ಹಾಸನ: 20 ವರ್ಷಕ್ಕಿಂತ ಹೆಚ್ಚು ಕೆಲಸ ಮಾಡಿದವ ರನ್ನು ಕಡೆಗಣಿಸುವ ಮೂಲಕ ಅರ್ಹತೆ ಇರುವ ಹಿರಿಯ ಪೌರಕಾರ್ಮಿಕರಿಗೆ ಅನ್ಯಾಯ ಎಸಗಲಾಗಿದೆ ಎಂದು ಪೌರಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದಿಂದ ಕಾರ್ಮಿಕರು ಜಿಲ್ಲಾಧಿಕಾರಿ ಕಚೇರಿ ಮತ್ತು ನಗರಸಭೆ ಮುಂದೆ ಪ್ರತಿಭಟನೆ ನಡೆಸಿದರು. ನಗರಸಭೆಯಲ್ಲಿ ಖಾಲಿ ಇರುವ ಪೌರ ಕಾರ್ಮಿಕ ಹುದ್ದೆಗಳ ನೇಮಕಾತಿ ಸಂಬಂಧ 27 ಜನರ ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡು ಗಡೆಯಾಗಿದ್ದು, 20 ವರ್ಷಕ್ಕಿಂತ ಹೆಚ್ಚು ಕೆಲಸ ಮಾಡಿದವರನ್ನು ಕಡೆಗಣಿಸಿ ಹಿರಿ ಯರನ್ನು ಕೈ ಬಿಡುವ ಮೂಲಕ ಅನ್ಯಾಯ ಎಸಗಲಾಗಿದ್ದು,…
ಪೌರಕಾರ್ಮಿಕನನ್ನು ಮ್ಯಾನ್ಹೋಲ್ಗೆ ಇಳಿಸಿ ಸ್ವಚ್ಛತೆ: ಬೇಲೂರು ಪುರಸಭಾ ಅಧಿಕಾರಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶ
November 23, 2018ಬೇಲೂರು: ಸುಪ್ರೀಂ ಕೋರ್ಟ್ ಮತ್ತು ರಾಜ್ಯ ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಪೌರಕಾರ್ಮಿಕರನ್ನು ಮ್ಯಾನ್ ಹೋಲ್ಗೆ ಇಳಿಸಿ ಸ್ವಚ್ಛತೆ ಮಾಡಿರುವ ಪ್ರಕರಣ ಇಲ್ಲಿನ ಪುರಸಭೆಯಲ್ಲಿ ನಡೆದಿದೆ. ಪುರಸಭೆ ಮುಖ್ಯಾಧಿಕಾರಿ ಎಸ್.ಎಸ್. ಮಂಜುನಾಥ್ ಅವರ ಸೂಚನೆಯ ಮೇರೆಗೆ ಆರೋಗ್ಯಾಧಿಕಾರಿ ಎಸ್.ವೆಂಕಟೇಶ್ ಪೌರ ಕಾರ್ಮಿಕರನ್ನು ಮ್ಯಾನ್ಹೋಲ್ಗೆ ಇಳಿಸಿ ಸ್ವಚ್ಛಗೊಳಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಪಟ್ಟಣದ ನೆಹರು ನಗರ ಬಡಾವಣೆಯ ಈಶ್ವರ ದೇವ ಸ್ಥಾನದ ಸಮೀಪವಿರುವ ಮ್ಯಾನ್ ಹೋಲ್ನಲ್ಲಿ ಪೌರರ್ಕಾಮಿಕರನ್ನು ಇಳಿಸಿ ಸ್ವಚ್ಛಗೊಳಿಸಲಾಗಿದೆ. ಮ್ಯಾನ್ ಹೋಲ್ ಸ್ವಚ್ಛಗೊಳಿಸುವಾಗ ಪೌರ ಕಾರ್ಮಿಕ ಯಾವುದೇ…
ಸಚಿವ ರೇವಣ್ಣರ ಮಲತಾಯಿ ಧೋರಣೆ ಪ್ರಶ್ನಿಸದ ಶಾಸಕ ಶಿವಲಿಂಗೇಗೌಡ ತಾಲೂಕು ಬಿಜೆಪಿ ಅಧ್ಯಕ್ಷ ಜಿ.ವಿ.ಟಿ.ಬಸವರಾಜು ಆರೋಪ
