ಮೈಸೂರು,ಮಾ.16(ಎಂಟಿವೈ)- ರಸ್ತೆ ಅಗಲೀಕರಣ ಕಾಮಗಾರಿ ಆರಂಭವಾಗಲಿ ರುವ ಹಿನ್ನೆಲೆಯಲ್ಲಿ ಮೈಸೂರಿನ ಇರ್ವಿನ್ ರಸ್ತೆಯಲ್ಲಿ ಮುಂದಿನ ಮೂರು ತಿಂಗಳವರೆಗೆ ವಾಹನ ಸಂಚಾರ ನಿರ್ಬಂಧಿಸಲು ಉದ್ದೇಶಿಸಿದ್ದನ್ನು 10 ದಿನಗಳ ಕಾಲ ಮುಂದೂಡಲಾಗಿದೆ ಎಂದು ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ತಿಳಿಸಿದ್ದಾರೆ. ನಗರ ಪೊಲೀಸ್ ಇಲಾಖೆ ಹೊರಡಿಸಿದ್ದ ಆದೇಶದಂತೆ ಭಾನುವಾರ(ಮಾ.15) ದಿಂದ ಇರ್ವಿನ್ ರಸ್ತೆಯಲ್ಲಿ ಎರಡೂ ಕಡೆಯಿಂದಲೂ ವಾಹನ ಸಂಚಾರ ನಿರ್ಬಂಧಿಸ ಲಾಗಿತ್ತು. ಆದರೆ ರಸ್ತೆ ಅಗಲೀಕರಣ ಕಾಮಗಾರಿ ದೊಡ್ಡ ಪ್ರಮಾಣದಲ್ಲಿ ಆರಂಭವಾಗದ ಕಾರಣ ವಾಹನ ಸಂಚಾರ ನಿರ್ಬಂಧ ಇನ್ನೂ 10…
ನ್ಯಾಯಾಲಯದ ಕಲಾಪಕ್ಕೂ ಕೊರೊನಾ ಬಿಸಿ: ಇಂದಿನಿಂದ ತುರ್ತು ಪ್ರಕರಣ ವಿಚಾರಣೆ ಮಾತ್ರ
March 17, 2020ಮೈಸೂರು,ಮಾ.16(ಎಂಟಿವೈ)- ಕೊರೊನಾ ವೈರಸ್ ಎಫೆಕ್ಟ್ ನ್ಯಾಯಾ ಲಯದ ಕಲಾಪಗಳ ಮೇಲೂ ಉಂಟಾ ಗಿದ್ದು, ಮೈಸೂರು ನ್ಯಾಯಾಲಯದಲ್ಲೂ ತುರ್ತು ಪ್ರಕರಣಗಳ ವಿಚಾರಣೆಗಷ್ಟೇ ಮನ್ನಣೆ ನೀಡಿ, ಉಳಿದ ಎಲ್ಲಾ ವಿಚಾರಣೆಗಳನ್ನು ಅನಿರ್ದಿಷ್ಟಾ ವಧಿಗೆ ಮುಂದೂಡಲಾಗಿದೆ. ನ್ಯಾಯಾಲಯಗಳಲ್ಲಿ ನ್ಯಾಯಾಧೀ ಶರು, ವಕೀಲರು, ವಿವಿಧ ಪ್ರಕರಣಗಳ ವಿಚಾ ರಣೆಗಾಗಿ ಬರುವ ಆಪಾದಿತರು, ಕಕ್ಷಿದಾ ರರು, ಪೊಲೀಸರು ಹಾಗೂ ಸಾರ್ವಜನಿ ಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದ ರಿಂದ ಕೊರೊನಾ ವೈರಸ್ ಹಬ್ಬುವ ಆತಂಕ ಇರುವ ಹಿನ್ನೆಲೆಯಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್.ಓಕಾ ಆದೇ…
ನೆಲಕಚ್ಚಿದ ಮೈಸೂರು ಪ್ರವಾಸೋದ್ಯಮ
