ತಿ.ನರಸೀಪುರ ಡಿ.21(ಎಸ್ಕೆ)-ಆಡಳಿತಾರೂಢ ಸರ್ಕಾರಗಳು ಮತ್ತು ಅಧಿಕಾರಿಗಳಲ್ಲಿ ದಲಿತರ ಮೇಲಿನ ದೌರ್ಜನ್ಯ ತಡೆಗಟ್ಟುವ ಬದ್ಧತೆ, ನಿಯಂತ್ರಿಸುವ ಕಾಳಜಿ ಕಣ್ಮರೆಯಾಗುತ್ತಿದೆ. ಜಿಲ್ಲಾಡಳಿತ ಹಾಗೂ ಪೆÇಲೀಸ್ ಇಲಾಖೆಯ ವೈಫಲ್ಯದಿಂದಾಗಿಯೇ ಸಾಲಿಗ್ರಾಮದಲ್ಲಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಮರುಕಳಿಸುತ್ತಿವೆ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್ ಗಂಭೀರವಾಗಿ ಆರೋಪಿಸಿದರು. ಪಟ್ಟಣದ ನಂಜನಗೂಡು ರಸ್ತೆಯಲ್ಲಿರುವ ಕಬಿನಿ ಅತಿಥಿ ಗೃಹದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಲಿಗ್ರಾಮದಲ್ಲಿ ಅಲ್ಪಸಂಖ್ಯೆಯಲ್ಲಿರುವ ದಲಿತರ ಮೇಲೆ 2001 ರಿಂದ ಮೂರು ಬಾರಿ ದೌರ್ಜನ್ಯ ನಡೆದಿದೆ. ಇದನ್ನು…
ಕರ್ನಾಟಕ ಮುಕ್ತ ವಿವಿಯಲ್ಲಿ ವಿವಿಧ ಅಕ್ರಮ ಪ್ರಕರಣ ಮೂವರು ವಿಶ್ರಾಂತ ಕುಲಪತಿ, ಮೂವರು ಮಾಜಿ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು
December 21, 2019ಮೈಸೂರು,ಡಿ.20(ಎಸಿಪಿ)-ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯ (ಕೆಎಸ್ಓಯು)ದಲ್ಲಿ ನಡೆದಿರುವ ಅಕ್ರಮಗಳಿಗೆ ಸಂಬಂಧಿಸಿದಂತೆ ಮೈಸೂರಿನ ಜಯ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಡಿ.17ರಂದು ಎರಡು ಪ್ರತ್ಯೇಕ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಒಂದು ಪ್ರಕರಣದಲ್ಲಿ (ಎಫ್ಐಆರ್ ಸಂಖ್ಯೆ 53/2019) ಮುಕ್ತ ವಿವಿಯ ವಿಶ್ರಾಂತ ಕುಲಪತಿಗಳಾದ ಪ್ರೊ.ಕೆ.ಎಸ್.ರಂಗಪ್ಪ, ಪ್ರೊ.ಎಂ.ಜಿ.ಕೃಷ್ಣನ್, ಮಾಜಿ ಕುಲಸಚಿವರಾದ ಪ್ರೊ.ಬಿ.ಎಸ್.ವಿಶ್ವನಾಥ್, ಪ್ರೊ. ಪಿ.ಎಸ್.ನಾಯಕ್ ಮತ್ತು ಮುಕ್ತ ವಿವಿಯ ಮಾಜಿ ಐಟಿ ಡೈರೆಕ್ಟರ್ ಕಮಲೇಶ್ ಅವರುಗಳು ಆರೋಪಿಗ ಳಾಗಿದ್ದರೆ, ಮತ್ತೊಂದು ಪ್ರಕರಣದಲ್ಲಿ (ಎಫ್ಐಆರ್ ಸಂಖ್ಯೆ 54/2019) ಮುಕ್ತ ವಿವಿಯ ವಿಶ್ರಾಂತ ಕುಲ ಪತಿ ಪ್ರೊ.ಕೆ.ಸುಧಾರಾವ್…
