ವಿರಾಜಪೇಟೆ, ಡಿ.10- ಸುಂದರ ಸಮಾಜ ನಿರ್ಮಾಣ ಮಾಡುವಲ್ಲಿ ವಿದ್ಯಾರ್ಥಿಗಳ ಪಾತ್ರ ಬಹು ಮುಖ್ಯ, ಸಮಾಜಕ್ಕೆ ಮಾರಕವಾದ ಪಿಡುಗುಗಳಿಗೆ ಯುವಜನತೆ ದಾಸರಾಗುತ್ತಿರು ವುದು ಕಳವಳಕಾರಿ ಸಂಗತಿ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಎನ್.ವಿ.ಕೊನಪ್ಪ ಹೇಳಿದರು. ಇಲ್ಲಿನ ಸ್ಥಳೀಯ ಸಂತ ಅನ್ನಮ್ಮ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ವಿರಾಜಪೇಟೆ ನಗರ ಪೊಲೀಸ್ ಠಾಣೆಯಿಂದ ಅಪರಾಧÀ ತಡೆ ಮಾಸಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಯೊಬ್ಬ ನಾಗರಿಕರು ಕಾನೂನÀನ್ನು ಪ್ರತಿಯೊಂದು ಹಂತದಲ್ಲೂ ಪಾಲಿಸುವಂತಾಗಬೇಕು. ಇತ್ತೀಚೆಗೆ…
ಇಂದು ಚಿಕ್ಕಬೆಟ್ಟಗೇರಿಯಲ್ಲಿ ‘ಹುತ್ತರಿ ಹಬ್ಬ’
December 11, 2019ಮಡಿಕೇರಿ, ಡಿ.10- ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್ಸಿ) ಸಂಘಟನೆಯಿಂದ ಕೊಡಗಿನ ಸುಗ್ಗಿ ಹಬ್ಬವಾದ ಹುತ್ತರಿಯನ್ನು ಡಿ.11ರಂದು ಚಿಕ್ಕಬೆಟ್ಟಗೇರಿಯ ನಂದಿನೆರವಂಡ ಉತ್ತಪ್ಪ ಅವರ ಭತ್ತÀದ ಗದ್ದೆಯಲ್ಲಿ ಸಾರ್ವತ್ರಿಕವಾಗಿ ಆಚರಿಸಲಾಗುವುದು ಎಂದು ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದರು. ನಗರದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾಷೆ ಹಾಗೂ ಸಂಸ್ಕøತಿ ಉಳಿಯ ಬೇಕಾದರೆ ಆಯಾ ಪ್ರದೇಶದ ಹಬ್ಬ ಹರಿದಿನಗಳನ್ನು ಸಾರ್ವತ್ರಿಕವಾಗಿ ಆಚರಿಸುವಂತಾಗಬೇಕು. ಆ ಮೂಲಕ ಜಗತ್ತಿನ ಗಮನ ಸೆಳೆಯುವಂತಾಗಬೇಕು ಎಂದು ಅಭಿಪ್ರಾಯಪಟ್ಟರು. ಸಿಎನ್ಸಿ ಸಂಘಟನೆಯು ಕೊಡವ ಬುಡಕಟ್ಟು ಜಗತ್ತಿನ ಸಂಸ್ಕøತಿಯ…
ಉಪಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು: ಜಿಲ್ಲಾದ್ಯಂತ ಸಂಭ್ರಮಾಚರಣೆ
December 10, 2019ಪಟಾಕಿ ಸಿಡಿಸಿ, ಸಿಹಿ ಹಂಚಿ ಖುಷಿಪಟ್ಟ ಕಾರ್ಯಕರ್ತರು, ಮೋದಿ, ಯಡಿಯೂರಪ್ಪ ಪರ ಘೋಷಣೆ ಮಡಿಕೇರಿ, ಡಿ.9- ರಾಜ್ಯದ 15 ವಿಧಾನ ಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ 12 ಸ್ಥಾನಗಳಲ್ಲಿ ಗೆಲುವನ್ನು ಸಾಧಿಸಿದ ಹಿನ್ನೆಲೆ ಮಡಿಕೇರಿ, ಕುಶಾಲನಗರ, ಸೋಮವಾರ ಪೇಟೆ, ಗೋಣಿಕೊಪ್ಪಲು ಸೇರಿದಂತೆ ಜಿಲ್ಲೆಯ ವಿವಿಧೆಡೆ ಸೋಮವಾರ ಬಿಜೆಪಿ ಕಾರ್ಯ ಕರ್ತರು, ಮುಖಂಡರು ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು. ಮಡಿಕೇರಿ ವರದಿ: ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ…
