ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಸ್ತ್ರೀ ಪಾತ್ರ ಪ್ರಮುಖ
ಕೊಡಗು

ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಸ್ತ್ರೀ ಪಾತ್ರ ಪ್ರಮುಖ

March 10, 2019

ಕುಶಾಲನಗರದಲ್ಲಿ ವಚನಕ್ರಾಂತಿ ಚಿಂತನಾ ಗೋಷ್ಠಿಯಲ್ಲಿ ಶ್ರೀಸ್ವತಂತ್ರ ಬಸವಲಿಂಗ ಸ್ವಾಮೀಜಿ ನುಡಿ
ಕುಶಾಲನಗರ: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಮೈಸೂರು, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಕೊಡಗು ಜಿಲ್ಲಾ ಘಟಕ, ಕದಳಿ ಮಹಿಳಾ ವೇದಿಕೆ ಕೊಡಗು, ಗ್ರಾಮ ಪಂಚಾಯಿತಿ, ಶ್ರೀ ಮಂಟಿಗಮ್ಮ ಸೇವಸ್ಥಾನ ಸಮಿತಿ, ಅಕ್ಕಮಹಾದೇವಿ ಮಹಿಳಾ ಸಮಾಜ, ಸ್ತ್ರೀಶಕ್ತಿ ಸಂಘಗಳ ಸಂಯು ಕ್ತಾಶ್ರಯದಲ್ಲಿ ಶಿರಂಗಾಲ ಉಮಾಮಹೇ ಶ್ವರ ದೇವಸ್ಥಾನದ ಆವರಣದಲ್ಲಿ ಶನಿವಾರ ಜಿಲ್ಲಾಮಟ್ಟದ ಸ್ತ್ರೀ ಅಸ್ಮಿತೆ ಮತ್ತು ವಚನ ಕ್ರಾಂತಿ ಚಿಂತನಾ ಗೋಷ್ಠಿ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ಬಸವಾಪ ಟ್ಟಣದ ತೋಂಟದಾರ್ಯ ಸಂಸ್ಥಾನ ಮಠದ ಶ್ರೀ ಸ್ವತಂತ್ರ ಬಸವಲಿಂಗ ಸ್ವಾಮೀಜಿ, ಮಹಿ ಳೆಯರು ಭಾರತೀಯ ಸಂಸ್ಕøತಿ, ಪರಂ ಪರೆ ಹಾಗೂ ಸನಾತನ ಧರ್ಮವನ್ನು ಜೀವನದಲ್ಲಿ ಪಾಲಿಸುವ ಮೂಲಕ ಉತ್ತಮ ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಸಲಹೆ ನೀಡಿದರು.
ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಮಹಿಳೆಯರು ಜಾಗೃತರಾ ಗುವ ಮೂಲಕ ಸ್ವಾಭಿಮಾನದ ಬದುಕನ್ನು ತಮ್ಮದಾಗಿಸಿಕೊಳ್ಳಬೇಕು ಎಂದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲೋಕೇ ಶ್ವರಿ ಗೋಪಾಲ್ ಮಾತನಾಡಿ, ಮಹಿಳೆ ಯರು ಸಂಸಾರದ ಹೊಣೆಯನ್ನು ಸಂಪೂ ರ್ಣವಾಗಿ ನಿಭಾಯಿಸುತ್ತಿದ್ದರೂ ಅವರಿಗೆ ಮನ್ನಣೆ ದೊರೆಯುತ್ತಿಲ್ಲ. ಸತಿಪತಿ ಕೂಡಿ ಬಾಳಿದರೆ ಸ್ವರ್ಗ ಸುಖ ಎಂಬುದನ್ನು ಪುರುಷರು ಅರ್ಥಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಶಿರಂಗಾಲ ಶ್ರೀ ಮಂಟಿಗಮ್ಮ ದೇವ ಸ್ಥಾನ ಸಮಿತಿ ಅಧ್ಯಕ್ಷ ಎಸ್.ಎಸ್.ಚಂದ್ರ ಶೇಖರ್ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯೆ ಕುಮುದಾ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಸ್.ಮಹೇಶ್, ತಾಲೂಕು ಘಟಕದ ಅಧ್ಯಕ್ಷ ಪಿ.ಮಹಾದೇವಪ್ಪ, ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಲೇಖನಾ, ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಶನಿವಾರಸಂತೆಯ ಕೆ.ಬಿ.ಹಾಲಪ್ಪ, ಅಕ್ಕ ಮಹಾದೇವಿ ಮಹಿಳಾ ಸಮಾಜದ ಅಧ್ಯಕ್ಷೆ ಪಾರ್ವತಮ್ಮ, ಪತ್ರಕರ್ತ ರಘುಹೆಬ್ಬಾಲೆ, ಗ್ರಾಪಂ ಅಧ್ಯಕ್ಷ ಎನ್.ಎಸ್.ರಮೇಶ್, ದೇವ ಸ್ಥಾನ ಸಮಿತಿ ಕಾರ್ಯದರ್ಶಿ ಸಿ.ಎನ್. ಲೋಕೇಶ್, ಮಹೇಶ್, ನಿರ್ಮಲಾಶಿವಲಿಂಗ, ಶಿಕ್ಷಕಿ ಎಂ.ಪಿ.ಲಿಯೋನಾ ಉಪಸ್ಥಿತರಿದ್ದರು.

ಲಿಂಗ ಸಮಾನತೆ ಮತ್ತು ಸೂತಕಗಳನ್ನು ಸುಳ್ಳುಮಾಡಿದ ವಚನ ಕ್ರಾಂತಿ ವಿಚಾರ ಗೋಷ್ಠಿಯಲ್ಲಿ ವಿಚಾರ ಮಂಡಿಸಿದ ಸೂದನ ರತ್ನಾವತಿ ಪೂಣಚ್ಚ ಅವರು, ಲಿಂಗ ಸಮಾ ನತೆ ಕುರಿತು ಶಾಸನ ರಚನೆ ಕಷ್ಟಕರ. ಇಂದಿಗೂ ಲಿಂಗ ಸಮಾನತೆ ಪ್ರಶ್ನೆಯಾ ಗಿಯೇ ಉಳಿದಿದೆ ಎಂದು ಹೇಳಿದರು.

ಕುಶಾಲನಗರ ಅಕ್ಕನ ಬಳಗದ ಅಧ್ಯಕ್ಷೆ ಕಮಲ ಗೋಷ್ಠಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಉಪಾಧ್ಯಕ್ಷೆ ಪೂರ್ಣಿಮಾ, ಸೋಮ ವಾರಪೇಟೆ ಪಟ್ಟಣ ಪಂಚಾಯಿತಿ ಸದಸ್ಯೆ ಶೀಲಾ, ಅಕ್ಕಮಹಾದೇವಿ ಮಹಿಳಾ ಸಮಾಜದ ಕಾರ್ಯದರ್ಶಿ ರೇಣುಕಾ, ಕೊಡ್ಲಿಪೇಟೆ ತಾಪಂ ಮಾಜಿ ಸದಸ್ಯೆ ಮಮತಾ ಉಪಸ್ಥಿತರಿದ್ದರು.

Translate »