ಹಾಸನ: ಜೂಜಾಡುತ್ತಿದ್ದ ಹದಿನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಿರುವ ಪೊಲೀಸರು 20 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ. ಹಾಸನದ ಬೂವನಹಳ್ಳಿ ಸ್ವಾಮಿ(43), ಆದರ್ಶನಗರದ ಸುರೇಶ್(35), ಕುವೆಂಪು ನಗರದ ಶರತ್ಕುಮಾರ್(24), ಮಡೆನೂರು ಪದ್ಮರಾಜ್(39), ಆಡುವಳ್ಳಿ ಮಂಜು (32), ಗುಡ್ಡೇಹಳ್ಳಿ ಕೊಪ್ಪಲು ಗೋಪಾಲ (40), ಸಂತೇಪೇಟೆ ಶ್ರೀಕಾಂತ್(25), ವಲ್ಲಬಾಯಿ ರಸ್ತೆಯ ಸೈಯಾದ್ ಮೀರ್ (46), ಸಿಂಗೇನಹಳ್ಳಿಕೊಪ್ಪಲು ರಘು (33), ಬಸಟಿಕೊಪ್ಪಲು ರಘು(29), ಸತ್ಯಮಂಗಲ ರಮೇಶ್(40), ಶ್ರೀನಗರದ ಕುಮಾರ(34), ದೇವಿನಗರದ ಜಯರಾಂ (35) ಹಾಗೂ ಪೆನ್ಷನ್ ಮೊಹಲ್ಲಾದ ರಮೇಶ್(37) ಬಂಧಿತ ಆರೋಪಿಗಳು. ಮೇ 2ರಂದು…
ಜೆಡಿಎಸ್ ಅಭ್ಯರ್ಥಿ ಶಾಸಕ ಹೆಚ್.ಎಸ್.ಪ್ರಕಾಶ್ ಪರ ಗೌಡರ ಸೊಸೆ ಭವಾನಿ ರೇವಣ್ಣ ನೇತೃತ್ವದಲ್ಲಿ ಬಿರುಸಿನ ಪ್ರಚಾರ
May 3, 2018ಹಾಸನ: ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹೆಚ್.ಎಸ್. ಪ್ರಕಾಶ್ ಪರ ಜಿಪಂ ಸದಸ್ಯೆ ಭವಾನಿ ರೇವಣ್ಣ, ಬೆಂಬಲಿಗರೊಂದಿಗೆ ಇಂದು ನಗರದಲ್ಲಿ ಬಿರುಸಿನ ಪ್ರಚಾರ ನಡೆಸಿದರು. ಮೊದಲು ನಗರದ ಪಾರ್ಕ್ ರಸ್ತೆಯಲ್ಲಿ ರುವ ಶ್ರೀ ಸೀತಾರಾಮಾಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ನೂರಾರು ಮಹಿಳೆಯರೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮತಯಾಚಿಸಿದರು. ಇದೇ ವೇಳೆ ಮಾತ ನಾಡಿದ ಭವಾನಿ ರೇವಣ್ಣ ಅವರು, ಹಾಸನ ಅಭ್ಯರ್ಥಿ ಹೆಚ್.ಎಸ್.ಪ್ರಕಾಶ್ ಪರ ಅವರ ಪತ್ನಿ ಲಲಿತಮ್ಮ ಜೊತೆ ಸೇರಿ ನಗರದಲ್ಲಿರುವ…
ಅತ್ಯಾಚಾರ ಪ್ರಕರಣ ತಡೆಗೆ ಆಗ್ರಹಿಸಿ ಮೆಡಿಕಲ್ ವಿದ್ಯಾರ್ಥಿಗಳಿಂದ ಪ್ರತಿಭಟನೆ
May 3, 2018ಹಾಸನ: ದೇಶದಲ್ಲಿ ನಡೆಯು ತ್ತಿರುವ ಅತ್ಯಾಚಾರ ಪ್ರಕರಣಗಳನ್ನು ತಡೆಗೆ ಸೂಕ್ತ ಕಾನೂನುಗಳನ್ನು ಕೂಡಲೇ ಜಾರಿ ಮಾಡಬೇಕು ಎಂದು ಆಗ್ರಹಿಸಿ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ನಗರದ ಎನ್. ಆರ್.ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ನಗರದ ಎನ್.ಆರ್.