ಸೋಮವಾರಪೇಟೆ; 11 ವಾರ್ಡ್‍ಗೆ 29 ನಾಮಪತ್ರ ಸಲ್ಲಿಕೆ
ಕೊಡಗು

ಸೋಮವಾರಪೇಟೆ; 11 ವಾರ್ಡ್‍ಗೆ 29 ನಾಮಪತ್ರ ಸಲ್ಲಿಕೆ

October 17, 2018

ಸೋಮವಾರಪೇಟೆ:  ಪಟ್ಟಣ ಪಂಚಾಯಿತಿಯ 11 ವಾರ್ಡ್‍ಗಳಿಗೆ 29 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಪಪಂ ಚುನಾವಣೆಯಲ್ಲಿ ಮೈತ್ರಿ ಮಾಡಿ ಕೊಂಡಿದ್ದು, ಕಾಂಗ್ರೆಸ್ ಅಭ್ಯರ್ಥಿಗಳು 6 ಹಾಗೂ ಜೆಡಿಎಸ್ ಅಭ್ಯರ್ಥಿಗಳು 5 ವಾರ್ಡ್‍ಗಳಲ್ಲಿ ಸ್ಪರ್ಧಿಸುತ್ತಿದ್ದಾರೆ.

1ನೇ ವಾರ್ಡ್‍ನಿಂದ ಬಿಜೆಪಿಯಿಂದ ಕೆ.ಜಿ. ಸುರೇಶ್, ಕಾಂಗ್ರೆಸ್‍ನಿಂದ ಉದಯ ಶಂಕರ್, ಪಕ್ಷೇತರರಾಗಿ ಬಿ.ಪಿ.ಶಿವಕುಮಾರ್ ಮತ್ತು ಎಸ್.ಮಹೇಶ್, 2ನೇ ವಾರ್ಡ್ ಬಿಜೆಪಿಯಿಂದ ಪಿ.ಕೆ.ಚಂದ್ರು, ಕಾಂಗ್ರೆಸ್ ನಿಂದ ಮಂಜುನಾಥ್, ಪಕ್ಷೇತರರಾಗಿ ರಘು ನಾಥ್ ಅವರುಗಳು ನಾಮಪತ್ರ ಸಲ್ಲಿಸಿದರು.

3ನೇ ವಾರ್ಡ್ ಬಿಜೆಪಿಯಿಂದ ನಳಿನಿ ಗಣೇಶ್, ಜೆಡಿಎಸ್‍ನಿಂದ ಕೆ.ಎಂ. ಪುಷ್ಪ, ಪಕ್ಷೇತರ ಅಭ್ಯರ್ಥಿಯಾಗಿ ನೀಲಾವತಿ, 4ನೇ ವಾರ್ಡ್ ಬಿಜೆಪಿಯಿಂದ ಎನ್.ಎಸ್. ಮೂರ್ತಿ, ಕಾಂಗ್ರೆಸ್‍ನಿಂದ ಸಂಜೀವ, 5ನೇ ವಾರ್ಡ್ ಬಿಜೆಪಿಯಿಂದ ಬಿ.ಎಂ. ಸುರೇಶ್, ಕಾಂಗ್ರೆ ಸ್‍ನಿಂದ ಬಿ.ಸಿ. ವೆಂಕಟೇಶ್ ಅವರುಗಳು ನಾಮಪತ್ರ ಸಲ್ಲಿಸಿದರು.

6ನೇ ವಾರ್ಡ್ ಬಿಜೆಪಿಯಿಂದ ವಿಜಯಲಕ್ಷ್ಮೀ ಸುರೇಶ್, ಕಾಂಗ್ರೆಸ್‍ನಿಂದ ಶೀಲಾ ಡಿಸೋಜ, 7ನೇ ವಾರ್ಡ್ ಬಿಜೆಪಿಯಿಂದ ದಾಕ್ಷಾಯಿಣಿ, ಜೆಡಿಎಸ್‍ನಿಂದ ಜೀವನ್, 8ನೇ ವಾರ್ಡ್ ಬಿಜೆಪಿಯಿಂದ ಪ್ರಮೋದ್, ಜೆಡಿಎಸ್‍ನಿಂದ ವೆಂಕಟೇಶ್, ಪಕ್ಷೇತರರಾಗಿ ಶುಭಕರ್ ಮತ್ತು ಮನೋಹರ್ ಅವರುಗಳು ಉಮೇದುವಾ ರಿಕೆ ನೀಡಿದರು. 9ನೇ ವಾರ್ಡ್ ಬಿಜೆಪಿ ಯಿಂದ ಅನಿತಾ, ಜೆಡಿಎಸ್‍ನಿಂದ ನಾಗ ರತ್ನ, 10ನೇ ವಾರ್ಡ್ ಜೆಡಿಎಸ್‍ನಿಂದ ಜಯಂತಿ ಶಿವಕುಮಾರ್, ಬಿಜೆಪಿಯಿಂದ ದಿವ್ಯಾ ಮೋಹನ್, ಪಕ್ಷೇತರ ಅಭ್ಯರ್ಥಿ ಯಾಗಿ ಗೀತಾ ಹರೀಶ್, 11ನೇ ವಾರ್ಡ್ ಬಿಜೆಪಿಯಿಂದ ಬಿ.ಆರ್.ಮಹೇಶ್, ಕಾಂಗ್ರೆಸ್ ನಿಂದ ಕೆ.ಎ.ಆದಂ ಅವರುಗಳು ನಾಮಪತ್ರ ಸಲ್ಲಿಸಿದರು. ತಹಸೀಲ್ದಾರ್ ಹಾಗೂ ಚುನಾ ವಣಾಧಿಕಾರಿಯಾಗಿರುವ ಮಹೇಶ್, ಉಪ ಚುನಾವಣಾಧಿಕಾರಿ ಹೆಚ್.ಬಿ.ಗಣೇಶ್ ಅಭ್ಯರ್ಥಿಗಳಿಂದ ನಾಮಪತ್ರ ಸ್ವೀಕರಿಸಿದರು.

Translate »