March 16, 2020ಮೈಸೂರು,ಮಾ.15(ಎಂಟಿವೈ)- ರಜಾದಿನಗಳಲ್ಲಿ ಕಿಕ್ಕಿರಿದು ತುಂಬಿರುತ್ತಿದ್ದ ಪ್ರವಾಸಿ ತಾಣಗಳು ಭಣಗುಡು ತ್ತಿವೆ. ಎಲ್ಲೆಡೆ ಭೀತಿ ಮೂಡಿಸಿರುವ ಕೊರೊನಾ ಮಹಾ ಮಾರಿಯಿಂದಾಗಿ ಮೈಸೂರು ಪ್ರವಾಸೋದ್ಯಮ ನೆಲ ಕಚ್ಚಿದ್ದು, 50 ಕೋಟಿ ರೂ. ಆದಾಯ ತರುತ್ತಿದ್ದ ಉದ್ಯಮ ಇದೀಗ 5 ಕೋಟಿ ರೂ. ಕೂಡ ಸಂಗ್ರಹ ವಿಲ್ಲದೆ ತೀವ್ರ ನಷ್ಟಕ್ಕೆ ಒಳಗಾಗಿದೆ. ಹೌದು, ರಾಜ್ಯದಲ್ಲಿಯೇ ಮೈಸೂರು ಟೂರಿಸಂ ಜನಮನ್ನಣೆಗಳಿಸಿದ್ದು, ವಿದೇಶಿ ಹಾಗೂ ದೇಶದ ಮೂಲೆ ಮೂಲೆಯಿಂದ ಅಪಾರ ಸಂಖ್ಯೆಯ ಪ್ರವಾಸಿ ಗರನ್ನು ಪ್ರತಿದಿನ ಆಕರ್ಷಿಸುತ್ತಿತ್ತು. ಕೊಡಗು, ಚಾಮ ರಾಜನಗರ ಹಾಗೂ ಊಟಿ,…
ದೆಹಲಿಯ ಮೊದಲ ಕೊರೊನಾ ಪೀಡಿತ ವ್ಯಕ್ತಿ ಸಂಪೂರ್ಣ ಗುಣಮುಖ ಆಸ್ಪತ್ರೆಯಿಂದ ಡಿಸ್ಚಾರ್ಜ್
March 16, 2020ನವದೆಹಲಿ, ಮಾ.15- ರಾಷ್ಟ್ರ ರಾಜ ಧಾನಿ ನವದೆಹಲಿಯಲ್ಲಿ ಮೊದಲು ಕೊರೊನಾ ವೈರಸ್ಗೆ ತುತ್ತಾಗಿದ್ದ ವ್ಯಕ್ತಿ ಸಂಪೂರ್ಣವಾಗಿ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಪೂರ್ವ ದೆಹಲಿಯ ಮಯೂರ್ ವಿಹಾರ್ ನಿವಾಸಿಯಾಗಿದ್ದ 45 ವರ್ಷದ ವ್ಯಕ್ತಿ ಇಟಲಿ ದೇಶಕ್ಕೆ ಹೋಗಿ ಬಂದ ನಂತರ ಕೊರೊನಾ ವೈರಸ್ ಸೋಂಕು ಅವ ರಲ್ಲಿ ಕಾಣಿಸಿಕೊಂಡಿತ್ತು. ಈ ಮೂಲಕ ದೆಹಲಿಯಲ್ಲಿ ಮೊದಲ ಬಾರಿಗೆ ಕೊರೊನಾ ವೈರಸ್ ಕೇಸ್ ದಾಖಲಾಗಿತ್ತು. ಈಗ ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ಇಟಲಿಗೆ ಹೋಗಿ ಬಂದ ನಂತರ ಐಸೋಲೇಷನ್ ವಾರ್ಡಿಗೆ ಅಡ್ಮಿಟ್ ಆಗುವ…
ಭಾರತದಲ್ಲಿ 109 ಮಂದಿಗೆ ಕೊರೊನಾ ಪ್ರಕರಣ ಪತ್ತೆ ಕರ್ನಾಟಕದಲ್ಲಿ 1,308 ಮಂದಿ ಗೃಹಬಂಧನ
