ರಾಮನಾಥಪುರ ಸುಬ್ರಹ್ಮಣ್ಯಸ್ವಾಮಿ ಉತ್ಸವಕ್ಕೆ ಚಾಲನೆ
ಹಾಸನ

ರಾಮನಾಥಪುರ ಸುಬ್ರಹ್ಮಣ್ಯಸ್ವಾಮಿ ಉತ್ಸವಕ್ಕೆ ಚಾಲನೆ

December 13, 2018

ರಾಮನಾಥಪುರ: ಪಟ್ಟಣದಲ್ಲಿ ಡಿ.13(ಗುರುವಾರ)ರಂದು ನಡೆಯುವ ಶ್ರೀ ಸುಬ್ರಹ್ಮಣ್ಯಸ್ವಾಮಿ ಮಹಾರಥೋತ್ಸವದ ಮುನ್ನ ಮಂಗಳವಾರ ಸಂಜೆ ವಾಹನೋ ತ್ಸವ, ಪಂಚಮೀ ಉತ್ಸವ, ಬೆಳ್ಳಿ ಪಲ್ಲಕ್ಕಿ ಉತ್ಸವ, ರಥಕ್ಕೆ ಕಳಸಾರೋಹಣ, ಮಹಾ ಪೂಜೆ ಮಂಗಳ ವಾದ್ಯಗಳೊಂದಿಗೆ ನಡೆಯಿತು.

ರಾಮನಾಥಪುರದಲ್ಲಿ ನಡೆಯುತ್ತಿರುವ ರಥೋತ್ಸವದ ಪ್ರಯುಕ್ತ ವಿದ್ಯುತ್ ದೀಪಾ ಲಂಕಾರಗೊಂಡಿರುವ ಇಲ್ಲಿಯ ಕಾವೇರಿ ನದಿ ಮತ್ತು ದೇವಾಲಯಗಳಿಗೆ ರಾಜ್ಯ, ಜಿಲ್ಲೆ ಹಾಗೂ ಸುತ್ತಮುತ್ತಲ ಗ್ರಾಮೀಣ ಪ್ರದೇಶಗಳಿಂದ ಈಗಾಗಲೇ ಜನ ಸಾಗ ರವೇ ಹರಿದು ಬರುತ್ತಿದೆ. ಧಾರ್ಮಿಕ ವಿಧಿ- ವಿಧಾನ ಹಾಗೂ ವಿವಿಧ ಉತ್ಸವಾದಿಗ ಳೊಂದಿಗೆ ವಿಳಂಬಿ ಸಂವತ್ಸರದ ಉತ್ಸವಾದಿ ಗಳು ಡಿ.7ರಿಂದ ಆರಂಭವಾಗಿರುವ ಜಾತ್ರೆಗೆ ಜನ ಸಾಗರವೇ ತುಂಬಿ ತುಳುಕುತ್ತದೆ.

ರಥೋತ್ಸವ ಮುನ್ನ ದಿನ ಮಂಗಳವಾರ ರಾತ್ರಿ: ಪಟ್ಟಣದ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇಗುಲಕ್ಕೆ ದೇಗುಲವೇ ನಾದಮಯವಾಗಿ ನೆರೆದಿದ್ದ ಭಕ್ತರ ಮನಮುಟ್ಟಿ ಹೃದಯ ತಟ್ಟಿದ ವಿವಿಧ ವಾದ್ಯ ಪ್ರಕಾರಗಳು ಶ್ರೀ ಪ್ರಸನ್ನ ಸುಬ್ರಹ್ಮಣ್ಯಸ್ವಾಮಿ ಉತ್ಸವದಲ್ಲಿ ನಾದದ ಅಭಿಷೇಕವನ್ನು ಮಾಡಿದಂತೆ ಭಾಸವಾಯಿತು.

