News

ಕಿರಾಣಿ ಅಂಗಡಿಗಳಲ್ಲಿ ಮದ್ಯ ಮಾರಾಟ ತಪ್ಪಿಸಲು ಹೊಸ ವೈನ್ ಶಾಪ್ ತೆರೆಯುವುದು ಅನಿವಾರ್ಯ
News

ಕಿರಾಣಿ ಅಂಗಡಿಗಳಲ್ಲಿ ಮದ್ಯ ಮಾರಾಟ ತಪ್ಪಿಸಲು ಹೊಸ ವೈನ್ ಶಾಪ್ ತೆರೆಯುವುದು ಅನಿವಾರ್ಯ

December 7, 2022

ಬೆಂಗಳೂರು, ಡಿ. 6(ಕೆಎಂಶಿ)- ಕಿರಾಣಿ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡುವುದನ್ನು ತಪ್ಪಿಸಲು ಹೊಸ ವೈನ್ ಶಾಪ್‍ಗಳನ್ನು ತೆರೆಯುವುದು ಅನಿವಾರ್ಯ ಎಂದು ಅಬಕಾರಿ ಸಚಿವ ಕೆ. ಗೋಪಾಲಯ್ಯ ಇಂದಿಲ್ಲಿ ತಿಳಿಸಿದ್ದಾರೆ. ಆದರೆ ರಾಜ್ಯ ವಿಧಾನಸಭಾ ಚುನಾವಣೆ ನಮ್ಮ ಮುಂದಿರುವುದರಿಂದ ಸದ್ಯಕ್ಕೆ ಅದು ಸಾಧ್ಯವಿಲ್ಲ ಎಂದರು. ನಾವೇ ಮತ್ತೆ 2023ರ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತೇವೆ. ನಮ್ಮ ನೇತೃತ್ವದ ಸರ್ಕಾರದಲ್ಲೇ ಎಲ್ಲ ಆಗುಹೋಗುಗಳನ್ನು ಗಮನದಲ್ಲಿಟ್ಟು ಕೊಂಡು ನೂತನ ಅಬಕಾರಿ ನೀತಿ ಅಳವಡಿಸಿ, ಕಿರಾಣಿ ಅಂಗಡಿ ಗಳಲ್ಲಿ ಮದ್ಯ ದೊರೆಯುವುದನ್ನು…

ಕ್ರೀಡಾ ಸಾಧಕರಿಗೆ ಸರ್ಕಾರಿ ಉದ್ಯೋಗ
News

ಕ್ರೀಡಾ ಸಾಧಕರಿಗೆ ಸರ್ಕಾರಿ ಉದ್ಯೋಗ

December 7, 2022

ಬೆಂಗಳೂರು, ಡಿ. 6(ಕೆಎಂಶಿ)- ಕ್ರೀಡಾಪಟು ಗಳಿಗೆ ನೇರ ನೇಮಕಾತಿ ಮೂಲಕ ಸರ್ಕಾರಿ ಉದ್ಯೋಗ ನೀಡುವ ಯೋಜನೆಗೆ ಮುಂದಿನ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಲಾ ಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದಿಲ್ಲಿ ತಿಳಿಸಿದ್ದಾರೆ. ಪದವೀಧರರಾದ ಒಲಂಪಿಕ್ಸ್ ಹಾಗೂ ಪ್ಯಾರಾ ಒಲಂಪಿಕ್ಸ್ ಪದಕ ವಿಜೇತರಿಗೆ ಗ್ರೂಪ್ ಎ ಉದ್ಯೋಗ ನೀಡಲಾಗುವುದು ಎಂದು ತಿಳಿಸಿ ದರು. ಏಕಲವ್ಯ ಸೇರಿದಂತೆ ಇತರ ಕ್ರೀಡಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿ ಮಾತನಾಡಿದ ಅವರು, ಕ್ರೀಡಾಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳ…

