ಮೈಸೂರು,ಮೇ18(ಎಂಟಿವೈ)- ಮೈಸೂರನ್ನು ಕೊರೊನಾ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಜಿಲ್ಲಾಡ ಳಿತದೊಂದಿಗೆ ಕೈಜೋಡಿಸಲು ಮೈಸೂರು ಚೇಂಬರ್ಸ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀ ಸಂಸ್ಥೆ ನಿರ್ಧರಿ ಸಿದ್ದು, ಮುಂದಿನ ದಿನಗಳಲ್ಲಿ `ನೋ ಮಾಸ್ಕ್-ನೋ ಬಿಸಿನೆಸ್’ ಘೋಷಣೆಯೊಂದಿಗೆ ಮಾಸ್ಕ್ ಧರಿಸಿ ಬಂದವರಿಗೆ ಮಾತ್ರ ಅಗತ್ಯ ವಸ್ತುಗಳನ್ನು ಮಾರಾಟ ಮಾಡುವ ಮಹತ್ತರ ನಿರ್ಧಾರವನ್ನು ಒಮ್ಮತದಿಂದ ಕೈಗೊಂಡಿರುವುದಾಗಿ ಎಫ್ಕೆಸಿಸಿಐ ಮಾಜಿ ಅಧ್ಯಕ್ಷ ಸುಧಾಕರ್ ಎಸ್.ಶೆಟ್ಟಿ ತಿಳಿಸಿದ್ದಾರೆ. ಮೈಸೂರಿನ ಮೈಸೂರು ಚೇಂಬರ್ಸ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀ ಸಂಸ್ಥೆಯ ಸಭಾಂಗಣದಲ್ಲಿ ಸೋಮ ವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ…
ಇಂದು, ನಾಳೆ, ನಾಡಿದ್ದು ವಿವಿಧೆಡೆ ವಿದ್ಯುತ್ ವ್ಯತ್ಯಯ
May 19, 2020ಮೈಸೂರು, ಮೇ 18- ಮೇ 19ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವ ರೆಗೆ ನಿರ್ವಹಣಾ ಕಾಮಗಾರಿ ನಿಮಿತ್ತ ಕೆ.ಹೆಚ್.ಬಿ. ವಿದ್ಯುತ್ ವಿತರಣಾ ವ್ಯಾಪ್ತಿಯ ವಿಜಯನಗರ 4ನೇ ಹಂತ, ಕೆ.ಹೆಚ್.ಬಿ ಕಾಲೋನಿ, ಹೂಟಗಳ್ಳಿ ಗ್ರಾಮ, ಹೂಟಗಳ್ಳಿ ಕೆ.ಆರ್.ಎಸ್. ರೋಡ್, ಆದಿತ್ಯಾ ಬಡಾವಣೆ, ಎಸ್.ಆರ್.ಎಸ್. ಕಾಲೋನಿ, ಕೂರ್ಗಳ್ಳಿ, ಬೆಳವಾಡಿ, ಎನ್.ಹೆಚ್.ಬಿ ಕಾಲೋನಿ, ಬೆಳವಾಡಿ ಕೈಗಾರಿಕಾ ಪ್ರದೇಶ, ಬಸವನಪುರ, ಶಾಹಿ ಗಾರ್ಮೆಂಟ್ಸ್, ಹೂಟ ಗಳ್ಳಿ ಕೈಗಾರಿಕಾ ಪ್ರದೇಶ, ಕೂರ್ಗಳ್ಳಿ ಕೈಗಾರಿಕಾ ಪ್ರದೇಶ, ಗ್ರ್ಯಾಂಡ್ ಮೌಯ್ರ್ಯ ಹೋಟೆಲ್, ರಿಲಾಯನ್ಸ್, ಮಾಸ್…
ತಂತ್ರಜ್ಞಾನದ ಮೂಲಕ ಕೋವಿಡ್-19 ಸಂಕಷ್ಟಕ್ಕೆ ಪರಿಹಾರ
May 19, 2020ಬೆಂಗಳೂರು, ಮೇ 18(ಕೆಎಂಶಿ)-ತಂತ್ರಜ್ಞಾನ ಬಳಸಿ ಕೊಂಡು ಆಡಳಿತದಲ್ಲಿ ತ್ವರಿತ ಸುಧಾರಣೆಗಳನ್ನು ತರಬಹುದು ಎಂಬುದನ್ನು ಕೊವಿಡ್-19 ನಮಗೆ ಹೇಳಿ ಕೊಟ್ಟಿದೆ. ನಮ್ಮ ಈ ಅನುಭವ ಮುಂದಿನ ಹತ್ತು ವರ್ಷದಲ್ಲಿ ಜಾಗತಿಕ ಮಟ್ಟದಲ್ಲಿ ಭಾರತವನ್ನು ಬಹು ಎತ್ತರಕ್ಕೆ ಕೊಂಡೊಯ್ಯಲಿದೆ ಎಂದು ಉಪಮುಖ್ಯ ಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದ್ದಾರೆ. ಅಮೆರಿಕ ಕನ್ನಡ ಕೂಟಗಳ ಆಗರ (ಅಕ್ಕ ಸಂಘ ಟನೆ) ಆಯೋಜಿಸಿದ್ದ ವೀಡಿಯೋ ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕೊವಿಡ್ -19ನಿಂದಾಗಿ ಆರೋಗ್ಯ ಸಮಸ್ಯೆ, ಸಾವು-ನೋವು ಸಂಭ ವಿಸಿದೆ. ಇದೊಂದು ಹಿನ್ನಡೆಯೂ ಹೌದು….
