ಹಾಸನ: ಇಂದು ಹಾಸನಾಂಬೆ ಬಾಗಿಲು ತೆರೆಯುವ ಹಿನ್ನಲೆಯಲ್ಲಿ ಪತ್ರಕರ್ತರು ಮತ್ತು ಟಿವಿ ಮಾಧ್ಯಮದವರು ದೇವಾಲಯಕ್ಕೆ ತೆರಳಿದಾಗ ಪ್ರವೇಶ ಮಾಡಲು ನಿರ್ಬಂಧ ಹೇರಿದ ಹಿನ್ನಲೆಯಲ್ಲಿ ಜಿಲ್ಲಾಡಳಿತದ ವಿರುದ್ಧ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆಯಲಾಗಿದ್ದ ತುರ್ತು ಸಭೆಯಲ್ಲಿ ಆಕ್ರೋಶ ವ್ಯಕ್ತವಾಯಿತು. ಬಹುತೇಕ ಎಲ್ಲಾ ಪತ್ರಿಕೆಯ ಸಂಪಾ ದಕರು ಮತ್ತು ವರದಿಗಾರರು, ಟಿವಿ ಮಾಧ್ಯಮದವರು ಸಭೆಯಲ್ಲಿ ಪಾಲ್ಗೊಂಡು ಜಿಲ್ಲಾಡಳಿತದ ಧೋರಣೆಯನ್ನು ಖಂಡಿಸಿ ದರು. ಪತ್ರಕರ್ತರನ್ನು ಜಿಲ್ಲಾಡಳಿತ ಅತ್ಯಂತ ಅಗೌರವದಿಂದ ನಡೆಸಿಕೊಂಡಿದೆ. ಇದನ್ನು ಖಂಡಿಸಿ ಮುಂದಿನ ದಿನಗಳಲ್ಲಿ ಹಾಸನಾಂಬೆ ದೇವಾಲಯದ ಬಗ್ಗೆ…
ಹಾಸನದಲ್ಲಿ ಸಂಭ್ರಮದ ಕನ್ನಡ ರಾಜ್ಯೋತ್ಸವ
November 3, 2018ಹಾಸನ: ನಗರದ ಜಿಲ್ಲಾ ಕ್ರೀಡಾಂ ಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯ ಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ. ರೇವಣ್ಣ ಧ್ವಜಾರೋಹಣ ನೆರವೇರಿಸಿದರು. ಶಸಸ್ತ್ರ ಪಡೆಗಳ ಗೌರವ ವಂದನೆ ಸ್ವೀಕರಿಸಿ ರಾಜೋತ್ಸವ ಸಂದೇಶ ನೀಡಿದ ಸಚಿವರು, ಕನ್ನಡ ಭಾಷೆ ಇಲ್ಲಿನ ಸಂಸ್ಕ್ರತಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ನೂರಾರು ಮಹಾನಾಯಕರು ಈ ನಾಡನ್ನು ಸರ್ವತೋಮುಖವಾಗಿ ಕಟ್ಟಲು ಶ್ರಮಿಸಿ ದ್ದಾರೆ. ಅವರೆಲ್ಲರನ್ನು ಸ್ಮರಿಸಿ ಗೌರವ ನಮನ ಸಲ್ಲಿಸುವುದು ನಮ್ಮ ಕರ್ತವ್ಯ ಎಂದರು. ಕರ್ನಾಟಕ ಸರ್ಕಾರ ಕೃಷಿ, ಶಿಕ್ಷಣ,…
ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತವರು ಜಿಲ್ಲೆಯಲ್ಲಿ ಸಾಲಬಾಧೆಯಿಂದ ರೈತ ಆತ್ಮಹತ್ಯೆ
