ಮೈಸೂರು, ಮೇ 17(ಎಂಕೆ)- ಲಾಕ್ ಡೌನ್ ಹಿನ್ನೆಲೆ ಮೈಸೂರು ನಗರಪಾಲಿಕೆ ಯಿಂದ ತೆರೆಯಲಾಗಿದ್ದ 5 ನಿರಾಶ್ರಿತರ ಕೇಂದ್ರಗಳಲ್ಲಿ ಯೂತ್ ಹಾಸ್ಟೆಲ್ ಹೊರತು ಪಡಿಸಿ ಉಳಿದೆಲ್ಲಾ ಕೇಂದ್ರಗಳನ್ನು ಬಂದ್ ಮಾಡಲಾಗಿದೆ. ನಗರದ ನಂಜರಾಜ ಬಹ ದ್ದೂರ್ ಕಲ್ಯಾಣ ಮಂಟಪ, ನೇರಂಬಳ್ಳಿ ಕಲ್ಯಾಣ ಮಂಟಪ, ನಿತ್ಯೋತ್ಸವ ಕಲ್ಯಾಣ ಮಂಟಪ ಮತ್ತು ಹೊಯ್ಸಳ ಕರ್ನಾಟಕ ಸಂಘದ ಭವನದಲ್ಲಿ ತೆರೆಯಲಾಗಿದ್ದ ನಿರಾಶ್ರಿತರ ಕೇಂದ್ರಗಳನ್ನು ಮುಚ್ಚಲಾಗಿದೆ. ನಂಜರಾಜ ಬಹದ್ದೂರ್ ಕಲ್ಯಾಣ ಮಂಟಪದಲ್ಲಿದ್ದ 93 ನಿರಾಶ್ರಿತರಲ್ಲಿ 90 ಮಂದಿಗೆ ಕ್ರೆಡಿಟ್-ಐ ಸಂಸ್ಥೆ ಮತ್ತು ಪಾಲಿಕೆ ಜತೆಗೂಡಿ…
ಸ್ವದೇಶಿ ವಸ್ತುಗಳ ಬಳಸುವಂತೆ ಜಾಗೃತಿ ಅಭಿಯಾನ
May 18, 2020ಮೈಸೂರು, ಮೇ 17- ಕೊರೊನಾ ಹಾವಳಿ ಯೊಂದಿಗೆ ಸ್ವದೇಶಿ ವಸ್ತುಗಳ ಬಳಕೆ ಬಗ್ಗೆ ಜಾಗೃತಿ ವಿಸ್ತರಿಸುತ್ತಿದೆ. ಹಾಗೆಯೇ ಮೈಸೂ ರಿನ ನೇಸರ ಸೇವಾ ಸಂಸ್ಥೆ ವತಿಯಿಂದ `ಸ್ವದೇಶಿ ವಸ್ತುಗಳ ಬಳಸಿ, ದೇಶ ಉಳಿಸಿ’ ಅಭಿಯಾನ ನಡೆಸಲಾಯಿತು. ವಿದ್ಯಾರಣ್ಯ ಪುರಂ ಸೀವೆಜ್ ಫಾರಂ ರಸ್ತೆಯಿಂದ ಕನಕ ಗಿರಿ, ಚಾಮುಂಡಿಪುರಂ, ಅಗ್ರಹಾರ ಇನ್ನಿತರ ಕಡೆಗಳಲ್ಲಿ ಅಂಗಡಿಗಳ ಬಳಿ ಹೋಗಿ, ವ್ಯಾಪಾರಿ ಹಾಗೂ ಗ್ರಾಹಕರಿಗೆ ಕರಪತ್ರ ನೀಡುವ ಮೂಲಕ ಜಾಗೃತಿ ಮೂಡಿಸಲಾಯಿತು. ಕೊರೊನಾ ಜಗತ್ತಿಗೆ ಶಿಸ್ತು ಬದ್ಧ ಜೀವ ನದ ಪಾಠ…
ಮೈಸೂರಿನ ಸಂಗೀತ ಕಲಾವಿದರಿಗೆ ನೆರವು
May 18, 2020ಮೈಸೂರು, ಮೇ 17-ಅವಧೂತ ದತ್ತಪೀಠ ಗಣಪತಿ ಸಚ್ಚಿದಾನಂದ ಆಶ್ರಮದ ವತಿಯಿಂದ ಲಾಕ್ಡೌನ್ನಿಂದ ಸಂಕಷ್ಟದಲ್ಲಿರುವ ಸಂಗೀತ ಕಲಾವಿದರಿಗೆ ಅಗತ್ಯ ವಸ್ತುಗಳ ಕಿಟ್ ವಿತರಿಸಲಾಯಿತು. ರಾಮಾನುಜ ರಸ್ತೆಯಲ್ಲಿರುವ ಪ್ರಸಾದ್ ಸ್ಕೂಲ್ ಆಫ್ ರಿದಮ್ಸ್ ಶಾಲೆ ಬಳಿ ತಬಲ, ಡೋಲಕ್, ಕೀಬೋರ್ಡ್, ರಿದಂ ಪ್ಯಾಡ್, ಗಿಟಾರ್, ಮ್ಯಾಂಡೊಲಿನ್, ಕೊಳಲು, ಸ್ಯಾಕ್ಸೋಫೋನ್ ವಾದಕರು, ಧ್ವನಿವರ್ಧಕ ನಿರ್ವಾಹಕರು, ಓಲಗ, ನಾದಸ್ವರ ನುಡಿಸು ವವರು, ಗಾಯಕರು ಸೇರಿದಂತೆ 60ಕ್ಕೂ ಹೆಚ್ಚು ಕಲಾವಿದರಿಗೆ ಕಿಟ್ ನೀಡಲಾಯಿತು. ವಿದ್ವಾನ್ ರಾಘವೇಂದ್ರಪ್ರಸಾದ್ ಮಾತನಾಡಿ, ಲಾಕ್ಡೌನ್ನಿಂದಾಗಿ ಎಲ್ಲರಂತೆ ಸಂಗೀತ ಕಲಾವಿದರೂ ಕಷ್ಟದಲ್ಲಿದ್ದಾರೆ….
ಅಕ್ರಮ ಮರಳು ಸಾಗಣೆ: ವಾಹನ ವಶ
May 18, 2020ಸೋಮವಾರಪೇಟೆ, ಮೇ 17- ಸಮೀ ಪದ ಕಾಗಡಿಕಟ್ಟೆ ಸೇತುವೆಯ ಕೆಳಭಾಗ ದಲ್ಲಿ ಹರಿಯುವ ಹೊಳೆಯಿಂದ ಮರ ಳನ್ನು ತೆಗೆದು ಅಕ್ರಮ ವಾಗಿ ಸಾಗಾಟಕ್ಕೆ ಯತ್ನಿಸುತ್ತಿದ್ದ ಪ್ರಕರಣ ವನ್ನು ಪತ್ತೆಹಚ್ಚಿರುವ ಪೊಲೀಸರು, ಮರಳು ಸಹಿತ ಪಿಕ್ಅಪ್ ವಾಹನ (ಕೆ.ಎ.18 ಎ. 9835) ವಶಪಡಿಸಿಕೊಂಡಿದ್ದಾರೆ. ಕಾಗಡಿಕಟ್ಟೆ ಸೇತುವೆಯ ಕೆಳಭಾಗದಲ್ಲಿ ಹೊಳೆಯಿಂದ ಅಕ್ರಮವಾಗಿ ಮರಳನ್ನು ತೆಗೆದು ಮೂಟೆ ಗಳನ್ನು ಸಾಗಾಟಗೊಳಿಸಲು ಯತ್ನಿಸುತ್ತಿದ್ದಾಗ ಪೊಲೀಸರು ದಾಳಿ ನಡೆಸಿದ್ದು, ಆರೋಪಿ ಗಳು ಪರಾರಿಯಾಗಿದ್ದಾರೆ. ಕಾರ್ಯಾಚರಣೆ ಯಲ್ಲಿ ಠಾಣಾಧಿಕಾರಿ ಶಿವಶಂಕರ್, ಮುಖ್ಯಪೇದೆ ನವೀನ್, ಸಿಬ್ಬಂದಿಗಳಾದ ವಸಂತ್,…
ಆಶಾ ಕಾರ್ಯಕರ್ತೆಯರಿಗೆ 3 ಸಾವಿರ ರೂ. ಪ್ರೋತ್ಸಾಹ ಧನ ಯೋಜನೆಗೆ ಚಾಲನೆ
May 17, 2020ಮೈಸೂರು, ಮೇ 16(ಪಿಎಂ)- ಕೊರೊನಾ ವಿರುದ್ಧ ಹೋರಾಟದಲ್ಲಿ ಫ್ರಂಟ್ಲೈನ್ ವಾರಿಯರ್ಸ್ ಎಂದೇ ಹೆಸರಾದ ಆಶಾ ಕಾರ್ಯಕರ್ತೆಯರಿಗೆ ಮೈಸೂರಿನ ಕಲಾಮಂದಿರದಲ್ಲಿ ಶನಿವಾರ ಹೂ ಮಳೆಗರೆದು ಸನ್ಮಾನಿಸಿ, 3 ಸಾವಿರ ರೂ.ಗಳ ಪ್ರೋತ್ಸಾಹ ಧನದ ಚೆಕ್ ವಿತರಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಉಪಸ್ಥಿತಿಯಲ್ಲಿ ನಡೆದ ಸಮಾರಂಭದಲ್ಲಿ ಸಾಂಕೇತಿಕ ವಾಗಿ ಜಿಲ್ಲೆಯ 180 ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನದ ಚೆಕ್ ವಿತರಿಸಲಾಯಿತು. ರಾಜ್ಯದ 40,500 ಆಶಾ ಕಾರ್ಯಕರ್ತೆಯರಿಗೆ ಸಹಕಾರ ಇಲಾಖೆಯಿಂದ (ಸಹಕಾರ ಸಂಘ-ಸಂಸ್ಥೆ ಗಳ ದೇಣಿಗೆ) 12.37 ಕೋಟಿ ರೂ….
