ಸೋಮವಾರಪೇಟೆ: ವಿವಾಹಿತ ಮಹಿಳೆಯೋರ್ವರು ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸಮೀಪದ ಹಾನಗಲ್ಲು ಗ್ರಾಮದಲ್ಲಿ ನಡೆದಿದೆ. ಹಾನಗಲ್ಲು ಗ್ರಾಮ ನಿವಾಸಿ ನೋಣು-ಕೊರಪಲಮ್ಮ ಅವರ ಪುತ್ರಿ ಹೆಚ್.ಎನ್. ರತ್ನ(36) ಎಂಬುವರು ಸೋಮ ವಾರ ರಾತ್ರಿ ಮನೆ ಸಮೀಪದ ಮಾವಿನ ಮರಕ್ಕೆ ವೇಲಿ ನಿಂದ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಳೆದ 4 ತಿಂಗಳ ಹಿಂದೆ ಶನಿವಾರಸಂತೆಯ ಮಹೇಂದ್ರ ಎಂಬಾತನೊಂದಿಗೆ ವಿವಾಹವಾಗಿದ್ದ ರತ್ನ ಅವರು, ನಿನ್ನೆ ದಿನ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿ ದ್ದಾರೆ. ಆದರೆ ಡೆತ್ನೋಟ್ ವಿವರಣೆ ಲಭ್ಯವಾಗಿಲ್ಲ….
ಅರ್ಹರಿಗೆ ಸೌಲಭ್ಯ ತಲುಪಲು ಹೆಚ್ಚಿನ ಗಮನ ಅಗತ್ಯ
February 19, 2019ಮಡಿಕೇರಿ: ರೋಟರಿ ಸೇರಿ ದಂತೆ ಸಾಮಾಜಿಕ ಸೇವಾ ಸಂಘಟನೆಗಳ ನೆರವು ಸಮಾಜದ ನೈಜ ಫಲಾನುಭವಿ ಗಳಿಗೆ ದೊರಕುವ ನಿಟ್ಟಿನಲ್ಲಿ ಸಂಘಟನೆ ಗಳು ಗಮನ ಹರಿಸಬೇಕಾಗಿದೆ ಎಂದು ರೋಟರಿ ಜಿಲ್ಲೆ 3181ರ ರಾಜ್ಯಪಾಲ ಪಿ.ರೋಹಿನಾಥ್ ಕರೆ ನೀಡಿದ್ದಾರೆ. ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ಗೆ ಅಧಿಕೃತ ಭೇಟಿ ನೀಡಿದ ಸಂದರ್ಭ ಮಾತ ನಾಡಿದ ಪಿ.ರೋಹಿನಾಥ್, ಯಾವುದೇ ವ್ಯಕ್ತಿ ಜೀವನದಲ್ಲಿ ಸಣ್ಣ ಪುಟ್ಟ ಲೋಪ ದೋಷಗಳನ್ನು ಹೊಂದದೆ ಸಾಧನೆಯ ಗುರಿ ತಲುಪಲು ಅಸಾಧ್ಯ. ಆದರೆ ಯಾರೂ ಜೀವನದಲ್ಲಿ ಶಾಶ್ವತವಾಗಿ ಕಹಿ ನೆನಪಾಗಿ…
ಕಾವೇರಿ ತಾಲೂಕು ರಚನೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ
February 10, 2019ಕುಶಾಲನಗರ: ಕೊಡಗು ಜಿಲ್ಲೆ ಯಲ್ಲಿ ಎಲ್ಲಾ ಅರ್ಹತೆ ಹೊಂದಿರುವ ಕುಶಾ ಲನಗರ ಕಾವೇರಿ ತಾಲೂಕು ಅನ್ನು ನೂತನ ತಾಲೂಕುಗಳ ಪಟ್ಟಿಯಿಂದ ಕೈಬಿಟ್ಟಿರುವ ಸರ್ಕಾರ ಕ್ರಮವನ್ನು ಖಂಡಿಸಿ ಶನಿವಾರ ಬಿಜೆಪಿ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿ ಭಟನೆ ನಡೆಸಿದರು. ನಗರ ಬಿಜೆಪಿ ಘಟಕದ ಅಧ್ಯಕ್ಷ ಕೆ.