November 3, 2018ಅರಸೀಕೆರೆ: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ತವರು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕು ಬಾಣಾವರ ಹೋಬಳಿ ಹರತನಹಳ್ಳಿ ಗ್ರಾಮದ ಲೋಕೇಶ್ ನಾಯ್ಕ(40) ಎಂಬ ರೈತ ಸಾಲ ಭಾದೆಯಿಂದ ನೇಣಿಗೆ ಶರಣಾದ ಪ್ರಕರಣ ಗುರುವಾರ ನಡೆದಿದೆ. ಗ್ರಾಮದ ಸಾಮ್ಯನಾಯ್ಕ ಎಂಬುವವರ ಮಗನಾದ ಲೋಕೇಶ್ ನಾಯ್ಕ ಕಾರ್ಪೊರೇಷನ್ ಬ್ಯಾಂಕಿನಲ್ಲಿ 4.5 ಲಕ್ಷ ಬೆಳೆ ಸಾಲವನ್ನು ಪಡೆದಿದ್ದರು.ತಮ್ಮ 5 ಎಕರೆ 20 ಗುಂಟೆ ಜಮೀನಿನಲ್ಲಿ ದಾಳಿಂಬೆ ಮತ್ತು ರಾಗಿ ಬೆಳೆಯೊಂದಿಗೆ ತೆಂಗು ಬೆಳೆದಿದ್ದರು.ಈ ಮೊದಲೇ ಬರಗಾಲ ಪೀಡಿತವಾದ ಈ ತಾಲ್ಲೂಕಿ ನಲ್ಲಿ ಸೂಕ್ತ…
ತೆರೆಯಲಿದೆ ಇಂದು ಹಾಸನಾಂಬೆ ದೇವಸ್ಥಾನದ ಬಾಗಿಲು
November 1, 2018ಹಾಸನ: ಪುರಾಣ ಪ್ರಸಿದ್ಧ ಹಾಸನದ ಅಧಿದೇವತೆ ಹಾಸನಾಂಬ ದೇವಾಲಯದ ಬಾಗಿಲು ನಾಳೆ (ನ.1) ಬೆಳಿಗ್ಗೆ 11.30ಕ್ಕೆ ತೆರೆಯಲಿದೆ. ಸ್ವಚ್ಛತೆ, ಅಲಂಕಾರ, ಪೂಜಾ ವಿಧಿ-ವಿಧಾನಗಳು ನಡೆಯಲಿರುವುದರಿಂದ ಮೊದಲ ದಿನ ಭಕ್ತಾದಿ ಗಳಿಗೆ ದೇವಿಯ ದರ್ಶನವಿರುವುದಿಲ್ಲ. ನ.9ರಂದು ಮಧ್ಯಾಹ್ನ ದೇವಾಲಯದ ಬಾಗಿಲು ಮುಚ್ಚಲಾ ಗುತ್ತದೆ. ಅಂದೂ ಕೂಡ ಭಕ್ತಾದಿಗಳಿಗೆ ದೇವಿ ದರ್ಶನಕ್ಕೆ ಅವಕಾಶವಿಲ್ಲ. ನ.2ರಿಂದ 8ರವರೆಗೆ 7 ದಿನಗಳ ಕಾಲ ಭಕ್ತಾದಿಗಳು ಹಾಸನಾಂಬೆ ದೇವಿಯ ದರ್ಶನ ಪಡೆಯಬಹುದಾಗಿದೆ. ನಾಳೆ ಬೆಳಿಗ್ಗೆ ಹಾಸನಾಂಬ ದೇವಸ್ಥಾನ ಬಾಗಿಲು ತೆರೆಯುವ ವೇಳೆ ಎಲ್ಲಾ ತಳವಾರ…
ಹಾಸನಾಂಬ ದೇವಾಲಯದಂತೆ ಇತರೆ ದೇವಸ್ಥಾನಗಳಿಗೂ ದೀಪಾಲಂಕಾರಕ್ಕೆ ಮನವಿ
November 1, 2018ಹಾಸನ: ನಾಳೆ(ನ.1) ಪುರಾತನ ಪ್ರಸಿದ್ಧ ಶ್ರೀ ಹಾಸನಾಂಬೆ ದೇವಾಲಯದ ಬಾಗಿಲು ತೆಗೆದು ಸಾರ್ವಜನಿಕರಿಗೆ ದರ್ಶನ ಕೊಡಲು ಅವಕಾಶ ಕಲ್ಪಿಸಲಾಗುತ್ತದೆ. ರಾಜ್ಯದ ಜನಪ್ರತಿನಿಧಿಗಳು, ಸಚಿವರು, ಮುಖ್ಯ ಮಂತ್ರಿ, ಮ್ಯಾಯಾಧೀಶರು, ಮಠಾಧಿ ಪತಿಗಳು, ಅತೀ ಗಣ್ಯವ್ಯಕ್ತಿಗಳು, ಚಲನಚಿತ್ರ ಕಲಾವಿದರು ಸೇರಿದಂತೆ ರಾಜ್ಯ ಮತ್ತು ದೇಶದ ನಾನಾ ಕಡೆಯಿಂದ ಭಕ್ತ ಸಾಗರ ಹರಿದು ಬರುತ್ತದೆ. ಈ ಜಾತ್ರಾ ಮಹೋತ್ಸವದ ನಿಮಿತ್ತ ಜಿಲ್ಲಾಡಳಿತ ದಿಂದ ಹಾಸನಾಂಬೆ ಮುಖ್ಯ ರಸ್ತೆ ಹಾಗೂ ಸಭಾಂಗಣಕ್ಕೆ ಮಾತ್ರ ವಿದ್ಯುತ್ ದೀಪಾಲಂಕಾರ ಮಾಡಲಾಗುತ್ತಿದೆ. ಶ್ರೀ ಹಾಸನಾಂಬ ದೇವಸ್ಥಾನದ ಪೂಜಾ…