ರಾಜ್ಯದಲ್ಲಿ ನಾಳೆಯಿಂದ ಬಸ್, ಆಟೋ, ಟ್ಯಾಕ್ಸಿ ಸಂಚಾರ
May 17, 2020ಬೆಂಗಳೂರು, ಮೇ 16(ಕೆಎಂಶಿ)- ಜನ ಸಂದಣಿ ಉಂಟಾಗಬಹುದಾದ ಚಟು ವಟಿಕೆ ಹೊರತುಪಡಿಸಿ, ಸೋಮವಾರದಿಂದ ಸಾರ್ವಜನಿಕ ಹಾಗೂ ಖಾಸಗಿ ಸಾರಿಗೆ ಸಂಚಾರ, ವ್ಯಾಪಾರ ವಹಿವಾಟು ಮುಕ್ತಗೊಳ್ಳಲಿದೆ. ಮೂರನೇ ಹಂತದ ಲಾಕ್ಡೌನ್ ನಾಳೆ ಅಂತ್ಯಗೊಳ್ಳಲಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕೆಲವು ಷರತ್ತುಗಳನ್ನು ವಿಧಿಸಿ, 4ನೇ ಹಂತದ ಲಾಕ್ಡೌನ್ ಘೋಷಣೆ ಮಾಡಲಿದೆ. ರಾಜ್ಯ ರಸ್ತೆ ಸಾರಿಗೆ ಬಸ್ಗಳು, ಆಟೋ ಮತ್ತು ಟ್ಯಾಕ್ಸಿಗಳು ಸೋಮವಾರ ದಿಂದ ಎಂದಿನಂತೆ ರಸ್ತೆಗಿಳಿಯಲಿವೆ. ಈಗಾಗಲೇ ರಾಜ್ಯ ಸರ್ಕಾರ ಸಾರಿಗೆ ನಿಗಮಕ್ಕೆ ಸೂಚನೆ ನೀಡಿ, ಹವಾನಿಯಂ ತ್ರಿತ ಬಸ್ಗಳನ್ನು…
ಇಸ್ರೋ, ಇಂಧನ, ನಾಗರಿಕ ವಿಮಾನಯಾನ, ರಕ್ಷಣಾ, ಕಲ್ಲಿದ್ದಲು, ಖನಿಜ ಕ್ಷೇತ್ರದಲ್ಲಿ ಖಾಸಗಿ ಸಹಭಾಗಿತ್ವಕ್ಕೆ ಆದ್ಯತೆ
May 17, 2020ನವದೆಹಲಿ, ಮೇ 16- ಮೇಕ್ ಇನ್ ಇಂಡಿಯಾ ಮೂಲಕ ಸ್ವಾವಲಂಬಿ ಭಾರತ ನಿರ್ಮಾಣ ಮಾಡ ಲಾಗುವುದು. ರಕ್ಷಣಾ ಸಾಮಗ್ರಿಗಳನ್ನು ದೇಶ ದಲ್ಲಿಯೇ ಖರೀದಿಸಲು ಅವಕಾಶ ನೀಡಲಾಗು ವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾ ರಾಮನ್ ಶನಿವಾರ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ 20 ಲಕ್ಷ ಕೋಟಿ ರೂ.ಗಳ ವಿಶೇಷ ಪ್ಯಾಕೇಜಿನ ಬಗ್ಗೆ ಕಳೆದ ಮೂರು ದಿನಗಳಿಂದ ಹಂತಹಂತವಾಗಿ ವಿವರಣೆ ನೀಡುತ್ತಿರುವ ನಿರ್ಮಲಾ ಸೀತಾರಾಮನ್ ಅವರು, ಶನಿವಾರ ನಾಲ್ಕನೇ ಸುದ್ದಿ ಗೋಷ್ಠಿಯಲ್ಲಿ ರಚನಾತ್ಮಕ…
ವಲಸೆ ಕಾರ್ಮಿಕರು ತವರಿನತ್ತ ಪಯಣ
