ಮೈಸೂರು, ಸೆ.೩(ಆರ್ಕೆಬಿ)- ತಮಿಳು ನಾಡಿಗೆ ೩೦.೬ ಟಿಎಂಸಿ ನೀರು ಬಿಡುವಂತೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿ ಕಾರ ಸೂಚಿಸಿರುವುದನ್ನು ಖಂಡಿಸಿ, ಮೈಸೂರು ಜಿಲ್ಲಾ ಚಳವಳಿಗಾರರ ಸಂಘದ ಕಾರ್ಯಕರ್ತರು ಶುಕ್ರವಾರ ತಲೆಯ ಮೇಲೆ ಕಲ್ಲು ಹೊತ್ತು, ಜಿಲ್ಲಾಧಿಕಾರಿ ಕಚೇರಿ ಬಳಿ ವಿನೂತನ ಪ್ರತಿಭಟನೆ ನಡೆಸಿದರು. ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿ ಕಾರವು ತಮಿಳುನಾಡಿಗೆ ಜೂನ್, ಜುಲೈ, ಆಗಸ್ಟ್ ತಿಂಗಳ ಬಾಕಿ ೩೦.೬ ಟಿಎಂಸಿ ನೀರು ಹರಿಸುವಂತೆ ಕರ್ನಾಟಕಕ್ಕೆ ಸೂಚಿಸಿರು ವುದನ್ನು ಖಂಡಿಸಿದರು. ಕಾವೇರಿ ಕೊಳ್ಳ ದಲ್ಲಿ…
ದಸರಾ ವಸ್ತುಪ್ರದರ್ಶನ ಆವರಣದಲ್ಲಿ ರಾಧೆ ಕೃಷ್ಣ ವೇಷಧಾರಿ ಚಿಣ್ಣರ ಕಲರವ
August 31, 2021ಮೈಸೂರು, ಆ.೩೦(ಆರ್ಕೆಬಿ)- ಮೈಸೂರು ದಸರಾ ವಸ್ತು ಪ್ರದರ್ಶನ ಆವರಣದಲ್ಲಿ ಸೋಮವಾರ ಇಡೀ ಆವರಣ ಶ್ರೀಕೃಷ್ಣ ವೇಷಧಾರಿ ಚಿಣ್ಣ ರಿಂದಲೇ ತುಂಬಿ ಹೋಗಿತ್ತು. ಶ್ರೀ ಕೃಷ್ಣ ಜಯಂತಿ ಅಂಗವಾಗಿ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಆಯೋಜಿಸಿದ್ದ ಕ್ಯೂಟ್ ಬೇಬಿ ಮತ್ತು ಲಕ್ಕಿ ಬೇಬಿ ಪಾರಂಪರಿಕ ಮಕ್ಕಳ ವೇಷಭೂಷಣ ಸ್ಪರ್ಧೆಯಲ್ಲಿ ೭ ವರ್ಷ ದೊಳಗಿನ ೧೦೦ಕ್ಕೂ ಹೆಚ್ಚು ಮಕ್ಕಳು ಕೃಷ್ಣ-ರಾಧೆಯರ ವೇಷ ತೊಟ್ಟು ನಲಿದರು. ಕೃಷ್ಣ-ರಾಧೆಯ ವೇಷ ತೊಟ್ಟ ತಮ್ಮ ಮಕ್ಕಳೊಂದಿಗೆ ಪೋಷಕರೂ ಸಂಭ್ರಮಿಸಿದರು. ಕೈಯ್ಯಲ್ಲಿ ಕೊಳಲು, ತಲೆಯಲ್ಲಿ ನವಿಲು ಗರಿ,…
7.5 ತಿಂಗÀಳಲ್ಲೇ ಎಕರೆಗೆ 81 ಟನ್ ಬಿತ್ತನೆ ಕಬ್ಬು ಬೆಳೆದ ರೈತ
