ಇಂಡೋ ಜಪಾನಿಸ್ ಸಂಯುಕ್ತಾಶ್ರಯದಲ್ಲಿ ಆಯೋಜನೆ ಮೈಸೂರು: ಇಂಡೋ ಜಪಾನಿಸ್ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿ ಇವರ ಸಂಯುಕ್ತಾಶ್ರಯದಲ್ಲಿ ಮೈಸೂರಿನ ಕೌಟಿಲ್ಯ ವಿದ್ಯಾಲಯದಲ್ಲಿ ವಿದ್ಯಾರ್ಥಿ ಗಳಿಗಾಗಿ, ಇದೇ ಪ್ರಥಮ ಬಾರಿಗೆ ಜಪಾನ್ ದೇಶಕ್ಕೆ ಸಂಬಂಧಿಸಿದ ಅಂತಾರಾಷ್ಟ್ರೀಯ ಮಟ್ಟದ ರಸಪ್ರಶ್ನೆ ಹಾಗೂ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ನವೆಂಬರ್ 23ರಂದು ನಗರದ ದಟ್ಟಗಳ್ಳಿ 3ನೇ ಹಂತದಲ್ಲಿರುವ ಶಾಲಾ ಆವರಣದಲ್ಲಿ 6, 7 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಈ ರಸಪ್ರಶ್ನೆ ಸ್ಪರ್ಧೆ ಹಾಗೂ ಚಿತ್ರ ಕಲಾ ಸ್ಪರ್ಧೆಯನ್ನ ಏರ್ಪಡಿಸಿದ್ದು, ಆಸಕ್ತ…
ನಾಳೆ ಚುಟುಕು ಕವಿಗೋಷ್ಠಿ
November 18, 2019ಮೈಸೂರು: ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಮೈಸೂರು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಸಂಯುಕ್ತವಾಗಿ ನ.19ರಂದು ಬೆಳಿಗ್ಗೆ 10 ಗಂಟೆಗೆ ವಿಜಯ ನಗರದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಚುಟುಕು ಕವಿಗೋಷ್ಠಿ ಮತ್ತು ಈಶ್ವರ ಮಮದಾಪುರ ಹನಿಗವಿತೆಗಳು ಕೃತಿ ಲೋಕಾರ್ಪಣೆ ಸಮಾರಂಭ ಏರ್ಪಡಿಸ ಲಾಗಿದೆ. ಮೈಸೂರು ಜಿಲ್ಲಾ ಕಸಾಪ ಅಧ್ಯಕ್ಷ ವೈ.ಡಿ.ರಾಜಣ್ಣ ಕಾರ್ಯಕ್ರಮ ಉದ್ಘಾಟಿಸುವರು. ಮಾಜಿ ಶಾಸಕ ತೋಂಟದಾರ್ಯ ಅಧ್ಯಕ್ಷತೆ ವಹಿಸುವರು. ಹಿರಿಯ ಸಾಹಿತಿ ಡಾ.ಸಿಪಿಕೆ ಅವರು ಗೋಕಾಕ್ ತಾಲೂಕಿನ ಕವಿ ಈಶ್ವರ ಮಮದಾಪುರ…
ಡಿ.1ರಂದು ಪುಟ್ಟಣ್ಣ ಕಣಗಾಲ್ ಚಿತ್ರಗಳ ಚಿತ್ರಗೀತೆ ಸ್ಪರ್ಧೆ
November 18, 2019ಮೈಸೂರು: ಪಿರಿಯಾಪಟ್ಟಣದ ಪುಟ್ಟಣ್ಣ ಕಣಗಾಲ್ ವೇದಿಕೆ ವತಿಯಿಂದ ಕಣಗಾಲ್ರ 86ನೇ ಹುಟ್ಟುಹಬ್ಬದ ಅಂಗವಾಗಿ ಪುಟ್ಟಣ್ಣ ಕಣಗಾಲ್ ನಿರ್ದೇ ಶನದ ಕನ್ನಡ ಚಿತ್ರ ಗಳ ಚಿತ್ರಗೀತೆ ಸ್ಪರ್ಧೆಯನ್ನು ಡಿ.1ರಂದು ಬೆಳಿಗ್ಗೆ 10.30ಕ್ಕೆ ಮೈಸೂರಿನ ಜೆಎಸ್ಎಸ್ ಆಸ್ಪತ್ರೆ ಆವರಣದ ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಭವನದಲ್ಲಿ ಆಯೋಜಿಸ ಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸು ವವರು ನ.28ರೊಳಗೆ ಕಂಪ್ಲಾಪುರ ಮೋಹನ್, ಅಧ್ಯಕ್ಷರು, ಪುಟ್ಟಣ್ಣ ಕಣ ಗಾಲ್ ವೇದಿಕೆ, ಪಿರಿಯಾಪಟ್ಟಣ-571107, ದೂರವಾಣಿ -9880900873 ಅಥವಾ 6363066094 ಇವರಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ.