ಪ್ರಧಾನಿ ಮೋದಿ ಮೇಲೆ ಉಗ್ರರ ದಾಳಿ ಸಾಧ್ಯತೆ: ಗುಪ್ತಚರ ಇಲಾಖೆ ಎಚ್ಚರಿಕೆ
December 21, 2019ನವದೆಹಲಿ,ಡಿ.20-ರಾಜಧಾನಿಯಲ್ಲಿ ಡಿ.22ರಂದು ಬಿಜೆಪಿಯ ಬೃಹತ್ ಸಮಾ ವೇಶದ ವೇಳೆ ಪಾಕಿಸ್ತಾನ ಮೂಲದ ಉಗ್ರರ ಗುಂಪುಗಳು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ಸಂಸ್ಥೆಗಳು ವರದಿ ನೀಡಿವೆ. ದೆಹಲಿಯ ಅನಧಿಕೃತ ಕಾಲೋನಿಗಳನ್ನು ಅಧಿಕೃತಗೊಳಿಸುವ ಕೇಂದ್ರ ಸರ್ಕಾರದ ಉದ್ದೇಶದ ಕುರಿತು ಬಿಜೆಪಿ ದೆಹಲಿಯ ರಾಮಲೀಲಾ ಮೈದಾನದಲ್ಲಿ ಡಿ. 22ರಂದು ಬೃಹತ್ ಸಮಾವೇಶ ಆಯೋಜಿಸಿದೆ. ಈ ವೇಳೆ ಉಗ್ರರ ಗುಂಪುಗಳು ಮೋದಿ ಅವ ರನ್ನು ಗುರಿಯನ್ನಾಗಿರಿಸಿಕೊಂಡು ದಾಳಿ ನಡೆಸುವ ಸಾಧ್ಯತೆ ಇದೆ ಎಂದು…
ಕೊಡವರನ್ನು ಎಸ್ಟಿಗೆ ಸೇರಿಸಲು ಸರ್ವ ಪ್ರಯತ್ನ
December 21, 2019ಮೈಸೂರು,ಡಿ.20(ಆರ್ಕೆ)-ಕೊಡವರ ಕುಲಶಾಸ್ತ್ರ ಅಧ್ಯಯನ ನಡೆಸಿ, ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಸರ್ವ ಪ್ರಯತ್ನ ಮಾಡುವುದಾಗಿ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಕೊಡವ ನ್ಯಾಷನಲ್ ಕೌನ್ಸಿಲ್(ಸಿಎನ್ಸಿ) ಪದಾಧಿ ಕಾರಿಗಳಿಗೆ ಭರವಸೆ ನೀಡಿದರು. ಸಿಎನ್ಸಿ ಅಧ್ಯಕ್ಷ ಎನ್.ಯು.ನಾಚಪ್ಪ ನೇತೃತ್ವದಲ್ಲಿ ಸಂಘಟನೆಯ ಪದಾಧಿಕಾರಿ ಗಳು ಶುಕ್ರವಾರ ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿರುವ ಕಚೇರಿಯಲ್ಲಿ ಸಂಸದ ಪ್ರತಾಪ್ ಸಿಂಹ ಅವರನ್ನು ಭೇಟಿ ಮಾಡಿ, ಕೊಡವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಎನ್.ಯು. ನಾಚಪ್ಪ, ಕೊಡವ ಸಂಸ್ಕøತಿ, ಆಚಾರ-ವಿಚಾರ, ಭಾಷೆ,…
ಈರುಳ್ಳಿ ಬೆಲೆ ಕೇಳಿದರೆ ಇನ್ನೂ ಕಣ್ಣೀರು!