July 8, 2021ಬೇಗೂರು, ಜು.7- ‘ದುಡಿಮೆಯ ನಂಬಿ ಬದುಕು… ಅದರಲೇ ದೇವರ ಹುಡುಕು… ವರನಟ ಡಾ.ರಾಜ್ ಕುಮಾರ್ ಅವರು ನಟಿಸಿರುವ ‘ಬಂಗಾರದ ಮನುಷ್ಯ’ ಚಿತ್ರದ ಈ ಹಾಡು ಅನೇಕರಿಗೆ ಸ್ಫೂರ್ತಿಯಾಗಿದೆ. ಈ ಹಾಡಿನ ತಾತ್ಪರ್ಯದಂತೆ ಗುಂಡ್ಲುಪೇಟೆ ತಾಲೂಕು ಹಾಲಹಳ್ಳಿ ಗ್ರಾಮದ ರೈತ ಹೆಚ್.ಎಲ್.ಶಿವಪ್ಪ ಅವರು ಏಳೂವರೆ ತಿಂಗಳ ಅವಧಿ ಯಲ್ಲೇ ಎಕರೆಗೆ 81 ಟನ್ ಬಿತ್ತನೆ ಕಬ್ಬನ್ನು ಬೆಳೆದು ಮಾದರಿ ರೈತರಾಗಿ ಹೊರ ಹೊಮ್ಮಿದ್ದಾರೆ. ರೈತ ಹೆಚ್.ಎಲ್.ಶಿವಪ್ಪ ಅವರು 7 ಎಕರೆಯಲ್ಲಿ ಹನಿ ನೀರಾವರಿ ಮೂಲಕ ಎರಡು ತಳಿಯ ಕಬ್ಬು…
ನಾಗರಿಕರ ನಡುವೆ ಸೇತುವೆಯಾಗಿ, ಗೋಡೆ ಕಟ್ಟದಿರಿ
April 3, 2021ಮೈಸೂರು, ಏ.2(ಆರ್ಕೆ)- ನಾಗರಿಕರ ನಡುವೆ ಸೇತುವೆಯಾಗಿ ಕೆಲಸ ಮಾಡಿ. ಆದರೆ ಗೋಡೆ ಕಟ್ಟಬೇಡಿ ಎಂದು ನಿವೃತ್ತ ಡಿಐಜಿಪಿ ಪಿ.ಪಿ. ರಾಜೇಂದ್ರಪ್ರಸಾದ್ ಅವರು ಪೊಲೀಸ್ ಸಮುದಾಯಕ್ಕೆ ಇಂದಿಲ್ಲಿ ಕಿವಿಮಾತು ಹೇಳಿದ್ದಾರೆ. ಮೈಸೂರು ನಗರ ಪೊಲೀಸ್, ಅಶ್ವಾ ರೋಹಿ ದಳ, ಕರ್ನಾಟಕ ಪೊಲೀಸ್ ಅಕಾಡೆಮಿ, ಜಿಲ್ಲಾ ಪೊಲೀಸ್, ಕೆಎಸ್ ಆರ್ಪಿ, ಪೊಲೀಸ್ ತರಬೇತಿ ಶಾಲೆ, ರಾಜ್ಯ ಗುಪ್ತವಾರ್ತೆ, ಡಿಸಿಆರ್ಇ, ಕರ್ನಾ ಟಕ ಲೋಕಾಯುಕ್ತ ಎಸಿಬಿ, ಚೆಸ್ಕಾಂ ಹಾಗೂ ಐಎಸ್ಡಿ ಘಟಕಗಳ ಸಂಯುಕ್ತಾ ಶ್ರಯದಲ್ಲಿ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸಿಎಆರ್…
ನುಗು ಬಳಿ ಸಿಕ್ಕ ಮೂರು ಹುಲಿಮರಿ: ಎರಡು ಸಾವು, ಒಂದು ಸುರಕ್ಷಿತ
