿರುವ ವಾಣಿಜ್ಯ ಮತ್ತು ಕೈಗಾ ರಿಕೆ ಇಲಾಖೆ, ಈ ಸಂಬಂಧ ರಾಜ್ಯಪತ್ರ ದಲ್ಲಿ ಮಾರ್ಗಸೂಚಿ ಪ್ರಕಟಿಸಿದೆ. ಗ್ರಾಹಕರಿಗೆ ಕೈಗೆಟಕುವ ದರದಲ್ಲಿ, ಪಾರದರ್ಶಕವಾಗಿ ಮರಳು ದೊರೆಯು ವಂತೆ ವ್ಯವಸ್ಥೆ ಕಲ್ಪಿಸುವ ಉದ್ದೇಶ ದಿಂದ ಉಪಖನಿಜ ರಿಯಾಯಿತಿ ನಿಯಮ-2017ಕ್ಕೆ ತಿದ್ದುಪಡಿ ತಂದು, ಹೊಸ ಮರಳು ನೀತಿ ಜಾರಿಗೊಳಿಸುವುದಕ್ಕೆ ಕಳೆದ ಏ.30ರಂದು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದಕ್ಕಿತ್ತು. ಇದಕ್ಕೆ ರಾಜ್ಯಪಾಲರ ಅನುಮತಿಯೂ ಸಿಕ್ಕಿದ ಹಿನ್ನೆಲೆಯಲ್ಲಿ ಅವರ ಆದೇಶಾನುಸಾರ…
ಹೊರ ರಾಜ್ಯದಿಂದ ಬಂದ 719 ಮಂದಿಗೆ ಮೈಸೂರಲ್ಲಿ ಕ್ವಾರಂಟೈನ್
May 23, 2020ಮೈಸೂರು,ಮೇ 22 (ಆರ್ಕೆ)-ಮುಂಬೈನ 104 ಸೇರಿ ಹೊರ ರಾಜ್ಯಗಳಿಂದ ಬಂದಿರುವ ಎಲ್ಲಾ 719 ಮಂದಿಯನ್ನು ಮೈಸೂರಲ್ಲಿ 14 ದಿನಗಳ ಕ್ವಾರಂಟೈನ್ನಲ್ಲಿರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ. ರಾಜ್ಯ ಸರ್ಕಾರದ ಸೂಚನೆಯಂತೆ ಅರ್ಜಿ ಸಲ್ಲಿಸಿದ್ದ ಮೈಸೂರಿಗೆ ಬರಲು ಅನುಮತಿ ನೀಡಲಾಗಿದೆ. ಹಾಗೆ ಅನುಮತಿ ಪಡೆದು ಬಂದ ಎಲ್ಲಾ 719 ಮಂದಿ ಯನ್ನೂ ಕ್ವಾರಂಟೈನ್ ಮಾಡಿ, ಅವರ ಗಂಟಲು ದ್ರವ ಸಂಗ್ರಹಿಸಿ, ಪರೀಕ್ಷೆಗೊಳ ಪಡಿಸಲಾಗಿದೆ. ಆ ಪೈಕಿ ಮುಂಬೈನಿಂದ ಬಂದ ಇಬ್ಬರಲ್ಲಿ ಕೊರೊನಾ ವೈರಸ್ ಇರುವುದು…
ಜು.1ರಿಂದ 14ರವರೆಗೆ ICSE 10, 12ನೇ ತರಗತಿ ಪರೀಕ್ಷೆ
May 23, 2020ನವದೆಹಲಿ: ಕೊವಿಡ್-19 ಲಾಕ್ ಡೌನ್ ಪರಿಣಾಮ ಮುಂದೂಡಿಕೆ ಯಾಗಿದ್ದ ಕೌನ್ಸಿಲ್ ಫಾರ್ ದಿ ಇಂಡಿ ಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾ ಮಿನೇಷನ್ಸ್ (ಸಿಐಎಸ್ಸಿಇ)ನ 10 ಮತ್ತು 12ನೇ ತರಗತಿಯ ಪರೀಕ್ಷೆಗಳು ಜುಲೈ1ರಿಂದ ಜುಲೈ 14ರವರೆಗೆ ನಡೆಯ ಲಿವೆ. ಐಸಿಎಸ್ಇ ಇಂದು ಪರಿಷ್ಕೃತ ವೇಳಾಪಟ್ಟಿ ಬಿಡುಗಡೆ ಮಾಡಿದ್ದು, 10ನೇ ತರಗತಿಯ ಉಳಿದಿರುವ ವಿಷಯ ಗಳ ಪರೀಕ್ಷೆಗಳು ಜುಲೈ 2ರಿಂದ 12 ರವರೆಗೆ ನಡೆಯಲಿದೆ. 12ನೇ ತರಗತಿಯ ಪರೀಕ್ಷೆಗಳು ಜುಲೈ 1ರಿಂದ 14ರವರೆಗೆ ನಡೆಯಲಿವೆ. ದೇಶಾದ್ಯಂತ ಇರುವ ಎಲ್ಲಾ ಪರೀಕ್ಷಾ…