ಟಿಕೆಟ್ ಹಂಚಿಕೆ ಮುನ್ನವೇ ಬಂಡಾಯ ಶಮನಕ್ಕೆ ಕಾಂಗ್ರೆಸ್ ಕಾರ್ಯತಂತ್ರ
News

ಟಿಕೆಟ್ ಹಂಚಿಕೆ ಮುನ್ನವೇ ಬಂಡಾಯ ಶಮನಕ್ಕೆ ಕಾಂಗ್ರೆಸ್ ಕಾರ್ಯತಂತ್ರ

December 6, 2022

ಬೆಂಗಳೂರು, ಡಿ.5 (ಕೆಎಂಶಿ)-ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅಧಿಕೃತ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವ ಮುನ್ನ ಆಯಾ ಕ್ಷೇತ್ರಗಳ ಬಂಡಾಯವನ್ನು ಶಮನಗೊಳಿಸಲು ಕಾಂಗ್ರೆಸ್ ಮುಂದಾಗಿದೆ. ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿ ಆಕಾಂಕ್ಷಿಗಳು ಸಲ್ಲಿಸಿರುವ ಅರ್ಜಿಗಳಿಂದ ರಾಜ್ಯ ನಾಯಕರು ಹೌಹಾರಿದ್ದಾರೆ. ಕೆಲವು ಕ್ಷೇತ್ರಗಳಲ್ಲಿ ಕನಿಷ್ಠ 3 ರಿಂದ 24 ಆಕಾಂಕ್ಷಿಗಳು ಇದ್ದಾರೆ. ಚುನಾವಣೆ ಸಂದರ್ಭದಲ್ಲಿ ಬಂಡಾಯ ಏಳಬಾರದೆಂಬ ಉದ್ದೇಶದಿಂದ ಇದೇ 15 ರಿಂದ ಪ್ರತಿ ಕ್ಷೇತ್ರದ ಆಕಾಂಕ್ಷಿಗಳ ಸಭೆ ಕರೆಯಲಾಗಿದೆ. ಪ್ರತಿ ಕ್ಷೇತ್ರದಲ್ಲಿ ಆಕಾಂಕ್ಷಿಗಳ ದಂಡೇ ಇರುವುದರಿಂದ ಎಲ್ಲರಿಗೂ ಟಿಕೆಟ್ ನೀಡಲು ಸಾಧ್ಯವಿಲ್ಲ….

ಸರ್ಕಾರದಿಂದಲೇ ಐದು ಲಕ್ಷದವರೆಗೆ ಚಿಕಿತ್ಸಾ ವೆಚ್ಚ ಭರಿಸುವ ಯೋಜನೆ ಜಾರಿ
News

ಸರ್ಕಾರದಿಂದಲೇ ಐದು ಲಕ್ಷದವರೆಗೆ ಚಿಕಿತ್ಸಾ ವೆಚ್ಚ ಭರಿಸುವ ಯೋಜನೆ ಜಾರಿ

December 4, 2022

ಬೆಂಗಳೂರು, ಡಿ. 3(ಕೆಎಂಶಿ)-ಅಂಗವಿಕಲರ ಆರೋಗ್ಯ ಕ್ಕಾಗಿ ವಿಶೇಷ ವಿಮಾ ಯೋಜನೆ ರೂಪಿಸಿ, 5 ಲಕ್ಷದವರೆಗಿನ ಅವರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸುವ ಯೋಜನೆ ಪ್ರಾರಂಭಿ ಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು. ಅವರು ಇಂದು ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ನಿರ್ದೇಶನಾಲಯದ ವತಿಯಿಂದ ಆಯೋಜಿಸಿದ್ದ ವಿಶ್ವ ವಿಕಲಚೇತನರ ದಿನಾಚರಣೆ-2022 ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿಕಲಚೇತನರು ಧೈರ್ಯದಿಂದ ಯಶಸ್ವಿಯಾಗಿ ಬದುಕು ನಡೆಸಲು ಸರ್ಕಾರ ಎಲ್ಲಾ ಸಹಕಾರವನ್ನು ನೀಡಲಿದೆ. ಸರ್ಕಾರ ನಿರ್ಮಿಸುವ ಮನೆಗಳಲ್ಲಿ ಅಂಗವಿಕಲರಿಗೆ ಶೇ.3ರಷ್ಟು ಮೀಸಲಾತಿಯನ್ನು ನೀಡಲಾಗುವುದು….

