ಕೊಲಂಬೋ: ಶ್ರೀಲಂಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಯವರು ಕೊಲಂಬೋದಲ್ಲಿರುವ ಇಂಡಿಯಾ ಹೌಸ್ನಲ್ಲಿ ಭಾರತೀಯ ಸಮುದಾಯವನ್ನು ದ್ದೇಶಿಸಿ ಮಾತನಾಡಿದರು. ಅಲ್ಲದೆ ಕಳೆದ ಏಪ್ರಿಲ್ನಲ್ಲಿ ಉಗ್ರಗಾಮಿಗಳ ಬಾಂಬ್ ಸ್ಫೋಟ ದಿಂದ 253 ಮಂದಿ ನಾಗರಿಕರು ಅಸುನೀ ಗಿದ ಸ್ಥಳದಲ್ಲಿ ಗಿಡ ನೆಟ್ಟು ಶಾಂತಿ ಸೌಹಾರ್ದತೆ ಸಂದೇಶ ಸಾರಿದರು. ಜೊತೆಗೆ ಅಸುನೀಗಿದ ನಾಗರಿಕರಿಗೆ ಗೌರವ ನಮನ ಸಲ್ಲಿಸಿದರು. ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಿದ ಅವರು, ಇಂದು ಜಗತ್ತಿನಲ್ಲಿ ಭಾರತೀಯರ ಸ್ಥಾನ ಪ್ರಬಲವಾಗಿದೆ. ಈ ಕ್ರೆಡಿಟ್ನ ಹೆಚ್ಚು ಭಾಗ ಭಾರತೀಯ ವಲಸಿಗರಿಗೆ ಸಲ್ಲಬೇಕು….
ಬೆಂಗಳೂರಿನ ಖಾಸಗಿ ಕಂಪನಿ ಮಹಿಳಾ ಉದ್ಯೋಗಿ ಸೇರಿ ಮೂವರು ನೀರುಪಾಲು
June 10, 2019ಕೊಳ್ಳೇಗಾಲ: ನದಿಯಲ್ಲಿ ಆಟವಾಡುತ್ತಿದ್ದಾಗ ಕಾಲು ಜಾರಿ ಬಿದ್ದು ಬೆಂಗಳೂರಿನ ಖಾಸಗಿ ಕಂಪನಿ ಮಹಿಳಾ ಉದ್ಯೋಗಿ ಸೇರಿ ಮೂವರು ಮೃತಪಟ್ಟ ಘಟನೆ ಶಿವನ ಸಮುದ್ರ ಸಮೀಪದ ವೆಸ್ಲಿ ಸೇತುವೆ ಬಳಿ ಭಾನುವಾರ ಸಂಭವಿಸಿದೆ. ನದಿಯ ಮಧ್ಯೆ ಬಂಡೆ ಮೇಲೆ ಕುಳಿತಿದ್ದ ಮಹಿಳಾ ಉದ್ಯೋಗಿ ಕಾಲು ಜಾರಿ ನದಿಗೆ ಬಿದ್ದಾಗ ಅವರನ್ನು ರಕ್ಷಿಸಲು ಪ್ರಯತ್ನಿಸಿದ ಮತ್ತಿಬ್ಬರು ಉದ್ಯೋಗಿಗಳು ಸಹ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಬೆಂಗಳೂರಿನ ಸುಂಕದಕಟ್ಟೆ ನಿವಾಸಿ ಪ್ರಸಾದ್ ಎಂಬುವರ ಪುತ್ರ ಮನೋಜ್ ಕುಮಾರ್(23),…
ಕೆವೈಸಿ ಮಾಡದಿದ್ದರೆ ಆಗಸ್ಟ್ನಿಂದ ರೇಷನ್ ಇಲ್ಲ
June 10, 2019ಬೆಂಗಳೂರು: ಪಡಿತರ ಚೀಟಿಯಲ್ಲಿ ಹೆಸರು ಇರುವ ಪ್ರತಿಯೊಬ್ಬರೂ ಜುಲೈ 31ರೊಳಗೆ ಆಧಾರ್ ದೃಢೀಕರಣ (ಇ-ಕೆವೈಸಿ) ಮಾಡಿಸಿಕೊಳ್ಳಬೇಕು. ಇ-ಕೆವೈಸಿ ಮಾಡಿಸಿಕೊಳ್ಳದವರಿಗೆ ಆಗಸ್ಟ್ನಿಂದ ಪಡಿತರ ನೀಡದಿರಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಆಧಾರ್ ದೃಢೀಕರಣದ ಮೂಲಕ ಚಾಲ್ತಿಯಲ್ಲಿ ಇರದ, ಕುಟುಂಬದೊಂದಿಗೆ ವಾಸವಿಲ್ಲದ ಹಾಗೂ ಮೃತರಾದ ಫಲಾನುಭವಿಗಳ ಮಾಹಿತಿಯನ್ನು ಗುರುತಿಸಿ, ಅಂತಹ ವರನ್ನು ದತ್ತಾಂಶದಿಂದ ತೆಗೆದುಹಾಕಿ ಪಡಿತರ ಕಡಿತ ಮಾಡಲಾಗುವುದೆಂದು ಇಲಾಖೆ ತಿಳಿಸಿದೆ. ಇ-ಕೆವೈಸಿ ದೃಢೀಕರಣ ಪ್ರಕ್ರಿಯೆ ಈಗಾಗಲೇ ಆರಂಭ ವಾಗಿದ್ದು, ಜುಲೈ 31ರೊಳಗೆ ಅಂತ್ಯೋದಯ, ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿಯಲ್ಲಿ…
ಸಂಪುಟ ವಿಸ್ತರಣೆ: ದೇವೇಗೌಡರನ್ನು ಭೇಟಿಯಾದ ಸಿಎಂ ಕುಮಾರಸ್ವಾಮಿ
June 10, 2019ಬೆಂಗಳೂರು: ಬುಧವಾರ ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪದ್ಮ ನಾಭ ನಗರದ ನಿವಾಸದಲ್ಲಿ ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇ ಗೌಡ ಅವರನ್ನು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಖಾಲಿ ಇರುವ ಸಚಿವ ಸ್ಥಾನವನ್ನು ಯಾರಿಗೆ ನೀಡಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಲಾಗಿದೆ. ಸದ್ಯ ಜೆಡಿಎಸ್ನಲ್ಲಿ ಎರಡು ಖಾತೆಗಳು ಖಾಲಿ ಇವೆ. ಅದರಲ್ಲಿ ಒಂದು ಸ್ಥಾನವನ್ನು ಈಗಾಗಲೇ ಪಕ್ಷೇತರ ಶಾಸಕರಿಗೆ ಕೊಡಲು ತೀರ್ಮಾನ ಮಾಡಲಾಗಿದೆ. ಇನ್ನುಳಿದ ಒಂದು ಸ್ಥಾನ ಯಾರಿಗೆ…
ತಮ್ಮ ಹುಟ್ಟಿನ ಸಾಕ್ಷ್ಯ ಹೇಳಿದ್ದ ನರ್ಸ್ಗೆ ರಾಹುಲ್ ಗಾಂಧಿ ಪ್ರೀತಿಯ ಅಪ್ಪುಗೆ!
June 10, 2019ವಯನಾಡು: ಲೋಕಸಭೆ ಚುನಾವಣೆ ವೇಳೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಪೌರತ್ವ ವಿವಾದ ಭುಗಿಲೆದ್ದಿತ್ತು. ಈ ಸಂದರ್ಭ ದಲ್ಲಿ ಕೇರಳದ ನಿವೃತ್ತ ನರ್ಸ್ ರಾಜಮ್ಮ, ರಾಹುಲ್ ಹುಟ್ಟಿದ ಸಂದರ್ಭ ನವಜಾತ ಶಿಶುವನ್ನು ಮೊದಲು ಕೈಗಳಲ್ಲಿ ಎತ್ತಿಕೊಂಡಿದ್ದ ಖುಷಿಯನ್ನು ಹಂಚಿಕೊಂಡಿದ್ದರು. ನಿವೃತ್ತ ನರ್ಸ್ ರಾಜಮ್ಮ ಅವರು ಸದ್ಯ ವಯನಾಡುವಿನಲ್ಲಿ ವಾಸವಾಗಿದ್ದಾರೆ. ಇನ್ನು ಕಳೆದ ಲೋಕಸಭೆ ಚುನಾವಣೆಯಲ್ಲಿ ಕೇರಳದ ವಯನಾಡಿನಿಂದ ಸ್ಪರ್ಧಿಸಿ ಗೆದ್ದು ಬಂದಿ ರುವ ರಾಹುಲ್ ಗಾಂಧಿ ವಯನಾಡಿಗೆ ಭೇಟಿ ನೀಡಿದಾಗ ರಾಜಮ್ಮ ಅವರನ್ನು ಭೇಟಿ ಮಾಡಿ…
