ಬೆಂಗಳೂರು: ತಮಗೆ ದೊರೆತ ಖಾತೆ ವಹಿಸಿ ಕೊಳ್ಳಲು ಮೊದಲು ಹಿಂಜರಿದಿದ್ದ ಜಿ.ಟಿ. ದೇವೇಗೌಡ ಅವರು ಇಂದು ಉನ್ನತ ಶಿಕ್ಷಣ ಇಲಾಖೆಯ ಹೊಣೆಗಾರಿಕೆಯನ್ನು ಕೊನೆಗೂ ವಹಿಸಿ ಕೊಂಡರು. ವಿಧಾನಸೌಧದ 3ನೇ ಮಹಡಿಯ ತಮ್ಮ ಕೊಠಡಿಯಲ್ಲಿ ಪೂಜೆ ಸಲ್ಲಿಸಿ, ಮುಖ್ಯಮಂತ್ರಿ ಕುಮಾರಸ್ವಾಮಿ ವಹಿಸಿಕೊಟ್ಟ ಹೊಣೆ ಗಾರಿಕೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಇಲಾಖಾ ಅಧಿಕಾರಿಗಳು, ಸಂಪುಟದ ಇತರೆ ಸಚಿವರು, ಸ್ನೇಹಿತರು, ಹಿತೈಷಿ ಗಳು, ಪಕ್ಷದ ಕಾರ್ಯಕರ್ತರು ಶುಭ ಕೋರಿದರು. ನನ್ನ ವಿದ್ಯಾ ಭ್ಯಾಸವೇ 8ನೇ ತರಗತಿ, ನಾನು ಹೇಗೆ ಉನ್ನತ…
ಜುಲೈ 5ರಂದು ಮೈತ್ರಿ ಬಜೆಟ್
June 23, 2018ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಬಜೆಟ್ ಅಧಿವೇಶನ ಜುಲೈ 2ರಿಂದ 12ರವರೆಗೆ ನಡೆಯಲಿದೆ. ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರು ಇದೇ ಮೊದಲ ಬಾರಿಗೆ ಜುಲೈ 5ರಂದು ಬಜೆಟ್ ಮಂಡಿಸಲಿದ್ದಾರೆ. ವಿಧಾನಸೌಧದಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯ ನಂತರ ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣಭೈರೇಗೌಡ ಈ ವಿಷಯ ತಿಳಿಸಿದರು. ಜುಲೈ 2 ರಂದು ರಾಜ್ಯಪಾಲರು ಜಂಟಿ ಸದನವನ್ನು ದ್ದೇಶಿಸಿ ಭಾಷಣ ಮಾಡಲಿದ್ದಾರೆ. ಜುಲೈ 5ರಂದು ಮುಖ್ಯಮಂತ್ರಿಗಳು ಬಜೆಟ್ ಮಂಡಿಸಲಿದ್ದಾರೆ ಎಂದು ಅವರು ಹೇಳಿ ದರು. ಸಂಪುಟ ಸಭೆಯಲ್ಲಿ…
ಅಡಿಗಡಿಗೆ ಸಿದ್ದರಾಮಯ್ಯ ಅಡ್ಡಗಾಲು
June 19, 2018ರಾಹುಲ್ ಗಾಂಧಿಗೆ ದೂರು ಸಲ್ಲಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ ಅತೃಪ್ತರ ಪ್ರತಿಭಟನೆ ಹಿಂದೆ ಸಿದ್ದರಾಮಯ್ಯ ಕೈವಾಡವಿದೆ ಎಂದು ವಿವರ ಬೆಂಗಳೂರು: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಂಟಕವಾಗಿದ್ದಾರೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿಗೆ ದೂರು ನೀಡಿದ್ದಾರೆ. ದೆಹಲಿಯಲ್ಲಿಂದು ರಾಹುಲ್ ಭೇಟಿ ಮಾಡಿ, ಸುಮಾರು 30 ನಿಮಿಷಗಳಿಗೂ ಹೆಚ್ಚು ಕಾಲ ಸಮಾಲೋಚನೆ ನಡೆಸಿ, ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದಂತೆ ಚರ್ಚೆ ಮಾಡಿದ್ದಲ್ಲದೆ, ಸಿದ್ದರಾಮಯ್ಯ ಪರೋಕ್ಷ ವಾಗಿ ಸರ್ಕಾರದ ವಿರುದ್ಧ ಯಾವ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದು…
ಶಾಸಕ ಸತೀಶ್ ಜಾರಕಿಹೊಳಿಗೆ ಸಚಿವ ಸ್ಥಾನಕ್ಕೆ ಆಗ್ರಹ
June 19, 2018ಮಂಡ್ಯ: ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಶಾಸಕ ಸತೀಶ್ ಜಾರಕಿಹೊಳಿಗೆ ಸಚಿವ ಸ್ಥಾನ ನೀಡದ ಕ್ರಮ ಖಂಡಿಸಿ ಬೆಂಬಲಿಗರು ನಗರದಲ್ಲಿಂದು ಪ್ರತಿಭಟನೆ ನಡೆಸಿದರು. ಮಂಡ್ಯ ಜಿಲ್ಲಾ ಗಂಗಾಮತಸ್ಥ, ಬೆಸ್ತ, ನಾಯಕ ಜನಾಂಗ, ಸತೀಶ್ಜಾರಕಿ ಹೊಳಿ ಅಭಿಮಾನಿ ಬಳಗ ಮತ್ತು ಮಾನವ ಬಂಧುತ್ವ ವೇದಿಕೆಯ ನೇತೃತ್ವದಲ್ಲಿ ನಗರದ ಸಂಜಯ ಸರ್ಕಲ್ನಲ್ಲಿ ಸಮಾವೇಶ ಗೊಂಡ ಕಾರ್ಯಕರ್ತರು ಕಾವೇರಿವನದ ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆವರೆಗೂ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿ ಸಿದರು. ಮೆರವಣಿಗೆಯುದ್ದಕ್ಕೂ ಸತೀಶ್ ಜಾರಕಿ ಹೊಳಿ ಭಾವಚಿತ್ರ ಹಿಡಿದು ಸಚಿವ ಸ್ಥಾನ…
ಪ್ರತ್ಯೇಕ ಬಜೆಟ್: ಸಿಎಂ ಪರ ನಿಂತ ಡಿಸಿಎಂ
June 18, 2018ಬೆಂಗಳೂರು: ಹೊಸ ಸರ್ಕಾರ ಬಂದಾಗ ಹೊಸದಾಗಿ ಬಜೆಟ್ ಮಂಡಿ ಸುವುದು ವಾಡಿಕೆ. ಪ್ರತಿ ಯೊಂದು ಸರ್ಕಾರಕ್ಕೆ ಹೊಸ ಕಾರ್ಯಕ್ರಮಗಳಿರುತ್ತವೆ. ಅವುಗಳನ್ನು ಬಜೆಟ್ ಮೂಲಕ ಪ್ರಕಟಿಸುವುದು ಸ್ವಾಭಾವಿಕ ವಾದ ಸಂಪ್ರದಾಯ ಎಂದು ಹೇಳಿಕೆ ನೀಡಿರುವ ಉಪಮುಖ್ಯ ಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಪಕ್ಷದ ಸಾಮಾನ್ಯ ಕನಿಷ್ಠ ಕಾರ್ಯಕ್ರಮವನ್ನು ರೂಪಿಸಲು ಒಂದು ಸಮಿತಿಯನ್ನು ರಚಿಸಲಾಗಿದೆ. ಸಮಿತಿ 10 ದಿನಗಳ ಒಳಗಾಗಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮವನ್ನು ರೂಪಿಸಿ ಕೊಡಲಿದೆ….
