ಮೈಸೂರು, ಜ.23(ಪಿಎಂ)- `ಭಾರತೀಯರ ವಿಮುಕ್ತಿಗಾಗಿ ನನ್ನ ಜೀವನವನ್ನೇ ಕೊಡುತ್ತೇನೆ…’ ಇದು ದೇಶದ ಸ್ವಾತಂತ್ರ್ಯಕ್ಕಾಗಿ ಸಾಹಸ ಮೆರೆದ ಸಾಕಾರಮೂರ್ತಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ವೀರವಾಣಿ. ಸುಭಾಷ್ ಚಂದ್ರ ಬೋಸ್ ಅವರ ಇಂತಹ ಹತ್ತು ಹಲವು ಘೋಷ ವಾಕ್ಯಗಳು ಅಲ್ಲಿ ರಾರಾಜಿಸುವ ಮೂಲಕ ಅವರ ವಿಚಾರಗಳನ್ನು ಪಸರಿಸಿದವು. ಮೈಸೂರಿನ ಲ್ಯಾನ್ಸ್ಡೌನ್ ಬಿಲ್ಡಿಂಗ್ ಬಳಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 123ನೇ ಜನ್ಮ ದಿನಾಚರಣೆಯ ಅಂಗವಾಗಿ ಗುರುವಾರ ಹಮ್ಮಿ ಕೊಂಡಿದ್ದ ಅವರ ಛಾಯಾಚಿತ್ರ ಸಹಿತ ಘೋಷ ವಾಕ್ಯಗಳ…
ಬಡಗಲಪುರ ಆರೋಗ್ಯ ಕೇಂದ್ರಕ್ಕೆ ಭೂಮಿ ನೀಡಿದ ದಾನಿಯ ಆಸೆಗೆ ಆಳುವವರಿಂದ ತಣ್ಣೀರು!
January 24, 2020ಮೈಸೂರು, ಜ.23(ಎಸ್ಪಿಎನ್)-ತಮ್ಮದೇ ಸರ್ಕಾರ ಬಂದು 6 ತಿಂಗಳು ಕಳೆದರೂ ಬಿಜೆಪಿ ಕಾರ್ಯಕರ್ತ ರೊಬ್ಬರ ಆಸೆ ಈಡೇರಿಲ್ಲ. ಅದು ಸರ್ಕಾರಿ ನೌಕರಿಯೂ ಅಲ್ಲ, ಇಲ್ಲವೇ ಗುತ್ತಿಗೆ ವ್ಯವಹಾರವೂ ಅಲ್ಲ. ಬದಲಾಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಕಟ್ಟಲು ತಮ್ಮ ಸ್ವಂತ ಜಮೀನು ಬಿಟ್ಟುಕೊಟ್ಟು, ಈ ಜಾಗದಲ್ಲಿ ನಿರ್ಮಾಣ ವಾಗಿರುವ ಕಟ್ಟಡಕ್ಕೆ ನಮ್ಮ ಪೂರ್ವಜರ ಹೆಸರಿಡಿ ಎಂಬುದೇ ಇವರ ಸರಳ ಬೇಡಿಕೆ…!. ಹೌದು, ಸರಗೂರು ತಾಲೂಕಿನ ಬಡಗಲಪುರ ಗ್ರಾಮ ದಲ್ಲಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆಗೆ ಗ್ರಾಪಂ ಸದಸ್ಯೆ…
ಸಾಹಿತ್ಯ ಕ್ಷೇತ್ರದಲ್ಲಿ ಗುಂಪುಗಾರಿಕೆ ಹೆಚ್ಚಳ: ಸಾಹಿತಿ ಸಿಪಿಕೆ ಬೇಸರ
January 24, 2020ಮೈಸೂರು, ಜ. 23- ಇಂದು ಸಾಹಿತ್ಯ ಕ್ಷೇತ್ರದಲ್ಲಿ ಗುಂಪುಗಾರಿಕೆ ಹೆಚ್ಚಾಗುತ್ತಿದೆ. ಕೇವಲ ಒಂದು ಪುಸ್ತಕ ಬರೆದವರಿಗೆಲ್ಲ ಪ್ರಶಸ್ತಿ, ಪುರಸ್ಕಾರಗಳು ಬಂದಿವೆ. ಅನರ್ಹರು, ಯೋಗ್ಯರಲ್ಲದವರು, ಲಾಬಿ ಮಾಡಿ ದೊಡ್ಡ ಪ್ರಶಸ್ತಿಗಳನ್ನು ಪಡೆದುಕೊಳ್ಳುತ್ತಿದ್ದು, ಅರ್ಹರಿಗೆ ಪ್ರಶಸ್ತಿಗಳು ದಕ್ಕುತ್ತಿಲ್ಲ ಎಂದು ಖ್ಯಾತ ಸಾಹಿತಿ, ನೃಪತುಂಗ ಪ್ರಶಸ್ತಿ ಪುರಸ್ಕøತರಾದ ಡಾ.ಸಿ.ಪಿ.