ರಿಂಗ್ ರಸ್ತೆಯಲ್ಲಿ ಮತ್ತೆ ಆವರಿಸಿದೆ ಕಗ್ಗತ್ತಲು
November 17, 2019ಮೈಸೂರು, ನ. 16(ಆರ್ಕೆ)- ದಸರಾ ಮುಗಿದು ತಿಂಗಳ ನಂತರ ಮೈಸೂರಿನ ರಿಂಗ್ ರಸ್ತೆಯಲ್ಲಿ ಮತ್ತೆ ಕಗ್ಗತ್ತಲು ಆವರಿಸಿದೆ.ಕೆಟ್ಟು ನಿಂತಿದ್ದ ರಿಂಗ್ ರಸ್ತೆ ಬೀದಿ ದೀಪಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ನಿರ್ದೇಶನದಂತೆ ಪಾಲಿಕೆ ಹಾಗೂ ಮುಡಾದಿಂದ ದಸರಾ ವೇಳೆ ಕಾಯಕಲ್ಪ ಒದಗಿಸಲಾಗಿತ್ತು. ರಿಂಗ್ ರಸ್ತೆ ಬೀದಿ ದೀಪಗಳಿಗೆ ಬಲ್ಬ್ ಗಳನ್ನು ಹಾಕಿ ರಿಪೇರಿ ಮಾಡಲು ಮುಡಾ ಮತ್ತು ಪಾಲಿಕೆ ಒಟ್ಟಾಗಿ ಖರ್ಚು ಮಾಡ ಬೇಕೆಂದು ಮುಖ್ಯಮಂತ್ರಿ ಬಿ.ಎಸ್. ಯಡಿ ಯೂರಪ್ಪ ಅವರು ಸೂಚನೆ ನೀಡಿದ್ದರಿಂದ ಅಧಿಕಾರಿಗಳು…
ಏನೇ ಆದರೂ `ಅನರ್ಹ’ ಲೇಬಲ್ ಕಳಚದು: ಸಿದ್ದರಾಮಯ್ಯ ಲೇವಡಿ
November 17, 2019ಮೈಸೂರು,ನ.16(ಎಂಟಿವೈ)- ಅನರ್ಹರು ಎಂದಿಗೂ ಅನರ್ಹರೇ ಹೊರತು ತ್ಯಾಗಿ, ಸ್ವಾತಂತ್ರ್ಯ ಹೋರಾಟ ಗಾರರಾಗಲು ಸಾಧ್ಯವಿಲ್ಲ. ಸುಪ್ರೀಂಕೋರ್ಟ್ ಅರ್ಹ ರಾಗಲು ಚುನಾವಣೆಗೆ ನಿಲ್ಲುವಂತೆ ಅನರ್ಹರಿಗೆ ಅವ ಕಾಶ ನೀಡಿದೆ. ಈಗ ಕಳಂಕ ಹೊತ್ತುಕೊಂಡು ಜನರ ಮುಂದೆ ಹೋಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ಮೈಸೂರಿನ ರಾಮಕೃಷ್ಣನಗರದಲ್ಲಿರುವ ತಮ್ಮ ನಿವಾಸ ದಲ್ಲಿ ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಆಪರೇಷನ್ ಕಮಲದ ಸೀಕ್ರೆಟ್ ವಿಚಾರ ಈಗ ಒಂದೊಂ ದಾಗಿ ಹೊರ ಬರುತ್ತಿದೆ. ಬಿಜೆಪಿಯವರು ಆಪರೇಷನ್ ಕಮಲ ಮಾಡಲ್ಲ ಅಂತ ಹೇಳಿಕೊಂಡು…
ಅರಸುಗೆ ಮೋದಿ, ಸಿದ್ದರಾಮಯ್ಯ ಸರಿಸಾಟಿ ಅಲ್ಲ