November 23, 2018ಅರಸೀಕೆರೆ: ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣನವರ ಅರಸೀ ಕೆರೆ ಕ್ಷೇತ್ರದ ಮಲತಾಯಿ ಧೊರಣೆಯನ್ನು ಪ್ರಶ್ನಿಸಲಾಗದ ಶಾಸಕ ಕೆ.ಎಂ.ಶಿವಲಿಂಗೇ ಗೌಡ ಮೂಕ ಪ್ರೇಕ್ಷಕರಾಗಿ ಕೈ ಕಟ್ಟಿ ಕುಳಿತಿದ್ದಾರೆ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಜಿ.ವಿ.ಟಿ ಬಸವರಾಜು ನೇರ ಆರೋಪ ಮಾಡಿದರು. ನಗರದಲ್ಲಿ ಬುಧವಾರದಂದು ಏರ್ಪಡಿ ಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾ ಡಿದ ಅವರು, ಇತ್ತೀಚೆಗೆ ನಡೆದ ರಾಜ್ಯ ಸಂಪುಟ ಸಭೆಯಲ್ಲಿ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಮೊಸಳೆ ಹೊಸಹಳ್ಳಿಯಲ್ಲಿ ಎಂಜಿನಿಯ ರಿಂಗ್ ಕಾಲೇಜನ್ನು ಸ್ಥಾಪನೆ ಮಾಡಲು ನಿರ್ಧಾರ ಮಾಡಲಾಗಿದೆ….
ಎತ್ತಿನಹೊಳೆ ಯೋಜನೆ ಕಾಮಗಾರಿ ವಿರುದ್ಧ ರೈತ ಸಂಘದಿಂದ ಪ್ರತಿಭಟನೆ
November 23, 2018ಹಾಸನ: ಭೂಮಿ ಮೌಲ್ಯಮಾಪನ ಮಾಡದೇ ರೈತರನ್ನು ವಂಚಿಸಿ ಎತ್ತಿನಹೊಳೆ ಯೋಜನೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಖಂಡಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು. ನಗರದ ತಣ್ಣೀರುಹಳ್ಳದಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಸಂತೇ ಪೇಟೆ, ಬಿ.ಎಂ. ರಸ್ತೆ ಹಾಗೂ ಎನ್.ಆರ್. ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಬಂದ ಅವರು, ಕಳೆದ 10 ವರ್ಷಗಳಿಂದ ಭೂಮಿ ಮೌಲ್ಯಮಾಪನ ಮಾಡದೆ ರೈತರನ್ನು ವಂಚಿಸಿ, ಯಾವುದೇ ಪರಿಹಾರ ನೀಡದೆ ಎತ್ತಿನ ಹೊಳೆ ಯೋಜನೆ…
ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಬಿಜೆಪಿ ಪ್ರತಿಭಟನೆ
November 22, 2018ರೈತರ ಬಗ್ಗೆ ಹಗುರ ಮಾತಿಗೆ ತೀವ್ರ ಖಂಡನೆ, ಕಬ್ಬು ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಆಗ್ರಹ ಹಾಸನ: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ರಾಜ್ಯದ ರೈತರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ನಗರದಲ್ಲಿ ಬುಧವಾರ ಬಿಜೆಪಿ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಯಿತು.ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸಮಾ ವೇಶಗೊಂಡ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಕುಮಾರಸ್ವಾಮಿ ಅವರ ವಿರುದ್ಧ ಘೋಷಣೆ ಕೂಗಿದರು. ರೈತರ ಮಗ ಎಂದು ಅಧಿಕಾರಕ್ಕೆ ಬಂದ ಹೆಚ್.ಡಿ.ಕುಮಾರಸ್ವಾಮಿ ಅವರು ರಾಜ್ಯದ ರೈತರ ಬಗ್ಗೆ ಹಗುರವಾಗಿ ಮಾತನಾಡಿ…
