ದಂಟಳ್ಳಿ ಬಳಿ ಕಡವೆ ಮಾಂಸ ವಶ
ಚಾಮರಾಜನಗರ

ದಂಟಳ್ಳಿ ಬಳಿ ಕಡವೆ ಮಾಂಸ ವಶ

August 9, 2018

ಹನೂರು:  ಕಡವೆಯನ್ನು ಕೊಂದು ಮಾಂಸವನ್ನು ಒಣಗಿ ಸಿಟ್ಟಿರುವ ಘಟನೆ ಕೌದಳ್ಳಿ ವನ್ಯಜೀವಿ ವಲಯದಲ್ಲಿ ನಡೆದಿದೆ.

ವಲಯದ ದಂಟಳ್ಳಿ ಶಾಖೆಯಲ್ಲಿ ಗಸ್ತು ತಿರುಗುತ್ತಿದ್ದ ಅರಣ್ಯ ಸಿಬ್ಬಂದಿಗೆ ಮಾಂಸ ಒಣಗಿಸಿಟ್ಟಿರುವುದು ಕಂಡು ಬಂದ ತಕ್ಷಣ ಹಿರಿಯ ಅಧಿಕಾರಿಗಳಿಗೆ ವಿಷಯ ತಿಳಿಸಿ ಸುಮಾರು 30 ಕೆ.ಜಿ.ಯಷ್ಟು ಮಾಂಸವನ್ನು ವಶಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅಂಕರಾಜು ಅವರು ಪರಿ ಶೀಲನೆ ನಡೆಸಿದ್ದಾರೆ. ಬೇಟೆಗಾರರು ತಮಿಳುನಾಡಿನ ಮೂಲದವರಾಗಿದ್ದು ನದಿ ದಾಟಿ ಬಂದು ಬೇಟೆಯಾಡಿದ ಮಾಂಸವನ್ನು ಒಣಗಿಸುವ ವೇಳೆ ಗಸ್ತುನಲ್ಲಿದ್ದ ಅರಣ್ಯ ಸಿಬ್ಬಂದಿ ಗಳನ್ನು ಕಂಡು ಮಾಂಸವನ್ನು ಬಿಟ್ಟು ಪರಾರಿಯಾಗಿರಬಹುದು ಎಂದು ಶಂಕಿಸಲಾಗಿದೆ.

Translate »