ನಾಳೆ ದೆಹಲಿಯಲ್ಲಿ ಗೃಹ ಸಚಿವ ಅಮಿತ್ ಷಾ ಮಹತ್ವದ ಸಭೆ
News

ನಾಳೆ ದೆಹಲಿಯಲ್ಲಿ ಗೃಹ ಸಚಿವ ಅಮಿತ್ ಷಾ ಮಹತ್ವದ ಸಭೆ

December 4, 2022

ಬೆಂಗಳೂರು, ಡಿ.3(ಕೆಎಂಶಿ)- ಕರ್ನಾಟಕ ವಿಧಾನಸಭೆ ಚುನಾವಣೆಗೆ ರೋಡ್ ಮ್ಯಾಪ್ ಸಿದ್ಧಪಡಿಸಲು ಕೇಂದ್ರ ಗೃಹ ಸಚಿವ ಅಮಿತ್ ಷಾ ಡಿ.5ರಂದು ದೆಹಲಿಯಲ್ಲಿ ಮಹತ್ವದ ಸಭೆ ಕರೆದಿದ್ದಾರೆ. ಗುಜರಾತ್ ವಿಧಾನಸಭೆಗೆ ಕೊನೆಯ ಹಂತದ ಮತದಾನ ಮುಗಿಯುತ್ತಿ ದ್ದಂತೆ ಕರ್ನಾಟಕದಲ್ಲಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲು ಚುನಾವಣಾ ತಂತ್ರಗಾರಿಕೆಗಾಗಿ ಎರಡು ದಿನ ಸಭೆ ನಡೆಸಲಿದ್ದಾರೆ. ಅಮಿತ್ ಷಾ ಕರೆದಿ ರುವ ಸಭೆಗೆ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ. ಕರ್ನಾಟಕದ ಚುನಾವಣೆ ಉಸ್ತುವಾರಿ ಹೊಣೆ ಹೊತ್ತಿ ರುವ ಕೇಂದ್ರ…

ವಿದ್ಯುತ್‍ದರ ಇಳಿಕೆಗೆ ನಿರ್ಧಾರ
News

ವಿದ್ಯುತ್‍ದರ ಇಳಿಕೆಗೆ ನಿರ್ಧಾರ

December 3, 2022

ಬೆಂಗಳೂರು, ಡಿ.2(ಕೆಎಂಶಿ)- ಹಾಲು, ಮೊಸರು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಆಡಳಿತ ವಿರೋಧಿ ಅಲೆ ಉಂಟಾಗುವ ಅಪಾಯವನ್ನು ಅರಿತಿರುವ ಸರ್ಕಾರ ಇತ್ತೀಚೆಗೆ ಹೆಚ್ಚಳ ಮಾಡಲಾದ ವಿದ್ಯುತ್ ದರ ಇಳಿಸಲು ಮುಂದಾಗಿದೆ. ನೂತನ ವರ್ಷಾರಂಭಕ್ಕೆ ಮೊದಲೇ ವಿದ್ಯುತ್ ದರ ಇಳಿಸಿ ಗ್ರಾಹಕರಿಗೆ ಸಿಹಿ ಸುದ್ದಿ ನೀಡುವ ಪ್ರಸ್ತಾಪವನ್ನು ಇಂಧನ ಇಲಾಖೆ ಸಿದ್ಧಪಡಿಸಿದೆ. ಗೃಹ ಬಳಕೆಯೂ ಸೇರಿದಂತೆ ಎಲ್ಲ ಬಗೆಯ ಗ್ರಾಹಕರಿಗೆ ಅನುಕೂಲ ಕಲ್ಪಿಸಲು ಇಂಧನ ದರ ಕಡಿತಕ್ಕೆ ಗಂಭೀರ ಚಿಂತನೆ ನಡೆಸಿದ್ದು, ಬಳಕೆದಾರರ…

ನಿಮಗೆ ಸಾಲವನ್ನೂ ಕೊಡಿಸಿ ಖಾತೆಗೆ ಕನ್ನ ಹಾಕುವ ಖದೀಮರಿದ್ದಾರೆ!
News

ನಿಮಗೆ ಸಾಲವನ್ನೂ ಕೊಡಿಸಿ ಖಾತೆಗೆ ಕನ್ನ ಹಾಕುವ ಖದೀಮರಿದ್ದಾರೆ!