ಜಿಲ್ಲಾಡಳಿತದಿಂದ ಏಕತಾ ದಿನ ಆಚರಣೆ
November 1, 2018ಹಾಸನ: ಸರ್ದಾರ್ ವಲ್ಲಭ ಬಾಯ್ ಪಟೀಲ್ ರಾಷ್ಟ್ರೀಯ ಐಕ್ಯತೆಯ ಸಂಕೇತವಾಗಿದ್ದಾರೆ. ಅವರ ಆದರ್ಶ ಗಳನ್ನು ನಾವೆಲ್ಲರು ಪಾಲಿಸಬೇಕಿದೆ ಎಂದು ಅಪರ ಜಿಲ್ಲಾಧಿಕಾರಿ ವೈಶಾಲಿ ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಏಕತಾ ದಿವಸ ಕಾರ್ಯಕ್ರಮದಲ್ಲಿ ಏಕತಾ ಪ್ರತಿಜ್ಞಾ- ಭೋದಿಸಿ ಮಾತನಾಡಿದ ಅವರು, ಭಾಷಾ ವಾರು ಪ್ರಾಂತ್ಯವಾಗಿ ಹರಿದು ಹಂಚಿ ಹೋದ ಭಾರತವನ್ನು ಒಂದು ಸಂಯುಕ್ತ ರಾಷ್ಟ್ರವನ್ನಾಗಿ ನಿರ್ಮಿಸಿದ ಕೀರ್ತಿ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರದ್ದು ಎಂದು ಬಣ್ಣಿಸಿದರು. ಇದೇ ಸಂದರ್ಭ ‘ರಾಷ್ಟ್ರದ ಐಕತೆ, ಸಮ ಗ್ರತೆ…
ಬ್ಯಾಂಕ್ ಮುಂದೆ ರೈತರ ಪ್ರತಿಭಟನೆ
October 31, 2018ಅರಸೀಕೆರೆ: ಸರ್ಕಾರದ ವತಿ ಯಿಂದ ನೀಡುವ ಬೆಳೆ ವಿಮೆಯ ಪರಿ ಹಾರ ಹಣವನ್ನು ಬ್ಯಾಂಕಿನವರು ಮುಟ್ಟು ಗೋಲು ಹಾಕಿಕೊಂಡಿರುವುದನ್ನು ವಿರೋ ಧಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ತಾಲೂಕಿನ ಗೀಜಿಹಳ್ಳಿ ಗ್ರಾಮದ ಕೆನರಾ ಬ್ಯಾಂಕಿನ ಮುಂದೆ ರೈತರು ಪ್ರತಿಭಟನೆ ನಡೆಸಿದರು. ತಾಲೂಕಿನ ಗೀಜೀಹಳ್ಳಿ ಗ್ರಾಮದ ಲ್ಲಿರುವ ಕೆನರಾ ಬ್ಯಾಂಕಿನ ಮುಂದೆ ಪ್ರತಿ ಭಟನೆ ನಡೆಸಿದ ತಾಲೂಕು ರೈತ ಸಂಘದ ಅಧ್ಯಕ್ಷ ಮೇಳೇನಹಳ್ಳಿ ನಾಗರಾಜು ಮಾತನಾಡಿ, ಸರ್ಕಾರಗಳು ರೈತರ ನೆರ ವಿಗಾಗಿ ಬೆಳೆ ನಷ್ಟ ಹೊಂದಿದ ಸಂದರ್ಭ…
ಸಫಾಯಿ ಕರ್ಮಚಾರಿಗಳ ಹಿತರಕ್ಷಣೆ ಎಲ್ಲರ ಹೊಣೆ
October 30, 2018ಹಾಸನ: ಸಫಾಯಿ ಕರ್ಮಚಾರಿ ಗಳ ಜೀವನ ಮಟ್ಟ ಸುಧಾರಣೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೂಪಿ ಸಿರುವ ಯೋಜನೆಗಳನ್ನು ಸಮರ್ಪಕ ವಾಗಿ ಅನುಷ್ಠಾನಗೊಳಿಸಬೇಕಿದ್ದು, ಅವರ ಹಿತರಕ್ಷಣೆ ಎಲ್ಲಾ ಇಲಾಖೆಗಳ ಹೊಣೆ ಎಂದು