ಮೈಸೂರು,ಫೆ.5-ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಕಡಕೊಳ ಗ್ರಾಮದಲ್ಲಿ ಬುಧವಾರ ಕ್ಷೇತ್ರದ ಶಾಸಕ ಜಿ.ಟಿ.ದೇವೇ ಗೌಡ ಅವರು ವಿವಿಧ ಯೋಜನೆಗಳ ಅನುದಾನದಡಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಕಡಕೊಳ ಗ್ರಾಮದಲ್ಲಿ ಉರ್ದು ಶಾಲೆ ಕಟ್ಟಡ ನಿರ್ಮಾ ಣಕ್ಕೆ ಗುದ್ದಲಿಪೂಜೆ ನೆರವೇರಿಸಿದ ಗೌಡರು, ನಂತರ ಜೈನರ ಬೀದಿ, ನಾಯಕರ ಬೀದಿಗಳ ಸಿಸಿ ರಸ್ತೆ, ಒಳಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು. ಹರಿಜನರ ಕಾಲೋನಿಯಲ್ಲಿ ನೂತನವಾಗಿ ನಿರ್ಮಿಸಿ ರುವ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನ ವನ್ನೂ ಇದೇ ವೇಳೆ ಉದ್ಘಾಟಿಸಿದರು. ಈ ಸಂದರ್ಭದಲ್ಲಿ…
ಮೈಸೂರು ರೈಲ್ವೆ ಮ್ಯೂಸಿಯಂಗೆ 5 ಕೋಟಿ ರೂ. ಅನುದಾನ
February 6, 2020ಮೈಸೂರು, ಫೆ. 5- ಮೈಸೂರು ರೈಲ್ವೆ ಮ್ಯೂಸಿಯಂ ನವೀಕರಣ ಹಾಗೂ ಅಭಿವೃದ್ಧಿಗೆ ಐದು ಕೋಟಿ ಅನುದಾನ ಬಿಡುಗಡೆಗೆ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರು ಇಲಾಖಾಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಸಂಬಂಧ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ, ಸಚಿವರನ್ನು ಭೇಟಿಯಾಗಿ, ಹಾಲಿ ಕೈಗೆತ್ತಿಕೊಂಡಿರುವ ರೈಲ್ವೆ ಮ್ಯೂಸಿಯಂ ನವೀಕರಣ ಹಾಗೂ ಅಭಿವೃದ್ಧಿ ಕಾಮಗಾರಿಗೆ ಹೆಚ್ಚುವರಿ ಅನುದಾನದ ಅಗತ್ಯವಿದ್ದು, ಅದನ್ನು ಕೂಡಲೇ ಕಲ್ಪಿಸುವಂತೆ ಸೋಮ ವಾರವಷ್ಟೇ ಮನವಿ ಮಾಡಿದ್ದರು. ಕೂಡಲೇ ಐದು ಕೋಟಿ ರೂ. ಬಿಡುಗಡೆಗೆ ಕೇಂದ್ರ ಸಚಿವ…
ರಾಜ್ಯ ಸರ್ಕಾರಿ ನಿವೃತ್ತ ನೌಕರರಿಂದ ಫೆ.19ಕ್ಕೆ ಬೆಂಗಳೂರಲ್ಲಿ ಬೃಹತ್ ರ್ಯಾಲಿ
February 6, 2020ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ `ಸರ್ಕಾರಿ ನಿವೃತ್ತ ನೌಕರರ ನಡೆ ವಿಧಾನಸೌಧದ ಕಡೆ’ ಮೈಸೂರು, ಫೆ.5(ಪಿಎಂ)- ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾ ಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ನೇತೃತ್ವದಲ್ಲಿ ಫೆ.19ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ಹಮ್ಮಿಕೊಳ್ಳ ಲಾಗಿದೆ ಎಂದು ಸಂಘದ ಮೈಸೂರು ಜಿಲ್ಲಾಧ್ಯಕ್ಷ ಎನ್.