ಮೈಸೂರು

ಮೈಸೂರಿನ ಶ್ರೀರಾಮಪುರ ಕಸದ ಆಗರ
ಮೈಸೂರು

ಮೈಸೂರಿನ ಶ್ರೀರಾಮಪುರ ಕಸದ ಆಗರ

March 16, 2020

ರಸ್ತೆಯಲ್ಲೇ ಉಕ್ಕಿ ಹರಿವ ಮ್ಯಾನ್‍ಹೋಲ್-ದುರ್ವಾಸನೆ ಕಸದ ರಾಶಿಗೆ ಕಿಡಿಗೇಡಿಗಳ ಬೆಂಕಿ-ವಾಯು ಮಾಲಿನ್ಯ ಮೈಸೂರು,ಮಾ.15(ವೈಡಿಎಸ್)- ಒಂದೆಡೆ ಮುಖ್ಯರಸ್ತೆಯ ಬದಿಯಲ್ಲೇ ಬಿದ್ದಿರುವ ಕಸದ ರಾಶಿ, ಮತ್ತೊಂದೆಡೆ ರಿಂಗ್ ರಸ್ತೆ ಬಳಿಯ ಮ್ಯಾನ್‍ಹೋಲ್ ಉಕ್ಕಿ ಹರಿದು ದುರ್ವಾ ಸನೆ ಬೀರುತ್ತಿದೆ. ಇದು ಶ್ರೀರಾಮಪುರ ವನ್ನು ಬಾಧಿಸುತ್ತಿದ್ದು, ಅನಾರೋಗ್ಯ ಭೀತಿಯೂ ಎದುರಾಗಿದೆ. ಶ್ರೀರಾಮಪುರ ರಿಂಗ್ ರಸ್ತೆ ಮತ್ತು ಮಾನಂದ ವಾಡಿ ಮುಖ್ಯರಸ್ತೆಯ ಶಿವಪುರದಿಂದ ಶ್ರೀ ರಾಮಪುರದವರೆಗೆ ರಸ್ತೆಯ ಎರಡೂ ಬದಿ ಗಳಲ್ಲೂ ರಾಶಿ ರಾಶಿ ಕಸ ಬಿದ್ದಿದ್ದರೂ ವಿಲೇ ವಾರಿ ಮಾಡುವುದಕ್ಕೆ ಗ್ರಾಪಂ…

ಜಿಲ್ಲೆಯ ಜನತೆಯಲ್ಲಿ ಭೀತಿ ಮೂಡಿಸಿದ ಕೊರೊನಾ
ಮೈಸೂರು

ಜಿಲ್ಲೆಯ ಜನತೆಯಲ್ಲಿ ಭೀತಿ ಮೂಡಿಸಿದ ಕೊರೊನಾ

March 16, 2020

ಚಾಮರಾಜನಗರ, ಮಾ.15- ಜಗತ್ತಿ ನಾದ್ಯಂತ ತೀವ್ರ ಆತಂಕ ಸೃಷ್ಟಿಸಿರುವ ಕೊರೊನಾ ವೈರಸ್ ಚಾಮರಾಜನಗರ ಜಿಲ್ಲೆ ಜನತೆ ಯಲ್ಲೂ ಭೀತಿ ಮೂಡಿಸಿದೆ. ಕೊರೊನಾ ವೈರಸ್ ಜನಜೀವನದ ಮೇಲೆ ಪರಿಣಾಮ ಬೀರಿದ್ದು, ಇಡೀ ಜಿಲ್ಲೆ ಸ್ತಬ್ಧಗೊಂಡಿದೆ. ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ಸಲುವಾಗಿ ರಾಜ್ಯ ಸರ್ಕಾರ ಒಂದು ವಾರ ಸಾರ್ವಜನಿಕ ಸಭೆ, ಸಮಾ ರಂಭ, ಸಂತೆ, ಜಾತ್ರೆ, ಉತ್ಸವ, ಚಿತ್ರಮಂದಿ ರಗಳನ್ನು ಸ್ಥಗಿತಗೊಳಿಸಿ ಆದೇಶ ಹೊರಡಿ ಸಿರುವುದನ್ನು ಜಿಲ್ಲೆಯಲ್ಲೂ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ. ಇದರಿಂದ ಜಿಲ್ಲೆಯಲ್ಲಿ ಶನಿವಾರ ನಡೆಯಬೇಕಿದ್ದ ಸಂತೆ, ಜಾತ್ರೆ,…

