ಹಾಸನ: ವಿದ್ಯಾರ್ಥಿಗಳು ರಾಷ್ಟ್ರೀಯ ಭಾವೈಕ್ಯತೆ ಮತ್ತು ದೇಶ ಪ್ರೇಮವನ್ನು ಬೆಳೆಸಿಕೊಂಡು ಸತ್ಪ್ರಜೆಗಳಾಗಬೇಕು. ದೇಶವಿದ್ದರೆ ಮಾತ್ರ ನಾವು ಇರಲು ಸಾಧ್ಯ ಎಂದು ಶಾಸಕ ಪ್ರೀತಂ ಜೆ.ಗೌಡ ಹೇಳಿದರು. ವಿದ್ಯಾನಗರ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ವಾರ್ಷಿಕೋತ್ಸವ ಮತ್ತು ರಾಷ್ಟ್ರಕವಿ ಕುವೆಂಪುರವರ 114ನೇ ಜನ್ಮ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕುವೆಂಪು ಅವರು ನಾಡು ಕಂಡ ರಾಷ್ಟ್ರ ಪ್ರೇಮಿ, ಶ್ರೇಷ್ಠ ಚಿಂತಕ, ದಾರ್ಶನಿಕ ಕವಿ, ವೈಚಾರಿಕ ಲೇಖಕ. ತಮ್ಮ ಸಾಹಿತ್ಯದಲ್ಲಿ ಅಪಾರ ರಾಷ್ಟ್ರ ಭಕ್ತಿಯನ್ನು ಅಭಿವ್ಯಕ್ತಿಸಿದ್ದಾರೆ. ಅಂತಹವರು ವಿದ್ಯಾರ್ಥಿಗಳಿಗೆ…
ಆನೆ ಹಾವಳಿ ಪೀಡಿತ ಪ್ರದೇಶದಲ್ಲಿ 2 ಹೊಸ ವಸತಿ ಶಾಲೆಗೆ ಪ್ರಸ್ತಾವನೆ ಸಲ್ಲಿಸಲು ಸಚಿವ ರೇವಣ್ಣ ಸೂಚನೆ
January 3, 2019ಹಾಸನ, ಜ.2- ಜಿಲ್ಲೆಯ ಆಲೂರು ಮತ್ತು ಸಕಲೇಶಪುರ ತಾಲೂಕುಗಳ ಆನೆ ಹಾವಳಿ ಪೀಡಿತ ಪ್ರದೇಶಗಳ ಬಾಧಿತ ಮಕ್ಕಳ ಕಲಿಕೆಗೆ ಎರಡು ಹೊಸ ಸುವ್ಯವಸ್ಥಿತ ವಸತಿ ಶಾಲೆ ಪ್ರಾರಂಭಿಸಲು ಪ್ರಸ್ತಾವನೆ ಸಿದ್ಧಪಡಿಸಿ ಸಲ್ಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಕೆಲವು ಇಲಾಖೆಗಳ ಪ್ರಗತಿ ಹಾಗೂ ಯೋಜನಾ ಅನುಷ್ಠಾನ ಕುರಿತು ಪರಿಶೀ ಲನಾ ಸಭೆ ನಡೆಸಿದ ಅವರು, ಮಲೆನಾಡು ಪ್ರದೇಶದಲ್ಲಿ ನಿರಂತರ ಆನೆ ಹಾವಳಿಯಿಂದ ವಿದ್ಯಾರ್ಥಿಗಳಿಗೆ ಆಗುತ್ತಿರುವ ಸಮಸ್ಯೆ ನಿವಾ ರಿಸಿ ಗುಣಮಟ್ಟದ ಶಿಕ್ಷಣ…
‘ಸ್ಪಂದನ’ ತಂತ್ರಾಂಶದಡಿ 3065 ಅರ್ಜಿ ಸ್ವೀಕಾರ
January 1, 20192755 ಅರ್ಜಿ ವಿಲೇವಾರಿ, ತಂತ್ರಾಂಶದ ಪ್ರಯೋಜನ ಪಡೆದ ಕುವೈತ್ ಮಹಿಳೆ ಹಾಸನ, ಡಿ.31- ಹಾಸನ ಜಿಲ್ಲಾ ಸಾರ್ವಜನಿಕ ಕುಂದುಕೊರತೆಗಳ ನಿವಾರಣೆಗಾಗಿ ‘ಸ್ಪಂದನ’ ತಂತ್ರಾಂಶ ವನ್ನು ಜಿಲ್ಲೆಯಲ್ಲಿ 2018ರ ಜ.1ರಿಂದ ರೂಪಿಸಿದ್ದು, ಒಂದು ವರ್ಷ ಅವಧಿಯನ್ನು ಯಶಸ್ವಿಯಾಗಿ ಪೂರೈಸಲಾಗಿದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದ್ದಾರೆ. ಒಂದು ವರ್ಷದ ಅವಧಿಯಲ್ಲಿ ಸಾರ್ವಜನಿಕರಿಂದ 3065 ಅರ್ಜಿಗಳು ಸ್ವೀಕೃತವಾಗಿರುತ್ತದೆ. ಸ್ವೀಕೃತವಾದ ಅರ್ಜಿಗಳಲ್ಲಿ 2755 ಅರ್ಜಿಗಳನ್ನು ವಿಲೇವಾರಿ ಮಾಡ ಲಾಗಿದೆ. ವರ್ಷಾಂತ್ಯಕ್ಕೆ 310 ಅರ್ಜಿಗಳು ಬಾಕಿ ಇದ್ದು, ಇವುಗಳನ್ನು ನಿಗದಿತ ಕಾಲಾವಧಿಯೊಳಗೆ ವಿಲೇವಾರಿಗೆ…
