ಸಿಎಂ ಭತ್ತ ಕಟಾವು ಮಾಡಿದ್ದು ಶೋಕಿಗಾಗಿ
ಮೈಸೂರು

ಸಿಎಂ ಭತ್ತ ಕಟಾವು ಮಾಡಿದ್ದು ಶೋಕಿಗಾಗಿ

December 10, 2018

ಬೆಳಗಾವಿ: ರೈತರ ಬಗ್ಗೆ ಕಾಳಜಿ ಇಲ್ಲದ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರು ಮಂಡ್ಯದಲ್ಲಿ ಭತ್ತ ಕಟಾವು ಮಾಡಿದ್ದು ಕೇವಲ ಶೋಕಿಗೋಸ್ಕರ ಎಂದು ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆರೋಪಿಸಿದ್ದಾರೆ.

ಭಾನುವಾರ ಬೆಳಗಾವಿಯಲ್ಲಿ ಪತ್ರ ಕರ್ತರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಸಂಪೂರ್ಣ ರೈತರ ಮೇಲಿನ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದ ಕುಮಾರ ಸ್ವಾಮಿ, `ಉತ್ತರ ಕರ್ನಾಟಕದ ರೈತರು ಮತದಾನ ಮಾಡುವಾಗ ಕುಮಾರಸ್ವಾಮಿ ನೆನಪಿಗೆ ಬರಲಿಲ್ವಾ’ ಎಂದು ಉಡಾಫೆ ಉತ್ತರ ನೀಡಿದ್ದಾರೆ. ಸಿಎಂ ಇಂತಹವ ರಿಂದ ರಾಜ್ಯ ಅಭಿವೃದ್ಧಿಯಾಗಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು.

ಅಧಿಕಾರದ ಅಮಲಿನಲ್ಲಿರುವ ಅಪ್ಪ ಮಕ್ಕಳಿಗೆ `ಅಧಿಕಾರದಿಂದ ಬಿಟ್ಟು ತೊಲಗಿ’ ಎಂದು ನಾಳೆ ಬಿಜೆಪಿಯಿಂದ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.

ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಕೇವಲ 4 ಜಿಲ್ಲೆಗೆ ಮಾತ್ರ ಸಿಎಂ ಆಗಿ ದ್ದಾರೆ. ಈಗಾಗಲೇ 5 ತಂಡ ರಚನೆ ಮಾಡಿ ಬಿಜೆಪಿಯಿಂದ ರಾಜ್ಯದಲ್ಲಿ ಬರ ಅಧ್ಯಯನ ನಡೆಸಲಾಗಿದೆ ಎಂದರು. ಬಿಜೆಪಿಯ ಬಗ್ಗೆ ಹಗುರವಾಗಿ ಮಾತನಾಡ ಬೇಡಿ. ನಾನು ಇನ್ನೂ 10 ವರ್ಷಗಳ ಕಾಲ ರಾಜಕೀಯದಲ್ಲಿ ಇರುತ್ತೇನೆ. ನಾನು ಜನರ ಸಲುವಾಗಿ ತಲೆಕೆಡಿಸಿಕೊಂಡು ಕೆಲಸ ಮಾಡುತ್ತೇನೆ. ಸಿದ್ದರಾಮಯ್ಯ ನವರು ನನಗೆ ವಯಸ್ಸಾಗಿದೆ ಎಂದು ಹೇಳಬೇಕಾ. ನಾಡಿನ ಜನತೆ ಸೇವೆ ಮಾಡಲು ನನಗೆ ಯಾರ ಅಂಜಿಕೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯನವ ರಿಗೆ ಪ್ರತ್ಯುತ್ತರ ನೀಡಿದರು.

Translate »