March 29, 2021ಮೈಸೂರು, ಮಾ.28(ಎಂಟಿವೈ)- ಅಮ್ಮನಿಂದ ಬೇರ್ಪಟ್ಟ 2 ತಿಂಗಳ 3 ಹುಲಿ ಮರಿಗಳು ಭಾನುವಾರ ಮಧ್ಯಾಹ್ನ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ನುಗು ಜಲಾಶಯದ ಬಳಿ ಪತ್ತೆಯಾಗಿವೆ. ಆದರೆ, ಅದರಲ್ಲಿ 2 ಹೆಣ್ಣು ಹುಲಿಮರಿ ಮೃತಪಟ್ಟರೆ, ಗಂಡು ಹುಲಿ ಮರಿಯನ್ನು ಮೈಸೂರಿನ ಮೃಗಾ ಲಯಕ್ಕೆ ತಂದು ಚಿಕಿತ್ಸೆ ನೀಡಲಾಗುತ್ತಿದೆ. ವಾರದ ಹಿಂದೆ ಅರಣ್ಯ ಸಿಬ್ಬಂದಿ ಬಂಡೀಪುರ ಅಭಯಾರಣ್ಯದ ನುಗು ಜಲಾಶಯದ ವಲಯದಲ್ಲಿ ಗಸ್ತಿನಲ್ಲಿ ದ್ದಾಗ ಈ 3 ಹುಲಿ ಮರಿಗಳು ಕಾಣಿಸಿ ದವು. ತಾಯಿ ಹುಲಿ ಜತೆಗೆ…
ಇಂದಿರಾ ಕ್ಯಾಂಟೀನ್ಗೆ ಆರ್ಥಿಕ ಸಂಕಷ್ಟ
March 22, 2021ಮೈಸೂರು, ಮಾ.21(ವೈಡಿಎಸ್)- ಸಾಮಾನ್ಯ ಜನರಿಗೆ ಕಡಿಮೆ ದರದಲ್ಲಿ ಉಪಾಹಾರ ಒದಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಆರಂಭಿಸಿದ ಮಹತ್ವದ ಯೋಜನೆ `ಇಂದಿರಾ ಕ್ಯಾಂಟೀನ್’ ನಿರ್ವ ಹಣೆಗೆ ಆರ್ಥಿಕ ಸಂಕಷ್ಟ ಎದುರಾಗಿದೆ. ಹಸಿವು ಮುಕ್ತ ರಾಜ್ಯ ಮಾಡಬೇಕೆಂಬ ಉದ್ದೇಶದಿಂದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಇಂದಿರಾ ಕ್ಯಾಂಟೀನ್ ಯೋಜನೆಯನ್ನು 2017ರಲ್ಲಿ ಬೆಂಗಳೂರಿನಲ್ಲಿ ಆರಂಭಿಸಿ, ನಂತರ ರಾಜ್ಯದ ಇತರೆಡೆಗೂ ವಿಸ್ತರಿಸಿದರು. ಅತ್ಯಂತ ಕಡಿಮೆ ದರದಲ್ಲಿ ತಿಂಡಿ, ಊಟ ಸಿಗುತ್ತಿದ್ದುದರಿಂದ ನಿರ್ಗತಿಕರು, ಬಡವ ರಿಗೆ ಅನುಕೂಲವಾಗಿತ್ತು. ಆದರೆ, ಪ್ರಸ್ತುತ ಸನ್ನಿವೇಶಗಳನ್ನು ಗಮನಿಸಿದರೆ ಕ್ಯಾಂಟೀನ್ ಪೂರ್ಣ…
ಸಿದ್ದರಾಮಯ್ಯ ಆಗಾಗ ಜ್ಯೋತಿಷಿಯಾಗುತ್ತಾರೆ