ರಾಜ್ಯ ಬಿಜೆಪಿ ಸರ್ಕಾರಕ್ಕೆ ಮಹಿಳಾ ಸಮುದಾಯದ ಬಗೆಗೆ ನಿರ್ಲಕ್ಷ್ಯ ಧೋರಣೆ
May 19, 2020ಮೈಸೂರು, ಮೇ 18 (ಪಿಎಂ)- ಕೊರೊನಾ ಲಾಕ್ಡೌನ್ ನೆಪದಲ್ಲಿ ಮಹಿಳಾ ಸಾಂತ್ವನ ಕೇಂದ್ರ ಹಾಗೂ ಮಾತೃಶ್ರೀ ಯೋಜನೆ ಸ್ಥಗಿತಗೊಳಿಸಲು ರಾಜ್ಯ ಬಿಜೆಪಿ ಸರ್ಕಾರ ಮುಂದಾಗಿದ್ದು, ಇದು ಮಹಿಳಾ ಸಮು ದಾಯ ಮತ್ತು ಮಕ್ಕಳ ಬಗ್ಗೆ ಸರ್ಕಾರ ಹೊಂದಿರುವ ನಿರ್ಲಕ್ಷ್ಯ ಧೋರಣೆಯ ಪ್ರತಿಬಿಂಬವಾಗಿದೆ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಬಿ.ಪುಷ್ಪಾ ಅಮರನಾಥ್ ಖಂಡಿಸಿದರು. ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಸೋಮ ವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾ ಡಿದ ಅವರು, ಮಹಿಳಾ ಸಾಂತ್ವನ ಕೇಂದ್ರ ಮತ್ತು ಮಾತೃಶ್ರೀ ಯೋಜನೆ ಸ್ಥಗಿತಗೊಳಿ ಸಲು…
ವಿಶ್ವಜ್ಞಾನಿ ಯೂತ್ ಅಸೋಸಿಯೇಷನ್ನಿಂದ ಆಯುರ್ವೇದಿಕ್ ಗಿಡಗಳ ವಿತರಣೆ
May 19, 2020ಮೈಸೂರು, ಮೇ 18- ನಗರದ ಅಶೋಕಪುರಂನ ವಿಶ್ವಜ್ಞಾನಿ ಯೂತ್ ಅಸೋಸಿ ಯೇಷನ್ ವತಿಯಿಂದ ಆಯುರ್ವೇದಿಕ್ ಗಿಡಮೂಲಿಕೆಗಳನ್ನೊಳಗೊಂಡ ಸಸಿಗಳನ್ನು ಅಶೋಕಪುರಂ ಪೊಲೀಸ್ ಠಾಣೆಗೆ ಉಚಿತವಾಗಿ ವಿತರಿಸಿತು. ಗಿಡವನ್ನು ಸ್ವೀಕರಿಸಿ ಮಾತನಾಡಿದ ಅಶೋಕಪುರಂ ಪೊಲೀಸ್ ಠಾಣೆಯ ಎಎಸ್ಐ ಎಂ.ಬಸವರಾಜು, ಮನುಷ್ಯ ಇಂದು ಜಂಜಾಟಗಳಲ್ಲಿ ಸಿಲುಕಿ, ಒತ್ತಡಗಳಿಂದ ನರಳುತ್ತಿದ್ದಾನೆ. ಈ ಒತ್ತಡವನ್ನು ನಿವಾರಿಸಿಕೊಳ್ಳಲು ಯೋಗ, ಧ್ಯಾನ, ಪ್ರಾಣಾಯಾಮ, ವ್ಯಾಯಾಮಗಳನ್ನು ಪ್ರತಿನಿತ್ಯವೂ ಕೂಡ ಅಭ್ಯಸಿಸಿಕೊಂಡರೆ ಆರೋಗ್ಯವನ್ನು ಸಮ ತೋಲನದಲ್ಲಿಟ್ಟುಕೊಳ್ಳಬಹುದು ಎಂದು ತಿಳಿಸಿದರು. ಅಸೋಸಿಯೇಷನ್ ಅಧ್ಯಕ್ಷ ನವೀನ್ ಮಾತನಾಡಿ, ಆಯುರ್ವೇದ ಔಷಧಿಯ ಗುಣಗಳ ನ್ನೊಳಗೊಂಡ…
ಮೇ 31ರವರೆಗೆ ಲಾಕ್ಡೌನ್ ವಿಸ್ತರಣೆ ನಿರ್ಬಂಧದ ನಡುವೆಯೂ ನಿರಾಳ
