ಮೈಸೂರು

ದಾನಿಗಳು ನೀಡಿದ ದಿನಸಿ ಕಿಟ್‍ಗಳನ್ನು 380   ಆಟೋರಿಕ್ಷಾ ಚಾಲಕರಿಗೆ ವಿತರಿಸಿದ ಪಾಲಿಕೆ
ಮೈಸೂರು

ದಾನಿಗಳು ನೀಡಿದ ದಿನಸಿ ಕಿಟ್‍ಗಳನ್ನು 380  ಆಟೋರಿಕ್ಷಾ ಚಾಲಕರಿಗೆ ವಿತರಿಸಿದ ಪಾಲಿಕೆ

May 21, 2020

ಮೈಸೂರು, ಮೇ 20(ಪಿಎಂ)- ಲಾಕ್‍ಡೌನ್‍ನಿಂ ದಾಗಿ ಕಷ್ಟಕ್ಕೆ ಸಿಲುಕಿರುವ ಮೈಸೂರಿನ ಆಟೋರಿಕ್ಷಾ ಚಾಲಕರಿಗೆ ಮಹಾನಗರ ಪಾಲಿಕೆ ವತಿಯಿಂದ ದಿನಸಿ ಕಿಟ್‍ಗಳನ್ನು ಬುಧವಾರ ವಿತರಣೆ ಮಾಡಲಾಯಿತು. ನಗರದ ದಾನಿಗಳಿಂದ ಸಂಗ್ರಹಿಸಿದ ದಿನಸಿ ಪದಾರ್ಥ ಗಳನ್ನು ಪಾಲಿಕೆಯು ಲಾಕ್‍ಡೌನ್ ಅವಧಿಯಲ್ಲಿ ಸಂಕಷ್ಟಕ್ಕೆ ಸಿಲುಕಿದ ವಿವಿಧ ಕ್ಷೇತ್ರದ ಜನರಿಗೆ ನೀಡುತ್ತಾ ಬಂದಿದ್ದು, ಈವರೆಗೂ ಟ್ಯಾಕ್ಸಿ ಚಾಲಕರು, ಟಾಂಗಾವಾಲಗಳು, ಪಡಿತರ ಚೀಟಿ ಇಲ್ಲದ ನಿರಾಶ್ರಿತ ಕುಟುಂಬಗಳಿಗೆ ಕಿಟ್ ವಿತರಿಸಲಾಗಿದೆ. ಮೈಸೂರಿನ ಕಾಡಾ ಕಚೇರಿ ಆವರಣ ದಲ್ಲಿ ಮೈಸೂರು ಆಟೋರಿಕ್ಷಾ ಚಾಲಕರ ಸಂಘದ 220…

ತೆರಿಗೆ, ಟ್ರೇಡ್ ಲೈಸೆನ್ಸ್ ಶುಲ್ಕ ಮನ್ನಾ ಮಾಡಿ
ಮೈಸೂರು

ತೆರಿಗೆ, ಟ್ರೇಡ್ ಲೈಸೆನ್ಸ್ ಶುಲ್ಕ ಮನ್ನಾ ಮಾಡಿ

May 21, 2020

ಮೈಸೂರು, ಮೇ 20(ಆರ್‍ಕೆ)- ಕೋವಿಡ್-19 ಲಾಕ್‍ಡೌನ್‍ನಿಂದಾಗಿ ತೀವ್ರ ನಷ್ಟ ಅನುಭವಿಸಿರುವುದರಿಂದ ಕಲ್ಯಾಣ ಮಂಟಪಗಳ ತೆರಿಗೆ ಹಾಗೂ ಟ್ರೇಡ್ ಲೈಸೆನ್ಸ್ ಶುಲ್ಕ ಮನ್ನಾ ಮಾಡಬೇಕೆಂದು ಕಲ್ಯಾಣ ಮಂಟಪಗಳ ಮಾಲೀಕರು ಮೈಸೂರು ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಮಾಡಿಕೊಂಡಿದ್ದಾರೆ. ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡರ ನೇತೃತ್ವದಲ್ಲಿ ಇಂದು ಪಾಲಿಕೆ ಆಯುಕ್ತ ಗುರುದತ್ ಹೆಗ್ಡೆ ಅವರನ್ನು ಕಚೇರಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದ ಮೈಸೂರು ಕಲ್ಯಾಣ ಮಂಟಪ ಮಾಲೀಕರ ಸಂಘದ ಅಧ್ಯಕ್ಷ ಕೆ.ಆರ್.ಸತ್ಯನಾರಾಯಣ ಅವರು, ಸಂಕಷ್ಟದಲ್ಲಿರುವ ತಮ್ಮ ಉದ್ಯಮಕ್ಕೆ…

