ಮೈಸೂರು,ಫೆ.21(ಎಂಟಿವೈ)- ಮೈಸೂರಿನ ಕುಕ್ಕರಹಳ್ಳಿ ಕೆರೆ ಆವರಣದಲ್ಲಿ ಭಾನುವಾರ ವಿವಿಧ ಸಂಸ್ಥೆಗಳ ಕಾರ್ಯ ಕರ್ತರು, ಸ್ವಯಂಸೇವಕರು ಸ್ವಚ್ಛತಾ ಅಭಿಯಾನ ನಡೆಸಿ 10 ಚೀಲಕ್ಕೂ ಹೆಚ್ಚು ಪ್ಲಾಸ್ಟಿಕ್ ಸೇರಿದಂತೆ ನಿರುಪಯುಕ್ತ ಕಸ ಸಂಗ್ರಹಿಸಿದರು. ರೋಟರಿ ಮೈಸೂರ್ ಸೌತ್ ಈಸ್ಟ್, ಇನ್ನರ್ವೀಲ್ ಕ್ಲಬ್ ಆಫ್ ಸೌತ್ ಈಸ್ಟ್, ರೋಟರಾಕ್ಟ್ ಕ್ಲಬ್ ಮತ್ತು ರೋಟರಾಕ್ಟ್ ವಿಶ್ವಪ್ರಜ್ಞ, ಎಂ.ಐ.ಟಿ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಬೆಳಗ್ಗೆ 7.30ರಿಂದ 9.30ರವರೆಗೆ ನಡೆದ ಸ್ವಚ್ಛತಾ ಅಭಿಯಾನÀ ದಲ್ಲಿ 30ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಕುಕ್ಕರಹಳ್ಳಿ ಕೆರೆಯ ವಾಕಿಂಗ್ ಪಾಥ್,…
ಕುಕ್ಕರಹಳ್ಳಿ, ಹೆಬ್ಬಾಳು ಕೆರೆಗಳಲ್ಲಿ ಶಾಸಕ ನಾಗೇಂದ್ರ ಪರಿಶೀಲನೆ
March 13, 2020ಮೈಸೂರು, ಮಾ.12(ಆರ್ಕೆ)-ಇತ್ತೀ ಚೆಗೆ ಕೆಲವೆಡೆ ಕೊಕ್ಕರೆ ಸೇರಿದಂತೆ ಇನ್ನಿ ತರೆ ಪಕ್ಷಿಗಳು ಹಾಗೂ ಕೋಳಿಗಳು ಏಕಾ ಏಕಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಶಾಸಕ ಎಲ್.ನಾಗೇಂದ್ರ ಅವರು ಅಧಿಕಾರಿಗಳೊಂ ದಿಗೆ ಮೈಸೂರಿನ ಕುಕ್ಕರಹಳ್ಳಿ, ಹೆಬ್ಬಾಳು ಕೆರೆ ಹಾಗೂ ಮೇಟಗಳ್ಳಿಯ ಬಿಎಂಶ್ರೀ ನಗರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಳೆದ 6 ತಿಂಗಳಿಂದೀಚೆಗೆ ಯಾವ ಯಾವ ಬಗೆಯ ಎಷ್ಟು ಪಕ್ಷಿಗಳು ಅಸಹಜ ವಾಗಿ ಸಾವನ್ನಪ್ಪಿವೆ, ಲ್ಯಾಬೊರೇಟರಿ ವರದಿ ಗಳು ಏನು ಹೇಳಿವೆ, ಕಳೆದ ಮೂರು ದಿನಗಳ ಹಿಂದೆ ಕುಕ್ಕರಹಳ್ಳಿ ಮತ್ತು ಹೆಬ್ಬಾಳು…
ಕುಕ್ಕರಹಳ್ಳಿ ಕೆರೆಯಲ್ಲಿ ಕಲುಷಿತ ನೀರೆತ್ತುತ್ತಿರುವ ಸಕ್ಕಿಂಗ್ ಯಂತ್ರ