December 21, 2019ಮೈಸೂರು,ಡಿ.20(ಪಿಎಂ)-ಈರುಳ್ಳಿ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದ್ದು, ಇಳಿಮುಖವಾಗುವಂತೆ ಕಾಣುತ್ತಿಲ್ಲ. ಇದೇ ತಿಂಗಳ ಆರಂಭದಲ್ಲಿ 150 ರೂ. ಗಡಿ ದಾಟಿ 200ರ ಗಡಿ ಮುಟ್ಟಿದ್ದ ಕೆಜಿ ಈರುಳ್ಳಿ ಬೆಲೆ ಇಂದಿಗೂ ಇಳಿಕೆ ಕಂಡಿಲ್ಲ. ಮೈಸೂರು ನಗರ ದಲ್ಲಿ ಗುಣಮಟ್ಟದ ಈರುಳ್ಳಿ ಬೆಲೆ 120 ರೂ. ನಿಂದ 150 ರೂ.ವರೆಗೆ ಕಾಯ್ದುಕೊಂಡಿದೆ. ಕೇಂದ್ರ ಸರ್ಕಾರ ಟರ್ಕಿಯಿಂದ 11 ಸಾವಿರ ಟನ್ ಈರುಳ್ಳಿ ಆಮದು ಮಾಡಿ ಕೊಂಡಿದ್ದರೂ ಇಡೀ ದೇಶದಲ್ಲಿ ಈರುಳ್ಳಿ ಬೆಲೆ ನಿಯಂತ್ರಣಕ್ಕೆ ಬಾರದಾಗಿದೆ ಎನ್ನ ಲಾಗುತ್ತಿದ್ದು, ಅದೇ ರೀತಿ…
ಪೌರತ್ವ ಕಾಯ್ದೆಗೆ ವಿರೋಧ ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ತರುವ ಹುನ್ನಾರ: ಆರ್.ರಘು
December 21, 2019ಮೈಸೂರು, ಡಿ.20-ಪೌರತ್ವ ಕಾಯ್ದೆಯ ಹೆಸರಿನಲ್ಲಿ ಮಂಗಳೂರನ್ನು ಹಿಂಸೆಯ ದಳ್ಳುರಿಗೆ ತಳ್ಳಿ ಅಲ್ಲಿ ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗಿರುವುದರ ಹಿಂದೆ ರಾಷ್ಟ್ರವಿದ್ರೋಹಿಗಳ ಕೈವಾಡವಿದೆ. ಇಂತಹ ಕೃತ್ಯಕ್ಕೆ ಪ್ರಚೋದನೆ ನೀಡುತ್ತಿರುವ ಕಾಂಗ್ರೆಸ್ ಮುಖಂ ಡರ ವರ್ತನೆ ಭಾರತದ ಸಾರ್ವ ಭೌಮತ್ವಕ್ಕೆ ಧಕ್ಕೆ ತರುತ್ತಿದೆ ಎಂದು ಬಿಜೆಪಿ ಸಹ ವಕ್ತಾರ ರಘು ಆರ್.ಕೌಟಿಲ್ಯ ಅಭಿಪ್ರಾಯಪಟ್ಟಿ ದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು ದೇಶವಾಸಿಗಳ ರಕ್ಷಣೆಗಾಗಿ, ನೈಜ ಭಾರತೀ ಯರ ಹಕ್ಕಿಗಾಗಿ ಪೌರತ್ವ ಕಾಯ್ದೆ ತಿದ್ದುಪಡಿ ಯಾಗಿದೆ. ಇದರ ವಿರುದ್ಧ ವ್ಯವಸ್ಥಿತ ಅಪ ಪ್ರಚಾರ…
ಯುವಜನರು ಭಾರತೀಯ ಕಲೆ, ಸಾಹಿತ್ಯ, ನೃತ್ಯ ಕಲಿಕೆಗೆ ಆಸಕ್ತಿ ವಹಿಸಲಿ