ಕೊರೊನಾ ವೈರಸ್ ಹರಡದಂತೆ ಕಟ್ಟೆಚ್ಚರ ವಹಿಸಿ
ಮೈಸೂರು

ಕೊರೊನಾ ವೈರಸ್ ಹರಡದಂತೆ ಕಟ್ಟೆಚ್ಚರ ವಹಿಸಿ

March 15, 2020

ಮೈಸೂರು, ಮಾ.14(ಆರ್‍ಕೆ)- ಕೋವಿಡ್-19 (ಕೊರೊನಾ ವೈರಸ್) ಸೋಂಕು ಹರಡದಂತೆ ವಿಶೇಷ ಎಚ್ಚರಿಕಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಅವರು ಶನಿವಾರ ವಿವಿಧ ಇಲಾಖೆಗಳ 90 ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇಂದು 90 ಮಂದಿ ಅಧಿಕಾರಿಗಳನ್ನು ಉಲ್ಲೇ ಖಿಸಿ ಸಾರ್ವತ್ರಿಕ ಪತ್ರ ಬರೆದಿರುವ ಜಿಲ್ಲಾಧಿ ಕಾರಿಗಳು, ಕೋವಿಡ್-19 ಹರಡುವುದನ್ನು ತಡೆ ಗಟ್ಟಲು ಸರ್ಕಾರದ ಆದೇಶದಂತೆ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಕಟ್ಟುನಿಟ್ಟಿನ ಕ್ರಮ ವನ್ನು ಕೈಗೊಳ್ಳಬೇಕೆಂದು ನಿರ್ದೇ ಶನ ನೀಡಿದ್ದಾರೆ. ರಾಜ್ಯಕ್ಕೆ ವಿದೇಶದಿಂದ ಆಗಮಿ…

ಕೊರೊನಾ ಭೀತಿ; ನಗರಪಾಲಿಕೆ ತಂಡದಿಂದ ಮಾರುಕಟ್ಟೆ ಪರಿಶೀಲನೆ, ವರ್ತಕರಿಗೆ ಸೂಚನೆ
ಮೈಸೂರು

ಕೊರೊನಾ ಭೀತಿ; ನಗರಪಾಲಿಕೆ ತಂಡದಿಂದ ಮಾರುಕಟ್ಟೆ ಪರಿಶೀಲನೆ, ವರ್ತಕರಿಗೆ ಸೂಚನೆ

March 15, 2020

ಮೈಸೂರು, ಮಾ.14(ಎಂಟಿವೈ)- ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಮೇಯರ್ ಹಾಗೂ ನಗರಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ಸದಸ್ಯರು ಮತ್ತು ಆರೋಗ್ಯಾಧಿಕಾರಿ ಶನಿವಾರ ಬೆಳಿಗ್ಗೆ ಮೈಸೂರಿನ ದೇವರಾಜ ಮಾರು ಕಟ್ಟೆ, ಬೋಟಿ ಬಜಾರ್‍ಗೆ ತೆರಳಿ ಪರಿ ಶೀಲಿಸಿ, ಸ್ವಚ್ಛತೆ ಕಾಪಾಡುವಂತೆ ಅಲ್ಲಿನ ವರ್ತಕರಿಗೆ ಸೂಚನೆ ನೀಡಿದರು. ಮೇಯರ್ ತಸ್ನೀಂ, ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಜೆ.ಗೋಪಿ, ಆರೋಗ್ಯಾಧಿಕಾರಿ ಡಾ.ಡಿ.ಜಿ.ನಾಗರಾಜು ಮತ್ತಿತರರು ದೇವರಾಜ ಮಾರುಕಟ್ಟೆ, ಬೋಟಿ ಬಜಾರ್ ಸುತ್ತಮುತ್ತ ಪರಿಶೀಲನೆ ನಡೆಸಿ ದರು. ಮಾರುಕಟ್ಟೆಯಲ್ಲಿ ಅಂಗಡಿಗಳ ಮುಂದೆ ಕಸ…