ಕೊರೊನಾ ನಿಯಂತ್ರಣದಲ್ಲಿ ಮೈಸೂರು ದೇಶಕ್ಕೇ `ಮಾದರಿ’
May 23, 2020ಮೈಸೂರು, ಮೇ 22(ಆರ್ಕೆಬಿ)- ಕೊರೊನಾ ನಿಯಂತ್ರಿಸುವಲ್ಲಿ ಮೈಸೂರು ಜಿಲ್ಲಾಡಳಿತದ ಕಾರ್ಯವೈಖರಿ ಇಡೀ ದೇಶಕ್ಕೇ ಮಾದರಿ ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ಪ್ರಶಂಸಿಸಿದರು. ಆಯುಷ್ ಇಲಾಖೆ ಸಹಯೋಗದಲ್ಲಿ ಶಾಸಕ ಎಸ್.ಎ.ರಾಮದಾಸ್ ಶುಕ್ರವಾರ ಕುವೆಂಪು ನಗರದ ಸಾಮ್ರಾಟ್ ಕಲ್ಯಾಣ ಭವನದಲ್ಲಿ ಆಯೋಜಿಸಿದ್ದ ಚ್ಯವನ್ ಪ್ರಾಶ್, ಕಷಾಯ ಪುಡಿ, ಪ್ರಾಣಾಯಾಮ ಮತ್ತು ಅಗ್ನಿಹೋತ್ರದ ಕರಪತ್ರ ಒಳಗೊಂಡ `ಆರೋಗ್ಯ ಕಿಟ್’ ಅನ್ನು ಕೆಆರ್ ಕ್ಷೇತ್ರದ ನಾಗರಿಕರಿಗೆ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿದ ಸಚಿವರು, ಜಿಲ್ಲೆ ಯಲ್ಲಿ ಕೊರೊನಾ ಹರಡುವಿಕೆ ಪೂರ್ಣ ನಿಯಂತ್ರಣದಲ್ಲಿದೆ. ಮೈಸೂರು…
ಕಷ್ಟವಾದರೂ ಮಕ್ಕಳಿಗೆ ಉಚಿತ ಬೈಸಿಕಲ್ ವಿತರಣೆ
May 23, 2020ಬೆಂಗಳೂರು, ಮೇ 22(ಕೆಎಂಶಿ)- ಕೋವಿಡ್-19ರಿಂದ ಹಣಕಾಸು ತೊಂದರೆ ಯಾದರೂ ಉಚಿತ ಬೈಸಿಕಲ್ ವಿತರಣೆ ಯೋಜನೆ ಸ್ಥಗಿತಗೊಳಿಸದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಅಧಿಕಾರಿ ಗಳಿಗೆ ನಿರ್ದೇಶನ ನೀಡಿದರು. ಗೃಹ ಕಚೇರಿ ಕೃಷ್ಣಾದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆ ಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಯವರು, ಕಲ್ಯಾಣ ಕರ್ನಾಟಕ ಮತ್ತು ಉತ್ತರ ಕರ್ನಾಟಕದಲ್ಲಿ ಶಿಕ್ಷಣ ಗುಣಮಟ್ಟ ಸುಧಾರಣೆಗೆ ಆದ್ಯತೆ ನೀಡುವಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಈ ನಿಟ್ಟಿನಲ್ಲಿ ಶಿಕ್ಷಕರ ಹುದ್ದೆಗಳ ನೇಮ…
ತಲಕಾಡು ಬಳಿ ಬೋನಿಗೆ ಬಿದ್ದ ಗಂಡು ಚಿರತೆ
