ವಿಜೃಂಭಣೆಯ ರಾಮನಾಥಪುರ ಶ್ರೀ ಪ್ರಸನ್ನ ಸುಬ್ರಹ್ಮಣ್ಯಸ್ವಾಮಿ ರಥೋತ್ಸವ
ಹಾಸನ

ವಿಜೃಂಭಣೆಯ ರಾಮನಾಥಪುರ ಶ್ರೀ ಪ್ರಸನ್ನ ಸುಬ್ರಹ್ಮಣ್ಯಸ್ವಾಮಿ ರಥೋತ್ಸವ

December 14, 2018

ರಾಮನಾಥಪುರ: ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಶ್ರೀ ಪ್ರಸನ್ನ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದ ಷಷ್ಠಿ ಮಹಾರಥೋತ್ಸವ ಗುರುವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಮಾರ್ಗಶಿರ ಶು. ಷಷ್ಠಿ ಅಭಿಜನ್ ಮೂಹೂರ್ತದಲ್ಲಿ ಹಗಲು 12 ಗಂಟೆಗೆ ಸರಿಯಾಗಿ ಶ್ರೀ ಪ್ರಸನ್ನ ಸುಬ್ರಹ್ಮಣ್ಯಸ್ವಾಮಿ ಉತ್ಸವಮೂರ್ತಿಯನ್ನು ರಥದಲ್ಲಿ ಕೂರಿ ಸಿದ ನಂತರ ಪೂಜಾ ಕೈಂಕರ್ಯದ ವೇಳೆ ಯಲ್ಲಿ ತೇರಿನ ಮೇಲ್ಭಾಗ ಆಕಾಶದಲ್ಲಿ ಹತ್ತಾರು ಗರುಡಗಳು ಹಾರಾಡಿದವು. ನಂತರ ದೇವಸ್ಥಾನದ ದಿವಾನರಾದ ಸುದರ್ಶನ್ ಜೋಯಿಸ್, ಪಾರುಪತ್ತೇದಾರ್ ರಮೇಶ್ ಭಟ್ ಮುಖಂಡತ್ವದಲ್ಲಿ ಧಾರ್ಮಿಕ ವಿಧಿ-ವಿಧಾನಗಳು ಸಾಂಗವಾಗಿ ನೆರವೇರಿಸಿ ದರು. ಬಳಿಕ ಮಹಾ ರಥೋತ್ಸವಕ್ಕೆ ಚಾಲನೆ ದೊರೆತು, ಉತ್ಸವ ಮೂರ್ತಿಯನ್ನು ಹೊತ್ತ ದೊಡ್ಡ ರಥವನ್ನು ಎಳೆಯಲು ಭಕ್ತರು ಪ್ರಾರಂಭಿಸಿದ ವೇಳೆಯಲ್ಲಿ ಚಂಡೆ ಮದ್ದಳೆ ನೀನಾದದೊಂದಿಗೆ ವೇಷಧಾರಿ ಆಕರ್ಷಕ ಬೊಂಬೆ ಕುಣಿತ ಪ್ರದರ್ಶನ ನೀಡಿದ ಕಲಾವಿದರು, ವಿಪ್ರರು, ಸುಮಂಗಲಿಯರು ವೇದ-ಮಂತ್ರಗಳನ್ನು ಪಠಿಸಿ ರಥವನ್ನು ಹಿಂಬಾಲಿಸಿದರು.

ತೇರಿನತ್ತ ಹಣ್ಣು-ಜವನ: ದೇವಸ್ಥಾನದ ರಥ ಬೀದಿಯಲ್ಲಿ ಕಾವೇರಿ ನದಿಯ ಸೇತುವೆ ತನಕ ಚಲಿಸಿದ ತೇರು ಪುನಃ ಅದೇ ಮಾರ್ಗವಾಗಿ ಸುಸೂತ್ರವಾಗಿ ಸಾಗಿ ಸ್ವಸ್ಥಾನಕ್ಕೆ ಮರಳಿತು. ರಥ ಮುಂದೆ ಸಾಗುವ ವೇಳೆಗೆ ಪೂಜಾ ಸಾಮಗ್ರಿಗಳೊಂ ದಿಗೆ ಆಗಮಿಸಿದ್ದ ಸಾವಿರಾರು ಭಕ್ತರು ಈಡುಗಾಯಿ ಒಡೆದು ತೇರಿನತ್ತ ಹಣ್ಣು- ಜವನ ಎಸೆದು ಭಕ್ತಿ ಸಮರ್ಪಿಸಿದರು.
ವಧು-ವರರ ದರ್ಶನ: ಸಂಪ್ರದಾಯ ದಂತೆ ಈ ವರ್ಷವು ನೂತನ ವಧು-ವರರು ರಥೋತ್ಸವಕ್ಕೆ ಅಗಮಿಸಿ, ವಿಶೇಷ ಪೂಜೆ ಸಲ್ಲಿಸಿದರು. ಪವಿತ್ರ ಜೀವನದಿ ಕಾವೇರಿ ಯಲ್ಲಿ ಸ್ನಾನ ಮಾಡಿ ದೇವಸ್ಥಾನದಲ್ಲಿ ಹಲವಾರು ಭಕ್ತರು ಉರುಳು ಸೇವೆ ಮಾಡಿ ದರು. ಇನ್ನೂ ಕೆಲವು ಭಕ್ತರು ನದಿಯ ವಹ್ನಿಪುಷ್ಕರಣಿ, ಗಾಯತ್ರಿ ಶಿಲೆ, ಗೋಗರ್ಭ, ಗೌತಮ ಶಿಲೆ, ಕುಮಾರಧಾರಾ ತೀರ್ಥ ಚಾತುರ್ಯುಗ ಶ್ರೀರಾಮೇಶ್ವರ, ಅಗಸ್ತ್ಯೇ ಶ್ವರ, ಆಂಜನೇಯಸ್ವಾಮಿ, ಪಟ್ಟಾಭಿರಾಮ ಮುಂತಾದ ದೇವಾಲಯಗಳಿಗೆ ಸಾವಿ ರಾರು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿ ಪೂಜೆ ಸಲ್ಲಿಸಿದರು.