ಮೇ 24ರವರೆಗೆ ತುಂತುರು ಮಳೆ ಸಾಧ್ಯತೆ
ಮೈಸೂರು

ಮೇ 24ರವರೆಗೆ ತುಂತುರು ಮಳೆ ಸಾಧ್ಯತೆ

May 21, 2020

ಮೈಸೂರು, ಮೇ 20(ಆರ್‍ಕೆಬಿ)- ಹವಾಮಾನ ಇಲಾಖೆ ಮುನ್ಸೂ ಚನೆ ಪ್ರಕಾರ ಮೇ 24ರವ ರೆಗೆ ಮೈಸೂರು, ಮಂಡ್ಯ, ಚಾಮ ರಾಜನಗರ, ಕೊಡಗು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣವಿದ್ದು, ತುಂತುರು ಮಳೆ ಬೀಳುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ಮೈಸೂರು ಜಿಲ್ಲೆ ಯಲ್ಲಿ ಗರಿಷ್ಠ 33ರಿಂದ 36 ಡಿಗ್ರಿ ಸೆಲ್ಸಿ ಯಸ್, ಕನಿಷ್ಠ 23 ಡಿಗ್ರಿ ಸೆಲ್ಸಿಯಸ್, ಮಂಡ್ಯ ಜಿಲ್ಲೆಯಲ್ಲಿ ಗರಿಷ್ಠ 31-33, ಕನಿಷ್ಠ 22-23, ಕೊಡಗು ಜಿಲ್ಲೆಯಲ್ಲಿ ಗರಿಷ್ಟ 22ರಿಂದ 26, ಕನಿಷ್ಠ 18-19 ಹಾಗೂ ಚಾ.ನಗರ…

ಸ್ವಚ್ಛ ನಗರಿ ಮೈಸೂರಿಗೆ ಮತ್ತೆ `ಫೈವ್ ಸ್ಟಾರ್’ ಹಿರಿಮೆ
ಮೈಸೂರು

ಸ್ವಚ್ಛ ನಗರಿ ಮೈಸೂರಿಗೆ ಮತ್ತೆ `ಫೈವ್ ಸ್ಟಾರ್’ ಹಿರಿಮೆ

May 20, 2020

ಮೈಸೂರು, ಮೇ 19(ಎಂಕೆ)- ವರ್ಷಗಳ ಹಿಂದೆ `ದೇಶದ ಅತ್ಯಂತ ಸ್ವಚ್ಛನಗರಿ’ ಖ್ಯಾತಿಗೆ ಪಾತ್ರವಾಗಿದ್ದ ಮೈಸೂರಿಗೆ ಮತ್ತೊಮ್ಮೆ 5 ಸ್ಟಾರ್ (ಪಂಚತಾರಾ) ಗರಿಮೆ ಲಭಿಸಿದೆ. ಆ ಮೂಲಕ `ದಕ್ಷಿಣ ಭಾರತದ ತ್ಯಾಜ್ಯಮುಕ್ತ ನಗರಗಳಲ್ಲಿ 5 ಸ್ಟಾರ್ ಪಡೆದ ಏಕಮಾತ್ರ ನಗರ’ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಭಾರತ ಸರ್ಕಾರದ ನಗರಾಭಿವೃದ್ಧಿ ಮಂತ್ರಾಲ ಯವು (ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ) ಆಯೋಜಿಸಿದ್ದ `ತ್ಯಾಜ್ಯ ಮುಕ್ತ ನಗರ’ ಸಮೀಕ್ಷೆಯಲ್ಲಿ ಮೈಸೂರಿನ ಜತೆಗೇ ಗುಜ ರಾತ್‍ನ ರಾಜ್‍ಕೋಟ್ ಮತ್ತು ಸೂರತ್, ಮಧ್ಯ…

ಮಂಡ್ಯದಲ್ಲಿ ಮುಂಬೈ `ಕೊರೊನಾ ಬಾಂಬ್’: ರಾಜ್ಯದಲ್ಲಿ ಬೆಂಗಳೂರು ಬಿಟ್ಟರೆ ಎರಡನೇ ಸ್ಥಾನಕ್ಕೇರಿದ ಸಕ್ಕರೆ ನಾಡು
ಮೈಸೂರು