ಗ್ರಾಮೀಣರ ಆರ್ಥಿಕ ಅಭಿವೃದ್ಧಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಕಾರಿ
January 1, 2019ಅರಸೀಕೆರೆ: ಗ್ರಾಮೀಣ ಜನರ ಅರ್ಥಿಕ ಅಭಿವೃದ್ಧಿಗೆ ಬೆನ್ನುಲುಬಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಕಾರಿಯಾಗಿದ್ದು, ಅದರ ಯೋಜನೆ ಗಳನ್ನು ಸದುಪಯೋಗ ಮಾಡಿಕೊಂಡು ಜೀವನವನ್ನು ಹಸನಾಗಿ ಮಾಡಿಕೊಳ್ಳಬೇಕು ಎಂದು ಯಳನಾಡು ಶ್ರೀ ಜ್ಞಾನಪ್ರಭು ಸಿದ್ದ ರಾಮ ದೇಶಿಕೇಂದ್ರ ಸ್ವಾಮಿ ಹೇಳಿದರು. ಗ್ರಾಮಾಭಿವೃದ್ಧಿಗಾಗಿ ಅರಸೀಕೆರೆಯಲ್ಲಿ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿ ವೃದ್ಧಿ ಯೋಜನೆಯ ಕಸಬಾ ವಲಯದ ವತಿಯಿಂದ ನಡೆಸಲಾದ ತಾಲೂಕಿನ ಕಡೆಯ ಸಾಮೂಹಿಕ ಸತ್ಯನಾರಾಯಣ ಪೂಜೆಯ ನಂತರ ಧಾರ್ಮಿಕ ಸಭೆಯಲ್ಲಿ ಆಶೀರ್ವ ಚನ ನೀಡಿದ ಅವರು, ಗ್ರಾಮಗಳ…
ಶಿಕ್ಷಣದಿಂದ ಮಾತ್ರ ಮನುಷ್ಯ ಸಂಸ್ಕಾರವಂತನಾಗಲು ಸಾಧ್ಯ
January 1, 2019ಬೇಲೂರು, ಡಿ.31- ಮನುಷ್ಯ ಪರಿ ಪೂರ್ಣ ಸಂಸ್ಕಾರವಂತನಾಗಬೇಕಾದರೆ ಶಿಕ್ಷಣದಿಂದ ಮಾತ್ರ ಸಾದ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನಟರಾಜ್ ತಿಳಿಸಿದರು. ಪಟ್ಟಣದ ನಿಡಗೋಡು ಸಮೀಪದ ಯುನೈಟೆಡ್ ಅಕಾಡೆಮಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಾರ್ಷಿಕೊತ್ಸವದ ಅಂಗ ವಾಗಿ ಏರ್ಪಡಿಸಿದ್ದ ‘ನರ್ತನ – 2018’ ಸಮಾರಂಭದಲ್ಲಿ ಮಾತನಾಡಿದ ಅವರು, ಮಾನವನಿಗೆ ಮೂಲಭೂತ ಅವಶ್ಯಕತೆಗಳ ಜೊತೆ ಶಿಕ್ಷಣವೂ ಬಹುಮುಖ್ಯವಾಗಿದೆ. ಶಿಕ್ಷಣದ ಮಹತ್ವವನ್ನು ಅರಿತಿರುವ ಸರ್ಕಾರ ಗಳು ಮಕ್ಕಳಿಗೆ ಉಚಿತ ಕಡ್ಡಾಯ ಶಿಕ್ಷಣ ವನ್ನು ಜಾರಿಗೆ ತಂದಿದೆ. ಹಲವಾರು ಮಠ ಮಾನ್ಯಗಳು ಮಕ್ಕಳಿಗೆ ಉಚಿತವಾಗಿ…