March 16, 2020ಬೆಂಗಳೂರು, ಮಾ.15- ಭಾರತದಲ್ಲಿ ಕೊರೊನಾ ವೈರಸ್ನಿಂದಾಗಿ ಮಾಲ್, ಥಿಯೇಟರ್, ಅಂಗಡಿಗಳು, ಶಾಪಿಂಗ್ ಕಾಂಪ್ಲೆಕ್ಸ್ಗಳು ಬಹುತೇಕ ಬಂದ್ ಆಗಿವೆ. ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 100ರ ಗಡಿ ದಾಟಿದ್ದು, ಸೋಂಕಿನ ಪ್ರಕರಣ ಇನ್ನಷ್ಟು ಹೆಚ್ಚಾಗುವ ಆತಂಕ ಮೂಡಿದೆ. ದೇಶದಲ್ಲಿ ಕೊರೊನಾಗೆ ಮೊದಲ ಬಲಿಯಾಗಿರುವುದು ಕರ್ನಾಟಕ. ಹೀಗಾಗಿ, ರಾಜ್ಯ ದೆಲ್ಲೆಡೆ ಹೆಚ್ಚಿನ ಮುಂಜಾಗ್ರತೆ ವಹಿಸಲಾಗಿದೆ. ಭಾರತದಲ್ಲಿ ಒಟ್ಟಾರೆ ಇದುವರೆಗೂ 109 ಕೋವಿಡ್-19 ಪ್ರಕರಣಗಳು ದಾಖಲಾಗಿವೆ. ಕರ್ನಾಟಕದಲ್ಲಿ ಓರ್ವ ಮೃತಪಟ್ಟಿದ್ದು, 7 ಸೋಂಕಿತ ಪ್ರಕರಣ ಪತ್ತೆಯಾಗಿವೆ. ದೆಹಲಿಯಲ್ಲಿ ಒಬ್ಬರು, ಕಲಬುರ್ಗಿಯಲ್ಲಿ ಒಬ್ಬರು…
ಕೊಡಗಿನಲ್ಲಿ ಕೊರೊನಾ ಶಂಕಿತರ ಸಂಖ್ಯೆ 6ಕ್ಕೆ ಏರಿಕೆ
March 16, 2020ಮಡಿಕೇರಿ,ಮಾ.15-ಕೊಡಗು ಜಿಲ್ಲೆಯಲ್ಲಿ ಕೊರೊನಾ ವೈರಸ್ ಶಂಕಿತರ ಸಂಖ್ಯೆ 6ಕ್ಕೆ ಏರಿಕೆ ಯಾಗಿದೆ. ಆರೋಗ್ಯ ಇಲಾಖೆ ಮತ್ತು ಜಿಲ್ಲಾಡಳಿತ ಎಲ್ಲಾ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದೆ. ಈ ಹಿಂದೆ ವಿದೇಶದಿಂದ ಬಂದಿದ್ದ ವ್ಯಕ್ತಿಯೊಬ್ಬರಿಗೆ ಜ್ವರ ಮತ್ತು ಗಂಟಲು ನೋವು ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಸ್ಥಳಾಂ ತರಿಸಿ ಐಸೋಲೇಷನ್ ವಾರ್ಡ್ನಲ್ಲಿ ಚಿಕಿತ್ಸೆಗೆ ದಾಖಲು ಮಾಡಿಕೊಳ್ಳಲಾಗಿತ್ತು. ಈವರೆಗೆ ವಿದೇಶದಿಂದ ಬಂದ ಮೂವರು ವ್ಯಕ್ತಿಗಳಿಗೆ ಸೋಂಕು ತಗುಲಿರುವ ಶಂಕೆ ಇದ್ದು, ಅವರನ್ನು ಮತ್ತು ಇವರೊಂದಿಗೆ ಸಂಪರ್ಕದಲ್ಲಿದ್ದ ಇತರ ಮೂವರು ಸೇರಿದಂತೆ ಒಟ್ಟು 6…
ಬೈಲುಕುಪ್ಪೆ ಟಿಬೆಟಿಯನ್ನರ ಶಿಬಿರ ಸೇರಿ ಮೈಸೂರು ಜಿಲ್ಲೆಯಲ್ಲಿ ಯಾವುದೇ ಕೊರೊನಾ ಪ್ರಕರಣವಿಲ್ಲ
