ಮೈಸೂರು, ಮಾ.15(ಆರ್ಕೆಬಿ)- ಕೊರೊನಾ ವೈರಸ್ ತಡೆಗೆ `ಪ್ರಾಣಾ ಯಾಮ’ ಉತ್ತಮ ಔಷಧ. ಸರಿಯಾದ ರೀತಿ ಪ್ರಾಣಾಯಾಮ ಮಾಡಿದರೆ ಕೊರೊನಾ ವೈರಸ್ ನಮ್ಮ ಹತ್ತಿರ ಸುಳಿ ಯದು. ಅಂಥ ಶಕ್ತಿ ಪ್ರಾಣಾಯಾಮಕ್ಕೆ ಇದೆ ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರಧಾನ ಗುರುದತ್ತ ಹೇಳಿದರು. ಮೈಸೂರಿನ ಶಾರದಾ ವಿಲಾಸ ಶತಮಾ ನೋತ್ಸವ ಭವನದಲ್ಲಿ ಯೋಗಾಚಾರ್ಯ ರಾದ ದೇವಕಿ ಮಾಧವ್ ಅವರ `ವೈಜ್ಞಾನಿಕ ಪ್ರಾಣಾಯಾಮ’ ಕೃತಿಯನ್ನು ಭಾನುವಾರ ಬಿಡುಗಡೆ ಮಾಡಿದ ಅವರು, ಯೋಗ ಬಲು ಪ್ರಾಚೀನ. ಭಗವದ್ಗೀತೆಯಲ್ಲೂ…
25ನೇ ವಾರ್ಡ್ನಲ್ಲಿ 40 ಲಕ್ಷ ರೂ. ಅಭಿವೃದ್ಧಿ ಕಾಮಗಾರಿಗೆ ಶಾಸಕರಿಂದ ಗುದ್ದಲಿಪೂಜೆ
March 16, 2020ಮೈಸೂರು,ಮಾ.15(ಆರ್ಕೆಬಿ)- ಚಾಮ ರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತಿಲಕ್ ನಗರದ 25ನೇ ವಾರ್ಡ್ನಲ್ಲಿ ಒಟ್ಟು 40 ಲಕ್ಷ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿ ಗಳಿಗೆ ಶಾಸಕ ಎಲ್.ನಾಗೇಂದ್ರ ಭಾನು ವಾರ ಗುದ್ದಲಿಪೂಜೆ ನೆರವೇರಿಸಿದರು. ಎಸ್ಎಫ್ಸಿ ಅನುದಾನದಲ್ಲಿ ಪುಲಿಕೇಶಿ ರಸ್ತೆಯಲ್ಲಿ 15 ಲಕ್ಷ ರೂ. ವೆಚ್ಚದಲ್ಲಿ ಆಟೋ ನಿಲ್ದಾಣಕ್ಕೆ ಮೇಲ್ಛಾವಣಿ ನಿರ್ಮಾಣ, ತಿಲಕ್ ನಗರ 2ನೇ ಮುಖ್ಯರಸ್ತೆಗೆ 25 ಲಕ್ಷ ರೂ. ವೆಚ್ಚದಲ್ಲಿ ಪುಟ್ಪಾತ್ ನಿರ್ಮಾಣ ಕಾಮ ಗಾರಿ ಆರಂಭಗೊಂಡಿತು. ಕಾಮಗಾರಿ ಗುಣಮಟ್ಟ ಕಾಯ್ದುಕೊಳ್ಳುವಂತೆ ಶಾಸ ಕರು ಗುತ್ತಿಗೆದಾರರಿಗೆ…
ಕೊರೊನಾ; ವದಂತಿ ಹರಡುತ್ತಿರುವ ಕಿಡಿಗೇಡಿಗಳ ವಿರುದ್ಧ ಪ್ರಕರಣ ದಾಖಲಿಸಲು ಡಿಸಿ ಸೂಚನೆ
March 16, 2020ಮೈಸೂರು, ಮಾ.15(ಎಂಟಿವೈ)-ತಿ.ನರಸೀಪುರ ಪಟ್ಟಣದಲ್ಲಿ ಕೊರೊನಾ ಸೋಂಕು ತಗುಲಿದ ವ್ಯಕ್ತಿ ಪತ್ತೆಯಾಗಿದ್ದಾನೆ ಎಂದು ಯುವಕನೊಬ್ಬನ ಭಾವಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಭಯ ಮೂಡಿಸುತ್ತಿರುವ ಕಿಡಿಗೇಡಿ ವಿರುದ್ಧ ಪ್ರಕರಣ ದಾಖಲಿಸಲು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರು ಪೊಲೀಸರಿಗೆ ಸೂಚನೆ ನೀಡಿದ್ದಾರೆ. ವದಂತಿ: `ತಿ.