March 5, 2020ಕೆರೆ ಸಂರಕ್ಷಣೆ, ವಾತಾವರಣ ಸುಧಾರಿಸುವ ಕಾರ್ಯ ಪಾಲಿಕೆಯಿಂದ ಪ್ರಾರಂಭ ಮೈಸೂರು,ಮಾ.4(ಎಂಟಿವೈ)- ಮೈಸೂರಿನ ಕುಕ್ಕರಹಳ್ಳಿ ಕೆರೆಗೆ ಪಡುವಾರ ಹಳ್ಳಿ ಸೇರಿದಂತೆ ವಿವಿಧೆಡೆಯಿಂದ ಹರಿದು ಬರುತ್ತಿದ್ದ ಕಲುಷಿತ ನೀರು ತಡೆಯಲು ಹಾಗೂ ಹಲವಾರು ವರ್ಷಗಳಿಂದ ಸಂಗ್ರಹ ವಾಗಿರುವ ಕಲುಷಿತ ನೀರಿನ ಕೆಸರನ್ನು ಸಕ್ಕಿಂಗ್ ಯಂತ್ರದ ಮೂಲಕ ಮೇಲೆತ್ತಿ, ಕೆರೆ ಪರಿಸರ ಶುಚಿಗೊಳಿಸುವ ಕಾರ್ಯಾಚರಣೆ ಕಡೆಗೂ ಬುಧವಾರ ಆರಂಭಗೊಂಡಿತು. ಪಡುವಾರಹಳ್ಳಿ ಮತ್ತಿತರ ಬಡಾವಣೆ ಗಳಿಂದ ಮಿತಿಮೀರಿದ ಪ್ರಮಾಣದಲ್ಲಿ ಕಲುಷಿತ ನೀರು ಮೈಸೂರು-ಹುಣಸೂರು ಮುಖ್ಯರಸ್ತೆಗೆ ಅಡ್ಡಲಾಗಿ ಕಟ್ಟಿರುವ ಮ್ಯಾಜಿಕ್ ಬಾಕ್ಸ್ ಮೂಲಕ ಕುಕ್ಕರಹಳ್ಳಿ…
ಪರಿಸರಕ್ಕೆ ಪೂರಕವಾಗಿ ಕುಕ್ಕರಹಳ್ಳಿ ಕೆರೆ ಅಭಿವೃದ್ಧಿಗೆ ಒತ್ತು
September 9, 2019ಮೈಸೂರು, ಸೆ.8(ಪಿಎಂ)- ಮೈಸೂರಿನ ಮಾನಸಗಂಗೋತ್ರಿಯ ಕುಕ್ಕರಹಳ್ಳಿ ಕೆರೆ ಅಭಿವೃದ್ಧಿ ಹಾಗೂ ಇಲ್ಲಿನ ಪರಿಸರ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಮೈಸೂರು ನಗರದ ಸೌಂದರ್ಯೀಕರಣದ ಜೊತೆಗೆ ನೈರ್ಮ ಲ್ಯಕ್ಕೂ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದರು. ಇಂದು ಬೆಳಿಗ್ಗೆ ಅಧಿಕಾರಿಗಳೊಂದಿಗೆ ಕುಕ್ಕರಹಳ್ಳಿ ಕೆರೆಗೆ ಭೇಟಿ ನೀಡಿದ ಸಚಿ ವರು, ವಾಯುವಿಹಾರಿಗಳೊಂದಿಗೆ ಸಮಾ ಲೋಚಿಸಿ ಕೆರೆ ಆವರಣದಲ್ಲಿನ ಕುಂದು-ಕೊರತೆ ಆಲಿಸಿ ಬಳಿಕ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು. ಆದ್ಯತೆ ಮೇರೆಗೆ ಕೆಲ ಸಮಸ್ಯೆಗಳನ್ನು ಶೀಘ್ರದಲ್ಲಿ ಪರಿಹರಿಸಲಾಗುವುದು….