ದಾಸೋಹ: ಶ್ರೀ ಸುಬ್ರಹ್ಮಣ್ಯಸ್ವಾಮಿ ಮಠ, ಯುವವಾಹಿನಿ ಯುವಕರ ಸಂಘ, ಶ್ರೀ ಬಸವೇಶ್ವರ ಯುವಕರ ಸಂಘ, ಕುರು ಹೀನಶೆಟ್ಟಿ ಸಮುದಾಯ, ತಾಲೂಕು ಕುರುಬರ ಸಮಾಜ, ಸತ್ಯ ಸಾಯಿಬಾಬಾ ಸೇವಾ ಸಂಸ್ಥೆ, ಕಾವೇರಿ ನದಿ ಸ್ವಚ್ಛತಾ ಆಂದೋಲನಾ ಸಮಿತಿ, ರಾಮೇಶ್ವರಸ್ವಾಮಿ ಅಭಿವೃದ್ಧಿ ಸಮಿತಿ ಗ್ರಾಮದ ಮುಖಂಡರು ಸೇರಿ ವಿವಿಧ ಕಡೆಗಳಲ್ಲಿ ದಾಸೋಹ ವ್ಯವಸ್ಥೆ, ಮಜ್ಜಿಗೆ, ಕುಡಿಯುವ ನೀರಿನ ವ್ಯವಸ್ಥೆ ಅಲ್ಲದೆ ಸಹಕಾರ ಮಾಡಿದ್ದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಜಿ.ಸಿ.ಮಂಜೇಗೌಡ, ಡಾ.ಮಂತರ್ ಗೌಡ, ಗ್ರಾಪಂ ಅಧ್ಯಕ್ಷ ಯೋಗೇಶ್, ಉಪಾಧ್ಯಕ್ಷೆ ವಸಂತಕುಮಾರಿ, ರವೀಂದ್ರ, ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ಚಿಕ್ಕಣ್ಣ ಶೆಟ್ಟಿ, ಸದಸ್ಯ ದಿವಾಕರ್, ಮಂಜುಳಾ ಮಹದೇವ್, ಗ್ರಾಪಂ ಅಭಿವೃದ್ಧಿ ಅಧಿಕಾರಿ ವಿಜಯಕುಮಾರ್, ಕಾರ್ಯದರ್ಶಿ ಕುಮಾರ್, ಹನ್ಯಾಳು ಗ್ರಾಪಂ ಮಾಜಿ ಅಧ್ಯಕ್ಷ ಗುಡ್ಡಣ್ಣ, ಜಿಪಂ ಮಾಜಿ ಸದಸ್ಯ ಶಂಕರ್, ಸಕಲೇಶಪುರ ಉಪವಿಭಾಗಾಧಿಕಾರಿ ಲಕ್ಷ್ಮಿ ಕಾಂತ್‍ರೆಡ್ಡಿ, ತಹಸೀಲ್ದಾರ್ ಪಾರ್ಥಸಾರಥಿ, ಉಪ ತಹಸೀಲ್ದಾರ್ ಚಂದ್ರು, ಅರ್.ಐ.ಸ್ವಾಮಿ, ಧರ್ಮೇಶ್, ಸಾರಿಗೆ ಸಂಸ್ಥೆ ವ್ಯವಸ್ಥಾಪಕ ದೇವರಾಜೇಗೌಡ, ಅರೋಗ್ಯ ಇಲಾ ಖೆಯ ಡಾ.ಪ್ರದೀಪ್, ಕೆಇಬಿ ಇಲಾಖೆ ಅಧಿಕಾರಿ ಚಿನ್ನಸ್ವಾಮಿ, ಪ್ರದೀಪ್, ಡಿ.ಒ. ಎಸ್.ಪಿ.ಲಕ್ಷ್ಮೇಗೌಡ, ಸಿ.ಪಿ.ಐ. ಶಿವರಾಜ್ ಅರ್.ಮೊದೊಳ್, ಕೊಣನೂರು ಠಾಣೆಯ ಸಾಗರ್, ಪಿಎಸ್‍ಐ, ಮಧು, ಮತ್ತು ಶಿವಣ್ಣ ಮುಂತಾದವರು ಭಾಗವಹಿಸಿದ್ದರು.

Translate »