November 17, 2019ಮೈಸೂರು,ನ.16(ಎಂಟಿವೈ)- ಹಿಂದುಳಿದ ವರ್ಗದ ನಾಯಕ ಡಿ.ದೇವರಾಜ ಅರಸು ಅವ ರಿಗೆ ಅವರೇ ಸರಿಸಾಟಿ ಹೊರತು ಪ್ರಧಾನಿ ನರೇಂದ್ರಮೋದಿ ಅಲ್ಲ ಎಂದು ಮಾಜಿ ಶಾಸಕ ಹೆಚ್.ಪಿ. ಮಂಜುನಾಥ್, ಮಾಜಿ ಸಚಿವ ಎ.ಹೆಚ್.ವಿಶ್ವನಾಥ್ಗೆ ತಿರುಗೇಟು ನೀಡಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮೈಸೂರಿನ ನಿವಾಸದ ಬಳಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ದೇವರಾಜ ಅರಸು ಮುಂದೆ ಮೋದಿ ನಿಲ್ಲಲ್ಲ. ಸಿದ್ದರಾಮಯ್ಯ ಸಹ ಸಾಟಿಯಲ್ಲ. ಅರಸು ಹೆಸರಿನಲ್ಲಿ ಅವರು ಅಂಬೆಗಾಲು ಇಡುತ್ತಿದ್ದಾರೆ. ಧ್ವನಿಯಿಲ್ಲದ ವ್ಯಕ್ತಿ ಗಳನ್ನು ವಿಧಾನಸೌಧಕ್ಕೆ ಏರಿಸಿದವರು ದೇವರಾಜ ಅರಸು, ಮೋದಿ…
ಧ್ಯಾನ ರೋಗ ನಿರೋಧಕವಷ್ಟೆ, ಚಿಕಿತ್ಸೆ ಅಲ್ಲ
November 17, 2019ಮೈಸೂರು,ನ.16(ಪಿಎಂ, ವೈಡಿಎಸ್)- ಯೋಗ ಮತ್ತು ಧ್ಯಾನ ದಿಂದ ರೋಗ ಬರದಂತೆ ತಡೆಯಬಹುದೇ ಹೊರತು ಎಲ್ಲಾ ರೋಗಗಳನ್ನು ಗುಣಪಡಿಸಬಹುದು ಎಂಬ ಅಭಿಪ್ರಾಯ ಸರಿಯಲ್ಲ ಎಂದು ಹೈದರಾಬಾದ್ನ ರಾಮಚಂದ್ರ ಮಿಷನ್ ಅಧ್ಯಕ್ಷ ಕಮಲೇಶ್ ಡಿ ಪಟೇಲ್ ಸ್ಪಷ್ಟಪಡಿಸಿದರು. ಮುಕ್ತಗಂಗೋತ್ರಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲ ಯದ ಘಟಿಕೋತ್ಸವ ಭವನದಲ್ಲಿ ಕೇಂದ್ರ ಸರ್ಕಾರದ ಆಯುಷ್ ಮಂತ್ರಾಲಯ 2 ದಿನಗಳ ಕಾಲ ಆಯೋಜಿಸಿದ್ದ `ಹೃದಯದ ಆರೈಕೆಗಾಗಿ ಯೋಗ’ ಅಂತಾರಾಷ್ಟ್ರೀಯ ಯೋಗ ಸಮ್ಮೇಳನದ ಸಮಾರೋಪದಲ್ಲಿ ಮಾತನಾಡಿದ ಅವರು, ಯೋಗ ಎಂಬುದು ಜೀವನದ ಕ್ರಮ. ಯೋಗ…
ಕಚೇರಿಯೊಳಗೆ ಎಡಗಾಲಿಟ್ಟ ವಕೀಲರನ್ನ ವಾಪಸ್ ಕರೆದ ಹೆಚ್.ಡಿ.ರೇವಣ್ಣರಿಂದ ವಾಸ್ತು ಶಾಸ್ತ್ರ ಬೋಧನೆ..!