ನರಸೀಪುರ ಮೂಲದ ಯುವಕನೊಬ್ಬನಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಯುವಕ ಪಟ್ಟಣದಲ್ಲಿ ಸಂಚರಿಸುತ್ತಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದಿರಬೇಕು’ ಎಂದು ಯುವಕನೊಬ್ಬನ ಭಾವಚಿತ್ರ ಸಹಿತದ ವಿಡಿಯೊ ವನ್ನು ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ವಾಟ್ಸಪ್ ಮತ್ತು ಫೇಸ್ಬುಕ್ ಸೇರಿದಂತೆ…
ಮೈಸೂರು ನಗರ, ವರ್ತುಲ ರಸ್ತೆಯಲ್ಲಿನ್ನು `ವೇಗ ಮಿತಿ’
March 16, 2020ಹೊಸ ನಿಯಮ ಭಾನುವಾರದಿಂದಲೇ ಜಾರಿಗೆ ವೇಗದ ಚಾಲನೆಗೆ ದಂಡ ಮೈಸೂರು,ಮಾ.15(ಎಂಟಿವೈ)- ವಾಹನಗಳ ಅತಿ ವೇಗದ ಚಾಲನೆಯಿಂದಾಗಿ ರಸ್ತೆ ಅಪಘಾತಗಳ ಸಂಖ್ಯೆ ಮೈಸೂರು ನಗರದಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ `ವೇಗ ಮಿತಿ’ ನಿಯಮ ಜಾರಿಗೊಳಿಸಿದೆ. ಈ ನಿಯಮ ತಕ್ಷಣದಿಂದಲೇ(ಮಾ.15) ಜಾರಿಗೆ ಬಂದಿದೆ. ಮೈಸೂರು ನಗರದ ವಿವಿಧ ಬಡಾವಣೆ, ಹೊರವರ್ತುಲ ರಸ್ತೆಯಲ್ಲಿ ಹಾಗೂ ಬೇರೆ ನಗರ, ಪಟ್ಟಣಗಳಿಂದ ಮೈಸೂರಿಗೆ ಬರುವ ವಾಹನಗಳ ವೇಗ ಹೆಚ್ಚಾಗಿದ್ದು, ಅಪಘಾತ ಸಂಭವಿಸಿ ಸಾವು-ನೋವು ಹಾಗೂ ಆಸ್ತಿ ಹಾನಿ ಸಂಭವಿಸುತ್ತಿರುವುದನ್ನು ತಡೆಯಲು ಮೈಸೂರು ನಗರ…
ರಸ್ತೆ ಅಗಲೀಕರಣ ಕಾಮಗಾರಿ ಪುನಾರಂಭ: ಇರ್ವಿನ್ ರಸ್ತೆಯಲ್ಲಿ ಮತ್ತೆ ಸಂಚಾರ ನಿರ್ಬಂಧ
March 16, 2020ಮೈಸೂರು, ಮಾ.15(ಎಂಟಿವೈ)- ಮೈಸೂ ರಿನ ಇರ್ವಿನ್ ರಸ್ತೆ ಅಗ ಲೀಕರಣ ಕಾಮಗಾರಿ ಪುನಾರಂಭವಾಗಿದ್ದು, ಆ ಮಾರ್ಗದಲ್ಲಿ ಮುಂದಿನ 3 ತಿಂಗಳವರೆಗೆ ವಾಹನ ಸಂಚಾರ ನಿರ್ಬಂಧಿ ಸಿರುವುದಾಗಿ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ತಿಳಿಸಿದ್ದಾರೆ. ರಸ್ತೆ ಅಗಲೀಕರಣ ಕಾಮಗಾರಿಯನ್ನು ಮತ್ತೆ ಆರಂಭಿಸಿರುವ ಮೈಸೂರು ಮಹಾ ನಗರಪಾಲಿಕೆಯ ಕೋರಿಕೆ ಮೇರೆಗೆ ಇರ್ವಿನ್ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿಷೇ ಧಿಸಲಾಗಿದೆ. ನೆಹರು ವೃತ್ತದಿಂದ ಪಶ್ಚಿಮಕ್ಕೆ ಸರ್ ಎಂ.ವಿಶ್ವೇಶ್ವರಯ್ಯ ವೃತ್ತದವರೆಗೆ ಎರಡೂ ದಿಕ್ಕುಗಳಲ್ಲಿ ಎಲ್ಲಾ ಮಾದರಿಯ ವಾಹನ ಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ಅಲ್ಲದೇ…