March 16, 2020ಮೈಸೂರು, ಮಾ.15(ಪಿಎಂ)- ಬೈಲುಕುಪ್ಪೆಯ ಟಿಬೆಟಿಯನ್ನರ ನಿರಾಶ್ರಿತರ ಕೇಂದ್ರದಲ್ಲಿ ಹಲವರು ಚೀನಾಕ್ಕೆ ಹೋಗಿ ಬಂದಿದ್ದಾರೆ. ಕೊರೊನಾ ಹಿನ್ನೆಲೆ ಯಲ್ಲಿ ಅವರಿಂದ ಅಂತರ ಕಾಯ್ದುಕೊಳ್ಳಲು ಜಿಲ್ಲಾ ಡಳಿತ ತಿಳಿಸಿದೆ ಎಂಬ ವದಂತಿ ವಾಟ್ಸಪ್ನಲ್ಲಿ ಹರಿ ದಾಡುತ್ತಿದ್ದು, ಇಂತಹ ಸುಳ್ಳು ಸುದ್ದಿ ಹಬ್ಬಿಸಿದರೆ ಕಾನೂ ನಾತ್ಮಕ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಎಚ್ಚ ರಿಸಿದರು. ಮೈಸೂರಿನ ತಮ್ಮ ಕಚೇರಿಯಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿರಿಯಾ ಪಟ್ಟಣ ತಾಲೂಕಿನ ಬೈಲುಕುಪ್ಪೆಯ ಟಿಬೆಟಿಯನ್ನ ರಿಂದ ಅಂತರ ಕಾಯ್ದುಕೊಳ್ಳಲು…
ಅಕ್ರಮ ಸಂಬಂಧ ಕೊಲೆಯಲ್ಲಿ ಅಂತ್ಯ
March 16, 2020ಮೈಸೂರು, ಮಾ.15(ಪಿಎಂ)-ಅಕ್ರಮ ಸಂಬಂಧ ಹೊಂದಿದ್ದ ಗೃಹಿಣಿಯನ್ನು ಪ್ರಿಯಕರನೋರ್ವ ಹತ್ಯೆ ಮಾಡಿ ತನ್ನ ಸ್ನೇಹಿತರೊಡಗೂಡಿ ಮೃತದೇಹವನ್ನು ತೋಟವೊಂದರಲ್ಲಿ ಹೂತು ಹಾಕಿದ್ದ ಪ್ರಕರಣವನ್ನು ಭೇದಿಸಿರುವ ತಲಕಾಡು ಪೊಲೀಸರು ನಾಲ್ವರನ್ನು ಬಂಧಿಸಿ, ಹೂತಿದ್ದ ಶವವನ್ನು ಹೊರ ತೆಗೆದು ಮರ ಣೋತ್ತರ ಪರೀಕ್ಷೆ ನಡೆಸಿದ್ದಾರೆ. ಚಾಮರಾಜನಗರ ಜಿಲ್ಲೆ ಹನೂರು ತಾಲೂಕು ಮನು ಗನಹಳ್ಳಿ ಗ್ರಾಮದ ರಾಜಮ್ಮ(42) ಪ್ರಿಯಕರನಿಂದಲೇ ಹತ್ಯೆಗೀಡಾ ದವರಾಗಿದ್ದು, ಪ್ರಿಯಕರ ಮೂಲತಃ ತಿ.ನರಸೀಪುರ ತಾಲೂಕು ಆಲಗೂಡು ನಿವಾಸಿ ಮಹೇಶ್(38), ತಿ.ನರಸೀಪುರ ತಾಲೂಕು ಅಕ್ಕೂರುದೊಡ್ಡಿ ಗ್ರಾಮದ ಸೋಮ (34), ಮಹದೇವ(50), ಹೆಮ್ಮಿಗೆ ಗ್ರಾಮದ…
ಉತ್ತರ ಪ್ರದೇಶದಲ್ಲಿ ನಕಲಿ ಸ್ಯಾನಿಟೈಸರ್, ಮಾಸ್ಕ್ ಕಾರ್ಖಾನೆ ಪತ್ತೆ ನಾಲ್ವರ ಬಂಧನ
