ಚಾಮರಾಜನಗರ: ನಗರವೂ ಸೇರಿ ದಂತೆ ಜಿಲ್ಲೆಯ ಗ್ರಾಮೀಣ ಪ್ರದೇಶದ ವಿವಿಧೆಡೆ ಮಂಗಳವಾರ ಶ್ರದ್ಧಾ ಭಕ್ತಿಯಿಂದ ವೈಕುಂಠ ಏಕಾದಶಿ ಆಚರಿಸಲಾಯಿತು. ನಗರದ ಚಾಮರಾಜೇಶ್ವರಸ್ವಾಮಿ ದೇವಸ್ಥಾನ, ಆಂಜನೇಯಸ್ವಾಮಿ, ಗಣಪತಿ, ಕೊಳದ ಬೀದಿಯ ಕಾಡು ನಾರಾಯಣಸ್ವಾಮಿ ದೇವಸ್ಥಾನ, ಕೊಳದ ಗಣೇಶ, ಆದಿಶಕ್ತಿ ದೇವಸ್ಥಾನದಲ್ಲಿ ಬೆಳಿಗ್ಗೆ ಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ಹಬ್ಬದ ಅಂಗವಾಗಿ ಸಾರ್ವಜನಿ ಕರು ಬೆಳಿಗ್ಗೆಯಿಂದಲೇ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿ ಇಷ್ಟಾರ್ಥ ಸಿದ್ಧಿಗೆ ಕೋರಿಕೊಂಡರು. ಯಳಂದೂರು ವರದಿ (ಗುಂಬಳ್ಳಿ ಲೋಕೇಶ್): ವೈಕುಂಠ ಏಕಾದಶಿ ಧನುರ್ಮಾಸ ವಿಶೇಷವಾಗಿ ಪಟ್ಟಣದ…
ಜಮೀನಿನ ತಂತಿ ಬೇಲಿಗೆ ವಿದ್ಯುತ್ ಹರಿಸದಂತೆ ಸೂಚನೆ
December 19, 2018ಗುಂಡ್ಲುಪೇಟೆ: ಕಾಡಂಚಿನ ಗ್ರಾಮಸ್ಥರು ಯಾವುದೇ ಕಾರ ಣಕ್ಕೂ ತಮ್ಮ ಜಮೀನಿನ ತಂತಿ ಬೇಲಿಗಳಿಗೆ ವಿದ್ಯುತ್ ಹರಿಸಬಾರದು ಎಂದು ಸೆಸ್ಕ್ ಜಾಗೃತ ದಳದ ಎಸ್ಪಿ ರಶ್ಮಿ ಸೂಚಿಸಿದರು.ತಾಲೂಕಿನ ಕಾಡಂಚಿನ ಬಾಚಹಳ್ಳಿ ಗ್ರಾಮ ದಲ್ಲಿ ಸೆಸ್ಕ್ ಜಾಗೃತ ದಳದಿಂದ ಸಾರ್ವಜ ನಿಕರಿಗೆ ವಿದ್ಯುತ್ ದುರ್ಬಳಕೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇತ್ತೀಚೆಗೆ ಕಾಡಂಚಿನ ಗ್ರಾಮಗಳ ರೈತರು ವನ್ಯ ಜೀವಿಗಳ ಹಾವಳಿಯಿಂದ ತಮ್ಮ ಬೆಳೆಗಳನ್ನು ಉಳಿಸಿಕೊಳ್ಳಲು ಅಕ್ರಮವಾಗಿ ವಿದ್ಯುತ್ ಸಂಪರ್ಕ ನೀಡುವುದರಿಂದ ವನ್ಯ ಜೀವಿಗಳು ಹಾಗೂ ಜನರು ಸಾವಿಗೀಡಾಗು…