ಕೃಷ್ಣಕುಮಾರ್ (ಸಿಪಿಕೆ) ಬೇಸರ ವ್ಯಕ್ತಪಡಿಸಿದರು. ನಗರದ ಇಂಜಿನಿಯರುಗಳ ಸಂಸ್ಥೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಿಎನ್ಕೆ ಅವರ ಎರಡು ಕಾದಂಬರಿಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ದೇಜಗೌ ಅವರಂತಹ ದಿಗ್ಗಜ ಸಾಹಿತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಾರದಿರುವುದು…
ಮಹಿಳೆ ಮೇಲಿನ ದೌರ್ಜನ್ಯ ತಡೆಗೆ ವಿಶೇಷ ಕಾಯ್ದೆ ಅಗತ್ಯ
January 23, 2020ಮೈಸೂರು, ಜ. 22(ಆರ್ಕೆ)- ರಾಜ್ಯ ದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟಲು ವಿಶೇಷ ಕಾಯ್ದೆ ಜಾರಿಗೊಳಿಸ ಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ. ಕರ್ನಾಟಕ ರಾಜ್ಯ ಪ್ರದೇಶ ಕಾಂಗ್ರೆಸ್ ಸಮಿತಿಯ ಮಹಿಳಾ ಘಟಕದ ವತಿಯಿಂದ ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ಏರ್ಪಡಿಸಿದ್ದ ‘ಅಮ್ಮ ನಿನಗೊಂದು ನಮನ’ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವ ರಿಗೆ ನಮನ, ಅಸಂಘಟಿತ ಮಹಿಳಾ ಕಾರ್ಮಿ ಕರ ಜಾಗೃತಿ ಶಿಬಿರ, ಆರೋಗ್ಯ-ಕೌಶಲ ಮತ್ತು ಉಚಿತ ಕಾರ್ಮಿಕ ಕಾರ್ಡ್ ನೋಂದಣಿ ಕಾರ್ಯಕ್ರಮವನ್ನು ಬುಧವಾರ ಉದ್ಘಾಟಿಸಿ…
`ಫ್ರೀ ಕಾಶ್ಮೀರ್’ ಫಲಕ ಪ್ರದರ್ಶನ ದೇಶದ್ರೋಹವಲ್ಲ
January 23, 2020ಮೈಸೂರು,ಜ.22(ಎಂಟಿವೈ)- ಕಾಶ್ಮೀರದಲ್ಲಿ ಇಂದಿಗೂ ಭಯದ ವಾತಾವರಣವಿದೆ. ಅದನ್ನು ಹೋಗಲಾಡಿಸು ವಂತೆ ಯುವತಿ ನಳಿನಿ ಬಾಲ ಕುಮಾರ್ ಪ್ರತಿಭಟನೆಯಲ್ಲಿ `ಫ್ರೀ ಕಾಶ್ಮೀರ್’ ಫಲಕ ಪ್ರದರ್ಶಿಸಿದ್ದಾರೆ ಎಂದು ತಿಳಿದು ಬಂದಿದೆ. ಇದು ದೇಶದ್ರೋಹದ ಕೆಲಸವಲ್ಲ. ಆದರೆ ಆಕೆಯ ಪರ ವಕಾಲತ್ತು ವಹಿಸದಂತೆ ವಕೀಲರ ಸಂಘ ನಿರ್ಣಯ ಕೈಗೊಂಡಿರುವುದು ಅಸಂವಿಧಾನಿಕ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ. ರಾಮಕೃಷ್ಣನಗರದ ತಮ್ಮ ನಿವಾಸದ ಬಳಿ ಪತ್ರಕರ್ತ ರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಅವೈಜ್ಞಾನಿಕ ನಿಲುವಿನಿಂದಾಗಿ ಕಾಶ್ಮೀರದಲ್ಲಿ ಇಂದಿಗೂ ತುರ್ತು ಪರಿಸ್ಥಿತಿಯ ವಾತಾವರಣವಿದೆ….