ಓಬಯ್ಯ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ಫೆ.19ರ ಬೆಳಿಗ್ಗೆ 10ಕ್ಕೆ ಬೆಂಗಳೂರು ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಫ್ರೀಡಂ ಪಾರ್ಕ್ವರೆಗೆ…
ರೈತ ಚಳವಳಿಗಾರರ ವಿರುದ್ಧ ಭ್ರಷ್ಟಾಚಾರ ಆರೋಪ; ಪಾರದರ್ಶಕ ನೀತಿಗೆ ಚಿಂತನೆ
February 6, 2020ರೈತ ಮುಖಂಡರ ಆಸ್ತಿ ಘೋಷಣೆ ನೀತಿ ಅಳವಡಿಕೆ: ಬಡಗಲಪುರ ನಾಗೇಂದ್ರ ಮೈಸೂರು, ಫೆ.5(ಎಸ್ಪಿಎನ್)-ಇತ್ತೀಚೆಗೆ ರೈತ ಚಳವಳಿಗಾರರ ಮೇಲೆ ಭ್ರಷ್ಟಾ ಚಾರ ಆರೋಪ ವ್ಯಾಪಕವಾಗಿ ಕೇಳಿಬರುತ್ತಿದೆ. ಈ ಆರೋಪದಿಂದ ಮುಕ್ತರಾಗಲು ಹಾಗೂ ಸಂಘಟನೆಯಲ್ಲಿ ಪಾರದರ್ಶಕ ನೀತಿ ಅಳವಡಿಸಿಕೊಳ್ಳುವ ಬಗ್ಗೆ ಚಿಂತನೆ ನಡೆದಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಬಡಗಲ ಪುರ ನಾಗೇಂದ್ರ ಅಭಿಪ್ರಾಯಪಟ್ಟರು. ಈ ಬಗ್ಗೆ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಅವರು, ರೈತ ಸಂಘಟನೆ ಯಲ್ಲಿ ಶಿಸ್ತು ಮೂಡಿಸುವ ದೃಷ್ಟಿಯಿಂದÀ ರಾಜ್ಯ…
`ಆರಭಿ’ಯಿಂದ ಇಂದು ಕರೋಕೆ ಗೀತಗಾಯನ
February 6, 2020ಮೈಸೂರು, ಫೆ.5(ಪಿಎಂ)-ಮೈಸೂರಿನ `ಆರಭಿ’ ಸಾಂಸ್ಕøತಿಕ ಟ್ರಸ್ಟ್ನ ಪ್ರಥಮ ವಾರ್ಷಿಕೋತ್ಸವ ಹಾಗೂ `ಕರೋಕೆ’ ಗೀತ ಗಾಯನ ಕಾರ್ಯಕ್ರಮ ಫೆ.6ರಂದು ಜೆಎಲ್ಬಿ ರಸ್ತೆಯ ನಾದಬ್ರಹ್ಮ ಸಂಗೀತ ಸಭಾದಲ್ಲಿ ನಡೆಯಲಿದೆ ಎಂದು ಟ್ರಸ್ಟ್ನ ಸಲಹಾ ಸಮಿತಿ ಅಧ್ಯಕ್ಷ ಪಿ.ಮಹೇಶ್ ಕುಮಾರ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಅಂದು ಸಂಜೆ 5.30ಕ್ಕೆ `ವರುಷದ ಹರುಷ’ ಶೀರ್ಷಿಕೆಯ ಕಾರ್ಯಕ್ರಮದಲ್ಲಿ ಚಿತ್ರ ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಅತಿಥಿಯಾಗಿರುವರು. ಟ್ರಸ್ಟ್ ಅಧ್ಯಕ್ಷ ಡಾ.ಎನ್.ಕುಲದೀಪ್ ಅಧ್ಯಕ್ಷತೆ ವಹಿಸುವರು. ನಿನಾದ್ ಮ್ಯೂಸಿಕಲ್ ಟ್ರಸ್ಟ್ ಅಧ್ಯಕ್ಷರಾದ ಸಂಗೀತ ನಿರ್ದೇಶಕ ಎ.ಎಸ್.ಪ್ರಸನ್ನಕುಮಾರ್ ಅವರನ್ನು…
ವಾಹನ ನಿಲುಗಡೆ ವಿಚಾರದಲ್ಲಿ ಹಲ್ಲೆಗೊಳಗಾಗಿದ್ದ ವ್ಯಕ್ತಿ ಸಾವು
