ಬೇಲೂರಿನಲ್ಲಿ ಕಾಂಗ್ರೆಸ್ ವಿಜಯೋತ್ಸವ
ಹಾಸನ

ಬೇಲೂರಿನಲ್ಲಿ ಕಾಂಗ್ರೆಸ್ ವಿಜಯೋತ್ಸವ

December 13, 2018

ಬೇಲೂರು: ಪಂಚರಾಜ್ಯ ಚುನಾ ವಣೆಯಲ್ಲಿ ಜಯಭೇರಿ ಭಾರಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ವತಿಯಿಂದ ಇಂದು ಬೇಲೂರಿನಲ್ಲಿ ವಿಜಯೋತ್ಸವ ವನ್ನು ಆಚರಿಸಲಾಯಿತು.ಪಂಚರಾಜ್ಯ ಚುನಾವಣೆಯಲ್ಲಿ ಫಲಿ ತಾಂಶ ಪ್ರಕಟಗೊಳ್ಳುತ್ತಿದ್ದಂತೆ ಪಟಾಕಿ ಸಿಡಿಸಿ ಬೇಲೂರಿನ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಬಸವೇಶ್ವರ ವೃತ್ತದಲ್ಲಿ ಸಿಹಿ ಹಂಚಿ ಸಂಭ್ರಮ ಆಚರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಪಂ ಸದಸ್ಯ ತೌಫಿಕ್, ಇಂದು ಸುವರ್ಣಾ ಕ್ಷರದಲ್ಲಿ ಬರೆಯುವಂತಹ ದಿನ. ಕಾಂಗ್ರೆಸ್ ಮುಕ್ತ ಭಾರತವನ್ನಾಗಿ ಮಾಡುತ್ತೇವೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದ ನರೇಂದ್ರ ಮೋದಿ ಇಂದು ತನ್ನ ಅಸ್ತಿತ್ವನ್ನು ಉಳಿಸಿ ಕೊಳ್ಳಲು ತಿಣುಕಾಡುವಂತ ಪರಿಸ್ಥಿತಿ ಉಂಟಾ ಗಿದ್ದು, ನಾಲ್ಕೂವರೆ ವರ್ಷ ದಿಂದ ಅವರ ಆಡಳಿತದಿಂದ ಬೇಸತ್ತ ಮತದಾರರು ಮತ್ತೊಮ್ಮೆ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿದ್ದು ಮುಂದಿನ ಲೋಕಸಭೆಗೆ ದಿಕ್ಸೂಚಿ ಎಂದು ಹರ್ಷ ವ್ಯಕ್ತಪಡಿಸಿದರು.
ಜಿಪಂ ಸದಸ್ಯ ಮಂಜಪ್ಪ ಮಾತನಾಡಿ, ಪ್ರಧಾನಿ ಮೋದಿಯವರ ಆಡಳಿತದ ವೈಫಲ್ಯದಿಂದಾಗಿ ಬಿಜೆಪಿ ನೆಲ ಕಚ್ಚಿದ್ದು ರೈತರಿಗೆ ಮಾಡಿದ ದ್ರೋಹಕ್ಕೆ ಇಂದು ಪಂಚ ರಾಜ್ಯದ ಮತದಾರ ಪ್ರಭುಗಳು ತಕ್ಕ ಶಾಸ್ತಿ ಮಾಡಿದ್ದು ಇನ್ನು ಮುಂದೆ ನರೇಂದ್ರ ಮೋದಿಯವರ ಕಾರ್ಯ ವೈಖರಿ ಕೇವಲ ಪ್ರಚಾರಕ್ಕೆ ಮಾತ್ರ ಸೀಮಿತ, ಎಂದು ವ್ಯಂಗ್ಯವಾಡಿದರು.

ಪ್ರಾಧಿಕಾರದ ಮಾಜಿ ಅದ್ಯಕ್ಷ ಜಮಾಲ್ ಮಾತನಾಡಿ, ಕೇಂದ್ರ ಸರ್ಕಾರದ ನಾಲ್ಕು ವರ್ಷದ ಅಧಿಕಾರದಲ್ಲಿ ನೋಟು ಅಮಾನ್ಯ ಕರಣ ಮಾಡಿ ರೈತಾಪಿ ವರ್ಗದ ಮೇಲೆ ಬರೆ ಎಳೆದು, ಪೆಟ್ರೋಲ್, ಡೀಸೆಲ್, ಬೆಲೆ ಏರಿಕೆ ಮಾಡಿದ್ದೆ ಇವರ ಸಾಧನೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸಂಪೂರ್ಣ ಬಿಜೆಪಿ ಮುಕ್ತ ಭಾರತವನ್ನಾಗಿ ಮಾಡು ತ್ತೇವೆ ಎಂದು ಹೇಳಿದರು.

ತಾಪಂ ಸದಸ್ಯ ಮಂಜುನಾಥ್ ಮಾತ ನಾಡಿದರು.ಈ ಸಂದರ್ಬದಲ್ಲಿ ಪುರಸಭೆ ಸದಸ್ಯರಾದ ಶಾಂತಕುಮಾರ್, ಜುಭೇರ್, ಮುಖಂಡರುಗಳಾದ ನಿಶಾಂತ್, ಇಕ್ಬಾಲ್, ಜೀವನ್, ಬಾಬು, ಇಮ್ರಾನ್, ಅಬ್ಬು, ತನ್ನು, ದಾನಿ ಮುಂತಾದವರಿದ್ದರು.

Translate »