January 18, 2021ಮೈಸೂರು, ಜ.17(ಎಂಟಿವೈ)-ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಾಗ ಜ್ಯೋತಿಷಿ ಗಳಂತೆ ಭವಿಷ್ಯ ನುಡಿಯಲು ಆರಂಭಿಸಿದ್ದಾರೆ. ಸಿಎಂ ಬದಲಾವಣೆ ಕುರಿತಂತೆ ಅವರು ನುಡಿದ ಭವಿಷ್ಯವೆಲ್ಲಾ ಸುಳ್ಳಾಗಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಟೀಕಿಸಿದ್ದಾರೆ. ಚಾಮುಂಡಿಬೆಟ್ಟಕ್ಕೆ ಭಾನುವಾರ ಭೇಟಿ ನೀಡಿ ಚಾಮುಂಡೇಶ್ವರಿ ದರ್ಶನ ಪಡೆದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಹತಾಶೆಯಿಂದ ಪದೇ ಪದೆ ಮುಖ್ಯ ಮಂತ್ರಿ ಬದಲಾಗುತ್ತಾರೆ ಎಂದು ಭವಿಷ್ಯ ನುಡಿಯುತ್ತಲೇ ಬಂದಿ ದ್ದಾರೆ. ಅವರು ನುಡಿದ ಒಂದೇ ಒಂದು ಭವಿಷ್ಯವೂ ಇದುವರೆಗೆ ನಿಜವಾಗಿಲ್ಲ. ಸಿದ್ದರಾಮಯ್ಯ ಯಾವಾಗ…
ಮೈಸೂರು ಜಿಲ್ಲೆ ಗ್ರಾಪಂ ಚುನಾವಣೆ; ಪಾಲನೆಯಾಗದ ಕೊರೊನಾ ಮಾರ್ಗಸೂಚಿ
December 23, 2020ಮೈಸೂರು,ಡಿ.22-ಗ್ರಾಮ ಪಂಚಾಯಿತಿ ಚುನಾ ವಣೆಯ ಮೊದಲ ಹಂತದ ಮತದಾನ ಪ್ರಕ್ರಿಯೆ ಮೈಸೂರು ಜಿಲ್ಲೆಯ 5 ತಾಲೂಕುಗಳಲ್ಲಿ ಮಂಗಳ ವಾರ ಬೆಳಗ್ಗೆಯಿಂದ ಸಂಜೆವರೆಗೂ ನಡೆಯಿತು. ಬಹುತೇಕ ಮತಗಟ್ಟೆಗಳಿಗೆ ಮತದಾನ ಮಾಡಲು ಬಂದಿದ್ದ ಬಹಳಷ್ಟು ಮತದಾರರು ಕೊರೊನಾ ಮಾರ್ಗ ಸೂಚಿಗಳನ್ನೇ ಪಾಲಿಸಲಿಲ್ಲ. ಬಹಳಷ್ಟು ಮಂದಿ ಮಾಸ್ಕ್ ಧರಿಸಿರಲಿಲ್ಲ, ಸಾಮಾಜಿಕ ಅಂತರ ಅನುಸರಿಸುತ್ತಿರ ಲಿಲ್ಲ. ಮತಗಟ್ಟೆ ಮುಂಭಾಗ ನೂರಾರು ಮಂದಿ ಗುಂಪಾಗಿ ಸೇರಿದ್ದರು. ಅಂತರ ಕಾಯ್ದುಕೊಳ್ಳಿ, ಮಾಸ್ಕ್ ಧರಿಸಿ ಎಂಬ ಪೆÇಲೀಸರ ಮನವಿಗೂ ಜನತೆ ಸ್ಪಂದಿಸ ಲಿಲ್ಲ. ಚುನಾವಣಾ ನಿಯಮ ಪಾಲಿಸದಿದ್ದರೆ…
ರೋಟರಿ ಸಂಸ್ಥೆಯಿಂದ ಶವಾಗಾರದ ಬಳಿ ವಿಶ್ರಾಂತಿ ತಂಗುದಾಣ
