ದಿನಕ್ಕೊಂದು ಬೇಡಿಕೆ ಮುಂದಿಟ್ಟರೆ ಹ್ಯಾಗೆ!
ಮೈಸೂರು

ದಿನಕ್ಕೊಂದು ಬೇಡಿಕೆ ಮುಂದಿಟ್ಟರೆ ಹ್ಯಾಗೆ!

June 17, 2018

ಬೆಂಗಳೂರು: ಕಾಂಗ್ರೆಸ್ ನವರು ಮುಖ್ಯ ಮಂತ್ರಿ ಹೆಚ್.ಡಿ. ಕುಮಾರ ಸ್ವಾಮಿ ಮುಂದೆ ದಿನ ಕ್ಕೊಂದು ಬೇಡಿಕೆ ಇಟ್ಟರೆ, ಸಮ್ಮಿಶ್ರ ಸರ್ಕಾರ 5 ವರ್ಷ ಹ್ಯಾಗೆ ನಡೆಯಲು ಸಾಧ್ಯ ಎಂದು ಮಾಜಿ ಸಚಿವ, ಜೆಡಿಎಸ್‍ನ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಪ್ರಶ್ನಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರವು ಸುಸೂತ್ರ ವಾಗಿ 5 ವರ್ಷ ಪೂರೈಸಬೇಕಾದರೆ ಕೆಲವು ಹೊಂದಾಣಿಕೆ ಹಾಗೂ ತ್ಯಾಗ ಮನೋಭಾವ ಇರಬೇಕಾಗುತ್ತದೆ ಎಂಬುದನ್ನು ಕಾಂಗ್ರೆಸ್‍ನವರು ಅರಿತುಕೊಳ್ಳಬೇಕಾಗಿದೆ ಎಂದರು.

ವಿಧಾನಸಭೆ ಫಲಿತಾಂಶ ಬರುತ್ತಿ ದ್ದಂತೆಯೇ ನಮ್ಮ ಬಳಿ ಓಡಿ ಬಂದು ಬೇಷರತ್ ಬೆಂಬಲ ನೀಡುವುದಾಗಿ ಘೋಷಿಸಿ ಸರ್ಕಾರ ರಚಿಸುವಂತೆ ಕೇಳಿಕೊಂಡಿದ್ದರು. ಅದೆಲ್ಲವೂ ಟಿವಿ ಗಳಲ್ಲಿ ಪ್ರಸಾರವೂ ಆಗಿದೆ. ಆದ್ದರಿಂದ ಕಾಂಗ್ರೆಸ್‍ನವರು ಕೊಟ್ಟ ಮಾತಿನಂತೆ ನಡೆದುಕೊಳ್ಳುವುದು ಉತ್ತಮ ಎಂದು ಹೊರಟ್ಟಿ ಹೇಳಿದರು.

Translate »