ಜಿ. ಮನು ನೇತೃತ್ವದಲ್ಲಿ ಜಮಾಯಿಸಿದ ಕಾರ್ಯ ಕರ್ತರು ಸರ್ಕಾರದ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಳೆದ ಎರಡು ದಶಕಗಳಿಂದಲೂ ಕಾವೇರಿ ತಾಲೂಕು ರಚನೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಾ ಸರ್ಕಾರಕ್ಕೆ ಮನವಿ ಸಲ್ಲಿಸುತ್ತ ಬಂದಿದ್ದರೂ ಕೂಡ…
ಯುವ ಭವನ ಹಸ್ತಾಂತರಕ್ಕಾಗಿ ಯುವ ಒಕ್ಕೂಟದಿಂದ ಶಾಸಕರಿಗೆ ಮನವಿ
February 5, 2019ಮಡಿಕೇರಿ: ಯುವ ಚಟುವಟಿಕೆ ಗಳಿಗಾಗಿ ನಗರದ ಸುದರ್ಶನ ಅತಿಥಿ ಗೃಹದ ರಸ್ತೆ ಸಮೀಪ ಸುಮಾರು 6 ವರ್ಷಗಳ ಹಿಂದೆ ನಿರ್ಮಾಣಗೊಂಡು ಇದೀಗ ಮಹಿಳಾ ಕಾಲೇಜು ವಶದಲ್ಲಿರುವ ಯುವ ಭವನವನ್ನು ಯುವ ಒಕ್ಕೂಟಕ್ಕೆ ಹಸ್ತಾಂತರಿಸಲು ಅಗತ್ಯ ಕ್ರಮ ಕೈಗೊಳ್ಳ ಬೇಕೆಂದು ಒತ್ತಾಯಿಸಿ ಜಿಲ್ಲಾ ಯುವ ಒಕ್ಕೂಟದ ಪ್ರಮುಖರು ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಸೋಮವಾರಪೇಟೆಯಲ್ಲಿ ಶಾಸಕರ ಕಚೇರಿಯಲ್ಲಿ ರಂಜನ್ ಅವರನ್ನು ಭೇಟಿ ಯಾದ ಒಕ್ಕೂಟದ ಜಿಲ್ಲಾಧ್ಯಕ್ಷ ಪಿ.ಪಿ. ಸುಕುಮಾರ್…
ದಾರಿ ಯಾವುದಯ್ಯ ಅಬ್ಬಿಫಾಲ್ಸ್ಗೆ…? ಗೂಗಲ್ ಮ್ಯಾಪ್ ನಂಬಿ ದಾರಿ ತಪ್ಪುತ್ತಿರುವ ಪ್ರವಾಸಿಗರು
January 29, 2019ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದ ಆಗಸ್ಟ್ ತಿಂಗಳಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಹಲವು ಗ್ರಾಮಗಳು ಭೌಗೋಳಿಕವಾಗಿ ಕಣ್ಮರೆಯಾಗಿವೆ. ಬೆಟ್ಟ ಶ್ರೇಣಿಗಳು ಕುಸಿದು ನದಿಗಳು ಹರಿಯುವ ದಿಕ್ಕನ್ನೇ ಬದಲಿಸಿವೆ. ಬೆಟ್ಟಗಳಿಂದ ತೊರೆಯಾಗಿ ಹರಿಯುತ್ತಿದ್ದ ಜಲಧಾರೆಗಳು ಭೂ ಕುಸಿತಕ್ಕೆ ಸಿಲುಕಿ ಜಲಪಾತಗಳಾಗಿ ಮಾರ್ಪಟ್ಟಿವೆ. ಇವು ಪ್ರಕೃತಿ ವಿಕೋಪಕ್ಕೆ ಸಿಲುಕಿ ತತ್ತರಿಸಿದ ಕೆಲವು ಗ್ರಾಮಗಳ ವಾಸ್ತವ ಸ್ಥಿತಿ. ಆದರೆ ಮಡಿಕೇರಿಯಿಂದ 18ಕಿ.ಮೀ. ದೂರದಲ್ಲಿರುವ ಮರಗೋಡು ಹೊಸ್ಕೇರಿ ಗ್ರಾಮದಲ್ಲಿ ಯಾವುದೇ ಪ್ರಕೃತಿ ವಿಕೋಪ ಘಟಿಸಿಲ್ಲ. ಯಾವುದೇ ಬೆಟ್ಟ ಶ್ರೇಣಿಗಳೂ ಕುಸಿದು ಬಿದ್ದಿಲ್ಲ. ಹೀಗಿದ್ದರೂ…