ಪಟ್ಟಣದ ಮುಖ್ಯ ರಸ್ತೆ ಮತ್ತು ದೇವ ಸ್ಥಾನದ ಸುತ್ತ ಉತ್ಸವದ ವೇಳೆ ದೇವರ ಮೂತಿಯನ್ನು ವಿಶೇಷವಾಗಿ ಅಲಂಕರಿ ಸಿದ ಮಂಟಪದಲ್ಲಿ ಪ್ರತಿಷ್ಠಾಪಿಸಿ ಉತ್ಸವ ವನ್ನು ನೆರವೇರಿಸಲಾಯಿತು. ಇದೇ ಸಂದರ್ಭ ದೇವಾಲಯವನ್ನು ಪ್ರದಕ್ಷಿಣೆ ಹಾಕುವ ಉತ್ಸವದ ವೇಳೆ ಸುತ್ತಿಗೊಂದ ರಂತೆ ಪ್ರತ್ಯೇಕ ವಾದ್ಯ ಪ್ರಕಾರದ ಮೂಲಕ ಶ್ರೀ ಸುಬ್ರಹ್ಮಣ್ಯಸ್ವಾಮಿಗೆ ಪೂಜೆ ನೆರವೇರಿ ಸುವುದು ಇಲ್ಲಿನ ವಿಶೇಷತೆಯಾಗಿದ್ದು ಸತತ ಮೂರು ಗಂಟೆ ಕಾಲ ಜರುಗುವ ಈ ಸಮಯ ವಿವಿಧ ರೀತಿಯ ವಾದ್ಯಗಳ ನಿನಾದವು ಸೇರಿದ್ದ ಭಕ್ತರನ್ನು ಪುಳಕಗೊಳಿಸಿ ಬೇರೆಯದೇ ಲೋಕಕ್ಕೆ ಕೊಂಡೊಯ್ಯಿತು.

ಮೊದಲ ಸುತ್ತಿನಲ್ಲಿ ಪಂಚವಾದ್ಯ, ಎರಡನೇ ಸುತ್ತಿನಲ್ಲಿ ಮಂಗಳವಾದ್ಯ ಸದ್ದಿ ನೊಂದಿಗೆ, ಮೂರನೇ ಸುತ್ತಿನಲ್ಲಿ ಶಹ ನಾಯಿ, ನಾಲ್ಕನೇ ಸುತ್ತಿನಲ್ಲಿ ಸ್ಯಾಕ್ಸೋಫೋನ್ ಮತ್ತು ಕ್ಲಾರಿಯೋನೆಟ್, ಮಗದೊಂದು ಸುತ್ತಿನಲ್ಲಿ ಚಂಡೆವಾದ್ಯದ ನಿನಾದ ದೊಂದಿಗೆ ಶ್ರೀ ಸ್ವಾಮಿಯವರಿಗೆ ಭಕ್ತಿಗೀತೆ ಗಳ ಅರ್ಚನೆ ಮಾಡಿದ್ದು ಎಲ್ಲರ ಮನ ಗೆದ್ದಿತು. ಅಂತಿಮ ಪ್ರದಕ್ಷಿಣೆಯಲ್ಲಿ ಉತ್ಸವ ವನ್ನು ಕೂಡಿಕೊಂಡ ಚಂಡೆವಾದ್ಯವು ಭಕ್ತರ ಎದೆಯಲ್ಲಿ ಸಂಚಲನ ಮೂಡಿ ಸಿತು. ವಾದನದೊಂದಿಗೆ ಅವರು ಹಾಕಿದ ಲಯಬದ್ಧವಾದ ಕುಣಿತವು ಮತ್ತಷ್ಟು ಮುದ ನೀಡಿತು. ನಾದಪ್ರಿಯ ಶ್ರೀ ಸುಬ್ರ ಹ್ಮಣ್ಯನಿಗೆ ತಂಡೋಪತಂಡವಾಗಿ ನುಡಿ ಸಿದ ವಾದ್ಯ ಪ್ರಕಾರಗಳು ನಾದಾಭಿಷೇಕ ವನ್ನೇ ಮಾಡಿದವು. ನೆರೆದಿದ್ದ ಭಕ್ತರ ಮನ ವನ್ನು ಗೆದ್ದಿತು. ಕುಕ್ಕೆ ಸುಬ್ರಹ್ಮಣ್ಯಮಠ ದಿವಾನರಾದ ಸುದರ್ಶನ್‍ಜೋಯಿಸ್, ಇಲ್ಲಿಯ ದೇವ ಸ್ಥಾನದ ಪಾರುಪತ್ತೇಗಾರ ರಮೇಶ್ ಭಟ್, ಭಾರತೀರಮಣ ಆಚಾರ್ಯ, ರಾಘವೇಂದ್ರ ಭಟ್, ಕಾರ್ತಿಕ್, ಶ್ರೀನಾಥ್ ಮುಂತಾದವರು ಉತ್ಸವದಲ್ಲಿ ಭಾಗವಹಿಸಿದ್ದರು.

Translate »