ಆನ್ಲೈನ್ ಸಿಇಟಿ ಸದ್ಯಕ್ಕಿಲ್ಲ
January 23, 2020ಬೆಂಗಳೂರು, ಜ.22- ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ಗಳ ಪ್ರವೇಶಕ್ಕಾಗಿ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯನ್ನು (ನೀಟ್) ಆನ್ಲೈನ್ ಮೂಲಕ ನಡೆಸುವ ಮಾದರಿಯಲ್ಲೇ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮುಂದಾಗಿತ್ತಾದರೂ ಸರಕಾರದಿಂದ ಅನುಮತಿ ಸಿಕ್ಕಿಲ್ಲ. ಹಾಗಾಗಿ ಈ ಬಾರಿ ಆನ್ಲೈನ್ ಸಿಇಟಿ ಇರುವುದಿಲ್ಲ ಎನ್ನಲಾಗಿದೆ. ಇಂಜಿನಿಯರಿಂಗ್, ಕೃಷಿ ವಿಜ್ಞಾನ, ಪಶುವೈದ್ಯಕೀಯ ವಿಜ್ಞಾನ, ಬಿ-ಫಾರ್ಮಾ, ಡಿ- ಫಾರ್ಮಾ ಸಹಿತ ವಿವಿಧ ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಪ್ರತಿ ವರ್ಷ ಸಾಮಾನ್ಯ…
ಹೊಣೆಗಾರಿಕೆ ಅರಿತು ಕಡಿಮೆ ಖರ್ಚಿನಲ್ಲಿ ಸರಳ ಬದುಕು ಬಾಳಿ…
January 23, 2020ಸುತ್ತೂರು ಜಾತ್ರೆಯಲ್ಲಿ ಸಾಮೂಹಿಕ ವಿವಾಹಕ್ಕೆ ಚಾಲನೆ ನೀಡಿ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗಡೆ ನೂತನ ವಧು-ವರರಿಗೆ ಆಶೀರ್ವಾದ ಮೈಸೂರು, ಜ.22(ಆರ್ಕೆಬಿ)- ಮದುವೆ ಎಂದರೆ ಹೆಣ್ಣಿಗೆ ಗಂಡು ತಾಳಿ ಕಟ್ಟುವುದು, ಗಂಡಿಗೆ ಹೆಣ್ಣು ಮಾಲೆ ಹಾಕುವುದಷ್ಟೇ ಅಲ್ಲ. ಜವಾಬ್ದಾರಿ ವಹಿಸಿಕೊಳ್ಳುವುದೇ ಮದುವೆ. ಪತಿಗೆ ಮಾತ್ರ ಜವಾಬ್ದಾರಿ ಅಲ್ಲ. ಪತಿ-ಪತ್ನಿ ಇಬ್ಬರಿಗೂ ಜವಾಬ್ದಾರಿ ಇದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿ ಕಾರಿ ಡಿ.ವೀರೇಂದ್ರ ಹೆಗಡೆ ತಿಳಿಸಿದರು. ಮೈಸೂರು ಜಿಲ್ಲೆಯ ಸುತ್ತೂರು ಜಾತ್ರೆ ಯಲ್ಲಿ ಸಾಮೂಹಿಕ ವಿವಾಹ ಕಾರ್ಯ ಕ್ರಮಕ್ಕೆ…
ಸುಸ್ತಿ ಸಾಲ ವಸೂಲಾತಿ ಸ್ಥಗಿತಕ್ಕೆ ಸಹಕಾರಿ ಸಂಸ್ಥೆಗಳಿಗೆ ಸರ್ಕಾರ ಸೂಚನೆ