ಜಿಲ್ಲಾಡಳಿತದಿಂದ ಶಾಶ್ವತ ಪರಿಹಾರದ ಭರವಸೆ: ಗಂಜಿ ಕೇಂದ್ರ ಬಿಟ್ಟು ತೆರಳಲು ಮುಂದಾದ ಸಂತ್ರಸ್ತರು
December 10, 2019ಸಿದ್ದಾಪುರ, ಡಿ.9- ಜಿಲ್ಲಾಡಳಿತದಿಂದ ಶಾಶ್ವತ ಪರಿಹಾರ ಕೊಡಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ನೆಲ್ಯಹುದಿಕೆರಿ ಸರ್ಕಾರಿ ಶಾಲೆಯ ಗಂಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ ಸಂತ್ರಸ್ತರು ಕೇಂದ್ರ ಬಿಟ್ಟು ತೆರಳಲು ಮುಂದಾ ಗಿದ್ದಾರೆ ಎಂದು ಸಂತ್ರಸ್ತರ ಹೋರಾಟ ಸಮಿತಿ ಅಧ್ಯಕ್ಷ ಪಿ.ಆರ್ ಭರತ್ ತಿಳಿಸಿದರು. ಸಂತ್ರಸ್ತರ ಕೇಂದ್ರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಹಲವು ವರ್ಷಗಳಿಂದಲೂ ಕಾವೇರಿ ನದಿಯ ದಡದಲ್ಲಿ ಮನೆಗಳನ್ನು ಕಟ್ಟಿಕೊಂಡು ಜೀವನ ನಡೆಸುತ್ತಿದ್ದೇವು. ಆದರೆ, ಕಳೆದ ಆಗಸ್ಟ್ ತಿಂಗಳಿನಲ್ಲಿ ಸುರಿದ ಮಹಾ ಮಳೆಯಿಂದ ಪ್ರವಾಹಕ್ಕೆ ಸಿಲುಕಿ…
ದೇವಾಲಯದ ಬೀಗ ಮುರಿದು 5 ಲಕ್ಷ ಮೌಲ್ಯದ ಚಿನ್ನಾಭರಣ ಕಳವು
December 10, 2019ಮಡಿಕೇರಿ, ಡಿ.9- ದೇವಸ್ಥಾನದ ಬೀಗ ಮುರಿದು 5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಎರಡು ಹುಂಡಿಯಲ್ಲಿದ್ದ ಹಣವನ್ನು ಖದೀಮರು ಕಳವು ಮಾಡಿರುವ ಘಟನೆ ನಗರದ ಹೊರವಲಯದ ಶ್ರೀಭಗವತಿ ಮಹಿಷಿ ಮರ್ದಿನಿ ದೇವಾಲಯದಲ್ಲಿ ನಡೆದಿದೆ. ಸೋಮವಾರ ಬೆಳಗಿನ ಜಾವ ದೇವಾಲಯದ ಅರ್ಚಕರು ಪೂಜೆಗೆಂದು ದೇವಾಲಯಕ್ಕೆ ಬಂದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಕಳ್ಳರ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ. ಘಟನೆ ವಿವರ: ಶ್ರೀಭಗವತಿ ಮಹಿಷಿ…
ಕೊಡಗಲ್ಲಿ 100 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಆಸ್ಪತ್ರೆ