ಮಂಡ್ಯದಲ್ಲಿ ಮುಂಬೈ `ಕೊರೊನಾ ಬಾಂಬ್’: ರಾಜ್ಯದಲ್ಲಿ ಬೆಂಗಳೂರು ಬಿಟ್ಟರೆ ಎರಡನೇ ಸ್ಥಾನಕ್ಕೇರಿದ ಸಕ್ಕರೆ ನಾಡು

May 20, 2020

 ಒಂದೇ ದಿನ 71 ಮಂದಿಗೆ ಸೋಂಕು ಕೆ.ಆರ್.ಪೇಟೆಯಲ್ಲಿ 50, ನಾಗಮಂಗಲದಲ್ಲಿ 21 ಪ್ರಕರಣ ಪತ್ತೆ ಒಂದು ವರ್ಷದ ಇಬ್ಬರು ಸೇರಿ 14 ಮಕ್ಕಳಿಗೆ ಜಾಡ್ಯ ಮಂಡ್ಯ, ಮೇ 19(ನಾಗಯ್ಯ)- ಮುಂಬೈ “ಕೊರೊನಾ’’ ಬಾಂಬ್‍ಗೆ ಮಂಡ್ಯ ಜಿಲ್ಲೆ ತತ್ತರಿಸಿದೆ. ಇಂದು ಒಂದೇ ದಿನ 71 ಮಂದಿಗೆ ಸೋಂಕು ದೃಢ ಪಟ್ಟಿದ್ದು, ಇದ ರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಒಟ್ಟು 160ಕ್ಕೇರಿದೆ. ಕೊರೊನಾ ಪ್ರಕರಣಗಳ ಪಟ್ಟಿಯಲ್ಲಿ ಇಡೀ ರಾಜ್ಯದಲ್ಲಿ ನಿನ್ನೆಯವರೆಗೂ 7ನೇ ಸ್ಥಾನದಲ್ಲಿದ್ದ ಮಂಡ್ಯ ಜಿಲ್ಲೆ ಇಂದು 160 ಪ್ರಕರಣಗಳ…

ಮೈಸೂರು ಭಾಗದಲ್ಲಿ ಸಾರಿಗೆ ಬಸ್ ಸಂಚಾರ:  ಕೊಡಗು, ಹಾಸನ, ಚಾಮರಾಜನಗರ, ಮಂಡ್ಯದಲ್ಲೂ ಮೊದಲ ದಿನ ನೀರಸ ಪ್ರತಿಕ್ರಿಯೆ
ಮೈಸೂರು

ಮೈಸೂರು ಭಾಗದಲ್ಲಿ ಸಾರಿಗೆ ಬಸ್ ಸಂಚಾರ: ಕೊಡಗು, ಹಾಸನ, ಚಾಮರಾಜನಗರ, ಮಂಡ್ಯದಲ್ಲೂ ಮೊದಲ ದಿನ ನೀರಸ ಪ್ರತಿಕ್ರಿಯೆ

May 20, 2020

ಮೈಸೂರು, ಮೇ 19 (ಆರ್‍ಕೆ)- ಕೋವಿಡ್- 19 ಲಾಕ್‍ಡೌನ್ ನಿರ್ಬಂಧದಿಂದಾಗಿ ಸ್ಥಗಿತಗೊಂಡಿದ್ದ ಕೆಎಸ್‍ಆರ್‍ಟಿಸಿ ಬಸ್ ಗಳ ಸಂಚಾರ ಮೈಸೂರು, ಹಾಸನ, ಚಾಮ ರಾಜನಗರ, ಮಂಡ್ಯ ಹಾಗೂ ಕೊಡಗಿನಲ್ಲಿ ಇಂದಿನಿಂದ ಆರಂಭವಾಗಿದೆ. ಆದರೆ ಪ್ರಯಾಣಿ ಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸೋಮವಾರ ಸರ್ಕಾರ ಕೈಗೊಂಡ ನಿರ್ಧಾರದಂತೆ ಇಂದು ಬೆಳಿಗ್ಗೆ 7 ಗಂಟೆ ಯಿಂದ ಮೈಸೂರಿನ ಗ್ರಾಮಾಂತರ ಬಸ್ ನಿಲ್ದಾಣ ಮತ್ತು ನಗರ ಬಸ್ ನಿಲ್ದಾಣ ಗಳಿಂದ ಸಾರಿಗೆ ಬಸ್‍ಗಳು ಸಂಚರಿಸಿದವು. ನಿಲ್ದಾಣಗಳಲ್ಲಿ ಪ್ರಯಾಣಿಕರು ಟಿಕೆಟ್ ಪಡೆದು ಬಸ್ ಹತ್ತುವ…