ಪುಸ್ತಕ ಬದುಕು ಕಟ್ಟಿಕೊಡುತ್ತದೆ: ಚಂದ್ರಕಾಂತ್ ಪಡೆಸೂರು
November 22, 2018ಹಾಸನ: ಒಳ್ಳೆಯ ಪುಸ್ತಕಗಳು ಮನುಷ್ಯನ ಬದುಕು ಕಟ್ಟಿಕೊಡುತ್ತದೆ ಎಂದು ಸಾಹಿತಿ ಚಂದ್ರಕಾಂತ್ ಪಡೆಸೂರು ಹೇಳಿದರು. ನಗರದ ಕೇಂದ್ರ ಗ್ರಂಥಾಲಯ ಆವರಣ ದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಅಂಗವಾಗಿ ಮಂಗಳವಾರ ಬೆಳಿಗ್ಗೆ ನಡೆದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದÀರು. ಕಂಪ್ಯೂಟರ್, ಮೊಬೈಲ್ ಮತ್ತು ಇಂಟರ್ ನೆಟ್ ಕಂಡು ಹಿಡಿದಿದ್ದು ಮಾನವನ ಮೆದುಳು. ಎಲ್ಲಾ ತಂತ್ರಜ್ಞಾನದ ತಾಯಿ ನಮ್ಮ ಮೆದುಳು ಆಗಿರುವುದರಿಂದ ಮೆದುಳನ್ನು ಎಂದು ನಿರ್ಲಕ್ಷ್ಯ ಮಾಡಬಾರದು. ಶಿಕ್ಷಕರು ಮತ್ತು ಪೋಷಕರು ಆದಷ್ಟು ಮಕ್ಕಳ ಮೆದುಳಿಗೆ ತರಬೇತಿ ಕೊಡುವ ಕೆಲಸ ಮಾಡಬೇಕು…
ಜಿಲ್ಲೆಯಲ್ಲಿ ಸಂಭ್ರಮದ ‘ಈದ್ ಮಿಲಾದ್’
November 22, 2018ಹಾಸನ: ಜಿಲ್ಲೆಯ ಹಾಸನ, ಬೇಲೂರು, ಅರಸೀಕೆರೆ ಸೇರಿದಂತೆ ವಿವಿಧೆಡೆ ಮುಸ್ಲಿಂ ಬಾಂಧವರು ಸಂಭ್ರಮ- ಸಡಗರದಿಂದ ಬುಧವಾರ ಈದ್ ಮಿಲಾದ್ ಆಚರಿಸಿದರು. ಮೆರವಣಿಗೆ: ಈದ್ ಮಿಲಾದ್ ಆಚ ರಣೆಯ ಅಂಗವಾಗಿ ಬುಧವಾರ ಸಂಜೆ ನಗರದ ಹಳೆ ಮಟನ್ ಮಾರ್ಕೆಟ್ ವೃತ್ತ ದಿಂದ ಹೊರಟ ಮೆರವಣಿಗೆಯಲ್ಲಿ ಮುಸ್ಲಿಂ ಬಾಂಧವರು ಘೋಷಣೆ ಮೂಲಕ ಸಾಗಿದರು. ಇಸ್ಲಾಂ ಜಿಂದಾಬಾದ್, ಟಿಪ್ಪು ಸುಲ್ತಾನ್ಗೆ ಜೈಕಾರ ಸೇರಿದಂತೆ ವಿವಿಧ ಘೋಷಣೆ ಗಳು ಮೆರವಣಿಗೆಯ ಅಲ್ಲಲ್ಲಿ ಕೂಗುತ್ತಿ ದ್ದುದು ಸಾಮಾನ್ಯವಾಗಿತ್ತು. ಟಿಪ್ಪು ಸೇನೆ ಬಾವುಟ, ಟೋಪಿ, ವೇಷಧಾರಿಗಳು…
ದ್ವಿಚಕ್ರ ವಾಹನ ಕಳ್ಳರ ಬಂಧನ: 15 ಬೈಕ್, 200 ಗ್ರಾಂ ಚಿನ್ನ, 200 ಗ್ರಾಂ ಬೆಳ್ಳಿ ವಶ