ಇಂದು ರಾಜ್ಯಾದ್ಯಂತ ರೈತರಿಂದ ಹೆದ್ದಾರಿ ತಡೆ
June 10, 2019ಬೆಂಗಳೂರು: ಭೂಸ್ವಾಧೀನ ಕಾಯ್ದೆ ತಿದ್ದುಪಡಿ ಕೈಬಿಡುವುದು ಸೇರಿ ದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ರಾಜ್ಯ ರೈತ ಸಂಘದಿಂದ ಸೋಮವಾರ (ನಾಳೆ) ರಾಜ್ಯವ್ಯಾಪಿ ಹೆದ್ದಾರಿ ತಡೆ ಮತ್ತು ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗಿದೆ. ಬೆಂಗಳೂರು-ಚೆನ್ನೈ, ಬೆಂಗಳೂರು-ಮಂಗ ಳೂರು, ಪುಣೆ ಹೆದ್ದಾರಿಗಳಲ್ಲಿ ನಾಳೆ ರಸ್ತೆ ಸಂಚಾರ ಅಸ್ತವ್ಯಸ್ತಗೊಳ್ಳುವ ಸಾಧ್ಯತೆ ಇದೆ. ರೈತ ಸಂಘದ ಹೆದ್ದಾರಿ ಬಂದ್ ಕ್ರಮಕ್ಕೆ ಹಸಿರು ಸೇನೆ ಸಂಘಟನೆ ಕೂಡ ಬೆಂಬಲ ವ್ಯಕ್ತಪಡಿಸಿದೆ. ಸೋಮವಾರ ಬೆಳಿಗ್ಗೆ 6 ಗಂಟೆಯಿಂದ ಸಂಜೆಯವರೆಗೂ ರಾಜ್ಯಾ ದ್ಯಂತ ಪ್ರತಿಭಟನೆಗಳು ನಡೆಯಲಿವೆ. ಬೆಂಗಳೂರು ಹೊರವಲಯದ ದೇವನ…
ರಂಗನತಿಟ್ಟಿನಲ್ಲಿ ಪಕ್ಷಿ ಗಣತಿ
June 10, 2019ಮೈಸೂರು: ಶ್ರೀರಂಗಪಟ್ಟಣ ತಾಲೂಕಿನ ಪ್ರಸಿದ್ಧ ರಂಗನತಿಟ್ಟು ಪಕ್ಷಿಧಾಮದಲ್ಲಿ ಭಾನುವಾರ ಅರಣ್ಯ ಇಲಾಖೆ ವತಿಯಿಂದ ನಡೆದ ಪಕ್ಷಿಗಳ ಗಣತಿ ಕಾರ್ಯದಲ್ಲಿ 65ಕ್ಕೂ ಹೆಚ್ಚು ತಳಿಯ ಸಾವಿರಾರು ಪಕ್ಷಿಗಳು ಗಣತಿದಾರರ ಕಣ್ಣಿಗೆ ಬಿದ್ದವು. ಪಕ್ಷಿಗಳ ಸ್ವರ್ಗ ಎನಿಸಿರುವ ರಂಗನತಿಟ್ಟು ಪಕ್ಷಿ ಧಾಮವು ವರ್ಷದಿಂದ ವರ್ಷಕ್ಕೆ ಬಗೆಬಗೆಯ ಹಾಗೂ ಅಪರೂಪದ ಪಕ್ಷಿಗಳನ್ನು ಸೆಳೆಯುತ್ತಿದ್ದು, ಪ್ರವಾಸಿ ಗರಿಗೆ ಹಾಗೂ ಪಕ್ಷಿ ಪ್ರಿಯರಿಗೆ ಮುದ ನೀಡುವ ವಾತಾವರಣ ಸೃಷ್ಟಿಸಿದೆ. ಪಕ್ಷಿಧಾಮದಲ್ಲಿ ಪಕ್ಷಿಗಳಿಗೆ ಸಂತಾನೋತ್ಪತ್ತಿ ಪ್ರಕ್ರಿಯೆಗೆ ಉತ್ತಮವಾದ ವಾತಾವರಣ ವಿದ್ದು, ಕುಡಿಯಲು ನೀರು, ಸುರಕ್ಷತೆ ಹಾಗೂ…
ಹಸು ದಾಳಿಗೆ ಇಬ್ಬರು ಮಹಿಳೆಯರಿಗೆ ಗಾಯ
June 10, 2019ಮೈಸೂರು: ಬಿಡಾಡಿ ಹಸುಗಳೆರಡು ವಾಯುವಿಹಾರಿಗಳ ನಡುವೆ ನುಗ್ಗಿದ ಪರಿಣಾಮ ಆತಂಕಕ್ಕೊಳಗಾಗಿ ಬಿದ್ದು ಇಬ್ಬರು ಮಹಿಳೆ ಯರು ಗಾಯಗೊಂಡಿರುವ ಘಟನೆ ಭಾನುವಾರ ಮೈಸೂರಿನ ಕುಕ್ಕರಹಳ್ಳಿ ಕೆರೆ ಆವರಣದಲ್ಲಿ ನಡೆದಿದೆ. ಎಂದಿನಂತೆ ಕುಕ್ಕರಹಳ್ಳಿ ಕೆರೆ ಆವರಣದಲ್ಲಿ ವಾಯು ವಿಹಾರಿಗಳು ಓಡಾಡುತ್ತಿದ್ದಾಗ ಇಂದು ಬೆಳಿಗ್ಗೆ 8 ಗಂಟೆ ಸುಮಾರಿನಲ್ಲಿ ಏರಿಯ ಪಕ್ಕ ಮೇಯುತ್ತಿದ್ದ ಹಸುಗಳೆರಡು ಹಠಾತ್ತನೇ ವಾಯುವಿಹಾರಿಗಳತ್ತ ಕುಣಿಯುತ್ತ ಬಂದಿವೆ. ಒಂದರ ಹಿಂದೆ ಮತ್ತೊಂದು ಹಸು ಬಂದು ನುಗ್ಗಿದ್ದರಿಂದ ಏರಿ ಮೇಲೆ ಹೋಗು ತ್ತಿದ್ದ ಮಹಿಳೆಯೊಬ್ಬರಿಗೆ ಹಸು ತಾಕಿದೆ. ಇದರಿಂದ ಅವರು…
ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣಗೆ ಸಿಎಂ ಬುದ್ಧಿವಾದ
June 10, 2019ಬೆಂಗಳೂರು: ‘ವೋಟಿಗೆ ಅವ್ರು ಕೆಲಸಕ್ಕೆ ಮಾತ್ರ ನಾವಾ? ವೋಟು ಹಾಕದೆ ಅಭಿವೃದ್ಧಿ ಕೇಳೋದಕ್ಕೆ ನಾಚಿಕೆ ಆಗೋಲ್ವಾ’ ಎಂದು ಸಮಸ್ಯೆ ಹೇಳಿ ಕೊಳ್ಳಲು ಬಂದಿದ್ದ ಜನರ ಮೇಲೆ ವಾಗ್ದಾಳಿ ನಡೆಸಿದ ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಅವರಿಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಬುದ್ಧಿವಾದ ಹೇಳಿದ್ದಾರೆ. ಚುನಾವಣೆ ರಾಜಕೀಯವನ್ನು ಅಭಿ ವೃದ್ಧಿಯೊಂದಿಗೆ ಬೆರೆಸುವುದು ಸೂಕ್ತ ವಲ್ಲ. ಜನಪ್ರತಿನಿಧಿಗಳಾದ ಹಾಗೂ ಮಂತ್ರಿ ಮಂಡಲದಲ್ಲಿ ಸ್ಥಾನ ಪಡೆದಿರುವ ನಾವೆಲ್ಲರೂ ಪಕ್ಷಾತೀತವಾಗಿ ವರ್ತಿಸ ಬೇಕಾಗಿದೆ ಎಂದು ತಿಳುವಳಿಕೆ ಮೂಡಿ ಸಿದ್ದಾರೆ. ಪಕ್ಷಾತೀತವಾಗಿ ಜನರ…
ಇಂದಿನಿಂದ ಮೈಸೂರು-ಮುಂಬೈ ನಡುವೆ ನೂತನ ಬಸ್ ಸಂಚಾರ
June 10, 2019ಮೈಸೂರು: ಕೆಎಸ್ಆರ್ಟಿಸಿ ಮೈಸೂರು ಗ್ರಾಮಾಂ ತರ ವಿಭಾಗದಿಂದ ಪ್ರಯಾಣಿಕರ ಅನುಕೂಲಕ್ಕಾಗಿ ಹಾಗೂ ಆರಾಮದಾಯಕ ಪ್ರಯಾಣಕ್ಕಾಗಿ ಮೈಸೂರು -ಮುಂಬೈ ಮಾರ್ಗದಲ್ಲಿ ನೂತನವಾಗಿ ಐರಾವತ ಡ್ರೀಮ್ ಕ್ಲಾಸ್ (ಎಸಿ ಸ್ಲೀಪರ್) ವಾಹನ ಜೂನ್ 10ರಿಂದ ಸಂಚರಿಸಲಿದೆ. ಅಂತಾರಾಜ್ಯ ಮತ್ತು ದೂರ ಮಾರ್ಗವಾದ ಮುಂಬೈಗೆ ಈ ಹಿಂದೆ ಇದ್ದ ಐರಾವತ್ ಕ್ಲಬ್ ಕ್ಲಾಸ್ ವಾಹನದ ಬದಲಾಗಿ ಐರಾ ವತ ಡ್ರೀಮ್ ಕ್ಲಾಸ್ ಮಾದರಿಯ ಎಸಿ ಸ್ಲೀಪರ್ ವಾಹನ ಜೂ.10ರಿಂದ ಪ್ರತಿದಿನ ಮಧ್ಯಾಹ್ನ ಒಂದು ಗಂಟೆಗೆ ಮೈಸೂರಿನಿಂದ ಕೆ.ಆರ್.ಪೇಟೆ, ಶ್ರವಣ ಬೆಳಗೊಳ, ಅರಸೀಕೆರೆ,…