November 17, 2019ಮೈಸೂರು: ಹುಣಸೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸೋಮಶೇಖರ್ ದೇವರಳ್ಳಿ ನಾಮ ಪತ್ರ ಸಲ್ಲಿಕೆ ವೇಳೆ ಮಾಜಿ ಸಚಿವ ಹೆಚ್.ಡಿ. ರೇವಣ್ಣ ವಾಸ್ತು ಶಾಸ್ತ್ರಗಳ ಬಗ್ಗೆ ನೀತಿ ಬೋಧನೆ ಮಾಡಿದ ಪ್ರಸಂಗ ನಡೆದಿದೆ. ನಾಮಪತ್ರ ಸಲ್ಲಿಕೆ ವೇಳೆ ವಕೀಲರೊಬ್ಬರು ಕಚೇರಿಯೊಳಗೆ ಪ್ರವೇ ಶಿಸಿದ್ದಾರೆ, ಪ್ರವೇಶಿಸುವಾಗ ಎಡಗಾಲನ್ನು ಮೊದ ಲಿಗೆ ಇಟ್ಟ ವಕೀಲರನ್ನು ವಾಪಸ್ ಕರೆದ ರೇವಣ್ಣ ಬಲಗಾಲಿಟ್ಟು ಒಳಗೆ ಹೋಗಬೇಕು ಅಂತ ಬುದ್ದಿ ಹೇಳಿ ಮತ್ತೆ ಕಳುಹಿಸಿದ್ದಾರೆ. ಈ ವೇಳೆ ಅಭ್ಯರ್ಥಿ ಸೋಮಶೇಖರ್, ರೇವಣ್ಣ ಕಾಲಿಗೆ ನಮಸ್ಕರಿಸಿ ಕಚೇರಿಯೊಳಗೆ…
ಪೊಲೀಸ್ ಪೇದೆ ಮೇಲೆ ಹಲ್ಲೆ: ಆಟೋ ಚಾಲಕನ ಬಂಧನ
November 17, 2019ಮೈಸೂರು, ನ.16(ಎಸ್ಪಿಎನ್)-ಕರ್ತವ್ಯ ನಿರತ ಸಂಚಾರಿ ಪೊಲೀಸ್ ಪೇದೆ ಮೇಲೆ ಹಲ್ಲೆ ನಡೆಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆಟೋ ಚಾಲಕನನ್ನು ಲಷ್ಕರ್ ಠಾಣೆ ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ. ಆಟೋ ಚಾಲಕ ಮಹೇಶ್ ಬಂಧಿತ ಆರೋಪಿ. ಪ್ರಭುಸ್ವಾಮಿ ಹಲ್ಲೆಗೊಳಗಾದ ಸಂಚಾರ ಪೊಲೀಸ್ ಪೇದೆ. ನ.15ರಂದು ಸಂಜೆ ಮೈಸೂರಿನ ಗಾಂಧಿ ವೃತ್ತದ ಬಳಿ ನೋ ಪಾರ್ಕಿಂಗ್ನಲ್ಲಿ ಆಟೋ ಪಾರ್ಕ್ ಮಾಡಿದ್ದ ಚಾಲಕ ಮಹೇಶ್ನನ್ನು, ಸಂಚಾರ ಪೇದೆ ಪ್ರಭುಸ್ವಾಮಿ ದಾಖಲಾತಿ ತೋರಿಸುವಂತೆ ಕೇಳಿದ್ದಾರೆ. ಇದರಿಂದ ಮಹೇಶ್ ಏಕಾಏಕಿ ರೊಚ್ಚಿ ಗೆದ್ದು, ಪೇದೆ ಪ್ರಭುಸ್ವಾಮಿ…
ಕೊಳಚೆ ನಿರ್ಮೂಲನಾ ಮಂಡಳಿಯ ಮನೆಗಳ ಕಾಮಗಾರಿಗೆ ಶಾಸಕರಿಂದಲೇ ತಡೆ
November 17, 2019ಮೈಸೂರು,ನ.16(ಪಿಎಂ)-ತಾವು ಶಾಸಕರಾಗಿದ್ದ ಅವಧಿ ಯಲ್ಲಿ ಕೊಳಚೆ ನಿರ್ಮೂ ಲನಾ ಮಂಡಳಿಯಿಂದ ಮಂಜೂರಾದ 5,296 ಮನೆಗಳ ಕಾಮಗಾರಿ ಆರಂಭವಾಗದಂತೆ ಹಾಲಿ ಶಾಸಕ ಎಸ್.ಎ.ರಾಮ ದಾಸ್ ದುರುದ್ದೇಶದಿಂದ ತಡೆಯೊಡ್ಡಿದ್ದಾರೆ ಎಂದು ಮಾಜಿ ಶಾಸಕ ಎಂ.ಕೆ.ಸೋಮ ಶೇಖರ್ ಆರೋಪಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಸತತ 4 ವರ್ಷ ಗಳು ಶ್ರಮವಹಿಸಿ ಮುಡಾದಿಂದ ಜಮೀನು ಪಡೆದು ಮಳಲವಾಡಿಯಲ್ಲಿ 1,344, ವಿಶ್ವೇ ಶ್ವರನಗರದಲ್ಲಿ 868 ಮನೆಗಳು ಸೇರಿದಂತೆ ಒಟ್ಟು 2,212 ಮನೆಗಳನ್ನು ನಿರ್ಮಿಸಲು ಕೊಳಚೆ ನಿರ್ಮೂಲನಾ ಮಂಡಳಿಯಿಂದ…