ಕೋವಿಡ್-19 ಕರಾಳ ದಿನಚರಿ ಆರಂಭ:  ಮುಚ್ಚುತ್ತಿದೆ ಮೈಸೂರಿನ ಸ್ಟಾರ್ ಹೋಟೆಲ್ `ಸದರನ್ ಸ್ಟಾರ್’!
ಮೈಸೂರು

ಕೋವಿಡ್-19 ಕರಾಳ ದಿನಚರಿ ಆರಂಭ: ಮುಚ್ಚುತ್ತಿದೆ ಮೈಸೂರಿನ ಸ್ಟಾರ್ ಹೋಟೆಲ್ `ಸದರನ್ ಸ್ಟಾರ್’!

May 20, 2020

ಮೈಸೂರು, ಮೇ 19(ಆರ್‍ಕೆ)- ಕೋವಿಡ್-19ರ ಕರಾಳ ದಿನಚರಿ ಕೊನೆಗೂ ಆರಂಭಗೊಂಡಿದೆ. ಇಡೀ ವಿಶ್ವವನ್ನೇ ತಲ್ಲಣ ಗೊಳಿಸಿರುವ ಕೊರೊನಾ ಮಹಾಮಾರಿ 3 ಲಕ್ಷಕ್ಕೂ ಅಧಿಕ ಅಮಾಯಕ ಜೀವಗಳನ್ನು ಬಲಿ ಪಡೆಯುವುದು ಮಾತ್ರವಲ್ಲದೆ ಕೋಟ್ಯಾಂತರ ಕಾರ್ಮಿಕರ ಉದ್ಯೋಗಗಳಿಗೂ ಕುತ್ತು ತರುತ್ತಿದೆ. ಇನ್ನೈದು ದಿನ ಕಳೆದರೆ ಭಾರತದಲ್ಲಿ ಲಾಕ್‍ಡೌನ್ ಶುರುವಾಗಿ 2 ತಿಂಗಳಾಗಲಿದೆ. ಈ ಮಧ್ಯೆ ದೇಶದ ಹಲವು ಪ್ರತಿಷ್ಠಿತ ಉದ್ಯಮ ಸಂಸ್ಥೆಗಳು ತೀವ್ರ ನಷ್ಟದ ಕಾರಣ ಒಂದೊಂದಾಗಿ ಬಾಗಿಲು ಮುಚ್ಚಲಾ ರಂಭಿಸಿವೆ. ಇವುಗಳ ಸಾಲಿಗೆ ಮೈಸೂರಿನ ಪ್ರತಿಷ್ಠಿತ ಫೋರ್‍ಸ್ಟಾರ್ ಹೋಟೆಲ್…

ರೀಡ್ ಅಂಡ್ ಟೇಲರ್ ದಿವಾಳಿ; ಕಂಪನಿಗೆ ಬೀಗ
ಮೈಸೂರು

ರೀಡ್ ಅಂಡ್ ಟೇಲರ್ ದಿವಾಳಿ; ಕಂಪನಿಗೆ ಬೀಗ

May 20, 2020

ಕೆಲಸ ಕಳೆದುಕೊಂಡ ಸಾವಿರಾರು ನೌಕರರು; ಜಿಲ್ಲೆಯ ಕಾರ್ಮಿಕ ವರ್ಗದಲ್ಲಿ ಆತಂಕ ಮೈಸೂರು, ಮೇ 19- ಅದಾಗಲೇ ದಿವಾಳಿಯಂಚಿಗೆ ಸಾಗಿದ್ದ ನಂಜನ ಗೂಡು ತಾಲೂಕಿನ ತಾಂಡ್ಯ ಕೈಗಾರಿಕಾ ಪ್ರದೇಶದಲ್ಲಿರುವ `ರೀಡ್ ಅಂಡ್ ಟೇಲರ್’ ಹೆಸರಿನಲ್ಲೇ ಗುರುತಿಸಿಕೊಂಡಿರುವ ಜವಳಿ ಉದ್ಯಮ ಕಂಪನಿ `ಆರ್‍ಟಿಐಎಲ್ ಲಿಮಿ ಟೆಡ್’ ಈಗ ಕಾರ್ಖಾನೆ ಯನ್ನು ಪೂರ್ಣ ಸ್ಥಗಿತ ಗೊಳಿಸುತ್ತಿದೆ. ಅದೇ ಕಾರಣವಾಗಿ ಕಂಪನಿಯ ಅಧಿಕಾರಿಗಳು ಸೇರಿದಂತೆ ಸಾವಿರಾರು ನೌಕರರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಐದು ದಿನಗಳ ಹಿಂದೆಯೇ ನೋಟಿಸ್ ಜಾರಿ ಮಾಡಿದೆ. ಮೇ 14ರಂದು ಕಂಪನಿ…