May 23, 2020ಮೈಸೂರು, ಮೇ 22(ಎಂಟಿವೈ)- ಟಿ.ನರಸೀಪುರ ತಾಲೂ ಕಿನ ಕುರುಬಾಳನಹುಂಡಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಳೆದ 2 ದಿನಗಳಿಂದ ಜಾನುವಾರುಗಳ ಮೇಲೆ ದಾಳಿ ನಡೆಸಿ ಉಪಟಳ ನೀಡುತ್ತಿದ್ದ ಚಿರತೆಯೊಂದು ಶುಕ್ರವಾರ ಮುಂಜಾನೆ ಬೋನಿಗೆ ಬಿದ್ದಿದೆ. ತಲಕಾಡು ಸಮೀಪದ ಕುರುಬಾಳನಹುಂಡಿಯಲ್ಲಿ ಎರಡು ತಿಂಗಳಿಂದ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದ್ದ ಚಿರತೆ ಗ್ರಾಮಸ್ಥರನ್ನು ಆತಂಕಕ್ಕೀಡು ಮಾಡಿತ್ತು. ಗ್ರಾಮದಲ್ಲಿ ಹಲವು ನಾಯಿಗಳನ್ನು ಹೊತ್ತೊಯ್ದಿದ್ದ ಚಿರತೆ ಪದೇ ಪದೇ ಗ್ರಾಮದ ಆಸುಪಾಸಿನಲ್ಲಿ ಕಾಣಿಸಿಕೊಳ್ಳುತ್ತಿತ್ತು. 6 ಮೇಕೆ, ಹಲವು ಸಾಕು ನಾಯಿಗಳನ್ನು ತಿಂದಿತ್ತಲ್ಲದೆ, ಒಂದು ಕರು ಮೇಲೆ…
ವಿವಿಧ ಕಾಮಗಾರಿಗಳಿಗೆ ಶಾಸಕ ನಾಗೇಂದ್ರ ಗುದ್ದಲಿ ಪೂಜೆ
May 23, 2020ಮೈಸೂರು, ಮೇ 22ಪಿಎಂ)- ಚಾಮ ರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ 42ರಲ್ಲಿ `ಎಸ್ಎಫ್ಸಿ ಅನುದಾನ’ದಲ್ಲಿ ಕಾಂಕ್ರಿಟ್ ರಸ್ತೆ ಹಾಗೂ ಬಸ್ ತಂಗು ದಾಣ ನಿರ್ಮಾಣ ಕಾಮಗಾರಿಗೆ ಶಾಸಕ ಎಲ್. ನಾಗೇಂದ್ರ ಚಾಲನೆ ನೀಡಿದರು. 25 ಲಕ್ಷ ರೂ. ವೆಚ್ಚದಲ್ಲಿ ಕೆಜಿ ಕೊಪ್ಪಲಿನ 1 ಮತ್ತು 4ನೇ ಕ್ರಾಸ್ಗಳಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾಣ, ಪಾದಚಾರಿ ಮಾರ್ಗದಲ್ಲಿ ಡೆಕ್ಸ್ಲ್ಯಾಬ್ ಅಳವಡಿಕೆ ಕಾಮಗಾರಿ ಹಾಗೂ 15 ಲಕ್ಷ ರೂ. ವೆಚ್ಚದಲ್ಲಿ ಕಾಂತರಾಜು ಅರಸು ರಸ್ತೆಯಲ್ಲಿ (ಅಗ್ನಿ ಶಾಮಕ ಠಾಣೆ ಮುಂಭಾಗ)…
ಕಾರ್ಮಿಕರ ಕೆಲಸದ ಅವಧಿ 8ರಿಂದ 10 ತಾಸಿಗೆ ವಿಸ್ತರಣೆ ರಾಜ್ಯ ಸರ್ಕಾರ ಆದೇಶ