December 3, 2022

ರಾಮನಗರ, ಡಿ. 2- ಮೊಬೈಲ್‍ಗೆ ಯಾವುದಾದರೂ ಲಿಂಕ್ ಕಳುಹಿಸಿ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಆನ್‍ಲೈನ್ ಮೂಲಕ ಲೂಟಿ ಮಾಡುತ್ತಿದ್ದ ವಂಚಕರು ಇದೀಗ ನಿಮ್ಮ ಖಾತೆಯಲ್ಲಿ ಹಣವಿಲ್ಲದಿದ್ದರೂ ಸರಿಯೇ ಯಾವುದಾದರೂ ಬ್ಯಾಂಕ್‍ನಿಂದ ನಿಮಗೆ ಸಾಲ ಕೊಡಿಸಿ, ಆ ಹಣವನ್ನು ಲೂಟಿ ಮಾಡುವ ಹೊಸ ಕುತಂತ್ರಕ್ಕೆ ಕೈ ಹಾಕಿದ್ದಾರೆ. ಇಂತಹ ಒಂದು ಪ್ರಕರಣ ರಾಮನಗರ ಜಿಲ್ಲೆ ಬಿಡದಿಯಿಂದ ವರದಿಯಾಗಿದೆ. ಬಿಡದಿಯ ಕಾರ್ಖಾನೆಯೊಂದರ ಉದ್ಯೋಗಿಯ ಬ್ಯಾಂಕ್ ಖಾತೆಗೆ 24 ಲಕ್ಷ ರೂ. ಸಾಲ ವನ್ನು ಜಮೆ ಮಾಡಿಸಿ, ಕೇವಲ 20 ನಿಮಿಷ…

ಪಿಎಫ್‍ಐ ನಿಷೇಧಕ್ಕೆ ಹೈಕೋರ್ಟ್ ಅಸ್ತು
News

ಪಿಎಫ್‍ಐ ನಿಷೇಧಕ್ಕೆ ಹೈಕೋರ್ಟ್ ಅಸ್ತು

December 1, 2022

ಬೆಂಗಳೂರು, ನ.30(ಕೆಎಂಶಿ)-ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‍ಐ) ಸಂಘಟನೆಯ ನಿಷೇಧವನ್ನು ರಾಜ್ಯ ಹೈಕೋರ್ಟ್ ಎತ್ತಿ ಹಿಡಿದಿದೆ. ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ ಅಡಿಯಲ್ಲಿ ಕೇಂದ್ರ ಸರ್ಕಾರ ಪಿಎಫ್‍ಐ ಸಂಘಟನೆ ನಿಷೇಧ ಮಾಡಿರುವುದನ್ನು ಪ್ರಶ್ನಿಸಿದ್ದ ಅರ್ಜಿ ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿದ್ದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ನೇತೃತ್ವದ ಏಕ ಸದಸ್ಯ ಪೀಠ ಇಂದು ತೀರ್ಪು ಪ್ರಕಟಿಸಿದೆ. ಪಿಎಫ್‍ಐ ನಿಷೇಧ ಮುಂದುವರಿಯಲಿದೆ. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಅಂಗಸಂಸ್ಥೆಗಳನ್ನು ಯುಎಪಿಎಯ ಸೆಕ್ಷನ್3(1) ಅಡಿಯಲ್ಲಿ 5 ವರ್ಷಗಳ ಕಾಲ `ತಕ್ಷಣದ ಪರಿಣಾಮ’ದೊಂದಿಗೆ…