ಜೂ.21ರಿಂದ ಹೆಚ್ಡಿಕೆ ಬಜೆಟ್ ಪೂರ್ವಭಾವಿ ಸಭೆ
June 18, 2018ಬೆಂಗಳೂರು: ದೋಸ್ತಿ ಸಂಘರ್ಷದ ನಡುವೆಯೂ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೊಸ ಬಜೆಟ್ ಮಂಡಿಸುವುದು ಖಚಿತವಾಗಿದೆ. ಈ ಸಂಬಂಧ ಮುಂಗಡ ಪತ್ರ ಸಿದ್ಧತೆಯ ಪೂರ್ವಭಾವಿ ಸಭೆಗೆ ವೇಳಾಪಟ್ಟಿ ತಯಾರಿಸಲಾಗಿದೆ. ಇಲಾಖಾವಾರು ಸಭೆಗೆ ಸಚಿವರು, ಉನ್ನತಾಧಿಕಾರಿಗಳು ಹಾಜರಾಗುವಂತೆಯೂ ಮುಖ್ಯಮಂತ್ರಿಯವರ ಕಾರ್ಯಾಲಯದಿಂದ ಸೂಚನೆ ನೀಡ ಲಾಗಿದೆ. ವಿಧಾನಸಭೆ ಚುನಾವಣೆಗೆ ಮುನ್ನ ಹಾಲಿ ಆರ್ಥಿಕ ವರ್ಷದ ಬಜೆಟ್ ಮಂಡಿಸಲಾಗಿದೆ. ಅದನ್ನೇ ಮುಂದುವರಿಸಿಕೊಂಡು ಹೋಗಬೇಕು. ಹೊಸ ಸೇರ್ಪಡೆಯಿದ್ದರೆ ಪೂರಕ ಮುಂಗಡ ಪತ್ರವನ್ನು ಎಚ್ಡಿಕೆ ಮಂಡಿಸಬಹುದು ಎಂಬ ಸಲಹೆಯನ್ನು ಮಾಜಿ ಸಿಎಂ ಸಿದ್ದರಾಮಯ್ಯ ನೀಡಿದ್ದರು. ಇದು ಸಮ್ಮಿಶ್ರ…
ಐದು ವರ್ಷ ನಾವೇ ಅಧಿಕಾರದಲ್ಲಿರುತ್ತೇವೆ: ಹೆಚ್.ಡಿ.ರೇವಣ್ಣ ವಿಶ್ವಾಸ
June 18, 2018ಹುಬ್ಬಳ್ಳಿ: ಐದು ವರ್ಷಗಳ ಕಾಲ ನಾವೇ ಅಧಿಕಾರದಲ್ಲಿರುತ್ತೇವೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ದೃಢವಾಗಿ ಹೇಳಿದರು. ನಗರದಲ್ಲಿಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ನಾವು ಸಂಪೂರ್ಣ ಐದು ವರ್ಷಗಳೂ ಅಧಿಕಾರದಲ್ಲಿ ಮುಂದುವರೆಯುತ್ತೇವೆ ಎಳ್ಳಷ್ಟೂ ಶಂಕೆ ಬೇಡ ಎಂದು ಅವರು ನುಡಿದರು. ನನಗೆ ಸೂಪರ್ ಸಿ.ಎಂ. ಎಂದು ಪಟ್ಟಕಟ್ಟಿ ಪುಕ್ಕಟೆ ಪ್ರಚಾರ ನೀಡಲಾಗುತ್ತಿದೆ ಎಂದು ಅವರು ನಗುತ್ತಲೇ ನುಡಿದ ಅವರು, ನಾನು ಲೋಕೋಪಯೋಗಿ ಇಲಾಖೆ ಕೆಲಸಗಳನ್ನು ಮಾತ್ರ ಮಾಡಿರುವೆ. ಅದನ್ನು ಹೊರತುಪಡಿಸಿ…
ಕರ್ನಾಟಕದ `ಸಾಂದರ್ಭಿಕ ಕೂಸು’ ಎನ್ನುವ ಮುಖ್ಯಮಂತ್ರಿಯವರಿಗೆ ನನ್ನ ಒಂದು ಪಿಸುಮಾತು