ಕುಕ್ಕರಹಳ್ಳಿ ಕೆರೆಯಲ್ಲಿ ರಾಸಾಯನಿಕ ನೊರೆ ಮೈಸೂರು ವಿವಿ ಕುಲಸಚಿವ ಪ್ರೊ.ಲಿಂಗರಾಜ ಗಾಂಧಿ ಪರಿಶೀಲನೆ
July 13, 2019ಮೈಸೂರು,ಜು.12(ಎಂಟಿವೈ)- ಕಲುಷಿತ ನೀರಿನ ಪ್ರಮಾಣ ಹೆಚ್ಚಾಗಿ ರಾಸಾಯನಿಕ ನೊರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶುಕ್ರವಾರ ಅಧಿಕಾರಿಗಳೊಂದಿಗೆ ಕುಲಸಚಿವ ಪ್ರೊ.ಲಿಂಗರಾಜ ಗಾಂಧಿ ಕುಕ್ಕರಹಳ್ಳಿ ಕೆರೆಗೆ ಭೇಟಿ ನೀಡಿ, ಕಲುಷಿತ ನೀರು ಸೇರುತ್ತಿರುವ ಸ್ಥಳ ಪರಿಶೀಲಿಸಿ ದರಲ್ಲದೆ, ಒಳಚರಂಡಿ ಪೈಪ್ ದುರಸ್ತಿಗೆ ಪಾಲಿಕೆಗೆ ಮನವರಿಕೆ ಮಾಡಿಕೊಟ್ಟರು. ಪಡುವಾರಹಳ್ಳಿ, ಜಯಲಕ್ಷ್ಮೀಪುರಂ, ಒಂಟಿಕೊಪ್ಪಲು ಸೇರಿದಂತೆ ಸುತ್ತಮುತ್ತ ಲಿನ ಬಡಾವಣೆಗಳ ಒಳಚರಂಡಿ ನೀರು, ಸರ್ವಿಸ್ ಸ್ಟೇಷನ್ಗಳಿಂದ ರಾಸಾಯನಿಕ ಮಿಶ್ರಿತ ನೀರು, ವಿದ್ಯಾರ್ಥಿನಿಲಯಗಳಿಂದ ಶೌಚಾಲಯದ ನೀರು ಪಡುವಾರಹಳ್ಳಿಯ ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಹಿಂಭಾಗವಿರುವ ದೊಡ್ಡ…
ಕುಕ್ಕರಹಳ್ಳಿ ಕೆರೆ ಏರಿಯಲ್ಲಿ ನೀರು ಸೋರಿಕೆ: ಸಾರ್ವಜನಿಕರಲ್ಲಿ ಆತಂಕ
May 14, 2019ಮೈಸೂರು: ಮೈಸೂರಿಗರ ನೆಚ್ಚಿನ ವಾಯು ವಿಹಾರ ತಾಣವೂ ಆಗಿರುವ ಪ್ರೇಕ್ಷಣಿಯ ಕುಕ್ಕರಹಳ್ಳಿ ಕೆರೆ ಏರಿಯಲ್ಲಿ ನೀರು ಸೋರಿಕೆಯಾಗುತ್ತಿರುವುದರಿಂದ ಆತಂಕ ಸೃಷ್ಟಿಯಾಗಿದೆ. ಬೋಗಾದಿ ರಸ್ತೆಯಲ್ಲಿರುವ ಮಾಚೀದೇವರ ದೇವಸ್ಥಾನದ ಎದುರಿಗೆ ಕೆರೆಯ ಏರಿ ಮಧ್ಯಭಾಗದಿಂದ ಮೂರ್ನಾಲ್ಕು ದಿನಗಳಿಂದ ನೀರು ಹರಿಯುತ್ತಿದ್ದು, ಇದರ ಪ್ರಮಾಣ ದಿನೇ ದಿನೆ ಹೆಚ್ಚಾಗುತ್ತಿದೆ. ಇದರಿಂದ ಏರಿಯಲ್ಲಿ ಬಿರುಕು ಕಾಣಿಸಿಕೊಂಡಿರಬಹುದೆಂಬ ಆತಂಕ ಸಾರ್ವಜನಿಕರಿಂದ ವ್ಯಕ್ತವಾಗಿದೆ. ಆದರೆ ಏರಿಗೆ ಹೊಂದಿಕೊಂಡಂತಿರುವ ನೀರಿನ ಪೈಪ್ ಒಡೆದು ಹೀಗೆ ನೀರು ಸೋರಿಕೆಯಾಗುತ್ತಿದೆ ಎಂದು ನಿತ್ಯ ಇಲ್ಲಿಗೆ ವಾಯು ವಿಹಾರಕ್ಕೆ ಬರುವವರು ತಿಳಿಸಿದ್ದಾರೆ….