ಟಿಬೆಟಿಯನ್ನರ ಮಾನವ ಹಕ್ಕು ರಕ್ಷಣೆಗೆ ವಿಶ್ವಸಂಸ್ಥೆ ಮಧ್ಯೆ ಪ್ರವೇಶಿಸಲಿ
March 16, 2020ಟಿಬೆಟಿಯನ್ನರ ದಂಗೆ ದಿನ ಆಚರಣೆ ವೇಳೆ ಪ್ರಾದೇಶಿಕ ಸಂಚಾಲಕ ಜಯಪ್ರಕಾಶ್ರಾಜೇ ಅರಸ್ ಮನವಿ ಮೈಸೂರು,ಮಾ.15(ಆರ್ಕೆಬಿ)- 1959ರಲ್ಲಿ ಕಮ್ಯುನಿಸ್ಟ್ ಚೀನಾದ ದಬ್ಬಾಳಿಕೆ, ದೌರ್ಜನ್ಯ ಖಂಡಿಸಿ ಟಿಬೆಟ್ನ ಮಹಿಳೆಯರು ದಿಟ್ಟತನದಿಂದ ದಂಗೆ ಎದ್ದುದರ ಸ್ಮರಣಾರ್ಥ ಮಾ.12ರಂದು `ದಂಗೆ ದಿನ’ ಆಚರಿಸಲಾಗಿದೆ. ವಿಶ್ವಸಂಸ್ಥೆ ಮಧ್ಯ ಪ್ರವೇಶಿಸಿ ಟೆಬೆಟಿಯನ್ನರ ಮಾನವಹಕ್ಕು ರಕ್ಷಣೆಗೆ ಮುಂದಾಗಬೇಕು ಎಂದು ಭಾರತೀಯ ಟಿಬೆಟಿಯನ್ ಸಂಸ್ಥೆಯ ಪ್ರಾದೇಶಿಕ ಸಂಚಾಲಕ ಜಯಪ್ರಕಾಶ್ರಾಜೇ ಅರಸ್ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು. ಬೈಲಕುಪ್ಪೆಯ ಆರ್ಟಿಡಬ್ಲ್ಯುಎ ಅಧ್ಯಕ್ಷ ತಾಶಿ ಚೋಡೊನ್ ಮಾತನಾಡಿ, ಟಿಬೆಟಿಯನ್ ಸಂಸ್ಕøತಿ, ಸಂತತಿಯನ್ನೇ ನಾಶ…
ಜೂಜು ಅಡ್ಡೆಗೆ ಡಿಸಿಐಬಿ ದಾಳಿ: 13 ಮಂದಿ ಸೆರೆ, 29,100 ರೂ. ವಶ
March 16, 2020ಮೈಸೂರು,ಮಾ.15(ಎಂಟಿವೈ)-ಮೈಸೂರು ಜಿಲ್ಲಾ ಡಿಸಿಐಬಿ ಪೊಲೀಸರು ತಿ.ನರಸೀ ಪುರÀ ಪೊಲೀಸ್ ಠಾಣಾ ವ್ಯಾಪ್ತಿಯ ದಳವಾಯಿ ಅಗ್ರಹಾರದ ಖಾಲಿ ಜಾಗದಲ್ಲಿದ್ದ ಜೂಜು ಅಡ್ಡೆ ಮೇಲೆ ಶನಿವಾರ ಸಂಜೆ ದಾಳಿ ನಡೆಸಿ 13 ಜೂಜುಕೋರರನ್ನು ಬಂಧಿಸಿದ್ದಾರೆ. ಪಣಕ್ಕಿಟ್ಟಿದ್ದ 29,100 ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ. ಸ್ಥಳೀಯರ ದೂರಿನ ಮೇರೆಗೆ ದಾಳಿ ನಡೆಸಿದ ಪೊಲೀಸರು, ಇಸ್ಪೀಟ್ ಜೂಜಾಟ ದಲ್ಲಿ ತೊಡಗಿದ್ದ ರಾಚಪ್ಪ, ಮಹೇಶ, ಮಹದೇವಸ್ವಾಮಿ, ನಿಂಗರಾಜು, ನಾಗರಾಜು, ನಾಗೇಂದ್ರ, ರಾಜು, ಮಲ್ಲಿಕಾರ್ಜುನ, ಪ್ರಸಾದ್ ಕುಮಾರ್, ನಿಂಗಪ್ಪ, ಸುದರ್ಶನ್, ಗುರು ಹಾಗೂ ಬಾಬುರಾಜ್ ಎಂಬವರನ್ನು ಬಂಧಿಸಿ, ಇಸ್ಪೀಟ್…
ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಪ್ರಮಾಣಿತ ಗುಣಮಟ್ಟದ ಪೆÇೀಷಣೆ ತರಬೇತಿ