May 23, 2020ಬೆಂಗಳೂರು: ಕೈಗಾರಿಕೆ ಹಾಗೂ ಇನ್ನಿತರ ಉದ್ಯಮ ಸಂಸ್ಥೆಗಳಲ್ಲಿ ದುಡಿ ಯುವ ಕಾರ್ಮಿಕರ ಕೆಲಸದ ಅವಧಿ ಯನ್ನು 8 ತಾಸಿನಿಂದ 10 ತಾಸಿಗೆ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಸಂಬಂಧ ಕಾರ್ಮಿಕ ಇಲಾಖೆ ಅಧಿ ಸೂಚನೆ ಹೊರಡಿಸಿದ್ದು, ತಕ್ಷಣದಿಂದಲೇ (ಮೇ 22) ಆ.21ರವರೆಗೆ ಈ ಆದೇಶ ಜಾರಿಯಲ್ಲಿರಲಿದೆ. ದಿನದ ಕೆಲಸದ ಅವಧಿಯನ್ನು 10 ತಾಸಿಗೆ ನಿಗದಿಗೊಳಿಸ ಲಾಗಿದೆ. ವಾರಕ್ಕೆ 60 ತಾಸು ಮಾತ್ರ ಒಬ್ಬ ಕಾರ್ಮಿಕನಿಗೆ ಕೆಲಸ ಕೊಡಬೇಕು. ಒಂದು ವೇಳೆ ಹೆಚ್ಚುವರಿ ಕೆಲಸ ಮಾಡಿಸಿದರೆ…
ವಲಸೆ ಕಾರ್ಮಿಕರಿಗೆ ಅಕ್ಕಿ ಭಾಗ್ಯ
May 23, 2020ಮೈಸೂರು, ಮೇ 22- ಕೋವಿಡ್-19 ತುರ್ತು ಪರಿಸ್ಥಿತಿ ಹಿನ್ನೆಲೆಯಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ವಲಸೆ ಕಾರ್ಮಿಕರಿಗೆ ಕೇಂದ್ರ ಸರ್ಕಾರವು ಆತ್ಮ ನಿರ್ಭರ್ ಭಾರತ್ ಯೋಜನೆ ಯಡಿ ಮೇ ಮತ್ತು ಜೂನ್ ಎರಡೂ ಮಾಹೆ ಗಳಿಗೆ ಪ್ರತಿ ಫಲಾನುಭವಿಗೆ ತಲಾ 5 ಕೆ.ಜಿ ಅಕ್ಕಿಯನ್ನು ಉಚಿತ ವಾಗಿ ವಿತರಿಸಲಾಗುತ್ತದೆ. ಕೇಂದ್ರ ಸರ್ಕಾರದ ಆದೇಶ ದಂತೆ ಈ ಯೋಜನೆ ಯಡಿ ಬರುವ ಫಲಾನುಭವಿಗಳು ರಾಜ್ಯದಲ್ಲಿ ಅಥವಾ ಬೇರಾವುದೇ ರಾಜ್ಯಗಳಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಹಂಚಿಕೆ ಪಡೆಯುತ್ತಿರ ಬಾರದು….
ಏಕಕಾಲದಲ್ಲಿ ಎರಡು ಪದವಿ
May 22, 2020ನವದೆಹಲಿ, ಮೇ 21- ಏಕಕಾಲದಲ್ಲಿ ಎರಡು ಪದವಿ ಕೋರ್ಸ್ ಗಳ ವ್ಯಾಸಂಗ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡುವ ಪ್ರಸ್ತಾವನೆಗೆ ಯೂನಿವರ್ಸಿಟಿ ಗ್ರಾಂಟ್ಸ್ ಕಮಿ ಷನ್ (ಯುಜಿಸಿ) ಒಪ್ಪಿಗೆ ಸೂಚಿಸಿದೆ. ಒಂದರಲ್ಲೇ ಎರಡು ಪದವಿ ಅಥವಾ ವಿಭಿನ್ನ ಮಾದರಿಯಲ್ಲಿ ಎರಡು ಪದವಿ ಪಡೆ ಯುವ ವಿದ್ಯಾರ್ಥಿಗಳ ಕನಸು ಶೀಘ್ರವೇ ನನಸಾಗಲಿದೆ. ಭಾರತದಲ್ಲಿ ವಿದ್ಯಾರ್ಥಿಗಳು ಏಕಕಾಲದಲ್ಲಿ ಎರಡು ಪದವಿ ವ್ಯಾಸಂಗ ಮಾಡುವುದಕ್ಕೆ ಅನುಕೂಲವಾಗುವ ಪ್ರಸ್ತಾವನೆಯನ್ನು ಇತ್ತೀಚಿನ ಸಭೆಯಲ್ಲಿ ಯುಜಿಸಿ ಅಂಗೀಕರಿಸಿದೆ. ಒಂದೇ ಸ್ಟ್ರೀಮ್ಗೆ ಸಂಬಂಧಿಸಿದ ಎರಡು ವಿಷಯಗಳು ಅಥವಾ…