ಕಾಫಿ ಬೆಳೆಗಾರರ ನಿಯೋಗದಿಂದ ಕೇಂದ್ರ ಸಚಿವ ಸುರೇಶ್ಪ್ರಭು ಭೇಟಿ ಸಮಸ್ಯೆ ಬಗ್ಗೆ ಸುದೀರ್ಘ ಚರ್ಚೆ
January 1, 2019ಹಾಸನ, ಡಿ.31- ಕಾಫಿ ಬೆಳೆಗಾರರ ಸಮಸ್ಯೆ ಬಗ್ಗೆ ವಿಶೇಷ ಕಾಳಜಿವಹಿಸಿ ಬಗೆ ಹರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಕೇಂದಕ್ಕೆ ನಿಯೋಗ ಕರೆ ದೊಯ್ದು ಸುದೀರ್ಘ ಚರ್ಚೆ ಮಾಡಲು ಅವಕಾಶ ನೀಡಿದ ಕಾರಣಕರ್ತರಾದ ವರಿಗೆ ಕರ್ನಾಟಕ ರಾಜ್ಯ ಕಾಫಿ ಬೆಳೆ ಗಾರರ ಒಕ್ಕೂಟದ ವತಿಯಿಂದ ಅಭಿ ನಂದನೆ ಸಲ್ಲಿಸುವುದಾಗಿ ಸಂಘದ ಅಧ್ಯಕ್ಷ ಬಿ.ಎಸ್.ಜಯರಾಂ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಡಿ.26ರಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಮಾಜಿ ಪ್ರಧಾನಿ ಮತ್ತು ಜಿಲ್ಲೆಯ ಸಂಸದ ಹೆಚ್.ಡಿ.ದೇವೇ ಗೌಡ, ಸಚಿವ ಹೆಚ್.ಡಿ.ರೇವಣ್ಣ ಮತ್ತು…
ಗ್ರಾಹಕರ ಹಿತದೃಷ್ಟಿಯಲ್ಲಿ ವ್ಯವಹಾರ ನಡೆಸಿ ವರ್ತಕರಿಗೆ ಎಸ್ಪಿ ಪ್ರಕಾಶ್ ಗೌಡ ಕಿವಿಮಾತು
January 1, 2019ಹಾಸನ: ಸಗಟು ವ್ಯಾಪಾರಿಗಳು ಕೇವಲ ವ್ಯಾಪಾರಿ ಮನೋಭಾವದ ಹಿನ್ನೆಲೆ ಯಲ್ಲಿ ವ್ಯವಹಾರ ನಡೆಸದೆ ರೈತರು ಹಾಗೂ ಗ್ರಾಹಕರನ್ನು ಹಿತದೃಷ್ಟಿಯಲ್ಲಿ ಇಟ್ಟುಕೊಂಡು ವ್ಯವಹಾರ ನಡೆಸುವ ಅಗತ್ಯವಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ಗೌಡ ಕಿವಿಮಾತು ಹೇಳಿದರು. ನಗರದ ಎಪಿಎಂಸಿ ಆವರಣದಲ್ಲಿ ಸಗಟು ತರಕಾರಿ ವರ್ತಕರ ಸಂಘ ಹಾಗೂ ಕಟ್ಟಿನಕೆರೆ ಮಾರುಕಟ್ಟೆ ತರಕಾರಿ ವರ್ತಕರ ಸಂಘ ಜಂಟಿಯಾಗಿ ಏರ್ಪಡಿಸಿದ್ದ 4ನೇ ವರ್ಷದ ವಾರ್ಷಿಕೋತ್ಸವದ ನಿಮಿತ್ತ 2019ರ ಕಾಲೆಂಡರ್ ಬಿಡುಗಡೆ ಮಾಡಿ ಮಾತ ನಾಡುತ್ತಿದ್ದ ಅವರು, ರೈತರು ಈ ದೇಶದ…
ಸಮಾಜದ ಕೊಳೆ ಕಿತ್ತೊಗೆಯಲು ಶ್ರಮಿಸಿದ ಅಂಬೇಡ್ಕರ್
December 31, 2018`ಭೀಮಕಾವ್ಯ ನಮನ’ ಕಾರ್ಯಕ್ರಮದಲ್ಲಿ ಲೇಖಕಿ ಧಾರವಾಡದ ಡಾ.ವಿನಯ ಒಕ್ಕುಂದ ಅಭಿಮತ ಹಾಸನ: ಡಾ.ಬಿ.ಆರ್.ಅಂಬೇಡ್ಕರ್ ರವರು ದಲಿತರ ನಾಯಕರಲ್ಲ. ಪ್ರಾಚೀನ ಭಾರತದ ಸಮಾಜದ ಪಾಪದ ಕೊಳೆ ಯನ್ನು ಕಿತ್ತೊಗೆಯಲು ಶ್ರಮಿಸಿದ ನಾಯಕ ಎಂದು ಲೇಖಕಿ, ಕವಯತ್ರಿ ಧಾರವಾಡದ ಡಾ.