ಕುಕ್ಕರಹಳ್ಳಿ ಕೆರೆಯಲ್ಲಿ ಎನ್ಸಿಸಿ ಕೆಡೆಟ್ಗಳಿಂದ ಸ್ವಚ್ಛತಾ ಅಭಿಯಾನ
March 7, 2019ಮೈಸೂರು: ಮೈಸೂರಿನ ಕುಕ್ಕರಹಳ್ಳಿ ಕೆರೆ ಆವರಣದಲ್ಲಿ ಬುಧವಾರ ಸ್ವಚ್ಛತಾ ಅಭಿಯಾನ ಕೈಗೊಂಡ ಎನ್ಸಿಸಿ ಕೆಡೆಟ್ಗಳು ಅಪಾರ ಪ್ರಮಾಣದ ಪ್ಲಾಸ್ಟಿಕ್ ಹಾಗೂ ಇನ್ನಿತರ ತ್ಯಾಜ್ಯ ಸಂಗ್ರಹಿಸಿ, ವಿಲೇವಾರಿ ಮಾಡಿದರು. ಸಮಾಜ ಸೇವಾ ಕಾರ್ಯದ ಹಿನ್ನೆಲೆ ಯಲ್ಲಿ ಸ್ವಚ್ಛತಾ ಅಭಿಯಾನ ನಡೆಸಿದ ಎನ್ಸಿಸಿ ಕೆಡೆಟ್ಗಳು ಕೆರೆ ದಡ, ಕೆರೆ ಏರಿ ಹಾಗೂ ಆವರಣದಲ್ಲಿ ಸಾರ್ವಜನಿಕರು ಬಿಸಾಡಿದ್ದ ಕಸವನ್ನು ಸಂಗ್ರಹಿಸಿದರು. ಪ್ಲಾಸ್ಟಿಕ್ ಪೇಪರ್, ಪ್ಲಾಸ್ಟಿಕ್ ನೀರಿನ ಬಾಟಲಿಗಳು, ಹೊದಿಕೆಗಳನ್ನು ಸಂಗ್ರಹಿಸಿದರು. ಬೆಳಿಗ್ಗೆ 6.45ರಿಂದ 9.30ರವರೆಗೆ ಸ್ವಚ್ಛತಾ ಕಾರ್ಯ ನಡೆಸಿದರು. ವಿದ್ಯಾರ್ಥಿಗಳ ಈ…
ಕುಕ್ಕರಹಳ್ಳಿ ಕೆರೆಯಲ್ಲಿ ಮೀನುಗಾರಿಕೆ: ವಲಸೆ ಪಕ್ಷಿಗಳಿಗೆ ಕಂಟಕ
February 8, 2019ಮೈಸೂರು: ಮೈಸೂರಿನ ಕುಕ್ಕರಹಳ್ಳಿ ಕೆರೆಯಲ್ಲಿ ಕರ್ನಾಟಕ ಮೀನು ಗಾರಿಕಾ ಮಹಾಮಂಡಲದ ವತಿಯಿಂದ ಮೀನುಗಾರಿಕೆ ಆರಂಭವಾಗಿರುವುದರಿಂದ ವಲಸೆ ಪಕ್ಷಿಗಳು ಆತಂಕಕ್ಕೆ ಒಳಗಾಗಿದ್ದು, ತಕ್ಷಣವೇ ಮೀನುಗಾರಿಕೆ ನಿಲ್ಲಿಸುವಂತೆ ಪರಿಸರ ಪ್ರೇಮಿಗಳು ಒತ್ತಾಯಿಸಿದ್ದಾರೆ. ಕುಕ್ಕರಹಳ್ಳಿ ಕೆರೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ತೆಪ್ಪ ಬಳಸಿ ಮೀನುಗಾರಿಕೆ ನಡೆಸಿ ದಿನಕ್ಕೆ ನೂರಾರು ಕೆಜಿ ಮೀನುಗಳನ್ನು ಹಿಡಿದು ಮಾರಾಟ ಮಾಡಲಾಗುತ್ತಿದೆ. ಇದು ದೇಶ-ವಿದೇಶದ ಅಪರೂಪದ ಪಕ್ಷಿಗಳು ವಲಸೆ ಬರುವ ಕಾಲವಾಗಿದೆ. ಮೀನು ಗಾರಿಕೆಯಿಂದ ವಲಸೆ ಪಕ್ಷಿಗಳು ಬೆದರುತ್ತವೆ. ವಲಸೆ ಪಕ್ಷಿಗಳು ಸಂತಾನೋತ್ಪತ್ತಿ ಮುಗಿಯು ವವರೆಗೂ ಮೀನು…