December 22, 2020ಮೈಸೂರು,ಡಿ.21(ಆರ್ಕೆ)-ಸಾರ್ವಜನಿಕರು ವಿಶ್ರಾಂತಿ ಪಡೆ ಯಲು ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಆವರಣದ ಶವಾಗಾರದ ಬಳಿ ರೋಟರಿ ಮೈಸೂರು ಮಿಡ್ ಟೌನ್ ಸಂಸ್ಥೆಯು ವಿಶ್ರಾಂತಿ ತಂಗುದಾಣ ನಿರ್ಮಿಸಿಕೊಟ್ಟಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ತರುವವರು ಮಳೆ, ಬಿಸಿಲಿನಿಂದ ರಕ್ಷಿಸಿಕೊಳ್ಳಲು ನಿರ್ಮಿಸಿರುವ ವಿಶ್ರಾಂತಿ ತಂಗು ದಾಣವನ್ನು ರೋಟರಿ 3181 ಡಿಸ್ಟ್ರಿಕ್ಟ್ ಗವರ್ನರ್ ರೊ.ರಂಗನಾಥ ಭಟ್ ನಾಳೆ(ಡಿ.22) ಬೆಳಗ್ಗೆ 10 ಗಂಟೆಗೆ ಉದ್ಘಾಟಿಸುವರು. ನಮ್ಮ ಬಾಹುಬಲಿ ಖ್ಯಾತಿಯ ಪತ್ರಕರ್ತ ಸ್ವಾತಿ ಚಂದ್ರಶೇಖರ್, ಡಿಸ್ಟ್ರಿಕ್ಟ್ ಗವರ್ನರ್ ಎಲೆಕ್ಟ್ ರೊ.ಎ.ಆರ್.ರವೀಂದ್ರಭಟ್, ಮೈಸೂರು ಮೆಡಿಕಲ್…
ವಿಶ್ವದ ಅತಿ ಉದ್ದದ ಸುರಂಗ `ಅಟಲ್ ಟನಲ್’ ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ
October 4, 2020ರೋಹ್ಟಾಂಗ್, ಅ.3- ವಿಶ್ವದಲ್ಲಿಯೇ ಅತಿ ಉದ್ದದ ಹೆದ್ದಾರಿ ಸುರಂಗ ಮಾರ್ಗ ಎನಿಸಿಕೊಂಡಿರುವ, ಹಿಮಾಚಲ ಪ್ರದೇಶದ ರೋಹ್ಟಾಂಗ್ನಲ್ಲಿ ನಿರ್ಮಾಣಗೊಂಡಿರುವ 9.02 ಕಿ.ಮೀ. ಉದ್ದದ `ಅಟಲ್ ಸುರಂಗ ಹೆದ್ದಾರಿ’ ಲೋಕಾರ್ಪಣೆಗೊಂಡಿದೆ. 4 ಸಾವಿರ ಕೋಟಿ ರೂ. ವೆಚ್ಚ ದಲ್ಲಿ ನಿರ್ಮಿಸಿದ, ಬಹು ನಿರೀಕ್ಷೆಯ `ಅಟಲ್ ಸುರಂಗ ಹೆದ್ದಾರಿ’ಯನ್ನು ಪ್ರಧಾನಿ ನರೇಂದ್ರ ಮೋದಿ ಶನಿವಾರ ಉದ್ಘಾಟಿಸಿದರು. ಬಳಿಕ ಸುರಂಗ ಮಾರ್ಗದಲ್ಲಿ ಸಂಚಾರ ನಡೆಸಿ ದರು. ಮನಾಲಿಯಿಂದ ಲೇಹ್-ಸ್ಟಿತಿ ಕಣಿವೆ ಸಂಪರ್ಕಿಸುವ ಸುರಂಗ ಮಾರ್ಗ, ವಿಶ್ವದ ಅತ್ಯಂತ ಉದ್ದದ ಹೆದ್ದಾರಿ ಸುರಂಗ ಮಾರ್ಗ…