ವಿನಯ ಒಕ್ಕುಂದ ಹೇಳಿದರು. ನಗರದ ಅರಳೀಕಟ್ಟೆ ವೃತ್ತದ ಬಳಿ ಇರುವ ಸಂಸ್ಕøತ ಭವನದಲ್ಲಿ ಸಾವಿತ್ರಿ ಬಾಯಿ ಫುಲೆ ಸಾಂಸ್ಕತಿಕ ಮಹಿಳಾ ಸಂಘ, ಮಾಣಿಕ ಪ್ರಕಾಶನ, ನಾಗಭೂಮಿ ವಿವಿಧೋದ್ದೇಶ ಅಭಿವೃದ್ಧಿ ಸಂಸ್ಥೆ ಹಾಗೂ ಬಾಂಧವ್ಯ ಲೋಕ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪರಿನಿಬ್ಬಾಣ…
ಶ್ರೀ ಪುಷ್ಪದಂತ ಸಾಗರ ಮಹಾರಾಜರ ಜಯಂತಿ
December 31, 2018ಶ್ರವಣಬೆಳಗೊಳ, ಡಿ.30- 21ನೇ ಶತ ಮಾನದಲ್ಲಿಯೂ ಮುನಿಗಳಿಂದ ಪ್ರಾಚೀನ ಪರಂಪರೆಯಿಂದ ಧರ್ಮ ಪ್ರಭಾವನೆ ಮಾಡಲು ಸಾಧ್ಯವಿದೆ ಎಂದು ತೋರಿಸಿಕೊಟ್ಟ ವರು ಆಚಾರ್ಯ ಶ್ರೀ ಪುಷ್ಪದಂತ ಸಾಗರ ಮಹಾರಾಜರು ಎಂದು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು. ಜೈನಕಾಶಿ ಶ್ರವಣಬೆಳಗೊಳದ ಚಾವುಂಡ ರಾಯ ಸಭಾಮಂಟಪದಲ್ಲಿ ನಡೆದ ಆಚಾರ್ಯ ಶ್ರೀ ಪುಷ್ಪದಂತ ಸಾಗರ ಮಹಾರಾಜರ 65ನೇ ಜನ್ಮಜಯಂತಿ ಮಹೋತ್ಸವದಲ್ಲಿ ಮಾತನಾಡಿ, ಕ್ರಾಂತಿಕಾರಿ ಸಂತ ಮುನಿಶ್ರೀ ತರುಣ ಸಾಗರ ಮಹಾರಾಜರಂತಹ ಅನೇಕ ಮುನಿಗಳಿಗೆ ದೀಕ್ಷೆ ನೀಡಿ ಉತ್ತಮ ವಿದ್ಯಾ ಭ್ಯಾಸ, ಚಾರಿತ್ರ್ಯವನ್ನು…
ಹುನುಗನಹಳ್ಳಿ ಗ್ರಾಪಂ ಉಪಾಧ್ಯಕ್ಷರಾಗಿ ಹೇಮಾವತಿ ಸೋಮೇಶ್
December 31, 2018ಬೇಲೂರು, ಡಿ.30- ಹುನುಗನಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮಾಡಗೋಡು ಗ್ರಾಮದ ಹೇಮಾವತಿ ಸೋಮೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ತಾಲೂಕಿನ ಅರೇಹಳ್ಳಿ ಹೋಬಳಿ ಹುನುಗನಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿದ್ದ ಸವಿತಾ ಅವರ ರಾಜೀ ನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಮಾಡಗೋಡು ಗ್ರಾಮದ ಹೇಮಾವತಿ ಸೋಮೇಶ್ ಒಬ್ಬರೇ ನಾಮಪತ್ರ ಸಲ್ಲಿಸಿ ದ್ದರಿಂದ, ಅವರು ಉಪಾಧ್ಯಕ್ಷರಾಗಿ ಅವಿ ರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿದ್ದ ತಾಪಂ ಇಒ ರವಿಕುಮಾರ್ ಘೋಷಿಸಿದರು. ಈ ವೇಳೆ ಮಾತನಾಡಿದ ಹೇಮಾವತಿ ಸೋಮೇಶ್, ನಮ್ಮ ಗ್ರಾಪಂ ವ್ಯಾಪ್ತಿಯ…