November 1, 2019ಬೆಂಗಳೂರು, ಅ.31(ಕೆಎಂಶಿ)- ಕೊಡಗಿನಲ್ಲಿ 100 ಕೋಟಿ ರೂ. ವೆಚ್ಚದಲ್ಲಿ 450 ಹಾಸಿಗೆಯುಳ್ಳ ಅತ್ಯಾಧುನಿಕ ಆಸ್ಪತ್ರೆ ನಿರ್ಮಾಣ ಮಾಡಲು ಸಂಪುಟ ಸಭೆ ನಿರ್ಧರಿಸಿದೆ. ಹಾಗೆಯೇ ಕಾಂಗ್ರೆಸ್ ಶಾಸಕ ಡಿ.ಕೆ.ಶಿವಕುಮಾರ್ ಬೆದರಿಕೆಗೆ ರಾಜ್ಯ ಸರ್ಕಾರ ಮಣಿದಿಲ್ಲ. ಚಿಕ್ಕಬಳ್ಳಾ ಪುರದಲ್ಲಿ ಸರ್ಕಾರಿ ವೈದ್ಯಕೀಯ ಆಸ್ಪತ್ರೆ ಮತ್ತು ಕಾಲೇಜು ಆರಂಭಿಸಲು ಇಂದಿಲ್ಲಿ ಸೇರಿದ್ದ ಸಂಪುಟ ಸಭೆ ಅನು ಮತಿ ನೀಡಿದೆ. ಕಳೆದ ಸಂಪುಟ ಸಭೆಯಲ್ಲಿ ಸಮಾ ಲೋಚನೆ ನಡೆಸಿ, ಅನುಮತಿ ನೀಡಿದ್ದರೂ, ಇಂದು ಮತ್ತೆ ಕಾಲೇಜು ಪ್ರಾರಂಭಿಸಲು ಅನುಮೋದನೆ ನೀಡಿದೆ. ಇದೇ ಸಂದರ್ಭದಲ್ಲಿ…
ಕೊಡಗಿನ ನಾಲ್ವರ ದಾರುಣ ಸಾವು
October 2, 2019ಮಡಿಕೇರಿ: ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ವಿಫ್ಟ್ ಕಾರಿನಲ್ಲಿದ್ದ ಒಂದೇ ಕುಟುಂಬದ ನಾಲ್ವರು ಸದಸ್ಯರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸುಳ್ಯ ಸಮೀಪ ಮಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಜಾಲ್ಸೂರು ಗ್ರಾಮದ ಅಡ್ಕಾರು ಮಾವಿನಕಟ್ಟೆ ಬಳಿ ಮಂಗಳ ವಾರ ಮಧ್ಯಾಹ್ನ ನಡೆದಿದೆ. ಕೊಡಗಿನ ನಾಪೋಕ್ಲು ಸಮೀಪದ ಕೊಟ್ಟ ಮುಡಿ ನಿವಾಸಿಗಳಾದ ಹಚ್ಚಯಾ ಹಾಜಿ (80), ಮಕ್ಕಳಾದ ಇಬ್ರಾಹಿಂ(45), ಉಮ್ಮರ್ (50), ಹ್ಯಾರಿಸ್(45) ಮೃತಪಟ್ಟ ವರು. ಮತ್ತೋರ್ವ ವ್ಯಕ್ತಿ ಉಮ್ಮರ್ ಫಾರುಕ್ ತೀವ್ರ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ….
ಕೊಡಗಿನಲ್ಲಿ ಭಾರೀ ಮಳೆಯಾಯ್ತು, ನೆರೆ ಬಂದಾಯ್ತು, ಗುಡ್ಡವು ಕುಸಿದಿದ್ದೂ ಆಯ್ತು, ಈಗ ಉರುಳುತ್ತಿವೆ ಬಂಡೆಗಳು
September 15, 2019ಮಡಿಕೇರಿ, ಸೆ.14-ಕೊಡಗು ಜಿಲ್ಲೆಯ ಗಡಿ ಭಾಗದಲ್ಲಿರುವ ಪೆರಾಜೆ ಗ್ರಾಮದ ಕೋಳಿಕಲ್ಲು ಮಲೆ ಬೆಟ್ಟದಿಂದ ಭಾರೀ ಬಂಡೆ ಉರುಳಿ ಬಿದ್ದಿರುವ ಘಟನೆ ತಡ ವಾಗಿ ಬೆಳಕಿಗೆ ಬಂದಿದೆ. ಬೆಟ್ಟದ ತಪ್ಪಲಿ ನಲ್ಲಿ ಹಲವಾರು ಕುಟುಂಬಗಳು ನೆಲೆ ನಿಂತಿದ್ದು, ನೂರಾರು ಗ್ರಾಮಸ್ಥರು ಜೀವ ಭಯ ಎದುರಿಸುತ್ತಿದ್ದಾರೆ. ಭಾಗಮಂಡಲ ಅರಣ್ಯ ವ್ಯಾಪ್ತಿಯ ಈ ಪ್ರದೇಶ ಹಚ್ಚ ಹಸುರಿನ ಶೋಲಾ ಕಾಡು ಗಳಿಂದ ಆವೃತ್ತವಾಗಿದ್ದು, ಬೆಟ್ಟದ ಮೇಲಿಂದ ಉರುಳಿದ ಬೃಹತ್ ಗಾತ್ರದ ಬಂಡೆಗಳು ಅರಣ್ಯದೊಳಗಿನ ಮರಗಳ ನೆಲಸಮಗೊಳಿಸಿ, ಭಾರೀ ಮರ ತಡೆದು ನಿಂತಿವೆ….
