ಮಡಿಕೇರಿ: ರಾಮಕೃಷ್ಣ ಪರ ಮಹಂಸರ ತರುವಾಯ ಕಣ್ಣಿಗೆ ಕಾಣುವ ದೇವರಾಗಿ ಜೀವಿಸಿದ್ದವರು ತುಮಕೂರಿನ ಸಿದ್ದಗಂಗಾ ಶ್ರೀಗಳಾದ ಶಿವಕುಮಾರ ಸ್ವಾಮೀಜಿಗಳು ಎಂದು ಅರಮೇರಿ ಕಳಂ ಚೇರಿ ಮಠಾಧೀಶ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಬಣ್ಣಿಸಿದರು. ನಗರದ ಮಹದೇವಪೇಟೆಯಲ್ಲಿನ ಶ್ರೀ ಬಸವೇಶ್ವರ ದೇವಾಲಯ ಸಮಿತಿ ಮತ್ತು ಅಕ್ಕನ ಬಳಗದ ವತಿಯಿಂದ ಆಯೋಜಿ ಸಿದ್ದ ಶ್ರೀ ಸಿದ್ದಗಂಗಾ ಶಿವಕುಮಾರ ಮಹಾ ಸ್ವಾಮೀಜಿ ಸಂಸ್ಮರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅರಮೇರಿ ಕಳಂಚೇರಿ ಮಠಾ ಧೀಶರು, ಸಾಮಾಜಿಕ ಕ್ರಾಂತಿ, ಜೀವನ ಮೌಲ್ಯಗಳಿಗೆ ಹೆಸರುವಾಸಿಯಾಗಿದ್ದ ಸಿದ್ದ ಗಂಗಾ ಶ್ರೀಗಳು ಇತಿಹಾಸದ…
ನೆರೆ ಸಂತ್ರಸ್ತರಿಗೆ ಮುಸ್ಲಿಂ ಸಂಘದ ನೆರವು
March 11, 2019ವಿರಾಜಪೇಟೆ: ಕೊಡಗಿನಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರಕೃತಿ ವಿಕೋಪದ ಸಂತ್ರ ಸ್ತರಿಗೆ ಕೊಡಗು ಮುಸ್ಲಿಂ ಪತ್ತಿನ ಸಹಕಾರ ಸಂಘದಿಂದ 1,25,000 ರೂ. ನೆರವಿನ ಚೆಕ್ಕನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪರಿಹಾರ ನಿಧಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭ ಕೊಡಗು ಮುಸ್ಲಿಂ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ಆರ್. ಮೊಹ್ಮದ್ ಶುಹೇಬ್, ಉಪಾಧ್ಯಕ್ಷ ಕನ್ನಡಿಯಂಡ ಎ.ಜುಬೇರ್, ನಿರ್ದೇಶಕರುಗಳಾದ ಎಸ್.ಹೆಚ್.ಮೈನೂದ್ಧಿನ್, ಎಂ.ಎಸ್.ಮೊಹ್ಮದ್ ಶಫಿ, ಎಂ.ಎ.ಜಿಯಾವುಲ್ಲಾ, ಎಂ.ಎ.ಯೂಸುಫ್, ಜೆ.ಎಸ್.ಸಮೀವುಲ್ಲಾ, ಎ.ಕೆ.ಜಬೀವುಲ್ಲಾ, ತಸ್ನಿಂ ಅಕ್ತರ್, ಡಿ.ಎಂ.ಮನ್ಸೂರ್ ಆಲಿ, ವ್ಯವಸ್ಥಾಪಕ ಕೆ.ಐ.ಮುಕ್ತಾರ್ ಅಹ್ಮದ್, ಲೆಕ್ಕಿಗರಾದ ಎಂ.ಜಿ.ಜಾವಿದ್ ಅವರುಗಳು…
ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಸ್ತ್ರೀ ಪಾತ್ರ ಪ್ರಮುಖ
March 10, 2019ಕುಶಾಲನಗರದಲ್ಲಿ ವಚನಕ್ರಾಂತಿ ಚಿಂತನಾ ಗೋಷ್ಠಿಯಲ್ಲಿ ಶ್ರೀಸ್ವತಂತ್ರ ಬಸವಲಿಂಗ ಸ್ವಾಮೀಜಿ ನುಡಿ ಕುಶಾಲನಗರ: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಮೈಸೂರು, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಕೊಡಗು ಜಿಲ್ಲಾ ಘಟಕ, ಕದಳಿ ಮಹಿಳಾ ವೇದಿಕೆ ಕೊಡಗು, ಗ್ರಾಮ ಪಂಚಾಯಿತಿ, ಶ್ರೀ ಮಂಟಿಗಮ್ಮ ಸೇವಸ್ಥಾನ ಸಮಿತಿ, ಅಕ್ಕಮಹಾದೇವಿ ಮಹಿಳಾ ಸಮಾಜ, ಸ್ತ್ರೀಶಕ್ತಿ ಸಂಘಗಳ ಸಂಯು ಕ್ತಾಶ್ರಯದಲ್ಲಿ ಶಿರಂಗಾಲ ಉಮಾಮಹೇ ಶ್ವರ ದೇವಸ್ಥಾನದ ಆವರಣದಲ್ಲಿ ಶನಿವಾರ ಜಿಲ್ಲಾಮಟ್ಟದ ಸ್ತ್ರೀ ಅಸ್ಮಿತೆ ಮತ್ತು ವಚನ ಕ್ರಾಂತಿ ಚಿಂತನಾ ಗೋಷ್ಠಿ ನಡೆಯಿತು. ಕಾರ್ಯಕ್ರಮ…
ನಕ್ಸಲ್ ಚಲನವಲನ: ಕೊಡಗು ಗಡಿಯಲ್ಲಿ ಕೂಂಬಿಂಗ್ ಚುರುಕು
March 10, 2019ಮಡಿಕೇರಿ: ಕೇರಳದ ವಯನಾಡು, ಚಾಮರಾಜನಗರ ಗಡಿ ಸೇರಿದಂತೆ ಕೊಡಗು-ಕೇರಳ ಗಡಿಗಳಿಗೆ ಹೊಂದಿಕೊಂಡಂತಿರುವ ದಟ್ಟ ಅರಣ್ಯಗಳಲ್ಲಿ ನಕ್ಸಲರ ಚಲನ ವಲನ ಕಂಡು ಬಂದಿರುವ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ಗಡಿ ಭಾಗಗಳಲ್ಲಿ ಕೂಂಬಿಂಗ್ ಕಾರ್ಯಾಚರಣೆ ಚುರುಕುಗೊಳಿಸಲಾಗಿದೆ. ಕೇರಳದ ವಯನಾಡಿನ ಅರಣ್ಯದಲ್ಲಿ ಶಂಕಿತ ನಕ್ಸಲರು ಮತ್ತು ಕೇರಳ ನಕ್ಸಲ್ ನಿಗ್ರಹ ದಳದ ಥಂಡರ್ ಬೋಲ್ಟ್ ಕಮಾಂಡೊಗಳ ನಡುವೆ ಪರಸ್ಪರ ಗುಂಡಿನ ಚಕಮಕಿ ನಡೆದಿದೆ ಎನ್ನಲಾಗುತ್ತಿದೆ. ಗುಂಡಿನ ಚಕಮಕಿಯ ಬಳಿಕ ನಕ್ಸಲರು ತಪ್ಪಿಸಿಕೊಂಡಿದ್ದು, ಕೊಡಗು ಜಿಲ್ಲೆಯ ಕಡೆ ನುಸುಳುವ ಸಾಧ್ಯತೆ ಇದೆ ಎಂದು…
ಕಾರು ಮರಕ್ಕೆ ಡಿಕ್ಕಿ: ಚಾಲಕ ಸಾವು
March 10, 2019ಗೋಣಿಕೊಪ್ಪಲು: ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವನವಾಸಿ ಕಲ್ಯಾಣ ಕೊಡಗು ಘಟಕದ ಅಧ್ಯಕ್ಷ ಸಿದ್ದ (55) ಮೃತಪಟ್ಟಿದ್ದಾರೆ. ತಿತಿಮತಿ ರೇಷ್ಮೆ ಹಡ್ಲು ಹಾಡಿ ನಿವಾಸಿಯಾಗಿದ್ದ ಇವರು, ಶನಿವಾರ ಬೆಳಗ್ಗೆ ತಿತಿಮತಿ-ಮೈಸೂರು ರಸ್ತೆಯ ಆನೆಚೌಕೂರು ಎಂಬಲ್ಲಿ ಕಾರು ಅಪ ಘಾತದಲ್ಲಿ ಗಾಯಗೊಂಡಿದ್ದರು. ಇವರು ಪ್ರಯಾ ಣಿಸುತ್ತಿದ್ದ ಮಾರುತಿ ಓಮ್ನಿ ಕಾರು ಮರಕ್ಕೆ ಡಿಕ್ಕಿ ಹೊಡೆದಿತ್ತು. ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ದಾರಿ ಮಧ್ಯೆ ಸಾವನಪ್ಪಿದ್ದಾರೆ. ಈ ಬಗ್ಗೆ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲೋಕಸಭಾ ಚುನಾವಣೆ ವ್ಯವಸ್ಥಿತ ನಿರ್ವಹಣೆಗೆ ನಿರ್ದೇಶನ
March 9, 2019ಮಡಿಕೇರಿ: ಲೋಕಸಭಾ ಚುನಾ ವಣೆ ದಿನಾಂಕ ಶೀಘ್ರವೇ ಪ್ರಕಟವಾಗ ಲಿದ್ದು, ಚುನಾವಣೆ ಸಂಬಂಧ ಈಗಾಗಲೇ ನೋಡೆಲ್ ಅಧಿಕಾರಿಗಳನ್ನು ನಿಯೋಜಿಸ ಲಾಗಿದೆ. ಆ ದಿಸೆಯಲ್ಲಿ ನೋಡಲ್ ಅಧಿ ಕಾರಿಗಳು ತಮ್ಮ ತಮ್ಮ ಕಾರ್ಯವ್ಯಾಪ್ತಿ ತಿಳಿದು ಕರ್ತವ್ಯ ಪ್ರಜ್ಞೆಯಿಂದ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸೂಚನೆ ನೀಡಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂ ಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ 543 ಮತಗಟ್ಟೆ ಕೇಂದ್ರಗಳಿದ್ದು, ಈ ಮತಗಟ್ಟೆ ಕೇಂದ್ರಗಳ ಸುಸ್ಥಿತಿ ಸಂಬಂ ಧಿಸಿದಂತೆ ಈಗಾಗಲೇ ಸೆಕ್ಟರ್…
ಬೊಳ್ಳುಮಾಡು ಗ್ರಾಮದಲ್ಲಿ ಅಂಗನವಾಡಿ ಕೇಂದ್ರ ಉದ್ಘಾಟನೆ
March 9, 2019ವಿರಾಜಪೇಟೆ: ಗ್ರಾಮೀಣ ಭಾಗದ ಮಹಿಳೆ ಮತ್ತು ಮಕ್ಕಳಿಗೆ ಸರಕಾರ ನೀಡು ತ್ತಿರುವ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಜೀವನ ನಡೆಸುವಂತಾ ಗಬೇಕು ಎಂದು ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಹೇಳಿದರು. ವಿರಾಜಪೇಟೆ ತಾಲೂಕಿನ ಬೆಳ್ಳುಮಾಡು ಗ್ರಾಮದಲ್ಲಿ ಶಿಶು ಕಲ್ಯಾಣ ಇಲಾಖೆ-ನಬಾರ್ಡ್ ಯೋಜನೆಯಿಂದ ನಿರ್ಮಾಣಗೊಂಡ ನೂತನ ಅಂಗನವಾಡಿ ಕೇಂದ್ರವನ್ನು ಉದ್ಘಾಟಿಸಿ ಮಾತ ನಾಡಿದ ಅವರು, ಇತ್ತೀಚೆಗೆ ಸರಕಾರ ಮಹಿಳೆಯರಿಗಾಗಿ ಹೆಚ್ಚಿನ ಸೌಲಭ್ಯಗಳನ್ನು ನೀಡುತ್ತಿ ರುವುದರಿಂದ ಅದು ಸರಿಯಾದ ರೀತಿಯಲ್ಲಿ ಬಡ ಕೂಲಿ ಕಾರ್ಮಿಕರಿಗು ಹಾಗೂ ಇತರ ಮಹಿಳೆಯರಿಗೆ ದೊರಕುವಂತಾಗಬೇಕು. ಈ…
ಕುಶಾಲನಗರ ವ್ಯಾಪ್ತಿಯಲ್ಲಿ ಕುಲಶಾಸ್ತ್ರ ಅಧ್ಯಯನ ಆರಂಭ