ಕೊರೊನಾ ಭೀತಿ ಹಿನ್ನೆಲೆಯಲ್ಲಿ ನಿರ್ಬಂಧ: ಕಲ್ಯಾಣ ಮಂಟಪದಲ್ಲಿ ಮದುವೆ ಮಾಡುವವರಿಗೆ ಸಂಕಟ
ಮೈಸೂರು

ಕೊರೊನಾ ಭೀತಿ ಹಿನ್ನೆಲೆಯಲ್ಲಿ ನಿರ್ಬಂಧ: ಕಲ್ಯಾಣ ಮಂಟಪದಲ್ಲಿ ಮದುವೆ ಮಾಡುವವರಿಗೆ ಸಂಕಟ

March 15, 2020

ಮೈಸೂರು, ಮಾ. 14(ಆರ್‍ಕೆ)- ಕೋವಿಡ್-19 ಭೀತಿಯಿಂದಾಗಿ ಮುಂಜಾಗ್ರತೆ ವಹಿಸಲು ಶುಕ್ರವಾರ ರಾಜ್ಯ ಸರ್ಕಾರ ವಾರ ಕಾಲ ವಿವಾಹ, ಸಭೆ-ಸಮಾರಂಭಗಳಿಗೆ ನಿರ್ಬಂಧ ಹಾಕಿರುವುದರಿಂದ ಪೂರ್ವ ನಿಗದಿಯಾಗಿದ್ದಂತೆ ಕಲ್ಯಾಣ ಮಂಟಪಗಳಲ್ಲಿ ಮದುವೆ ಮಾಡುವವರಿಗೆ ತೊಂದರೆಯಾಗಿದೆ. ಇಂದು (ಶನಿವಾರ) ಆರತಕ್ಷತೆ ಹಾಗೂ ಭಾನುವಾರ ಮದುವೆ ಸಿದ್ಧತೆ ಮಾಡಿಕೊಂಡಿ ರುವವರಿಗೆ ಸರ್ಕಾರದ ಆದೇಶ ಚಿಂತೆಗೀಡು ಮಾಡಿದೆ. ಈ ಮೊದಲೇ ವಿವಾಹ ಕಾರ್ಯಕ್ರಮ ನಿಗದಿಯಾಗಿ ಆಹ್ವಾನ ಪತ್ರಿಕೆ ಹಂಚಿದ್ದು, ಆತಿಥ್ಯ ವ್ಯವಸ್ಥೆ, ಡೆಕೋರೇಷನ್ ತಯಾರಿ ನಡೆಸಿರುವುದರಿಂದ ವಧು ಮತ್ತು ವರನ ಕಡೆಯವರಿಗೆ ಆತಂಕ ಉಂಟಾಗಿದೆ….

ಹೆಚ್ಚಿನ ಬೆಲೆಗೆ ಮಾಸ್ಕ್, ಸ್ಯಾನಿಟೈಸರ್ ಮಾರಾಟ
ಮೈಸೂರು

ಹೆಚ್ಚಿನ ಬೆಲೆಗೆ ಮಾಸ್ಕ್, ಸ್ಯಾನಿಟೈಸರ್ ಮಾರಾಟ

March 15, 2020

ಔಷಧಿ ಅಂಗಡಿಗಳ ಮೇಲೆ ಪ್ರಕರಣ ದಾಖಲು, 20,000 ರೂ. ದಂಡ ಮೈಸೂರು,ಮಾ.14(ಆರ್‍ಕೆ)- ನಿಗದಿಗಿಂತ ಹೆಚ್ಚಿನ ಬೆಲೆಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ಮಾರಾಟ ಮಾಡುತ್ತಿದ್ದ ನಾಲ್ಕು ಔಷಧ ಅಂಗಡಿ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿರುವ ಡ್ರಗ್ ಕಂಟ್ರೋಲರ್‍ಗಳು, 20,000 ರೂ. ದಂಡ ವಿಧಿಸಿದ್ದಾರೆ. ಇಂದು ಮೈಸೂರಲ್ಲಿ 20 ಔಷಧ ಅಂಗಡಿಗಳಲ್ಲಿ ತಪಾಸಣೆ ನಡೆಸಿದಾಗ ಮಾಸ್ಕ್ ಹಾಗೂ ಸ್ಯಾನಿಟೈಸರ್‍ಗಳನ್ನು ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗು ತ್ತಿದ್ದುದು ಕಂಡು ಬಂದ ಹಿನ್ನೆಲೆಯಲ್ಲಿ ಕಾನೂನು ಮಾಪನಶಾಸ್ತ್ರ ನಿಯಮಗಳಡಿ 4 ಔಷಧ…

ಜೆಎಸ್‍ಎಸ್ ಆಸ್ಪತ್ರೆಯಲ್ಲಿ ಅತ್ಯಾಧುನಿಕ `ಸ್ಕಿಲ್ ಅಂಡ್ ಸಿಮ್ಯುಲೇಷನ್ ಕೇಂದ್ರ’ಕ್ಕೆ ಚಾಲನೆ
ಮೈಸೂರು