ರಾಷ್ಟ್ರೀಯ ಸಫಾಯಿ ಕರ್ಮ ಚಾರಿಗಳ ಆಯೋಗದ ಸದಸ್ಯ ಜಗದೀಶ್ ಹಿರೇಮನಿ ಅಧಿಕಾರಿಗಳಿಗೆ ಸೂಚಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂ ಗಣದಲ್ಲಿಂದು ಮ್ಯಾನ್ಯುಯಲ್ ಸ್ಕ್ಯಾವೆಂ ಜರ್ಗಳ ಪದ್ಧತಿ ನಿಷೇಧ ಮತ್ತು ಅವರ ಪುನರ್ವಸತಿ ಅಧಿನಿಯ 2013ರ ಕಾಯ್ದೆ ಅನುಷ್ಠಾನದ ಕುರಿತು ನಡೆದ ವಿವಿಧ ಇಲಾಖಾಧಿಕಾರಿಗಳೊಂದಿಗೆ ಪ್ರಗತಿ…
ವಿದ್ಯುತ್ ಉಪಕೇಂದ್ರ ಸ್ಥಾಪನೆಗೆ ಕೂಡಿ ಬಾರದ ಕಾಲ
October 30, 2018ಬೇಲೂರು: ತಾಲೂಕಿನ ಬಿಕ್ಕೋಡಿ ನಲ್ಲಿ ಕಾರ್ಯಾ ಆರಂಭಿಸಬೇಕಿದ್ದ ವಿದ್ಯುತ್ ಪ್ರಸರಣ ಉಪಕೇಂದ್ರ ಸ್ಥಾಪನೆಗೆ ಇನ್ನೂ ಕಾಲ ಕೂಡಿಬಾರದಾಗಿದ್ದು, 65 ಗ್ರಾಮ ಗಳಲ್ಲಿ ವಿದ್ಯುತ್ ಸಮಸ್ಯೆ ಮಿತಿಮೀರಿದೆ. ವೋಟಿಗಾಗಿ ಮನೆ ಬಾಗಿಲಿಗೆ ಬಂದು ಭರವಸೆ ನೀಡುವ ಜನಪ್ರತಿನಿಧಿಗಳು ಈ ಭಾಗದ ವಿದ್ಯುತ್ ಸಮಸ್ಯೆ ನೀಗಿಸಲು ಪ್ರಮಾ ಣಿಕ ಪ್ರಯತ್ನ ಮಾಡುವಲ್ಲಿ ವಿಫಲವಾಗಿ ದ್ದಾರೆ ಎನ್ನುವುದಕ್ಕೆ ಎರಡು ವರ್ಷದಿಂದ ನೆನೆಗುದಿಗೆ ಬಿದ್ದಿರುವ ಈ ಉಪಕೇಂದ್ರ ಸ್ಥಾಪನೆ ಯೋಜನೆಯೇ ಸಾಕ್ಷಿಯಾಗಿದೆ. ತಾಲೂಕಿನ ಅರೇಹಳ್ಳಿ, ಹಗರೆ, ಹಳೇ ಬೀಡು, ಗೆಂಡೇಹಳ್ಳಿ ಸೇರಿದಂತೆ ಅತೀ…
ರೇವಣ್ಣ ಅಂದು ವೈಲೆಂಟ್, ಇಂದು ಫುಲ್ ಸೈಲೆಂಟ್!
October 28, 2018ಹಾಸನ: ಮಾಜಿ ಸಚಿವ ಎ.ಮಂಜು ಅವಧಿಯಲ್ಲಿ ಹಾಸನಾಂಬ ದೇವಿ ವಿಶೇಷ ದರ್ಶನ ಟಿಕೆಟ್ ದರದ ವಿಚಾರವಾಗಿ ವೈಲೆಂಟ್ ಆಗಿದ್ದ ಹಾಲಿ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ ಈ ಬಾರಿಯೂ ಅದೇ ದರ ಮುಂದುವರಿದರೂ ಯಾವುದೇ ಚಕಾರ ಎತ್ತದೆ ಫುಲ್ ಸೈಲೆಂಟ್ ಆಗಿರುವುದು ಭಕ್ತಾದಿಗಳ ಆಕ್ರೋಶಕ್ಕೆ ಕಾರಣವಾಗಿದೆ. ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರ್ಶನ ಕೊಡುವ ಜಿಲ್ಲೆಯ ಅಧಿದೇವತೆ ಹಾಸನಾಂಬೆ ದೇವಸ್ಥಾನದ ಬಾಗಿಲು ತೆರೆ ಯಲು ದಿನಗಣನೆ ಆರಂಭವಾಗಿದ್ದು, ಇನ್ನೈದು ದಿನ ಬಾಕಿ ಉಳಿ ದಿದೆ. ತಾಯಿಯ ದರ್ಶನ ಪಡೆಯಲು…