ಬೆಳೆ ಸಾಲ ಮನ್ನಾ: ರೈತರು ಹೆಸರು ನೋಂದಾಯಿಸಿಕೊಳ್ಳಲು ಡಿಸಿ ಮನವಿ
December 19, 2018ಚಾಮರಾಜನಗರ: ರಾಜ್ಯ ಸರ್ಕಾ ರವು ವಾಣಿಜ್ಯ ಬ್ಯಾಂಕ್ಗಳಲ್ಲಿ ಬೆಳೆ ಸಾಲ ಮಾಡಿರುವ ರೈತರಿಗೆ ಸಾಲ ಮನ್ನಾ ಮಾಡÀಲು ತಂತ್ರಾಂಶವೊಂದನ್ನು ಜಾರಿಗೆ ತಂದಿದ್ದು, ಬೆಳೆ ಸಾಲ ಪಡೆದ ಪ್ರತಿಯೊಬ್ಬ ರೈತರು ಸಾಲ ಪಡೆದ ವಾಣಿಜ್ಯ ಬ್ಯಾಂಕ್ಗಳಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಮನವಿ ಮಾಡಿದ್ದಾರೆ. 2009ರ ಏಪ್ರಿಲ್ 1 ರಿಂದ 2017ರ ಡಿಸೆಂ ಬರ್ 31ರವರೆಗೆ ಬಾಕಿ ಇರುವ ಬೆಳೆ ಸಾಲ (sಸುಸ್ತಿಸಾಲ, ಪುನರಾವಸ್ತಿ ಸಾಲ, ಎನ್ಪಿಎ (ನಾನ್ ಪರ್ಫಾಮಿಂಗ್ ಅಸೆಟ್ ಸಾಲಗಳು) ಪಡೆದಿರುವ…
ಪ್ರಸಾದಕ್ಕೆ ನಾನು ವಿಷ ಹಾಕಿಲ್ಲ… ದೇವಸ್ಥಾನದ ಟ್ರಸ್ಟ್ನಲ್ಲಿ ಒಡಕಿಲ್ಲ…
December 17, 2018ಮಲೆಮಹದೇಶ್ವರ ಬೆಟ್ಟ:ಸುಳ ವಾಡಿ ಮಾರಮ್ಮ ದೇವಸ್ಥಾನಕ್ಕೂ ಸಾಲೂರು ಮಠಕ್ಕೂ ದಶಕಗಳ ಅವಿನಾಭಾವ ಸಂಬಂಧ… ನಾನು ಮಾರಮ್ಮನ ಪ್ರಸಾದಕ್ಕೆ ವಿಷ ಹಾಕಿಲ್ಲ… ಟ್ರಸ್ಟ್ನಲ್ಲಿ ಒಡಕಿಲ್ಲ… ಇದು ಸುಳವಾಡಿ ಮಾರಮ್ಮ ದೇವಸ್ಥಾನ ಟ್ರಸ್ಟ್ ಅಧ್ಯಕ್ಷರೂ ಆಗಿರುವ ಸಾಲೂರು ಮಠದ ಕಿರಿಯ ಶ್ರೀಗಳಾದ ಇಮ್ಮಡಿ ಮಹದೇವಸ್ವಾಮಿ ಅವರ ಮಾತು. ಸುಳವಾಡಿ ಮಾರಮ್ಮ ದೇವಸ್ಥಾನದಲ್ಲಿ ವಿಷ ಪ್ರಸಾದ ಸೇವಿಸಿ ಭಕ್ತರು ಸಾವನ್ನ ಪ್ಪಿದ ಪ್ರಕರಣದಲ್ಲಿ ತಮ್ಮ ಹೆಸರೂ ಕೂಡ ತಳಕು ಹಾಕಿಕೊಂಡಿರುವ ಹಿನ್ನೆಲೆಯಲ್ಲಿ ಇಂದು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರ ಜೊತೆ ಮಾತನಾಡಿದ…
ಬಿದರಹಳ್ಳಿ ಗ್ರಾಮದಲ್ಲಿ ಮಡುಗಟ್ಟಿದ ದುಃಖ!