ಜೆಎಸ್‍ಎಸ್ ಆಸ್ಪತ್ರೆಯಲ್ಲಿ ಅತ್ಯಾಧುನಿಕ `ಸ್ಕಿಲ್ ಅಂಡ್ ಸಿಮ್ಯುಲೇಷನ್ ಕೇಂದ್ರ’ಕ್ಕೆ ಚಾಲನೆ

March 15, 2020

ವೈದ್ಯಕೀಯ, ಅರೆ ವೈದ್ಯಕೀಯ ಶಿಕ್ಷಣಾರ್ಥಿಗಳ ಪ್ರಾಯೋಗಿಕ ಕಲಿಕೆಗೆ ಬಲು ಪ್ರಯೋಜನಕಾರಿ ಮೈಸೂರು,ಮಾ.14(ಎಂಟಿವೈ)- ವೈದ್ಯ ಕೀಯ ಶಿಕ್ಷಣದಲ್ಲಿ ಪರಿಣಾಮಕಾರಿ ಕಲಿ ಕೆಗೆ ಹಾಗೂ ಅತ್ಯುತ್ತಮ ಪ್ರಾಯೋಗಿಕ ಅನು ಭವ ಪಡೆಯಲು ಅನುಕೂಲವಾಗುವಂತೆ `ಜೆಎಸ್‍ಎಸ್ ಉನ್ನತ ಶಿಕ್ಷಣ ಮತ್ತು ಸಂಶೋ ಧನಾ ಅಕಾಡೆಮಿ’ಯು ಜೆಎಸ್‍ಎಸ್ ಆಸ್ಪತ್ರೆಯ ಹಳೆ ಕಟ್ಟಡದಲ್ಲಿ ಸ್ಥಾಪಿಸಿರುವ `ಸ್ಕಿಲ್ ಅಂಡ್ ಸಿಮ್ಯುಲೇಷನ್ ಕೇಂದ್ರ’ ವನ್ನು ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ (ಎಂಸಿಐ) ಪ್ರಧಾನ ಕಾರ್ಯದರ್ಶಿ ಡಾ.ರಾಕೇಶ್ ಕುಮಾರ್ ವತ್ಸ್ ಶನಿವಾರ ಉದ್ಘಾಟಿಸಿದರು. ಆಸ್ಪತ್ರೆಯ ಹಳೆ ಕಟ್ಟಡದ 3ನೇ…

ಕೋವಿಡ್-19 ಭೀತಿ: ಮನೆಗಳಿಗೆ ಹಿಂದಿರುಗಿದ ಹಾಸ್ಟೆಲ್ ವಿದ್ಯಾರ್ಥಿಗಳು
ಮೈಸೂರು

ಕೋವಿಡ್-19 ಭೀತಿ: ಮನೆಗಳಿಗೆ ಹಿಂದಿರುಗಿದ ಹಾಸ್ಟೆಲ್ ವಿದ್ಯಾರ್ಥಿಗಳು

March 15, 2020

ಮೈಸೂರು, ಮಾ.14(ಆರ್‍ಕೆ) ಕೋವಿಡ್-19 ಮಾರಣಾಂತಿಕ ರೋಗದ ಭೀತಿಯಿಂ ದಾಗಿ ಸರ್ಕಾರ ಒಂದು ವಾರ ಕಾಲ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿರುವ ಹಿನ್ನೆಲೆ ಯಲ್ಲಿ ಮೈಸೂರು ಜಿಲ್ಲೆಯಾ ದ್ಯಂತ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ವಸತಿ ಶಾಲೆ, ವಿವಿಧ ಇಲಾಖೆಗಳ ಹಾಸ್ಟೆಲ್ ವಿದ್ಯಾರ್ಥಿ ಗಳನ್ನು ಇಂದು ಅವರ ಮನೆಗಳಿಗೆ ಸುರಕ್ಷಿತ ವಾಗಿ ಕಳುಹಿಸಿಕೊಡ ಲಾಯಿತು. ಜಿಲ್ಲಾಧಿ ಕಾರಿಗಳ ಸೂಚನೆ ಮೇರೆಗೆ ಮೈಸೂರು ವಿಶ್ವವಿದ್ಯಾನಿಲಯದ ಹಾಸ್ಟೆಲ್‍ಗಳ ವಿದ್ಯಾರ್ಥಿ ಗಳು (ಹೊರ ದೇಶ ಮತ್ತು ರಾಜ್ಯದವ ರನ್ನು ಹೊರತು ಪಡಿಸಿ) ಖಾಸಗಿ…