May 17, 2020ಮೈಸೂರು,ಮೇ 16(ಆರ್ಕೆ)- ಕೋವಿಡ್ -19 ಲಾಕ್ಡೌನ್ನಿಂದ ಸಂಕಷ್ಟಕ್ಕೆ ಸಿಲು ಕಿದ್ದ 1,600 ವಲಸೆ ಕಾರ್ಮಿಕರು ತವರಿ ನತ್ತ ಪಯಣ ಬೆಳೆಸಿದ್ದಾರೆ. ಲಾಕ್ಡೌನ್ ಸಡಿಲ ಗೊಂಡಿರುವುದರಿಂದ ದೇಶದ ಬೇರೆ ಬೇರೆ ರಾಜ್ಯಗಳಿಂದ ಕಟ್ಟಡ ನಿರ್ಮಾಣ, ಮರಗೆಲಸ, ಟೈಲ್ಸ್ ಅಳವಡಿಕೆ ಕೆಲಸಕ್ಕಾಗಿ ಮೈಸೂರಿಗೆ ಬಂದು ನೆಲೆಸಿದ್ದ ಕಾರ್ಮಿಕರನ್ನು ಅವರ ಊರುಗಳಿಗೆ ಹೋಗಲು ಜಿಲ್ಲಾಡಳಿತ ಅನುವು ಮಾಡಿಕೊಟ್ಟಿದೆ. ವಲಸೆ ಕಾರ್ಮಿಕರ ಕೋರಿಕೆಯಂತೆ ಉತ್ತರಪ್ರದೇಶ, ಬಿಹಾರ ಸೇರಿದಂತೆ ಇತರ ಪ್ರದೇಶಗಳಿಗೆ ವಾಪಸ್ ಹೋಗಲು ಅವಕಾಶ ಕಲ್ಪಿಸಿದ ಕಾರಣ ಶ್ರಮಿಕ್ ರೈಲಿನಲ್ಲಿ ಇಂದು ಸಂಜೆ…
ಮೈಶುಗರ್ ಸಂಪೂರ್ಣ ಖಾಸಗೀಕರಣ ಇಲ್ಲ
May 17, 2020ಬೆಂಗಳೂರು, ಮೇ 16- ಭಾರೀ ವಿವಾ ದಕ್ಕೆ ಕಾರಣವಾಗಿದ್ದ ಮಂಡ್ಯದ ಮೈಶು ಗರ್ ಕಾರ್ಖಾನೆ ಪೂರ್ಣ ಖಾಸಗೀ ಕರಣ ಇಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟ ಪಡಿಸಿದೆ. ಮಂಡ್ಯದ ಮೈಶುಗರ್ ಕಾರ್ಖಾನೆಯ ಮಾಲೀಕತ್ವವನ್ನು ರಾಜ್ಯ ಸರ್ಕಾರವೇ ಇಟ್ಟುಕೊಳ್ಳಲು ನಿರ್ಧರಿ ಸಿದ್ದು, ಯಾವುದೇ ಕಾರಣಕ್ಕೂ ಕಾರ್ಖಾನೆ ಯನ್ನು ಸಂಪೂರ್ಣವಾಗಿ ಖಾಸಗಿಯ ವರಿಗೆ ಒಪ್ಪಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಮ್ಮತಿ ನೀಡಿಲ್ಲ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಇದನ್ನು ಚರ್ಚೆಗೆ ತರಲು ಅಧಿಕಾರಿ ಗಳಿಗೆ…
ಅರ್ಹ ಫಲಾನುಭವಿಗಳಿಗೆ ತ್ವರಿತಗತಿ ಸಾಲ ಮಂಜೂರು ಮಾಡಿ
May 17, 2020ಮೈಸೂರು, ಮೇ 16(ಎಂಟಿವೈ)- ಸಹಕಾರ ಸಂಘ ಮತ್ತು ಬ್ಯಾಂಕ್ಗಳ ಮೂಲಕ ಪ್ರಸ್ತುತ ಸಾಲಿನಲ್ಲಿ 14 ಸಾವಿರ ಕೋಟಿ ರೂ. ಸಾಲ ನೀಡಲು ಉದ್ದೇಶಿಸಲಾಗಿದ್ದು, ಅರ್ಹ ಫಲಾನುಭವಿಗಳಿಗೆ ತ್ವರಿತಗತಿಯಲ್ಲಿ ಸಾಲ ಮಂಜೂರು ಮಾಡುವಂತೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಸೂಚಿಸಿದ್ದಾರೆ. ಮೈಸೂರಿನ ಸರ್ಕಾರಿ ಅತಿಥಿ ಗೃಹದಲ್ಲಿ ಮೈಸೂರು ವಿಭಾಗದ ಸಹಕಾರ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ 8 ಜಿಲ್ಲೆಗಳ ಪ್ರಗತಿ ಪರಿಶೀಲಿ ಸಿದ ಬಳಿಕ ಮಾತನಾಡಿದ ಅವರು, ಕಳೆದ ಸಾಲಿನ ಪ್ರಗತಿ…