December 17, 2018ಹನೂರು: ಒಂದೆಡೆ ನಿತ್ಯ ಬೆಳಿಗ್ಗೆ ಪ್ರೀತಿಯಿಂದ ಟಾಟಾ ಮಾಡುತ್ತ ಸ್ಕೂಲಿಗೆ ಹೋಗಿ ಬರುತ್ತಿದ್ದ ಮಕ್ಕಳು, ಹೆತ್ತವರ ಎದುರು ಶವವಾಗಿ ಮಲಗಿದ್ದರು. ಮತ್ತೊಂದೆಡೆ ಮಕ್ಕಳ ಭವ್ಯ ಭವಿಷ್ಯ ಕಣ್ತುಂಬಿಕೊಳ್ಳಬೇಕಿದ್ದ ಹೆತ್ತವರು ಮಾತನಾಡದೆ ಚಿರನಿದ್ರೆಗೆ ಜಾರಿದ್ದರು.ಎಲ್ಲಿ ನೋಡಿದರೂ ನೀರವ ಮೌನ, ತಮ್ಮ ವರನ್ನು ನೆನೆಸಿಕೊಂಡ ಕುಟುಂಬದವರ ಮುಖದಲ್ಲಿ ಮಡುಗಟ್ಟಿದ್ದ ದುಃಖ. ಇದು ತಾಲೂಕಿನ ಸುಳವಾಡಿ ಗ್ರಾಮದ ಕಿಚ್ಗುತ್ ಮಾರಮ್ಮ ದೇವಸ್ಥಾನದಲ್ಲಿ ಶುಕ್ರವಾರ ವಿಷ ಮಿಶ್ರಣ ಪ್ರಸಾದ ಸೇವಿಸಿ ಮೃತಪಟ್ಟವರ ಗ್ರಾಮದಲ್ಲಿ ಕಂಡುಬಂದ ದೃಶ್ಯ. ಪಾಪಿಗಳ ಕೃತ್ಯದಿಂದ ದೇವರ ಪ್ರಸಾದ ಸೇವಿಸಿ…
ಆನೆ ತುಳಿದು ರೈತ ಸಾವು
December 17, 2018ಚಾಮರಾಜನಗರ: ರೈತನೋರ್ವನನ್ನು ಆನೆ ತುಳಿದು ಸಾಯಿಸಿರುವ ಘಟನೆ ಗಡಿ ಭಾಗವಾದ ಮಾದಹಳ್ಳಿಯಲ್ಲಿ ನಡೆದಿದೆ. ಗ್ರಾಮದ ಪ್ರಭುಸ್ವಾಮಿ (62) ಮೃತ ರೈತ. ಜಮೀನಿನಲ್ಲಿ ಜೋಳ ಮತ್ತು ರಾಗಿಯನ್ನು ಪ್ರಭುಸ್ವಾಮಿ ಬೆಳೆದಿದ್ದರು. ಕಾಡು ಹಂದಿಗಳ ದಾಳಿ ತಪ್ಪಿಸಿ ಬೆಳೆಯನ್ನು ರಕ್ಷಿಸಿಕೊಳ್ಳಲು ಕಾವಲು ಕಾಯುತ್ತಿದ್ದರು. ಈ ವೇಳೆ ಆನೆ ದಾಳಿ ನಡೆಸಿ ಪ್ರಭುಸ್ವಾಮಿ ಅವರನ್ನು ತುಳಿದು ಸಾಯಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಗರದ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿದ ನಂತರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.
ಕಬ್ಬಹಳ್ಳಿ ಗ್ರಾಪಂ ಅಧ್ಯಕ್ಷರಾಗಿ ನಾಗರತ್ನಮ್ಮ ಆಯ್ಕೆ
December 17, 2018ಗುಂಡ್ಲುಪೇಟೆ: ತಾಲೂಕಿನ ಕಬ್ಬಹಳ್ಳಿ ಗ್ರಾಮ ಪಂಚಾ ಯಿತಿ ಹಿಂದಿನ ಅಧ್ಯಕ್ಷ ಮಾದೇಗೌಡರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬ ಲಿತ ಅಭ್ಯರ್ಥಿ ನಾಗರತ್ನಮ್ಮ ಜಯಗಳಿಸಿದರು. ಗ್ರಾಮ ಪಂಚಾಯಿತಿಯು 14 ಸದಸ್ಯರ ಬಲ ಹೊಂದಿದ್ದು, 8 ಮಂದಿ ಕಾಂಗ್ರೆಸ್ ಹಾಗೂ 6 ಮಂದಿ ಬಿಜೆಪಿ ಬೆಂಬಲಿತ ಸದಸ್ಯರಿದ್ದಾರೆ. ಕಾಂಗ್ರೆಸ್ನಿಂದ ಮಂಜುಳಾ ಮತ್ತು ಬಿಜೆಪಿಯಿಂದ ನಾಗರತ್ನಮ್ಮ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಕಾಂಗ್ರೆಸ್ ಸದಸ್ಯರೊಬ್ಬರು ತಮ್ಮ ಮತ ವನ್ನು ಬಿಜೆಪಿ ಅಭ್ಯರ್ಥಿಗೆ ನೀಡಿದ್ದರಿಂದ ನಾಗರತ್ನಮ್ಮ ಜಯಗಳಿಸಿದರು. ಮತ್ತೊಬ್ಬ…
ಬೈಕ್ಗಳ ನಡುವೆ ಡಿಕ್ಕಿ: ಇಬ್ಬರ ಸಾವು