February 6, 2020ಮೈಸೂರು,ಫೆ.5(ಆರ್ಕೆ)-ವಾಹನ ನಿಲ್ಲಿಸಿ ರಸ್ತೆ ಬಂದ್ ಮಾಡಿದ್ದ ಕಾರಣಕ್ಕೆ ಮೂವ ರಿಂದ ಹಲ್ಲೆಗೊಳಗಾಗಿ ಗಾಯಗೊಂಡಿದ್ದ ವ್ಯಕ್ತಿ ಮಂಗಳವಾರ ಸಂಜೆ ಸಾವನ್ನಪ್ಪಿದ್ದಾನೆ. ಮೈಸೂರಿನ ರಾಜೀವ್ನಗರ ನಿವಾಸಿ ಮೊಹಮದ್ ಜಬ್ಬೀರ್ ಖಾನ್ ಅವರ ಮಗ ಮೊಹಮದ್ ಸಲ್ಮಾನ್ಖಾನ್(26) ಸಾವನ್ನಪ್ಪಿದವರು. ಮನೆ ಬಳಿ ವಾಹನವೊಂದನ್ನು ಅಡ್ಡ ನಿಲ್ಲಿಸಿ, ರಸ್ತೆ ಬಂದ್ ಮಾಡಿದ್ದ ವಿಷಯಕ್ಕೆ ಸಂಬಂಧಿಸಿದಂತೆ ಜಬ್ರಾಸ್ ಪಟಾನ್, ಪರ್ವಿಜ್ ಪಟಾನ್, ತಬ್ರಿಸ್ ಪಟಾನ್ ಎಂಬುವರು ಆತನ ಮೇಲೆ ಕಬ್ಬಿಣದ ರಾಡ್ನಿಂದ ಜನವರಿ 25ರಂದು ತೀವ್ರ ಹಲ್ಲೆ ನಡೆಸಿದ್ದರು. ತೀವ್ರ ರಕ್ತಸ್ರಾವದಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ…
ಛತ್ರಪತಿ ಶಿವಾಜಿ ಜಯಂತಿ ಕುರಿತು ಪೂರ್ವ ಸಿದ್ಧತಾ ಸಭೆ
February 6, 2020ಮೈಸೂರು, ಫೆ.5- ಛತ್ರಪತಿ ಶಿವಾಜಿ ಜಯಂತಿ ಆಚರಣೆ ಕುರಿತಂತೆ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಆರ್.ಪೂರ್ಣಿಮಾ ಅಧ್ಯಕ್ಷತೆಯಲ್ಲಿ ಪೂರ್ವ ಸಿದ್ಧತಾ ಸಭೆ ನಡೆಸಲಾಯಿತು. ಫೆಬ್ರವರಿ 19ರಂದು ಛತ್ರಪತಿ ಶಿವಾಜಿ ಜಯಂತಿ ನಡೆಯಲಿದ್ದು, ಈ ಕುರಿತು ಶಿವಾಜಿ ಜಯಂ ತ್ಯೋತ್ಸವ ಆಚರಣೆ ಸಮಿತಿಯೊಂದಿಗೆ ಆಚರಣೆಗೆ ಅಗತ್ಯವಿರುವ ವ್ಯವಸ್ಥೆಗಳ ನಿರ್ವಹಣೆ ಕುರಿತು ಚರ್ಚಿಸಲಾಯಿತು. ಅಂದು ಬೆಳಿಗ್ಗೆ 10 ಗಂಟೆಗೆ ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ದಿಂದ ಮೆರವಣಿಗೆ ನಡೆಸಿ ಬಳಿಕ ಕಲಾಮಂದಿರ ದಲ್ಲಿ ವೇದಿಕೆ ಕಾರ್ಯಕ್ರಮ ನಡೆಸುವ…
ಇಂದು ವಿದ್ಯುತ್ ನಿಲುಗಡೆ
February 6, 2020ಮೈಸೂರು, ಫೆ.5-ಚಾಮುಂಡೇಶ್ವರಿ ವಿದ್ಯುತ್ ಸರಬ ರಾಜು ನಿಗಮದ ವತಿಯಿಂದ ಕುವೆಂಪು ನಗರ ಉಪವಿಭಾಗದ ವಿದ್ಯುತ್ ಮಾರ್ಗದಲ್ಲಿ ಒಂದು ದಿನದ ತುರ್ತು ನಿರ್ವಹಣಾ ಕೆಲ ಸದ ನಿಮಿತ್ತ ಕಾಮಗಾರಿ ಹಮ್ಮಿಕೊಳ್ಳಲಾ ಗಿದೆ. ಫೆ.6ರಂದು ಬೆಳಿಗ್ಗೆ 10ರಿಂದ ಸಂಜೆ 6 ಗಂಟೆವರೆಗೆ 66/11 ಕೆವಿ ಆರ್.ಕೆ ನಗರ ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯ ಡಿ.ವಿ.ಸಿ ಲೇಔಟ್, ಎಬಿ ಬ್ಲಾಕ್, ಅನಿಕೇತನ ರಸ್ತೆ, ಕಾಮಾಕ್ಷಿ ಆಸ್ಪತ್ರೆ ಹಿಂಭಾಗ, ಜಡ್ಜ್ ಕ್ವಾಟ್ರಸ್ ಸುತ್ತಮುತ್ತ, ನ್ಯೂ ಕಾಂತರಾಜ ಅರಸ್ ರಸ್ತೆ, ಸರಸ್ವತಿಪುರಂ 8ನೇ ಮುಖ್ಯ…