ರಾಜ್ಯಾದ್ಯಂತ ಇಂದಿನಿಂದ ಬಸ್, ಆಟೋ, ಟ್ಯಾಕ್ಸಿ ಸಂಚಾರ
ಮೈಸೂರು

ರಾಜ್ಯಾದ್ಯಂತ ಇಂದಿನಿಂದ ಬಸ್, ಆಟೋ, ಟ್ಯಾಕ್ಸಿ ಸಂಚಾರ

May 19, 2020

ಬೆಂಗಳೂರು, ಮೇ 18(ಕೆಎಂಶಿ)- ಸಿನಿಮಾ ಮಂದಿರ, ಮಾಲ್ ಹೊರತುಪಡಿಸಿ ಎಲ್ಲಾ ರೀತಿಯ ಆರ್ಥಿಕ ಚಟುವಟಿಕೆಗೆ ಸರ್ಕಾರ ನಾಳೆಯಿಂದ ಹಸಿರು ನಿಶಾನೆ ತೋರಿದೆ. ಆದರೆ ಭಾನುವಾರ ರಜೆ ದಿನದಂತೆ ಸಂಪೂರ್ಣ ಕಫ್ರ್ಯೂ ಹೇರಿದೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‍ಗಳು ನಾಳೆ ಯಿಂದ (ಮೇ 19)ಸಂಚಾರ ಪ್ರಾರಂಭಿಸಲಿದ್ದು, ಇದೇ ಸಂದರ್ಭದಲ್ಲಿ ನಗರ ಸಾರಿಗೆ ಹಾಗೂ ಖಾಸಗಿ ಬಸ್ ಓಡಾಟಕ್ಕೂ ಅನುವು ಮಾಡಿ ಕೊಟ್ಟಿದೆ. ರಾಜ್ಯದ ಒಳಗಡೆ ರೈಲು ಓಡಾ ಟಕ್ಕೆ ಅನುವು ಮಾಡಿಕೊಟ್ಟಿರುವ ಸರ್ಕಾರ, ಮೆಟ್ರೋ, ವಿಮಾನ ಸೇವೆಯನ್ನು…

ಜೂ.25ರಿಂದ ಜು.4ರವರೆಗೆ SSLC ಪರೀಕ್ಷೆ
ಮೈಸೂರು

ಜೂ.25ರಿಂದ ಜು.4ರವರೆಗೆ SSLC ಪರೀಕ್ಷೆ

May 19, 2020

ಬೆಂಗಳೂರು, ಮೇ 18(ಕೆಎಂಶಿ)-ಎಸ್‍ಎಸ್‍ಎಲ್‍ಸಿ ಪರೀಕ್ಷೆ ಜೂನ್ 25ರಿಂದ ಜುಲೈ 4 ರವರೆಗೆ ನಡೆಸಲು ರಾಜ್ಯ ಸರ್ಕಾರ ತೀರ್ಮಾನ ಕೈಗೊಂಡಿದೆ. ದ್ವಿತೀಯ ಪಿಯುಸಿ ಇಂಗ್ಲಿಷ್ ಪತ್ರಿಕೆ ಪರೀಕ್ಷೆ ಜೂನ್ 18 ರಂದು ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್‍ಕುಮಾರ್ ಪ್ರಕಟಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂಗ್ಲಿಷ್, ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ಪರೀಕ್ಷೆಗಳಿಗೆ ಒಂದು ದಿನದ ಅಂತರ ಕಲ್ಪಿಸಿದ್ದೇವೆ ಎಂದರು. ಎಸ್‍ಎಸ್‍ಎಲ್‍ಸಿ ಪರೀಕ್ಷೆ ಮಾರ್ಚ್ 27ರಿಂದ ಏಪ್ರಿಲ್ 9 ರವರೆಗೆ…

1 567 568 569 570 571 1,611
Translate »