December 17, 2018ಬೇಗೂರು: ಎರಡು ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ಸವಾರರಿಬ್ಬರೂ ಸ್ಥಳದಲ್ಲೇ ಸಾವಿಗೀಡಾದ ಘಟನೆ ಸಮೀಪದ ಗರಗನಹಳ್ಳಿ ಗೇಟ್ ಬಳಿ ಭಾನುವಾರ ನಡೆದಿದೆ.ಕೋಡಹಳ್ಳಿ ಗ್ರಾಮದ ಮಣಿಕಂಠ(26) ಮತ್ತು ಕೇರಳದ ಜಾಫರ್(28) ಮೃತಪಟ್ಟವರು. ವಿವರ: ಮೈಸೂರು ಕಡೆಯಿಂದ ಕೋಡಹಳ್ಳಿಗೆ ತೆರಳುತ್ತಿದ್ದ ಬೈಕ್(ಕೆಎ10-ಎಲ್5905), ಗುಂಡ್ಲುಪೇಟೆ ಕಡೆಯಿಂದ ಮೈಸೂರಿಗೆ ತೆರಳುತ್ತಿದ್ದ ಬೈಕ್(ಎಂಪಿ-04-ವೈ9271) ನಡುವೆ ಡಿಕ್ಕಿ ಸಂಭವಿಸಿದೆ. ಪರಿಣಾಮ ಮಣಿಕಂಠ ಮತ್ತು ಜಾಫರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನಿಬ್ಬರ ಸ್ಥಿತಿ ಗಂಭೀರವಾಗಿದ್ದು, ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಚಾರ ಅಸ್ತವ್ಯಸ್ತ : ಗರಗನಹಳ್ಳಿ ಗೇಟ್ ಬಳಿ…
`ವಿಷ’ ಪ್ರಸಾದ ಸೇವನೆ 12ಕ್ಕೂ ಅಧಿಕ ಮಂದಿ ಸಾವು 70ಕ್ಕೂ ಅಧಿಕ ಮಂದಿ ಅಸ್ವಸ್ಥ
December 15, 2018ಹನೂರು ಬಳಿ ಅರಣ್ಯದಂಚಿನ ಮಾರಿಗುಡಿಯಲ್ಲಿ ದುರಂತ ವೈಯಕ್ತಿಕ ವೈಷಮ್ಯದಿಂದ ವಿಷವಿಕ್ಕಿದ ಕಿರಾತಕರು ದೇವಸ್ಥಾನ ಆಡಳಿತ ಮಂಡಳಿಯ ಇಬ್ಬರು ಪೊಲೀಸ್ ವಶಕ್ಕೆ ಪ್ರಸಾದದಿಂದ ಕಾಗೆ, ನಾಯಿ ಮಾರಣಹೋಮ ಮೈಸೂರು ವಿವಿಧ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ಕೊಳ್ಳೇಗಾಲ, ಕಾಮಗೆರೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಅಸ್ವಸ್ಥರಿಗೆ ಸರ್ಕಾರಿ ವೆಚ್ಚದಲ್ಲೇ ಚಿಕಿತ್ಸೆ ಮೈಸೂರಿಗೆ ದೌಡಾಯಿಸಿದ ಸಿಎಂ ಕುಮಾರಸ್ವಾಮಿ ಇಂದು ಮೈಸೂರಿಗೆ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಹನೂರು: ಕಾಪಾಡು ತಾಯೇ ಎಂದು ಮಾರಿ ಮೊರೆ…
ಪ್ರಕರಣದಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕಾನೂನು ಕ್ರಮ
December 15, 2018ಮೈಸೂರು: ಹನೂರು ತಾಲೂಕಿನ ಸುಳವಾಡಿ ಗ್ರಾಮದ ಕಿಚ್ಗುತ್ ಮಾರಮ್ಮ ದೇಗುಲದಲ್ಲಿ ವಿಷಮಿಶ್ರಿತ ಪ್ರಸಾದ ಸೇವಿಸಿ 12 ಹೆಚ್ಚು ಮಂದಿ ಮೃತಪಟ್ಟು, 70ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದ ಪ್ರಕರಣದಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಳಿಗೆ ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು. ಶುಕ್ರವಾರ ರಾತ್ರಿ ಕೆ.ಆರ್.ಆಸ್ಪತ್ರೆಗೆ ಭೇಟಿ ನೀಡಿ, ಇಲ್ಲಿ ದಾಖಲಾಗಿರುವ ಅಸ್ವಸ್ಥಗೊಂಡವರ ಆರೋಗ್ಯ ವಿಚಾರಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ಈ ಪ್ರಕರಣ ಬೆಳಿಗ್ಗೆ ನಡೆದಿದ್ದು,…