ವೃತ್ತದಲ್ಲಿ ಜಮಾ ಯಿಸಿ ರಸ್ತೆಯಲ್ಲೇ ಕುಳಿತು ಪ್ರತಿಭಟಿಸುವ ಮೂಲಕ ಆಕ್ರೋಶ ವ್ಯಕ್ತ ಪಡಿಸಿದರು. ಅತ್ಯಾಚಾರಿಗಳನ್ನು ಗುರುತಿಸಿ ನ್ಯಾಯಾ ಲಯವು ಶೀಘ್ರದಲ್ಲಿ ಅವರಿಗೆ ಶಿಕ್ಷೆ ಕೊಡ ಬೇಕು. ಪೊಲೀಸ್ ಇಲಾಖೆ ಕೂಡ ಈ ಬಗ್ಗೆ ಹೆಚ್ಚಿನ ಗಮನ ಕೊಟ್ಟು ಅವರನ್ನು ಬಂಧಿಸಬೇಕು. ಸಹಾಯವಾಣ 1091 ಬೆಂಗಳೂರಿನಲ್ಲಿ…
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ ಹಾಸನ ಜಿಲ್ಲೆಗೆ 8ನೇ ಸ್ಥಾನ
May 1, 2018ಹಾಸನ: 2018ರ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಜಿಲ್ಲೆಯ 13,682 ವಿದ್ಯಾರ್ಥಿಗಳಲ್ಲಿ 10,107 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಜಿಲ್ಲೆಯ ಶೇಕಡಾವಾರು ಫಲಿತಾಂಶವು ಪ್ರತಿಶತ ಶೇ.73.87 ರೊಂದಿಗೆ ರಾಜ್ಯ ದಲ್ಲಿ ಜಿಲ್ಲೆಯು 8ನೇ ಸ್ಥಾನದಲ್ಲಿದೆ. 2017ನೇ ಸಾಲಿನಲ್ಲಿ ಶೇ.59.88 ಫಲಿತಾಂಶದೊಂದಿಗೆ ರಾಜ್ಯದಲ್ಲಿ 11ನೇ ಸ್ಥಾನದಲ್ಲಿತ್ತು. ಈ ಬಾರಿ ಶೇ.73.87 ಫಲಿ ತಾಂಶದೊಂದಿಗೆ 8ನೇ ಸ್ಥಾನಕ್ಕೇರಿದೆ. ಸಂಯೋಜನೆವಾರು ಫಲಿತಾಂಶದಲ್ಲಿ ಕಲಾ ವಿಭಾಗ 3,406 ವಿದ್ಯಾರ್ಥಿಗಳಲ್ಲಿ 2,263 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.66.44 ಫಲಿತಾಂಶ ಬಂದಿದೆ. ವಾಣ ಜ್ಯ ವಿಭಾಗದಲ್ಲಿ 5,650…
ರೈತನ ಮಗ ಮೋಹನ್ ರಾಜ್ಯಕ್ಕೇ ದ್ವಿತೀಯ
May 1, 2018ಹಾಸನ: ತಾಲೂಕಿನ ಶಾಂತಿ ಗ್ರಾಮದ ರೈತನ ಮಗ ಮಾಸ್ಟರ್ ಪಿಯು ಕಾಲೇಜಿನ ವಿದ್ಯಾರ್ಥಿ ಮೋಹನ್ ದ್ವಿತೀಯ ಪಿಯು ವಿಜ್ಞಾನ ವಿಭಾಗದಲ್ಲಿ 600 ಅಂಕಗಳಿಗೆ 595 ಅಂಕ ಪಡೆಯವ ಮೂಲಕ ರಾಜ್ಯದಲ್ಲಿ 2ನೇ ಪಡೆದಿದ್ದಾನೆ. ರಾಜ್ಯಕ್ಕೆ 2ನೇ ರ್ಯಾಂಕ್ ಗಳಿಸಿರುವ ಮೋಹನ್ ಶಾಂತಿಗ್ರಾಮದ ರೈತ ಲಕ್ಷ್ಮೇಗೌಡ, ಲಕ್ಷ್ಮಿ ದಂಪತಿ ಪುತ್ರ. ಕುಟುಂಬ ಶಾಂತಿಗ್ರಾಮದಲ್ಲಿ ಇದ್ದರೂ ಮೋಹನ್ ಹಾಸನದ ತನ್ನ ಅಜ್ಜಿ ಮನೆ ಯಲ್ಲಿ ಇದ್ದುಕೊಂಡು ಶಿಕ್ಷಣಕ್ಕೆ ಗಮನ ನೀಡಿ ಇಂದು ಶಿಕ್ಷಣ ಸಂಸ್ಥೆ, ಕುಟುಂಬ ಕ್ಕಷ್ಟೆಯಲ್ಲದೆ, ಜಿಲ್ಲೆಗೆ ಕೀರ್ತಿ…
ಮೋಹ, ಲೋಭ ಪಾಪಗಳ ತಾಯಿ-ತಂದೆ