January 23, 2020ಬೆಂಗಳೂರು, ಜ.22(ಕೆಎಂಶಿ)-ಸುಸ್ತಿ ಕೃಷಿ ಸಾಲ ವಸೂ ಲಾತಿಯನ್ನು ತಕ್ಷಣವೇ ಸ್ಥಗಿತಗೊಳಿಸುವಂತೆ ರಾಜ್ಯ ಸರ್ಕಾರ ಇಂದಿಲ್ಲಿ ಸಹಕಾರಿ ಬ್ಯಾಂಕುಗಳಿಗೆ ಆದೇಶ ಮಾಡಿದೆ. ಈ ಹಿಂದೆ ಸರ್ಕಾರ ಹೊರಡಿಸಿದ್ದ ಆದೇಶದನ್ವಯ ಸುಸ್ತಿ ಸಾಲ ಕ್ಕಾಗಿ ಸಾಲ ಪಡೆದ ರೈತರಿಂದ ವಸೂಲಾತಿಗೆ ಅಧಿಕಾರಿಗಳು ಇನ್ನಿಲ್ಲದ ಹಿಂಸೆ ನೀಡುತ್ತಿದ್ದರು. ಪಾವತಿಸದ ರೈತರಿಂದ ಟ್ರ್ಯಾಕ್ಟರ್ ಸೇರಿ ದಂತೆ ಕೃಷಿ ಪರಿಕರ ಇಲ್ಲವೇ ಇನ್ನಿತರ ಪರಿ ಕರಗಳನ್ನು ವಶಪಡಿಸಿಕೊಂಡಿರುವ ಘಟನೆಗಳು ರಾಜ್ಯಾ ದ್ಯಂತ ನಡೆದಿವೆ. ಸಾಲ ವಸೂಲಾತಿ ಸರ್ಕಾರದ ನಿರ್ಧಾರಕ್ಕೆ ರೈತರಿಂದ ಮತ್ತು ಪ್ರತಿಪಕ್ಷದ ನಾಯಕರಿಂದ…
ಸುತ್ತೂರು ಮಹಾ ಜಾತ್ರೆಯಲ್ಲಿ ಸಾಮೂಹಿಕ ವಿವಾಹ ದಾಂಪತ್ಯ ಜೀವನಕ್ಕೆ ಕಾಲಿಟ್ಟ 178 ಜೋಡಿಗಳು
January 23, 2020ಮೈಸೂರು, ಜ.22(ಆರ್ಕೆಬಿ)- ಮೈಸೂರು ಜಿಲ್ಲೆಯ ಸುತ್ತೂರು ಶ್ರೀಕ್ಷೇತ್ರ ಜಾತ್ರಾ ಮಹೋ ತ್ಸವದ ಹಿನ್ನೆಲೆಯಲ್ಲಿ ಬುಧವಾರ ನಡೆದ ಸಾಮೂಹಿಕ ವಿವಾಹದಲ್ಲಿ 178 ಜೋಡಿ ಗಳು ನವ ಜೀವನಕ್ಕೆ ಕಾಲಿರಿಸಿದರು. ಮಧ್ಯಾಹ್ನ 12 ಗಂಟೆ ವೇಳೆಗೆ ಶುಭ ಲಗ್ನ ದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇ ಗೌಡ, ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ, ಸುತ್ತೂರು ದೇಶಿಕೇಂದ್ರ ಸ್ವಾಮೀಜಿ, ಕನಕಪುರ ದೇಗುಲ ಮಠದ ಡಾ. ಮುಮ್ಮಡಿ ನಿರ್ವಾಣ ಸ್ವಾಮೀಜಿ ಸಮ್ಮುಖ ದಲ್ಲಿ ನಾದಸ್ವರದ ಹಿಮ್ಮೇಳದ ನಡುವೆ ನೂತನ ವಧು-ವರರು ಸತಿ-ಪತಿಗಳಾಗಿ ನವ…
ಸ್ವಚ್ಛ ಸರ್ವೇಕ್ಷಣಾ ವೇಳೆಯ ವರ್ಷಪೂರ್ತಿ ಸ್ವಚ್ಛತಾ ಕಾರ್ಯ: ಮೇಯರ್
January 23, 2020ಮೈಸೂರು, ಜ.22(ಪಿಎಂ)- ಸ್ವಚ್ಛ ಸರ್ವೇಕ್ಷಣಾ ಸಂದರ್ಭದಲ್ಲಿ ಮೈಸೂರು ನಗರದಲ್ಲಿ ನಡೆಸುವ ಸ್ವಚ್ಛತಾ ಚಟುವಟಿಕೆಗಳನ್ನು ವರ್ಷಪೂರ್ತಿ ನಡೆ ಸಲು ಉದ್ದೇಶಿಸಲಾಗಿದೆ ಎಂದು ಮೇಯರ್ ತಸ್ನೀಂ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಚ್ಛ ಸರ್ವೇಕ್ಷಣಾ ಸಮಯದಲ್ಲಿ ಮಾತ್ರ ಸ್ವಚ್ಛತೆಗೆ ಹೆಚ್ಚು ಗಮನ ಕೊಡಲಾ ಗುತ್ತದೆ. ಉಳಿದ ಸಮಯದಲ್ಲಿ ನಿರ್ಲಕ್ಷ್ಯ ಮಾಡಲಾಗುತ್ತದೆ ಎಂಬ ದೂರಿದೆ. ಈ ಅಪವಾದವನ್ನು ದೂರ ಮಾಡಬೇಕಿದೆ. ಜೊತೆಗೆ ಇದು ನಿರಂತರವಾಗಿ ಮುಂದುವರೆದರೆ ನಗರದಲ್ಲಿ ಸ್ವಚ್ಛತೆ ನೆಲೆಸಲಿದೆ ಎಂದರು. ನಾನು ಈ…