May 18, 2020ನವದೆಹಲಿ, ಮೇ17-ಕೊರೊನಾ ವೈರಸ್ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಘೋಷಿಸಲಾಗಿರುವ ಲಾಕ್ಡೌನ್ ಅನ್ನು ಮೇ 31ರವರೆಗೆ ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಆದರೆ ಹಲವು ಚಟು ವಟಿಕೆಗಳಿಗೆ ವಿನಾಯಿತಿ ನೀಡಿರುವುದ ರಿಂದ ದೇಶದ ಜನತೆ ನಿರ್ಬಂಧದ ನಡು ವೆಯೂ ನಿರಾಳರಾಗುವಂತಾಗಿದೆ. ಭಾನುವಾರ 3ನೇ ಲಾಕ್ಡೌನ್ ಮುಕ್ತಾಯ ಗೊಂಡಿರುವ ಹಿನ್ನೆಲೆಯಲ್ಲಿ 4ನೇ ಲಾಕ್ ಡೌನ್ನ ಮಾರ್ಗಸೂಚಿಗಳನ್ನು ಕೇಂದ್ರ ಗೃಹ ಸಚಿವಾಲಯ ಬಿಡುಗಡೆ ಮಾಡಿದ್ದು, ಏನೇನು ಸೌಲಭ್ಯಗಳು ಇರಲಿವೆ ಹಾಗೂ ಯಾವು ದಕ್ಕೆಲ್ಲಾ ನಿರ್ಬಂಧವಿದೆ ಎಂದು ವಿಸ್ತøತ ವಾಗಿ ಮಾರ್ಗಸೂಚಿಯನ್ನು…
ಶಿಕ್ಷಣ, ಉದ್ಯಮ, ಆರೋಗ್ಯ ಕ್ಷೇತ್ರಗಳಿಗೆ ಆರ್ಥಿಕ ನೆರವು
May 18, 2020ನವದೆಹಲಿ, ಮೇ 17-ಪ್ರಧಾನಿ ನರೇಂದ್ರ ಮೋದಿಯವರು ಘೋಷಿಸಿದ್ದ 20 ಲಕ್ಷ ಕೋಟಿ ರೂ. ಪ್ಯಾಕೇಜ್ನ 5ನೇ ಭಾಗದ ಮಾಹಿತಿಯನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಪ್ರಕಟಿಸಿದರು. ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಉದ್ಯಮ, ಶಿಕ್ಷಣ, ಆರೋಗ್ಯಕ್ಕೆ ಸಂಬಂಧಿಸಿದ ಆರ್ಥಿಕ ನೆರವಿನ ಬಗ್ಗೆ ವಿವರ ನೀಡಿದರು. ಆನ್ಲೈನ್ ತರಗತಿಗಾಗಿ 12 ಹೆಚ್ಚುವರಿ ಚಾನೆಲ್ಗಳನ್ನು ಸೇರ್ಪಡೆ ಗೊಳಿಸಲಾಗಿದೆ. ‘ಪಿಎಂ ಇ-ವಿದ್ಯಾ’ ಯೋಜನೆ ತಕ್ಷಣದಲ್ಲೇ ಜಾರಿಗೆ ಬರಲಿದ್ದು, ಆನ್ಲೈನ್ ತರಗತಿಗಳಿಗೆ ಹೆಚ್ಚು ಒತ್ತು ನೀಡುವ ನಿಟ್ಟಿನಲ್ಲಿ 100 ವಿವಿಗಳಿಗೆ ಆನ್ಲೈನ್…
ಮಂಡ್ಯದಲ್ಲಿ ಕೊರೊನಾ ಆರ್ಭಟ: ಒಂದೇ ದಿನ 22 ಮಂದಿಗೆ ಸೋಂಕು
May 18, 2020ಮಂಡ್ಯ, ಮೇ 17-ಸಕ್ಕರೆ ನಾಡು ಮಂಡ್ಯದಲ್ಲಿ ದಿನೇ ದಿನೆ ಕೊರೊನಾ ಆರ್ಭಟ ಹೆಚ್ಚಾಗುತ್ತಿದ್ದು, ಮುಂಬೈನಿಂದ ಹಿಂತಿರುಗಿದ 18 ಮಂದಿಗೆ ಕೊರೊನಾ ವೈರಸ್ ಪತ್ತೆಯಾಗಿದ್ದರಿಂದ ಕೆ.ಆರ್.ಪೇಟೆ ತತ್ತರಿಸಿದೆ. ಇಂದು ಕೆ.