May 1, 2018ಹಾಸನ: ಮೋಹ ಮತ್ತು ಲೋಭವೇ ಎಲ್ಲಾ ಪಾಪಗಳ ತಾಯಿತಂದೆ ಎಂದು ಚಿತ್ರದುರ್ಗದ ಚಿಕ್ಕಕಬ್ಬಿಗೆರೆಯ ಶ್ರೀ ಗುರುಕುಲ ವೇದವಿದ್ಯಾಪೀಠದ ಶ್ರೀ ಲೋಕೇಶ್ವರ ಶಿವಯೋಗಿ ಸ್ವಾಮೀಜಿ ಹೇಳಿದರು. ಆದಿಚುಂಚನಗಿರಿ ಮಹಾಸಂಸ್ಥಾನ ಹಾಸನ ಶಾಖಾ ಮಠದ ವತಿಯಿಂದ ಭಾನುವಾರ ಸಂಜೆ ನಗರದ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ನಡೆದ ‘ಗುರು ತೋರಿದ ದಾರಿ ತಿಂಗಳ ಮಾಮನ ತೇರು’ 57ನೇ ಹುಣ ್ಣಮೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಮೋಹ ಮತ್ತು ಲೋಭದಿಂದ ದೂರವಿರಲು ಧಾರ್ಮಿಕ ಭಾವನೆ ಅಗತ್ಯ ಎಂದರು. ಉದಾರತ್ವವೇ ಮನುಷ್ಯನ ಶ್ರೇಷ್ಠ…
ಹೆಚ್ಡಿಕೆ ಕನಸು ನನಸಾಗಲ್ಲ, ಬಿಜೆಪಿ ಅಧಿಕಾರಕ್ಕೆ ಬರಲ್ಲ ಇಂಧನ ಸಚಿವ ಡಿ.ಕೆ. ಶಿವಕುಮಾರ್
April 30, 2018ಹಾಸನ: ಈ ಬಾರಿಯ ವಿಧಾನಸಭಾ ಚುನಾವಣೆ ಯಲ್ಲಿ 132 ಸ್ಥಾನದೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದ್ದು, ಹೆಚ್.ಡಿ.ಕುಮಾರಸ್ವಾಮಿ ಸಿಎಂ ಆಗುವ ಕನಸು ನನಸಾಗು ವುದಿಲ್ಲ, ಬಿಜೆಪಿಯಂತೂ ಅಧಿಕಾರಕ್ಕೆ ಬರುವುದಿಲ್ಲ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಭವಿಷ್ಯ ನುಡಿದರು. ನಗರದ ಅರಳೇಪೇಟೆ ರಸ್ತೆಯಲ್ಲಿರುವ ಶ್ರೀ ಬಸವೇಶ್ವರ ದೇವಾಲಯದ ಆವರಣದಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, 2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 132 ಸ್ಥಾನ ಗೆಲ್ಲುವುದು ಖಚಿತವಾಗಿದ್ದು, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸಿಎಂ ಆಗುವ ಕನಸು ಕಾಣುವುದು ತಪ್ಪುವುದಿಲ್ಲ. ಹಾಗೇ…
ಹಾಲಿನ ಲಾರಿಗಳಲ್ಲಿ ಹಣ, ಮದ್ಯ ಸಾಗಿಸಿದ್ದರೆ ದೂರು ನೀಡಲಿ ಬಾಗೂರು ಮಂಜೇಗೌಡ ವಿರುದ್ಧ ಹೆಚ್.ಡಿ.ರೇವಣ್ಣ ಆಕ್ರೋಶ
April 28, 2018ಹಾಸನ: ನಾನು ಹಾಲಿನ ಲಾರಿಗಳಲ್ಲಿ ಹಣ, ಮದ್ಯ ಸಾಗಿಸುತ್ತಿದ್ದರೆ ಚುನಾವಣಾಧಿಕಾರಿಗಳಿಗೆ ದೂರು ನೀಡಲಿ ಎಂದು ಹೊಳೆನರಸೀ ಪುರ ಕಾಂಗ್ರೆಸ್ ಅಭ್ಯರ್ಥಿ ಬಾಗೂರು ಮಂಜೇಗೌಡ ವಿರುದ್ಧ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು. ನಗರದ ಖಾಸಗಿ ಹೋಟೆಲೊಂದರಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಗುರುವಾರ ತಮ್ಮ ಕಾಂಗ್ರೆಸ್ ಅಭ್ಯರ್ಥಿ ಬಾಗೂರು ಮಂಜೇಗೌಡರು ಆರೋಪಗಳನ್ನು ಅಲ್ಲಗೆಳೆದ ರಲ್ಲದೆ, ಬಾಗೂರು ಮಂಜೇಗೌಡ ವಿರುದ್ಧ ಆರೋಪಗಳ ಸುರಿಮಳೆಗೈದರು. ನಾನು ಹಾಲಿನ ಲಾರಿಗಳಲ್ಲಿ ಹಣ, ಮದ್ಯ ಸಾಗಿಸುತ್ತಿದ್ದರೆ. ಚುನಾವಣಾಧಿಕಾರಿಗಳಿಗೆ ದೂರು ನೀಡಲಿ. ಎಲ್ಲಾ ಹಾಲಿನ ವಾಹನಗಳನ್ನೂ ತಪಾಸಣೆ…
ಕಣದಲ್ಲಿ 53 ಅಭ್ಯರ್ಥಿಗಳು ಚುನಾವಣೆ: ಹಿಂದೆ ಸರಿದ 19 ಮಂದಿ
April 28, 2018ಹಾಸನ: ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಿಂದ ನಾಮಪತ್ರ ಸಲ್ಲಿಸಿ ಊರ್ಜಿತಗೊಂಡಿದ್ದ 72 ಉಮೇದುವಾರರ ಪೈಕಿ 19 ಮಂದಿ ನಾಮಪತ್ರ ಹಿಂಪಡೆದ್ದು, ಅಂತಿಮವಾಗಿ 53 ಮಂದಿ ಕಣದಲ್ಲಿದ್ದಾರೆ. ಜಿಲ್ಲೆಯಲ್ಲಿ 7 ವಿಧಾನಸಭಾ ಕ್ಷೇತ್ರಗಳಲ್ಲಿ 86 ಮಂದಿಯಿಂದ ಒಟ್ಟು 129 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಇವುಗಳಲ್ಲಿ 16 ನಾಮಪತ್ರ ತಿರಸ್ಕøತ ಗೊಂಡಿದ್ದು, 72 ಮಂದಿಯ ನಾಮಪತ್ರವು ಪುರಸ್ಕøತಗೊಂಡಿವೆ. ಕ್ಷೇತ್ರವಾರು ವಿವರ: ಹಾಸನ ವಿಧಾನಸಭಾ ಕ್ಷೇತ್ರದಿಂದ 13 ನಾಮಪತ್ರಗಳೂ ಕ್ರಮಬದ್ಧವಾಗಿದ್ದು, 13 ಮಂದಿ ಯೂ ಕಣದಲ್ಲಿದ್ದಾರೆ. ಶ್ರವಣಬೆಳಗೊಳ ವಿಧಾನ ಸಭಾ ಕ್ಷೇತ್ರದಲ್ಲಿ 5…
ಹಾಸನದ ಎಲ್ಲಾ ಕ್ಷೇತ್ರದಲ್ಲೂ ಕಾಂಗ್ರೆಸ್ಗೆ ಗೆಲುವು ಸಚಿವ ಎ.ಮಂಜು ವಿಶ್ವಾಸ
April 27, 2018ಮೈಸೂರು: ಹೊಳೆನರಸೀಪುರದ ಕಾಂಗ್ರೆಸ್ ಅಭ್ಯರ್ಥಿ ಬಾಗೂರು ಮಂಜೇಗೌಡ, ಜೆಡಿಎಸ್ ವಿರುದ್ಧ ಮಾಡಿರುವ ಆರೋಪವನ್ನು ಸಮರ್ಥಿಸಿಕೊಂಡ ಸಚಿವ ಎ.ಮಂಜು, ನಾನೂ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇನೆ ಎಂದು ತಿಳಿಸಿದರು. ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲ ಲ್ಲಿರುವ ಸುತ್ತೂರು ಮಠದಲ್ಲಿ ಶ್ರೀಗಳಿಂದ ಆಶೀರ್ವಾದ ಪಡೆದು, ಕೆಲಕಾಲ ಮಾತು ಕತೆ ನಡೆಸಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಹಾಲಿನ ವಾಹನ ಗಳಲ್ಲಿ ಮದ್ಯ ಸಾಗಿಸುತ್ತಾರೆಂದು ಮಂಜೇ ಗೌಡ ಮಾಡಿರುವ ಆರೋಪದಲ್ಲಿ ಸತ್ಯ ವಿದೆ. ಅರಕಲಗೂಡು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎ.ಟಿ.ರಾಮಸ್ವಾಮಿ ಅವರ ಬೀಗ…