ರೈತರಿಗೆ ಪ್ರಧಾನಿ ಮೋದಿ ಬಂಪರ್ ಗಿಫ್ಟ್: 14 ಬೆಳೆಗೆ ಭಾರೀ ಬೆಂಬಲ ಬೆಲೆ
ದೇಶ-ವಿದೇಶ

ರೈತರಿಗೆ ಪ್ರಧಾನಿ ಮೋದಿ ಬಂಪರ್ ಗಿಫ್ಟ್: 14 ಬೆಳೆಗೆ ಭಾರೀ ಬೆಂಬಲ ಬೆಲೆ

July 5, 2018

ಬೆಂಗಳೂರು: 2019ರ ಲೋಕಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಕೇಂದ್ರದ ಎನ್‍ಡಿಎ ಸರ್ಕಾರ ಮುಂಗಾರಿನ 14 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‍ಪಿ) ಘೋಷಿಸಿದೆ. ಈ ಮೂಲಕ ಅತಿವೃಷ್ಟಿ, ಅನಾವೃಷ್ಟಿಯಿಂದ ಕಂಗೆಟ್ಟಿದ್ದ, ಸೂಕ್ತ ಬೆಲೆ ಸಿಗದೆ ಸಂಕಷ್ಟಕ್ಕೆ ಸಿಲುಕಿದ ರೈತರ ನೆರವಿಗೆ ಧಾವಿಸಿದೆ.

ಪ್ರತಿ ಕ್ವಿಂಟಾಲ್ ಭತ್ತಕ್ಕೆ ಕನಿಷ್ಠ 200 ರೂ. ಬೆಂಬಲ ಬೆಲೆ ಘೋಷಿಸಲಾಗಿದ್ದು, ಕಳೆದ ವರ್ಷ 1,550 ರೂಪಾಯಿ ಇತ್ತು. ಈಗ 1,750 ರೂಪಾಯಿ ಆಗಿದೆ. 12.9% ಹೆಚ್ಚಳ ಮಾಡಲಾಗಿದೆ. ಗರಿಷ್ಠ ಬೆಂಬಲ ಬೆಲೆಯನ್ನು ರಾಗಿಗೆ ಘೋಷಿಸಲಾಗಿದೆ.

ರಾಗಿ ಪ್ರತಿ ಕ್ವಿಂಟಾಲ್‍ಗೆ 2,897 ರೂ ಬೆಂಬಲ ಬೆಲೆ ಘೋಷಿಸಲಾಗಿದ್ದು, ಅದರಂತೆ ಶೇಕಡಾ 50 ರಷ್ಟು ಬೆಂಬಲ ಬೆಲೆ ನೀಡಲಾಗಿದ್ದು, ಹಿಂದೆ 1,900 ರೂಪಾಯಿ ಇತ್ತು. ಹೈಬ್ರಿಡ್ ಜೋಳಕ್ಕೆ ಕ್ವಿಂಟಾಲ್‍ಗೆ 2,430 ಆಗಿದ್ದು, ಹಿಂದೆ 1,700 ಇತ್ತು, 40% ಹೆಚ್ಚಳ ಮಾಡಲಾಗಿದೆ. ಸೂರ್ಯಕಾಂತಿಗೆ ಕ್ವಿಂಟಾಲ್‍ಗೆ 5,388 ಬೆಂಬಲ ಬೆಲೆ ಘೋಷಿಸಲಾಗಿದ್ದು, ಹಿಂದೆ 4,100 ಇತ್ತು. ಈಗ 31.4% ಹೆಚ್ಚಳ ಮಾಡಲಾಗಿದೆ.

ತೊಗರಿ 5,675 ರೂಪಾಯಿ ಬೆಂಬಲ ಬೆಲೆ ಘೋಷಿಸಲಾಗಿದ್ದು, ಈ ಹಿಂದೆ 5,450 ರೂ. ಇತ್ತು. ಉದ್ದು ಕ್ವಿಂಟಾಲ್‍ಗೆ 5,600 ರೂ ಘೋಷಿಸಲಾಗಿದ್ದು, ಹಿಂದೆ 5,400 ರೂಪಾಯಿ ಇತ್ತು. ಹತ್ತಿ (ಮಧ್ಯಮ) 4,020 ರೂ ಇತ್ತು, ಈಗ 5,150 ಆಗಿದೆ. ಹೆಸರು ಬೇಳೆ ಕ್ವಿಂಟಾಲ್‍ಗೆ 6,975 ರೂಪಾಯಿ ಘೋಷಿಸಲಾಗಿದ್ದು, ಮೊದಲು 5,575 ರೂ. ಇತ್ತು. ಸೋಯಾಬೀನ್ 3999 ರೂ. ಬೆಂಬಲ ಬೆಲೆ ಘೋಷಿಸಲಾಗಿದೆ. ನೆಲಗಡಲೆ 4,890 ರೂ. ಘೋಷಿಸಲಾಗಿದ್ದು, ಹಿಂದೆ 4,550 ರೂಪಾಯಿ ಇತ್ತು. ಮುಸುಕಿನ ಜೋಳ, ಎಳ್ಳಿಗೂ ಬೆಂಬಲ ಬೆಲೆ ಘೋಷಿಸಲಾಗಿದೆ.

Translate »