ಆನೆ ತುಳಿದು ರೈತ ಸಾವು
ಚಾಮರಾಜನಗರ

ಆನೆ ತುಳಿದು ರೈತ ಸಾವು

December 17, 2018

ಚಾಮರಾಜನಗರ:  ರೈತನೋರ್ವನನ್ನು ಆನೆ ತುಳಿದು ಸಾಯಿಸಿರುವ ಘಟನೆ ಗಡಿ ಭಾಗವಾದ ಮಾದಹಳ್ಳಿಯಲ್ಲಿ ನಡೆದಿದೆ.
ಗ್ರಾಮದ ಪ್ರಭುಸ್ವಾಮಿ (62) ಮೃತ ರೈತ. ಜಮೀನಿನಲ್ಲಿ ಜೋಳ ಮತ್ತು ರಾಗಿಯನ್ನು ಪ್ರಭುಸ್ವಾಮಿ ಬೆಳೆದಿದ್ದರು. ಕಾಡು ಹಂದಿಗಳ ದಾಳಿ ತಪ್ಪಿಸಿ ಬೆಳೆಯನ್ನು ರಕ್ಷಿಸಿಕೊಳ್ಳಲು ಕಾವಲು ಕಾಯುತ್ತಿದ್ದರು. ಈ ವೇಳೆ ಆನೆ ದಾಳಿ ನಡೆಸಿ ಪ್ರಭುಸ್ವಾಮಿ ಅವರನ್ನು ತುಳಿದು ಸಾಯಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಗರದ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿದ ನಂತರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.

Translate »