ನಾನು ರಾಜಕೀಯಕ್ಕೆ ಬರಲ್ಲ: ಯದುವೀರ್
January 29, 2019ಮಡಿಕೇರಿ: ರಾಜಕೀಯ ರಂಗಕ್ಕೆ ಕಾಲಿಡುವುದಿಲ್ಲ ಎಂಬ ತನ್ನ ನಿರ್ಧಾರ ಅಚಲವಾಗಿದ್ದು, ಜನಸೇವೆಗೆ ಸಾಮಾಜಿಕ ಚಟುವಟಿಕೆಗಳ ಮೂಲಕ ಮುಂದಾಗುವುದಾಗಿ ಮೈಸೂರು ರಾಜ ವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸ್ಪಷ್ಟಪಡಿಸಿದ್ದಾರೆ. ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಮಡಿಕೇರಿಯಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಯದುವೀರ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ಶಾ ಚುನಾವಣೆಗೆ ಮುನ್ನ ಮೈಸೂರು ರಾಜಮನೆತನದ ಮುಖಂಡರನ್ನು ಭೇಟಿಯಾಗುವೆ ಎಂಬ ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಯದುವೀರ್, ತಾನು ಖಂಡಿತಾ ರಾಜಕೀಯಕ್ಕೆ ಬರಲಾರೆ ಎಂದರು. ಪ್ರಕೃತಿ ವಿಕೋಪ ಪೀಡಿತ ಕೊಡಗಿನ…
ದ್ವಿತೀಯ ಸ್ಥಾನ ಪಡೆದ ಮಹಿಳಾ ವೇದಿಕೆ
January 23, 2019ಮಡಿಕೇರಿ: ಮಂಡ್ಯದ ನಾಗಮಂಗಲದಲ್ಲಿನ ಶ್ರೀ ಆದಿಚುಂಚನಗಿರಿ ಮಠ ದಲ್ಲಿ ಆಯೋಜಿತ ಚುಂಚಾದ್ರಿ ಮಹಿಳಾ ಸಮಾವೇಶದಲ್ಲಿ ಸೋಮವಾರಪೇಟೆ ಮಹಿಳಾ ಪ್ರಗತಿ ಪರ ಮಹಿಳಾ ವೇದಿಕೆ ತಂಡವು ದ್ವಿತೀಯ ಸ್ಥಾನಗಳಿಸಿದೆ. ಪ್ರಗತಿಪರ ಮಹಿಳಾ ವೇದಿಕೆಯ ತಂಡದಲ್ಲಿ ಅಶ್ವಿನಿ ಕೃಷ್ಣಕಾಂತ್, ಸಂಧ್ಯಾಕೃಷ್ಣಪ್ಪ, ರೂಪ, ತೀರ್ಥ, ಭವ್ಯ, ಸೌಮ್ಯ ಮತ್ತು ವೀಣಾ ಪಾಲ್ಗೊಂಡಿದ್ದರು. ಈ ತಂಡದ ಜಾನಪದ ನೃತ್ಯ ತೀರ್ಪುಗಾರರೊಂದಿಗೆ ಪ್ರೇಕ್ಷಕರ ಅಪಾರ ಮೆಚ್ಚುಗೆಗೂ ಕಾರಣವಾಗಿ ರಾಜ್ಯಮಟ್ಟದ ನೃತ್ಯ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಲು ಕಾರಣವಾಯಿತು.