March 16, 2020ಮೈಸೂರು, ಮಾ.15- ಮೈಸೂರು ಜಿಲ್ಲೆಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಮಕ್ಕಳ ಪಾಲನಾ ಸಂಸ್ಥೆಗಳನ್ನು ಎರಡು ತಂಡಗಳಾಗಿ ವಿಭಾಗಿಸಿ ಎರಡು ದಿನಗಳು ಸಂಸ್ಥೆಯ ಮುಖ್ಯಸ್ಥರು ಮತ್ತು ಸಿಬ್ಬಂದಿಗಳಿಗೆ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಪ್ರಮಾಣಿತ ಗುಣಮಟ್ಟದ ಪೆÇೀಷಣೆ ತರಬೇತಿ ಆಯೋಜಿಸಲಾಗಿತ್ತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಪದ್ಮಾ, ಜೆ.ಜೆ. ಕಾಯ್ದೆ ಮತ್ತು ಮಾದರಿ ನಿಯಮಗಳನ್ನು ನಿಮ್ಮ ಮಕ್ಕಳ ಪಾಲನಾ…
ಸ್ಕೇಟಿಂಗ್, ಕರಾಟೆಯಲ್ಲಿ ಸಾಧನೆಗೈದ ಮೈಸೂರಿನ ಪೋರಿ
March 16, 2020ಮೈಸೂರು,ಮಾ.15(ವೈಡಿಎಸ್)- 4ನೇ ವರ್ಷಕ್ಕೆ ರೋಲರ್ ಸ್ಕೇಟಿಂಗ್ ಮೂಲಕ ಕ್ರೀಡಾಕ್ಷೇತ್ರಕ್ಕೆ ಪಾದಾ ರ್ಪಣೆ ಮಾಡಿದ್ದ ಯುವಪ್ರತಿಭೆ, ಕಳೆದ ಒಂದೂವರೆ ವರ್ಷದಲ್ಲಿ ಕರಾಟೆಯಲ್ಲಿ 2 ಬೆಳ್ಳಿ, 2 ಕಂಚಿನ ಪದಕ ಮುಡಿಗೇರಿಸಿಕೊಂಡಿದ್ದಾಳೆ. 2020ರಲ್ಲಿ ಹಾಸನ ಜಿಲ್ಲೆ ಅರಕಲಗೂಡಿನಲ್ಲಿ ನಡೆದ 21ನೇ ಶೋರಿನ್ ಕೈ ನ್ಯಾಷನಲ್ ರಿಪಬ್ಲಿಕ್ ಡೇ ಕಪ್’ ಪಂದ್ಯಾವಳಿಯ ಕರಾಟೆಯ ಬ್ಲಾಕ್ ಬೆಲ್ಟ್ನಲ್ಲಿ ಪ್ರಥಮ ಸ್ಥಾನ ಗಳಿಸುವ ಮೂಲಕ ಟ್ರೋಫಿ ತಮ್ಮದಾಗಿಸಿಕೊಂಡಿದ್ದಾಳೆ. ಮೂಲತಃ ಬೆಂಗಳೂರು ಯಲಹಂಕದ ಬೆಟ್ಟಹಲಸೂರು ನಿವಾಸಿ, ಮೈಸೂರಿನ ಜೆ.ಪಿ. ನಗರದಲ್ಲಿ ವಾಸವಾಗಿರುವ ಬಿ.ಎಸ್.ಸರವಣ ಮತ್ತು ಗೀತಾ…
ಹುತಾತ್ಮ ಯೋಧ ಮೇ.ಸಂದೀಪ್ ಉನ್ನಿಕೃಷ್ಣನ್ 43ನೇ ಜನ್ಮದಿನ: ಯುವ ಬಳಗದಿಂದ ಆಚರಣೆ
March 16, 2020ಮೈಸೂರು, ಮಾ.15(ಎಂಕೆ)- ಹುತಾತ್ಮ ಯೋಧ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ 43ನೇ ಜನ್ಮದಿನದಂಗವಾಗಿ `ಯುವ ಭಾರತ್ ಮತ್ತು ವೀರ ಸಾವರ್ಕರ್ ಯುವ ಬಳಗ’ದ ಸದಸ್ಯರು ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಭಾನುವಾರ ಮೇಣದ ಬತ್ತಿ ಬೆಳಗಿಸಿ ಸ್ಮರಿಸಿದರು. ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಭಾವಚಿತ್ರಗಳನ್ನು ಹಿಡಿದು ಜೈಕಾರ ಕೂಗಿದ ಯುವಜನತೆ, ವೀರ ಸೇನಾನಿಗೆ ನಮನ ಸಲ್ಲಿಸಿದರು. ಮೈಸೂರು ಮಹಾನಗರ ಪಾಲಿಕೆಯು ಮೇಜರ್ ಸಂದೀಪ್ ಉನ್ನಿಕೃಷ್ಣನ್ ಪುತ್ಥಳಿ ಸ್ಥಾಪಿಸಬೇಕು. ರಸ್ತೆ ಅಥವಾ ವೃತ್ತವೊಂದಕ್ಕೆ ಅವರ ಹೆಸರಿಡಬೇಕು ಎಂದು…