ಕೊಡಗಿನ ತೋರಾ ಗ್ರಾಮದ ಭೂಕುಸಿತ ಪ್ರದೇಶದಲ್ಲಿ ಕಾರ್ಯಾಚರಣೆ ಸ್ಥಗಿತ
September 2, 2019ಮಡಿಕೇರಿ, ಸೆ.1- ವಿರಾಜಪೇಟೆ ತಾಲೂಕಿನ ತೋರಾ ಗ್ರಾಮದಲ್ಲಿ ಭೂ ಕುಸಿದು ಇವರೆಗೆ ಒಟ್ಟು 6 ಮಂದಿ ಮೃತಪಟ್ಟಿದ್ದು, ಇತರ 4 ಮಂದಿ ಇಂದಿಗೂ ನಾಪತ್ತೆಯಾಗಿದ್ದಾರೆ. ಈ ದುರ್ಘಟನೆ ಸಂಭವಿಸಿ ಇಂದಿಗೆ 23 ದಿನಗಳೇ ಕಳೆದಿದ್ದು, ನಾಪತ್ತೆಯಾದ ಇತರ 4 ಮಂದಿಗಾಗಿ ನಡೆಸ ಲಾಗುತ್ತಿದ್ದ ಶೋಧ ಕಾರ್ಯವನ್ನು ತಾತ್ಕಾಲಿಕ ವಾಗಿ ಸ್ಥಗಿತ ಮಾಡಲಾಗಿದೆ. ಆಗಸ್ಟ್ 9ರ ವರಮಹಾಲಕ್ಷ್ಮಿ ಹಬ್ಬದ ದಿನ ಬೆಳಗಿನ 10.30ರ ಸಮಯದಲ್ಲಿ ಘಟಿಸಿದ ಈ ಘೋರ ದುರಂತದಲ್ಲಿ ಹರೀಶ್ ಅವರ ಪತ್ನಿ 8 ತಿಂಗಳ ತುಂಬು…
ಕಾವೇರಿ ತವರು ತತ್ತರ: ಪ್ರವಾಹ ಭೀತಿಯಲ್ಲಿ ಕಂಗಾಲಾಗಿರುವ ಜನ
August 11, 2019ಮಡಿಕೇರಿ, ಆ.10- ಕೊಡಗು ಜಿಲ್ಲೆಯಲ್ಲಿ ಭಾರೀ ಪ್ರವಾಹ ಉಂಟಾಗಿದ್ದು, ಸಹಸ್ರ ಸಂಖ್ಯೆಯಲ್ಲಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆ.10ರ ಬೆಳಿಗ್ಗೆಯಿಂದ ಜಿಲ್ಲೆಯಲ್ಲಿ ಘೋಷಣೆ ಮಾಡಲಾಗಿದ್ದ “ರೆಡ್ ಅಲರ್ಟ್” ಅನ್ನು ಮುಂದುವರೆಸಿದ್ದು, ಭಾರೀ ಮಳೆಯಿಂದಾಗಿ ಕ್ಷಣದಿಂದ ಕ್ಷಣಕ್ಕೆ ಕಾವೇರಿ ತವರಿನ ಪರಿಸ್ಥಿತಿ ಸಂಪೂರ್ಣ ವಿಷಮಕ್ಕೆ ತಿರುಗುತ್ತಿದ್ದು, ರಕ್ಷಣಾ ಕಾರ್ಯನಿರತ ಸಿಬ್ಬಂದಿಗಳೇ ಕಂಗಾಲಾಗಿದ್ದಾರೆ. ವಿರಾಜಪೇಟೆ, ಭಾಗಮಂಡಲ, ನಾಪೋಕ್ಲು ಪ್ರದೇಶ ಗಳಲ್ಲಿ ಭಾರೀ ಗಾಳಿ ಮಳೆ ಸಹಿತ ಭೂ ಕುಸಿತದ ಎಲ್ಲಾ ಸಾಧ್ಯತೆಗಳಿದ್ದು ಅಲ್ಲಿನ ನಿವಾಸಿಗಳು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು…