ವಿದ್ಯುತ್ ಸ್ಪರ್ಶಿಸಿ ಕಾರ್ಮಿಕ ಸಾವು
ಕೊಡಗು

ವಿದ್ಯುತ್ ಸ್ಪರ್ಶಿಸಿ ಕಾರ್ಮಿಕ ಸಾವು

March 7, 2019

ಮಡಿಕೇರಿ: ಕಾಫಿ ತೋಟದಲ್ಲಿ ಮರದ ಕೊಂಬೆ ಕಡಿಯುವ ಸಂದರ್ಭ ವಿದ್ಯುತ್ ತಂತಿ ತಗುಲಿ ಕಾರ್ಮಿಕನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಸುಂಟಿಕೊಪ್ಪ ಸಮೀಪದ 7ನೇ ಹೊಸಕೋಟೆ ಗ್ರಾಮದಲ್ಲಿ ನಡೆದಿದೆ.

7ನೇ ಹೊಸಕೋಟೆಯ ಮಾರುತಿ ನಗರದ ಕಾಫಿ ತೋಟವೊಂದರ ಲೈನ್ ಮನೆಯಲ್ಲಿ ವಾಸವಾಗಿದ್ದ ಹೇಮಂತ್(23) ಮೃತಪಟ್ಟವನು.

ಘಟನೆ ವಿವಿರ: ಮೂಲತಃ ತಮಿಳುನಾಡು ಮೂಲದ ಹೇಮಂತ್ 7ನೇ ಹೊಸಕೋಟೆಯ ಮಾರುತಿ ನಗರದ ಕಾಫಿ ತೋಟವೊಂದರಲ್ಲಿ ತನ್ನ ತಾಯಿ ಯೊಂದಿಗೆ ವಾಸವಾಗಿದ್ದ. ಇಂದು ಮಧ್ಯಾಹ್ನ 12 ಗಂಟೆ ಸಮಯದಲ್ಲಿ ಸ್ಪ್ರಿಂಕ್ಲರ್ ಮಾಡುವ ಸಲುವಾಗಿ ತೋಟದ ಒಳಗಡೆಯಿದ್ದ ಮರದ ರೆಂಬೆ ಕತ್ತರಿಸುವ ಸಂದರ್ಭ ಮರದ ಪಕ್ಕದಲ್ಲೇ ಹಾದು ಹೋಗಿದ್ದ 11ಕೆ.ವಿ. ವಿದ್ಯುತ್ ತಂತಿಗೆ ಮರದ ರೆಂಬೆ ತಗುಲಿ ಹೇಮಂತ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ವಿಷಯ ಅರಿತ ಸುಂಟಿಕೊಪ್ಪ ಪೊಲೀಸರು ಸ್ಥಳಕ್ಕೆ ತೆರಳಿ ಮಹಜರು ನಡೆಸಿ ಪ್ರಕರಣ ದಾಖಲಿಸಿ ಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

Translate »