December 21, 2019ಮೈಸೂರು,ಡಿ.20(ಎಸ್ಪಿಎನ್)- `ಕಲೆ-ಸಾಹಿತ್ಯ-ನೃತ್ಯ’ ಕ್ಷೇತ್ರದಲ್ಲಿ ತೊಡಗಿಸಿ ಕೊಂಡÀ ಪ್ರತಿಯೊಂದು ಕುಟುಂಬ ಉತ್ತಮ ಸಂಸ್ಕಾರವನ್ನು ರೂಢಿಸಿಕೊಂಡಿರುತ್ತದೆ. ಆದ್ದರಿಂದ ಪ್ರತಿಯೊಬ್ಬರು ಕಲೆ-ಸಾಹಿತ್ಯ ಅಧ್ಯಯನಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿ ಕೇಂದ್ರ ಸ್ವಾಮೀಜಿ ಹಿತವಚನ ನೀಡಿದರು. ಮೈಸೂರಿನ ಜಗನ್ಮೋಹನ ಅರಮನೆ ಯಲ್ಲಿ ನೃತ್ಯಾಲಯ ಟ್ರಸ್ಟ್ ವತಿಯಿಂದ 3 ದಿನಗಳ ಕಾಲ ಆಯೋಜಿಸಿರುವ `ನಲವತ್ತರ ನಲಿವು-ನಿತ್ಯನರ್ತನ ಪರ್ವ’ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಶುಕ್ರವಾರ ಪಾಲ್ಗೊಂಡು ಅವರು ಮಾತನಾಡಿದರು. ವಿದುಷಿ ಡಾ.ತುಳಸಿರಾಮಚಂದ್ರ ಅವರು ನಾಟ್ಯ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ…
ಆಶ್ರಯ ಮನೆ ಖುಲಾಸೆ ಪತ್ರ ನೀಡಲು ಲಂಚ: ಪಾಲಿಕೆ ನೌಕರ ಎಸಿಬಿ ಬಲೆಗೆ
December 21, 2019ಮೈಸೂರು,ಡಿ.20(ಎಸ್ಬಿಡಿ)-ಆಶ್ರಯ ಮನೆ ಖುಲಾಸೆ ಪತ್ರ ಕೊಡಿಸುವುದಾಗಿ 3 ಸಾವಿರ ರೂ. ಲಂಚ ಪಡೆಯುತ್ತಿದ್ದ ಮೈಸೂರು ನಗರ ಪಾಲಿಕೆ ನೌಕರ, ಎಸಿಬಿ ಬಲೆಗೆ ಬಿದ್ದಿದ್ದಾರೆ. ಮೈಸೂರಿನ ಗನ್ಹೌಸ್ ಬಳಿಯಿರುವ ಕೆ.ಆರ್.ಕ್ಷೇತ್ರದ ಆಶ್ರಯ ವಸತಿ ಯೋಜನೆ ಶಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದ್ವಿತೀಯ ದರ್ಜೆ ಸಹಾಯಕ ಮಂಜು ನಾಥ್, ಲಂಚ ಪಡೆದು ಸಿಕ್ಕಿಬಿದ್ದಿದ್ದಾರೆ. ಮೈಸೂರು ತಾಲೂಕು ಕಸಬಾ ಹೋಬಳಿ ಕೊಪ್ಪಲೂರು ಗ್ರಾಮದ ಆಶ್ರಯ ಬಡಾವಣೆಯಲ್ಲಿ ಕೆಂಪಮ್ಮ ಅವರಿಗೆ ಮಂಜೂರಾಗಿರುವ ಮನೆಯ ಬಾಬ್ತು ಖುಲಾಸೆ ಪತ್ರ ಕೊಡಿಸಲು ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ರಮಾಬಾಯಿನಗರ…