ಆರ್. ಪೇಟೆ 18 ಮತ್ತು ನಾಗಮಂಗಲದಲ್ಲಿ ನಾಲ್ವರಿಗೆ ಸೋಂಕು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಒಂದೇ ದಿನ 22 ಮಂದಿಗೆ ಸೋಂಕು ತಗುಲಿದೆ. ಇದರಿಂದಾಗಿ ಸೋಂಕಿತರ ಸಂಖ್ಯೆ 72ಕ್ಕೆ ಏರಿದೆ. ತಬ್ಲಿಘ್ ಜಮಾತ್ನಿಂದ ಬಂದವರ ಸಂಪರ್ಕದಿಂದ ಜಿಲ್ಲೆಯಲ್ಲಿ ಮೊದಲಿಗೆ ಮಳವಳ್ಳಿ ಪಟ್ಟಣ ಜರ್ಝರಿತವಾಗಿತ್ತು. ಅಲ್ಲಿ 19 ಮಂದಿಗೆ ಸೋಂಕು ತಗುಲಿದ್ದು, ಈಗಾಗಲೇ…
20 ಲಕ್ಷ ಕೋಟಿ ಕೊರೊನಾ ಪ್ಯಾಕೇಜ್ ಕನ್ನಡಿಯೊಳಗಿನ ಗಂಟು
May 18, 2020ವಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಂಗ್ಯ ಹಳೆ ಸರಕಿಗೆ ಹೊಸ ಹೊದಿಕೆ ಬೆಂಗಳೂರು, ಮೇ 17- ಪ್ರಧಾನಿ ನರೇಂದ್ರ ಮೋದಿಯವರು ಆತ್ಮ ನಿರ್ಭರ ಭಾರತ ಯೋಜನೆಯಡಿಯಲ್ಲಿ ಘೋಷಿಸಿರುವ ಕೊರೊನಾ ವಿಶೇಷ ಪ್ಯಾಕೇಜ್ ಕನ್ನಡಿಯೊಳಗಿನ ಗಂಟು ಆಗಿದ್ದು, ಹಳೆ ಸರಕಿಗೆ ಹೊಸ ಹೊದಿಕೆ ಹೊದಿಸಿ ದಂತಾಗಿದೆ ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ. 20 ಲಕ್ಷ ಕೋಟಿ ಪ್ಯಾಕೇಜ್ನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 5 ಕಂತುಗಳಾಗಿ ಹಂಚಿದರು. ಈ ಕುರಿತು ಸಹ ಟ್ವೀಟ್ ಮಾಡಿರುವ…
ರಾಜ್ಯದಲ್ಲಿ ಭಾನುವಾರ 55 ಕೊರೊನಾ ಪ್ರಕರಣ: 1147ಕ್ಕೇರಿದ ಸೋಂಕು
May 18, 2020ಬೆಂಗಳೂರು, ಮೇ 17- ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 55 ಹೊಸ ಕೊರೊನಾ ಸೋಂಕಿನ ಪ್ರಕರಣಗಳು ವರದಿಯಾಗಿದೆ. ರಾಜ್ಯದಲ್ಲಿ ಸೋಂಕಿ ತರ ಸಂಖ್ಯೆ 1147ಕ್ಕೇರಿದ್ದು, ಮೃತಪಟ್ಟ ವರ ಸಂಖ್ಯೆ 37ಕ್ಕೇರಿಕೆಯಾಗಿದೆ. 509 ಜನರು ಗುಣಮುಖರಾಗಿದ್ದಾರೆ. ಭಾನು ವಾರ ಮಂಡ್ಯದಲ್ಲಿ 22, ಕಲಬುರ್ಗಿ 10, ಹಾಸನ 6, ಯಾದಗಿರಿ 3, ಕೋಲಾರ 3, ದಕ್ಷಿಣ ಕನ್ನಡ 2, ಧಾರ ವಾಡ 4, ಶಿವಮೊಗ್ಗ 2, ವಿಜಯ ಪುರದಲ್ಲಿ 1 ಪ್ರಕರಣ ವರದಿಯಾಗಿದೆ. ಇನ್ನು ಭಾನುವಾರ ರಾಜ್ಯದಲ್ಲಿ ಒಟ್ಟಾರೆ 13…