March 16, 2020ನೊಯ್ಡಾ, ಮಾ.15- ಕೈ ಸ್ಯಾನಿಟೈಸರ್ ಹಾಗೂ ಮಾಸ್ಕ್ ಗಳು ಅತ್ಯವಶ್ಯಕ ಸರಕುಗಳು ಎಂದು ಕೇಂದ್ರ ಸರ್ಕಾರ ಘೋಷಿಸಿದ ಮಾರನೇ ದಿನವೇ ಉತ್ತರಪ್ರದೇಶದ ನೊಯ್ಡಾ ದಲ್ಲಿ ನಕಲಿ ಕೈ ಸ್ಯಾನಿಟೈಸರ್ ಹಾಗೂ ಮಾಸ್ಕ್ ಕಾರ್ಖಾನೆ ಪತ್ತೆಯಾಗಿದ್ದು, ನಾಲ್ವರನ್ನು ಪೆÇಲೀಸರು ಬಂಧಿಸಿದ್ದಾರೆ. ಕಮರ್ಷಿಯಲ್ ಹಬ್ ಸೆಕ್ಟರ್ 63ರಲ್ಲಿದ್ದ ಕಂಪನಿ ಮೇಲೆ ಭಾನುವಾರ ಮಧ್ಯಾಹ್ನ ದಾಳಿ ನಡೆಸಲಾಗಿದೆ ಎಂದು ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ರಾಜೀವ್ ರೈ ಹೇಳಿ ದ್ದಾರೆ. ನಾಲ್ವರನ್ನು ಸ್ಥಳದಲ್ಲಿಯೇ ಬಂಧಿಸಲಾಗಿದ್ದು, ಸುಮಾರು 5 ಸಾವಿರ ಮುಖಕ್ಕೆ ಹಾಕುವ ಮಾಸ್ಕ್ಗಳು…
ಪ್ರಧಾನಿ ಮೋದಿ ನೇತೃತ್ವದಲ್ಲಿ ಕೊರೊನಾ ವಿರುದ್ಧ ತುರ್ತು ಕ್ರಮಕ್ಕೆ ಸಾರ್ಕ್ ವಿಡಿಯೋ ಕಾನ್ಫರೆನ್ಸ್
March 16, 2020ನವದೆಹಲಿ, ಮಾ.15- ಕೊರೊನಾ ವಿರುದ್ಧ ತುರ್ತು ಕ್ರಮಗಳನ್ನು ಕೈಗೊ ಳ್ಳುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಾರ್ಕ್ ದೇಶಗಳ ನಡುವಿನ ವಿಡಿಯೋ ಕಾನ್ಫ ರೆನ್ಸ್ನಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಬದಲಿಗೆ ತಮ್ಮ ಸಚಿವಾಲಯದ ಆರೋಗ್ಯ ಸಚಿವರನ್ನು ಕಳುಹಿಸಿದ್ದರು. ಸಾರ್ಕ್ ರಾಷ್ಟ್ರಗಳಾದ ಆಫ್ಘಾನಿಸ್ತಾನ ದಿಂದ ಅಧ್ಯಕ್ಷ ಆಶ್ರಫ್ ಗನಿ, ಮಾಲ್ಡೀವ್ಸ್ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೊಲಿಹ್, ಶ್ರೀಲಂಕಾ ಅಧ್ಯಕ್ಷ ಗೊಟ ಬಯ ರಾಜಪಕ್ಸೆ, ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಒಲಿ, ಭೂತಾನ್ ಪ್ರಧಾನಿ ಲೋಟೇ ತ್ಸೆರಿಂಗ್,…