ಮಂಗಳೂರು ಗಲಭೆಗೆ ಕಾಂಗ್ರೆಸ್ ನೇರ ಹೊಣೆ
December 21, 2019ಮೈಸೂರು,ಡಿ.20(ಆರ್ಕೆ)- ಮಂಗ ಳೂರಿನಲ್ಲಿ ಗುರುವಾರ ನಡೆದ ಗಲಭೆಯಲ್ಲಿ ಇಬ್ಬರು ಸಾವನ್ನಪ್ಪಿರುವ ಘಟನೆಗೆ ಕಾಂಗ್ರೆಸ್ ಪ್ರಚೋದನೆಯೇ ಕಾರಣ ಎಂದು ಸಂಸದ ಪ್ರತಾಪ್ಸಿಂಹ ಅವರು ಆರೋಪಿಸಿದ್ದಾರೆ. ಮೈಸೂರಿನ ಜಲದರ್ಶಿನಿ ಅತಿಥಿಗೃಹದ ಆವರಣದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ರಾಜ್ಯದಾದ್ಯಂತ ಸೆಕ್ಷನ್ 144 ರೀತ್ಯಾ ನಿಷೇ ಧಾಜ್ಞೆ ಜಾರಿಯಲ್ಲಿದ್ದರೂ ಪೌರತ್ವ ತಿದ್ದು ಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಲು ಕಾಂಗ್ರೆಸ್ ನೇರ ಹೊಣೆ ಎಂದರು. ಮಾಜಿ ಸಚಿವ ಯು.ಟಿ.ಖಾದರ್ ಅವರು ‘ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೊಳಿ ಸಿದರೆ ರಾಜ್ಯ…
ಕಾರು ಕಂದಕಕ್ಕೆ ಉರುಳಿ ವ್ಯಕ್ತಿ ಸಾವು: ಕೆಂಪಯ್ಯನಹುಂಡಿ ಬಳಿ ತಿ.ನರಸೀಪುರ ರಸ್ತೆಯಲ್ಲಿ ದುರಂತ
December 21, 2019ಮೈಸೂರು, ಡಿ.20(ಆರ್ಕೆ)-ಕಾರೊಂದು ಸೇತುವೆಗೆ ಡಿಕ್ಕಿ ಹೊಡೆದು ಕಂದಕಕ್ಕೆ ಉರುಳಿಬಿದ್ದು ವ್ಯಕ್ತಿಯೋರ್ವ ಸಾವನ್ನಪ್ಪಿದ್ದು, ಚಾಲಕ ಗಾಯಗೊಂಡಿರುವ ಘಟನೆ ತಿ.ನರಸೀ ಪುರ ರಸ್ತೆಯ ಕೆಂಪಯ್ಯನಹುಂಡಿ ಬಳಿ ಇಂದು ಬೆಳಿಗ್ಗೆ ಸಂಭವಿಸಿದೆ. ಮೈಸೂರಿನ ರಾಮಕೃಷ್ಣ ನಗರದ ವಾಸು ಲೇಔಟ್ ನಿವಾಸಿ ನಾಗರಾಜ ಭಟ್(55) ಸಾವನ್ನಪ್ಪಿದವರಾಗಿದ್ದು, ಗಾಯ ಗೊಂಡಿರುವ ಕಾರು ಚಾಲಕ ಪ್ರಫುಲ್ಲಾರನ್ನು ಮೈಸೂರಿನ ಕಾವೇರಿ ಆಸ್ಪತ್ರೆಗೆ ದಾಖಲು ಮಾಡ ಲಾಗಿದೆ. ಮೈಸೂರಿನಿಂದ ತಿ.ನರಸೀಪುರ ಕಡೆಗೆ ಹುಂಡೈನ ಐ-20 (ಕೆ.ಎ.03, ಎಎಫ್ 3349) ಕಾರಿನಲ್ಲಿ ಹೋಗುತ್ತಿದ್ದಾಗ ಕೆಂಪಯ್ಯನಹುಂಡಿ ಸಮೀಪ ದರ್ಶನ್ ಫಾರಂ ಬಳಿ…