ಡಿಸೆಂಬರ್ 10ರಿಂದಲೇ ಬಿಜೆಪಿ ಚುನಾವಣಾ ಕಣ ಪ್ರವೇಶ
News

ಡಿಸೆಂಬರ್ 10ರಿಂದಲೇ ಬಿಜೆಪಿ ಚುನಾವಣಾ ಕಣ ಪ್ರವೇಶ

November 25, 2022

ಬೆಂಗಳೂರು, ನ.24 (ಕೆಎಂಶಿ)- ಮುಂಬರುವ ವಿಧಾನಸಭಾ ಚುನಾವಣೆಗೆ ಡಿಸೆಂಬರ್ 10 ರಿಂದಲೇ ಕಣಕ್ಕಿಳಿಯಲು ರಾಜ್ಯ ಬಿಜೆಪಿ ನಿರ್ಧರಿಸಿದೆ. ಆರ್‍ಎಸ್‍ಎಸ್ ಮತ್ತು ಅದರ ಉಪ ಸಂಘಟನೆಗಳ ಮುಖಂಡರು ಮುಖ್ಯಮಂತ್ರಿ ಬಸವ ರಾಜ ಬೊಮ್ಮಾಯಿ ಹಾಗೂ ಪಕ್ಷದ ಮುಖಂಡರುಗಳನ್ನು ಕೇಶವ ಕೃಪಕ್ಕೆ ಕರೆಸಿ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 150 ಕ್ಷೇತ್ರಗಳನ್ನು ಗೆಲ್ಲುವ ಗುರಿ ಇಟ್ಟುಕೊಂಡು ಕಾರ್ಯತಂತ್ರ ರೂಪಿಸಲಾಗಿದೆ. ರಾಜ್ಯದ 224 ಕ್ಷೇತ್ರಗಳಲ್ಲೂ ಪಕ್ಷದ ವರಿಷ್ಠರು ನಡೆಸಿರುವ ಸಮೀಕ್ಷೆಗಳ ಆಧಾರದ ಮೇಲೆ ಎ,ಬಿ ಮತ್ತು ಸಿ ದರ್ಜೆಯಲ್ಲಿ ವಿಭಜಿಸಲಾಗಿದೆ. ಗೆದ್ದೇ ಗೆಲ್ಲುವ…

ಮೀಸಲಾತಿ ಹೆಚ್ಚಳಕ್ಕೆ ಒಕ್ಕಲಿಗರ ಪಟ್ಟು
News

ಮೀಸಲಾತಿ ಹೆಚ್ಚಳಕ್ಕೆ ಒಕ್ಕಲಿಗರ ಪಟ್ಟು

November 25, 2022

ಬೆಂಗಳೂರು, ನ.24 (ಕೆಎಂಶಿ)- ಜನಸಂಖ್ಯೆಗೆ ಅನು ಗುಣವಾಗಿ ನಮಗೂ ಮೀಸಲಾತಿ ಹೆಚ್ಚಿಸಿ ಎಂದು ಒಕ್ಕಲಿಗರು ಬೀದಿಗಿಳಿಯಲು ಮುಂದಾಗಿದ್ದಾರೆ. ಮೀಸಲಾತಿಗಾಗಿ ಯಾವ ರೀತಿಯ ಹೋರಾಟ ಹಮ್ಮಿಕೊಳ್ಳ ಬೇಕು ಎಂಬುದಕ್ಕೆ ಸಂಬಂಧಿಸಿದಂತೆ ರಾಜ್ಯ ಒಕ್ಕಲಿಗರ ಸಂಘ ಇದೇ ನ.27 ರಂದು ಮುಖಂಡರ ಸಭೆ ಕರೆದಿದೆ. ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷರಾದ ಶಾಸಕ ಸಿ.ಎನ್. ಬಾಲಕೃಷ್ಣ, ಅಂದು ಬೆಳಿಗ್ಗೆ ಸಮಾಜದ ಮೀಸಲಾತಿ ಹೆಚ್ಚಿಸುವ ವಿಚಾರವಾಗಿ ಸಭೆ ಕರೆಯಲಾ ಗಿದೆ. ಈ ಸಭೆಯಲ್ಲಿ ಸಮಗ್ರವಾಗಿ ಚರ್ಚಿಸಿ ಮುಂದಿನ…

1 9 10 11 12 13 73
Translate »