ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣಗೆ ಸಿಎಂ ಬುದ್ಧಿವಾದ
ಮೈಸೂರು

ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣಗೆ ಸಿಎಂ ಬುದ್ಧಿವಾದ

June 10, 2019

ಬೆಂಗಳೂರು: ‘ವೋಟಿಗೆ ಅವ್ರು ಕೆಲಸಕ್ಕೆ ಮಾತ್ರ ನಾವಾ? ವೋಟು ಹಾಕದೆ ಅಭಿವೃದ್ಧಿ ಕೇಳೋದಕ್ಕೆ ನಾಚಿಕೆ ಆಗೋಲ್ವಾ’ ಎಂದು ಸಮಸ್ಯೆ ಹೇಳಿ ಕೊಳ್ಳಲು ಬಂದಿದ್ದ ಜನರ ಮೇಲೆ ವಾಗ್ದಾಳಿ ನಡೆಸಿದ ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಅವರಿಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಬುದ್ಧಿವಾದ ಹೇಳಿದ್ದಾರೆ.

ಚುನಾವಣೆ ರಾಜಕೀಯವನ್ನು ಅಭಿ ವೃದ್ಧಿಯೊಂದಿಗೆ ಬೆರೆಸುವುದು ಸೂಕ್ತ ವಲ್ಲ. ಜನಪ್ರತಿನಿಧಿಗಳಾದ ಹಾಗೂ ಮಂತ್ರಿ ಮಂಡಲದಲ್ಲಿ ಸ್ಥಾನ ಪಡೆದಿರುವ ನಾವೆಲ್ಲರೂ ಪಕ್ಷಾತೀತವಾಗಿ ವರ್ತಿಸ ಬೇಕಾಗಿದೆ ಎಂದು ತಿಳುವಳಿಕೆ ಮೂಡಿ ಸಿದ್ದಾರೆ. ಪಕ್ಷಾತೀತವಾಗಿ ಜನರ ರಾಜ ಕೀಯ ಒಲವನ್ನು ಪರಿಗಣಿಸದೆ ಒಟ್ಟಾಗಿ ಅಖಂಡ ಕರ್ನಾಟಕದ ಸಮಗ್ರ ಅಭಿ ವೃದ್ಧಿಗೆ ಶ್ರಮಿಸೋಣ. ಇದೇ ಪ್ರಜಾ ಪ್ರಭುತ್ವದ ಸತ್ವ- ಸಾರ ಎಂದು ಮುಖ್ಯ ಮಂತ್ರಿ ಕುಮಾರಸ್ವಾಮಿ ಟ್ವೀಟ್ ಮೂಲಕ ತಮ್ಣಣ್ಣಗೆ ಬುದ್ಧಿವಾದ ಹೇಳಿದ್ದಾರೆ.

Translate »