ಕುಕ್ಕರಹಳ್ಳಿ ಕೆರೆ ಪ್ರವಾಸಿ ತಾಣವಾಗಿಸಲು ಸಚಿವ ಸಾರಾ ನಿರ್ಧಾರ
November 23, 2018ಮೈಸೂರು: ತಾಂತ್ರಿಕ ತಜ್ಞರ ಕಮಿಟಿ ವರದಿಯಂತೆ ಕುಕ್ಕರಹಳ್ಳಿ ಕೆರೆ ಅಭಿವೃದ್ಧಿ ಯೋಜನೆಯ ಬಾಕಿ ಉಳಿದಿರುವ ಕಾಮಗಾರಿಯನ್ನು ಮುಂದುವರೆಸಿ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಮೈಸೂರು ವಿಶ್ವವಿದ್ಯಾನಿಲಯದ ಇಂಜಿನಿಯರ್ಗಳಿಗೆ ಇಂದಿಲ್ಲಿ ನಿರ್ದೇಶನ ನೀಡಿದ್ದಾರೆ. ಪ್ರವಾಸೋದ್ಯಮ ಇಲಾಖೆಯಿಂದ 2009-10ನೇ ಸಾಲಿನಲ್ಲಿ ಮಂಜೂರಾ ಗಿದ್ಧ 2 ಕೋಟಿ ರೂ. ಅನುದಾನದಲ್ಲಿ ಕುಕ್ಕರಹಳ್ಳಿ ಕೆರೆ ಆವರಣವನ್ನು ಮೂಲ ಸೌಲಭ್ಯ ಕಲ್ಪಿಸಿ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವ ಕಾಮಗಾರಿಯನ್ನು ವಿಶ್ವವಿದ್ಯಾನಿಲಯವು ಪೂರೈಸಿದೆ. ಅದನ್ನು ಪರಿಶೀಲನೆ ನಡೆಸಿದ ಸಚಿವರು. ಈಗಾಗಲೇ 1.5 ಕೋಟಿ ರೂಗಳನ್ನು ಖರ್ಚು ಮಾಡಿ…
ಕಲಾವಿದರ ಕುಂಚದಲ್ಲಿ ಅರಳಿದ ಕುಕ್ಕರಹಳ್ಳಿಕೆರೆಯ ಸೌಂದರ್ಯದ ಸೊಬಗು
August 27, 2018ಮೈಸೂರು: ಕಲಾವಿದರ ಕಣ್ಣಲ್ಲಿ ಸೆರೆಯಾದ ಮೈಸೂರಿನ ಕುಕ್ಕರಹಳ್ಳಿಯ ಪ್ರಾಕೃತಿಕ ಸೌಂದರ್ಯದ ರಮಣೀಯ ದೃಶ್ಯಾವಳಿಗಳು ಆ ಕಲಾವಿದರ ಕುಂಚದಲ್ಲಿ ಪ್ರತಿಬಿಂಬವಾಗಿ ಮನಸೂರೆಗೊಂಡವು. ಚಾಮರಾಜೇಂದ್ರ ದೃಶ್ಯ ಕಲಾ ಅಕಾಡೆಮಿ (ಕಾವಾ), ವೈಲ್ಡ್ ಮೈಸೂರು ಜಂಟಿ ಆಶ್ರಯದಲ್ಲಿ ಕುಕ್ಕರಹಳ್ಳಿಕೆರೆಯ ಮುಖ್ಯದ್ವಾರದ (ರೈಲ್ವೆ ಹಳಿ ಬಳಿಯ ದ್ವಾರ) ಬಳಿ ಭಾನುವಾರ ಬೆಳಿಗ್ಗೆ ಹಮ್ಮಿಕೊಂಡಿದ್ದ ಕೆರೆ ಆವರಣದ ಚಿತ್ರರಚನಾ ಕಾರ್ಯಕ್ರಮದಲ್ಲಿ ಕಾವಾದ ಮೊದಲ ವರ್ಷದ ವಿದ್ಯಾರ್ಥಿಗಳು ಕೆರೆಯ ವೈವಿಧ್ಯಮಯ ನೋಟವನ್ನು ತಮ್ಮ ಕಲಾತ್ಮಕ ಲೋಕದಲ್ಲಿ ಕಟ್ಟಿಕೊಟ್ಟರು. ಶತಮಾನಕ್ಕೂ ಹಳೆಯದಾದ ಕುಕ್ಕರಹಳ್ಳಿಕೆರೆಯು ಜಲಚರ ಜೀವ ಸಂಕುಲ…