ಮೈಸೂರಿನಲ್ಲಿ ಜಾನುವಾರುಗಳಿಗೆ ಇನಾಫ್ ಟ್ಯಾಗ್ ಅಳವಡಿಕೆ
ಮೈಸೂರು

ಮೈಸೂರಿನಲ್ಲಿ ಜಾನುವಾರುಗಳಿಗೆ ಇನಾಫ್ ಟ್ಯಾಗ್ ಅಳವಡಿಕೆ

March 15, 2020

ವಂಶಾವಳಿ, ಹಾಲಿನ ಇಳುವರಿ, ಮಾಲೀಕರ ವಿವರ ದಾಖಲಿಸಲು ಪಶುಪಾಲನಾ ಇಲಾಖೆಯಿಂದ ಹಸು-ಎಮ್ಮೆಗಳಿಗೆ ವಿಶಿಷ್ಟ ಮಾಹಿತಿ ಸಾಧನ ಮೈಸೂರು, ಮಾ. 14- ಜನಸಂಖ್ಯೆಯಂತೆ ಸಾಕು ಪ್ರಾಣಿಗಳ ಮಾಹಿತಿ ಸಂಗ್ರಹಿಸಿ ಆಹಾರ, ಆರೋಗ್ಯ ರಕ್ಷಣೆಗಾಗಿ ಯೋಜನೆ ತಯಾರಿಸಲು ಅನುಕೂಲ ವಾಗುವಂತೆ ರಾಜ್ಯ ಸರ್ಕಾರ ಜಾನುವಾರುಗಳಿಗೆ ಇನಾಫ್ (Information Network for Animal Productivity and Health) ವಿಶಿಷ್ಟ ಗುರುತಿನ ಸಂಖ್ಯೆ ನೀಡುವ ವಿನೂತನ ಯೋಜನೆ ಯನ್ನು ಜಾರಿಗೊಳಿಸುತ್ತಿದೆ. ಜನಸಂಖ್ಯೆಗನುಗುಣವಾಗಿ ವಿವಿಧ ಕಲ್ಯಾಣ ಕಾರ್ಯಕ್ರಮಗಳಿಗಾಗಿ ರಾಜ್ಯ ಬಜೆಟ್‍ನಲ್ಲಿ ಅಗತ್ಯವಿ ರುವ ಅನುದಾನ…

ಬೆಳಗೊಳದ ಶ್ರೀನಿವಾಸ ಸನ್ನಿಧಿಯಲ್ಲಿ ಭಕ್ತಿ ಪ್ರಧಾನ ಮಹಾ ಸಂಪ್ರೋಕ್ಷಣಾ ಪೂಜೆ
ಮೈಸೂರು

ಬೆಳಗೊಳದ ಶ್ರೀನಿವಾಸ ಸನ್ನಿಧಿಯಲ್ಲಿ ಭಕ್ತಿ ಪ್ರಧಾನ ಮಹಾ ಸಂಪ್ರೋಕ್ಷಣಾ ಪೂಜೆ

March 15, 2020

ಶ್ರೀರಂಗಪಟ್ಟಣ, ಮಾ. 14- ತಾಲೂ ಕಿನ ಬೆಳಗೊಳ ಬಳಿ ಕಾವೇರಿ ತೀರದಲ್ಲಿ ರುವ 11ನೇ ಶತಮಾನದ ಶ್ರೀನಿವಾಸ ಸನ್ನಿಧಿಯಲ್ಲಿ ಶನಿವಾರ ಅಷ್ಠಬಂಧನ ಮಹಾ ಸಂಪ್ರೋಕ್ಷಣಾ ಪೂಜೆ ಭಕ್ತಿ ಭಾವದಿಂದ ನೆರವೇರಿತು. ಮೈಸೂರಿನ ಒರಿಸ್ಸಾ ಮೈಸೂರು ಸಂಘ ದಿಂದ ಪುನರುಜ್ಜೀವನಗೊಳಿಸಲ್ಪಟ್ಟಿರುವ ಈ ದೇವಸ್ಥಾನದಲ್ಲಿ ಶನಿವಾರ ಬೆಳಿಗ್ಗೆಯೇ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಇವರ ಜೊತೆ ಗ್ರಾಮದ ಯಜಮಾನರೂ ಸೇರಿಕೊಂ ಡರು. ಮೊದಲಿಗೆ ಬೆಳಗೊಳ ಶ್ರೀ ಪರಾಶರ ಗುರುಕುಲಂ ಮಕ್ಕಳಿಂದ ವಿಷ್ಣು ಸಹಸ್ರನಾಮ ಪಾರಾಯಣ ನಡೆಯಿತು. ಮೈಸೂರಿನ ಮಹಾರಾಜ…

1 636 637 638 639 640 1,611
Translate »