June 17, 2018ನಾನು ಒಂದು ಪತ್ರಿಕಾ ಆಫ್ ಸೆಟ್ ಮುದ್ರಣಾಲಯದ ಮಾಲೀಕ ನಾಗಿ ಅದಕ್ಕೆ ಸಂಬಂಧಪಟ್ಟಂತೆ ತಿಳಿದುಕೊಂಡ ತಂತ್ರಜ್ಞಾನದ ಮೊದಲ ವಿಷಯವೆಂದರೆ ‘ನೀರು ಮತ್ತು ತೈಲ ಒಂದಕ್ಕೊಂದು ಮಿಶ್ರಣವಾಗುವುದಿಲ್ಲ.’ ಮೇ 12, 2018ರ ವಿಧಾನಸಭಾ ಚುನಾವಣೆಗೆ ಮುಂಚೆ ಕಾಂಗ್ರೆಸ್ ಹಾಗೂ ಜೆಡಿಎಸ್ ತಮ್ಮದೇ ಆದ ರಾಜಕೀಯ ಸಿದ್ಧಾಂತಗಳನ್ನು ಮತ್ತು ಪ್ರಣಾಳಿಕೆಯನ್ನು ಜನರ ಮುಂದೆ ಇಟ್ಟು ಒಬ್ಬರನ್ನೊಬ್ಬರು ಸೋಲಿಸಲು ತಂತ್ರಗಾರಿಕೆಯಲ್ಲಿ ನಿರತರಾದರು. ಅದು ಎಷ್ಟರ ಮಟ್ಟಿಗೆ ತೀವ್ರವಾಗಿತ್ತೆಂದರೆ, ಆಫ್ ಸೆಟ್ ಮುದ್ರಣದಲ್ಲಿ ಬಳಸುವ ನೀರು ಮತ್ತು ತೈಲದಿಂದ ತಯಾರಿ ಸಿದ ಬಣ್ಣ…
ಆಡಳಿತದಲ್ಲಿ ಹಸ್ತಕ್ಷೇಪ ಮಾಡಲ್ಲ
June 17, 2018ರಾಜ್ಯ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರೂ ಆದ ಮಾಜಿ ಸಿಎಂ ಸಿದ್ದರಾಮಯ್ಯ ಕುಮಾರಸ್ವಾಮಿ ‘ಟಚ್’ ಹೇಳಿಕೆ ಅರ್ಥ ಗೊತ್ತಿಲ್ಲ ಮತ್ತೊಂದು ಬಜೆಟ್ನ ಅವಶ್ಯಕತೆ ಇಲ್ಲ ಬೆಂಗಳೂರು: ಸರ್ಕಾರದ ಆಡಳಿತಾತ್ಮಕ ವಿಷಯ ದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಸಮನ್ವಯ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ತಿಳಿಸಿದ್ದಾರೆ. ತಾವು ಮಂಡಿಸಿರುವ 2018-19ನೇ ಸಾಲಿನ ಮುಂಗಡ ಪತ್ರದಲ್ಲಿ ಸಾಕಷ್ಟು ಜನಪರ ಕಾರ್ಯಕ್ರಮಗಳಿದ್ದು, ಅವುಗಳನ್ನೇ ಮುಂದುವರೆಸಬೇಕು. ಒಂದು ವರ್ಷ ನನ್ನನ್ನು ಯಾರೂ…
ದಿನಕ್ಕೊಂದು ಬೇಡಿಕೆ ಮುಂದಿಟ್ಟರೆ ಹ್ಯಾಗೆ!
June 17, 2018ಬೆಂಗಳೂರು: ಕಾಂಗ್ರೆಸ್ ನವರು ಮುಖ್ಯ ಮಂತ್ರಿ ಹೆಚ್.ಡಿ. ಕುಮಾರ ಸ್ವಾಮಿ ಮುಂದೆ ದಿನ ಕ್ಕೊಂದು ಬೇಡಿಕೆ ಇಟ್ಟರೆ, ಸಮ್ಮಿಶ್ರ ಸರ್ಕಾರ 5 ವರ್ಷ ಹ್ಯಾಗೆ ನಡೆಯಲು ಸಾಧ್ಯ ಎಂದು ಮಾಜಿ ಸಚಿವ, ಜೆಡಿಎಸ್ನ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಪ್ರಶ್ನಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರವು ಸುಸೂತ್ರ ವಾಗಿ 5 ವರ್ಷ ಪೂರೈಸಬೇಕಾದರೆ ಕೆಲವು ಹೊಂದಾಣಿಕೆ ಹಾಗೂ ತ್ಯಾಗ ಮನೋಭಾವ ಇರಬೇಕಾಗುತ್ತದೆ ಎಂಬುದನ್ನು ಕಾಂಗ್ರೆಸ್ನವರು ಅರಿತುಕೊಳ್ಳಬೇಕಾಗಿದೆ ಎಂದರು. ವಿಧಾನಸಭೆ ಫಲಿತಾಂಶ ಬರುತ್ತಿ ದ್ದಂತೆಯೇ ನಮ್ಮ…