March 7, 2019ಕೊಡವರು ಸಮಗ್ರ ಮಾಹಿತಿ ನೀಡಿ ಸಹಕರಿಸಲು ಎನ್.ಯು.ನಾಚಪ್ಪ ಮನವಿ ಕುಶಾಲನಗರ: ತಾಲೂಕಿನಾ ದ್ಯಂತ ಆರಂಭಗೊಂಡಿರುವ ಕೊಡವರ ಮೂಲ ಕುಲಶಾಸ್ತ್ರ ಅಧ್ಯಯನಕ್ಕೆ ಕೊಡವ ಕುಟುಂಬಗಳು ಅಗತ್ಯ ಸಹಕಾರ ನೀಡ ಬೇಕು ಎಂದು ಸಿಎನ್ಸಿ ಮುಖ್ಯಸ್ಥ ಎನ್. ಯು.ನಾಚಪ್ಪ ಮನವಿ ಮಾಡಿದರು. ಪಟ್ಟಣದ ಕೊಡವ ಸಮಾಜದಲ್ಲಿ ಏರ್ಪ ಡಿಸಿದ್ದ ಕೊಡವ ಕುಲಶಾಸ್ತ್ರ ಅಧ್ಯಯನ ವಿಚಾರ ಮಂಥನ ಕಾರ್ಯಕ್ರಮದಲ್ಲಿ ಮಾತ ನಾಡಿದ ಅವರು, ಅನೇಕ ವರ್ಷಗಳಿಂದ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಕೊಡವ ಭಾಷೆಯನ್ನು ಸಂವಿಧಾನದ 8ನೇ ಶೆಡ್ಯೂಲ್ ಸೇರ್ಪಡೆಗೊಳಿಸಬೇಕು. ಕೊಡವ…
ವಿದ್ಯುತ್ ಸ್ಪರ್ಶಿಸಿ ಕಾರ್ಮಿಕ ಸಾವು
March 7, 2019ಮಡಿಕೇರಿ: ಕಾಫಿ ತೋಟದಲ್ಲಿ ಮರದ ಕೊಂಬೆ ಕಡಿಯುವ ಸಂದರ್ಭ ವಿದ್ಯುತ್ ತಂತಿ ತಗುಲಿ ಕಾರ್ಮಿಕನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಸುಂಟಿಕೊಪ್ಪ ಸಮೀಪದ 7ನೇ ಹೊಸಕೋಟೆ ಗ್ರಾಮದಲ್ಲಿ ನಡೆದಿದೆ. 7ನೇ ಹೊಸಕೋಟೆಯ ಮಾರುತಿ ನಗರದ ಕಾಫಿ ತೋಟವೊಂದರ ಲೈನ್ ಮನೆಯಲ್ಲಿ ವಾಸವಾಗಿದ್ದ ಹೇಮಂತ್(23) ಮೃತಪಟ್ಟವನು. ಘಟನೆ ವಿವಿರ: ಮೂಲತಃ ತಮಿಳುನಾಡು ಮೂಲದ ಹೇಮಂತ್ 7ನೇ ಹೊಸಕೋಟೆಯ ಮಾರುತಿ ನಗರದ ಕಾಫಿ ತೋಟವೊಂದರಲ್ಲಿ ತನ್ನ ತಾಯಿ ಯೊಂದಿಗೆ ವಾಸವಾಗಿದ್ದ. ಇಂದು ಮಧ್ಯಾಹ್ನ 12 ಗಂಟೆ ಸಮಯದಲ್ಲಿ ಸ್ಪ್ರಿಂಕ್ಲರ್ ಮಾಡುವ ಸಲುವಾಗಿ…
ನೀರು ಕುಡಿಯಲು ಕೆರೆಗಿಳಿದ ಆನೆಗಳ ಪೀಕಲಾಟ
March 7, 2019ನಾಪೋಕ್ಲು: ನೀರು ಕುಡಿಯಲೆಂದು ಬಂದ ಕಾಡಾನೆಗಳು ಕೆರೆಗೆ ಬಿದ್ದು ಮೇಲೇಳಲು ಆಗದೆ ಪರದಾ ಡಿದ ಘಟನೆ ಸಮೀಪದ ಚೆಯ್ಯಂಡಾಣೆ ಬಳಿಯ ಚೇಲಾ ವರ ಗ್ರಾಮದಲ್ಲಿ ನಡೆದಿದೆ. ಚೇಲಾವರ ಗ್ರಾಮದ ನಿವಾಸಿ ಪಟ್ಟಚೆರವಂಡ ವಾಸು ಸುಬ್ಬಯ್ಯ ತಮ್ಮ ಕಾಫಿ ತೋಟದ ನಡುವೆ ಕೃಷಿಗಾಗಿ ಕೆರೆಯನ್ನು ತೆಗೆದಿದ್ದರು. ಬುಧವಾರ ರಾತ್ರಿ ಮೂರು ಕಾಡಾನೆಗಳು ಕೆರೆಯಲ್ಲಿ ಬಿದ್ದು ಮೇಲೇಳ ಲಾಗದೆ ಪರದಾಡುತ್ತಿದ್ದು, ಗ್ರಾಮಸ್ಥರ ನೆರವಿನಿಂದ ಗುರು ವಾರ ತೆರಳಿದವು. ಈ ವ್ಯಾಪ್ತಿಯಲ್ಲಿ ಕಾಡಾನೆಗಳ ಹಿಂಡು ಬಂದಿರುವ ಸಾಧ್ಯತೆ ಇದ್ದು, ಅವುಗಳಲ್ಲಿ ಎರಡು…