November 22, 2018ಹಾಸನ: ದ್ವಿಚಕ್ರ ವಾಹನ ಕಳ್ಳತನ ಜತೆಗೆ ಮನೆಗಳ್ಳತನ ಮಾಡುತ್ತಿದ್ದ ಆರೋಪಿ ಗಳಿಬ್ಬರನ್ನು ಬಂಧಿಸಿ, ಅವರಿಂದ 20 ಲಕ್ಷ ರೂ. ಮೌಲ್ಯದ ಬೈಕ್ಗಳು ಹಾಗೂ ಚಿನ್ನಾಭರಣ ಗಳನ್ನು ಚನ್ನರಾಯಪಟ್ಟಣ ನಗರ ಠಾಣೆಯ ಪೆÇಲೀಸರು ವಶಪಡಿಸಿಕೊಡಿದ್ದಾರೆ. ಇಲ್ಲಿನ ಕೃಷ್ಣ ನಗರದ ನಿವಾಸಿ ಆಟೋ ಚಾಲಕ ಸಾದಿಕ್ ಪಾಷಾ ಅಲಿಯಾಸ್ ಅಡ್ಡು(20) ಮತ್ತು ಸಾಲಗಾಮೆಯ ಆಲದಹಳ್ಳಿ ನಿವಾಸಿ ಟ್ರಾಕ್ಟರ್ ಚಾಲಕ ರಾಕೇಶ್ ಅಲಿಯಾಸ್ ರಾಕಿ(21) ಬಂಧಿತ ಆರೋಪಿಗಳು. ಇವರಿಂದ 15 ದ್ವಿಚಕ್ರ ವಾಹನ ಹಾಗೂ 200 ಗ್ರಾಂ ಚಿನ್ನ ಜೊತೆಗೆ 200…
ಫಸಲ್ ಬಿಮಾ ಯೋಜನೆಯ ಲೋಪದೋಷ ಕುರಿತ ಅಧಿಕಾರಿಗಳ ಸಭೆ ನ.30 ರೊಳಗೆ ಬೆಳೆ ವಿಮೆ ಮಾಡಿಸಲು ಶಾಸಕರ ಸಲಹೆ
November 21, 2018ಅರಸೀಕೆರೆ: ಫಸಲ್ ಬಿಮಾ ಯೋಜನೆಗೆ ಅರ್ಜಿ ಸಲ್ಲಿಸಲು ನ.30 ರಂದು ಕಡೆಯ ದಿನವಾಗಿದ್ದು, ತಾಲೂಕಿನ ಎಲ್ಲಾ ರೈತರು ಅರ್ಜಿ ಸಲ್ಲಿಸಬೇಕು ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಸಲಹೆ ನೀಡಿದರು. ನಗರದ ತಾಲೂಕು ಪಂಚಾಯಿತಿ ಸಭಾಂ ಗಣದಲ್ಲಿ ಮಂಗಳವಾರ ಕೃಷಿ ಇಲಾಖೆ, ಹಾಸನ ಲೀಡ್ ಬ್ಯಾಂಕ್, ತಾಪಂ ಮತ್ತು ಕಂದಾಯ ಇಲಾಖೆ ಅಧಿಕಾರಿಗಳೊಂ ದಿಗೆ ನಡೆಸಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ರಾಜ್ಯದಲ್ಲಿ ಬಯಲು ಸೀಮೆಗೆ ಬರದ ಛಾಯೆ ಬಡಿದು ತಾಂಡವಾಡುತ್ತಿದೆ. ಅದ ರಲ್ಲೂ ಕ್ಷೇತ್ರದ ರೈತರು ಮಳೆಯೂ ಇಲ್ಲದೇ,…
ಹೆಚ್ಡಿಕೆ ರಾಜ್ಯದ ಜನತೆ ಕ್ಷಮೆ ಯಾಚಿಸಲು ಆಗ್ರಹ
November 21, 2018ಬೇಲೂರು: ರೈತ ಮುಖಂಡ ರನ್ನು ಗೂಂಡಾಗಳೆಂದು ಹೇಳಿಕೆ ನೀಡಿ, ರೈತ ಮಹಿಳೆಯನ್ನು ನಿಂದಿಸಿರುವುದು ಖಂಡನೀಯ. ಕೂಡಲೇ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರಾಜ್ಯದ ಜನ ತೆಯ ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಕೊರಟಿ ಗೆರೆ ಪ್ರಕಾಶ್ ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ಕಬ್ಬು ಬೆಳೆಗಾರ ಹೋರಾಟ ಗಾರರನ್ನು ಗೂಂಡಾಗಳೆಂದು ಹೇಳಿರು ವುದಲ್ಲದೆ, ರೈತ ಮಹಿಳೆಯನ್ನು ನಿಂದಿಸಿ ರುವುದು ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಶೋಭೆ ತರುವ ವಿಚಾರವಲ್ಲ. ಅಧಿಕಾರಕ್ಕೆ ಬರುವ ಮುನ್ನಾ ರೈತ ಸಮಸ್ಯೆಗಳನ್ನು 24…