ಭಕ್ತಿಮಾರ್ಗದ ಪ್ರವರ್ತಕ ಶ್ರೀ ಮಧ್ವಾಚಾರ್ಯರು
February 5, 2020ಮೈಸೂರು ಬ್ರಾಹ್ಮಣ ಯುವ ವೇದಿಕೆಯ `ಮಧ್ವನಮನ’ ಕಾರ್ಯಕ್ರಮದಲ್ಲಿ ಡಿ.ಟಿ.ಪ್ರಕಾಶ್ ಮೈಸೂರು, ಫೆ.4(ಎಂಟಿವೈ)- ಮಧ್ವ ನವಮಿ ಪ್ರಯುಕ್ತ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯಿಂದ ಅಗ್ರಹಾರದ ಮಧ್ವಾ ಚಾರ್ಯರ ರಸ್ತೆಯಲ್ಲಿ, ನೂರೊಂದು ಗಣಪತಿ ದೇವಾಲಯದ ಬಳಿ ಮಂಗಳವಾರ `ಮಧ್ವನಮನ’ ಕಾರ್ಯಕ್ರಮ ಆಯೋಜಿಸ ಲಾಗಿತ್ತು. ಮಧ್ವಾಚಾರ್ಯರ ಭಾವಚಿತ್ರಕ್ಕೆ ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್ ಪುಷ್ಪ ನಮನ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, ಉಡುಪಿ ಜಿಲ್ಲೆ ಪಾಜಕ ಗ್ರಾಮದ ಮಧ್ಯಗೇಹ ಭಟ್ಟ-ವೇದವತಿ ದಂಪತಿಗೆ ಜನಿಸಿದ ಆನಂದ ತೀರ್ಥರು (ಪೂರ್ವಾಶ್ರಮದ…
ಶಹೀನ್ಭಾಗ್ ಹೋರಾಟಗಾರರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮೈಸೂರಲ್ಲಿ ಪ್ರತಿಭಟನೆ
February 5, 2020ಮೈಸೂರು,ಫೆ.4(ಪಿಎಂ)- ದೆಹಲಿಯ ಶಹೀನ್ಭಾಗ್ನಲ್ಲಿ ಸಿಎಎ ಹಾಗೂ ಎನ್ಆರ್ಸಿ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವವರ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕೆಂದು ಆಗ್ರಹಿಸಿ ಎಐಎಂಎಸ್ಎಸ್ (ಅಖಿಲ ಭಾರತ ಮಹಿಳಾ ಸಾಂಸ್ಕøತಿಕ ಸಂಘಟನೆ)ಯಿಂದ ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಲಾಯಿತು. 2 ತಿಂಗಳಿಂದ ಕಾಲೇಜು ವಿದ್ಯಾರ್ಥಿನಿಯರು, ಗೃಹಿಣಿಯರು ಶಹೀನ್ಭಾಗ್ನಲ್ಲಿ ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರದ ಜನವಿರೋಧಿ ನೀತಿಯನ್ನು ಪ್ರಶ್ನಿಸುತ್ತಿದ್ದಾರೆ. ಆದರೆ ಪ್ರತಿಭಟನಾನಿರತರ ದುಃಖ ಆಲಿಸಬೇಕಾದ ಕೇಂದ್ರ ಸರ್ಕಾರದ ಬಿಜೆಪಿ ನಾಯಕರು ನಿರ್ಲಕ್ಷ್ಯ ವಹಿಸಿದ್ದಾರೆ. ಪ್ರತಿಭಟನಾಕಾರರನ್ನು ದೇಶ ದ್ರೋಹಿಗಳೆಂ ಬಂತೆ ಚಿತ್ರಿಸಲು…