ಪುತ್ತಮಕ್ಕಿ ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ಪ್ರತಿಭಟನೆ
January 16, 2019ವಿರಾಜಪೇಟೆ: ತಾಲೂಕಿನ ಕೆದ ಮುಳ್ಳೂರು ಪುತ್ತಮಕ್ಕಿ ರಸ್ತೆ ಅಭಿವೃದ್ಧಿಗೊಳಿ ಸುವಂತೆ ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಕಳೆದ ಆರು ವರ್ಷಗಳಿಂದ ಕಾಮಗಾರಿ ಮಾಡುವುದಾಗಿ ಹೇಳಿದ ಲೋಕೋ ಪಯೋಗಿ ಇಲಾಖೆಯ ಅಧಿಕಾರಿಗಳು ಎರಡು ಬಾರಿ ಟೆಂಡರ್ ಕರೆದು ಮತ್ತೆ ವಾಪಸ್ ಪಡೆದುಕೊಂಡಿದ್ದಾರೆ. ರಸ್ತೆಯಲ್ಲಿ ವಾಹನ ಸಂಚಾರ, ದ್ವಿಚಕ್ರ ವಾಹನ, ಶಾಲಾ ಮಕ್ಕಳು ಓಡಾಡಲು ಸಾಧ್ಯವಾಗುತ್ತಿಲ್ಲ. ಅದರಿಂದ ಇನ್ನು 20 ದಿನದಲ್ಲಿ ಈ ರಸ್ತೆ ಕಾಮ ಗಾರಿಗೆ ಚಾಲನೆ ನೀಡದಿದ್ದರೆ ಇಲಾಖೆಯ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆ ಸುವುದಾಗಿ…
ನಾಪೋಕ್ಲು ಬಳಿ ರೇವ್ಪಾರ್ಟಿ; ಆರೋಪಿಗಳ ಬಂಧನ
January 15, 2019ಮಡಿಕೇರಿ: ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ನೆಲಜಿ ಗ್ರಾಮದ “ನೆಲಜಿ ಎ-1 ಗ್ಲಾಂಪಿಂಗ್” ಹೋಂ ಸ್ಟೇಯಲ್ಲಿ ಅಕ್ರಮವಾಗಿ ರೇವ್ ಪಾರ್ಟಿಯನ್ನು ಆಯೋಜಿಸಿ ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದ ಬಾಂಬೆ, ಪೂನಾ ಹಾಗೂ ಬೆಂಗಳೂರು ಮೂಲದ ವ್ಯಕ್ತಿಗಳನ್ನು ಬಂಧಿಸುವಲ್ಲಿ ಜಿಲ್ಲಾ ಅಪರಾಧ ಪತ್ತೆ ದಳ ಯಶಸ್ವಿಯಾಗಿದೆ. ನಾಪೋಕ್ಲುವಿನ ಎ1 ಗ್ಲಾಂಪ್ಲಿಂಗ್ ಹೋಂ ಸ್ಟೇ ಮಾಲೀಕ ಎಂ.ಎ. ಅಪ್ಪಣ್ಣ ಸೇರಿದಂತೆ ಪೂನಾದ ಜೂಡ್ ಪೆರೇರ, ಪಶ್ಚಿಮ ಮುಂಬೈನ ಶಂಕರ್ ಶಾಂತನು, ಬೆಂಗಳೂರಿನ ಸಾಯಿರಾಮ್, ಎಂ.ವಿ. ಈಶ್ವರ್ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ…
ಕೊಡಗು ಪ್ರವಾಸಿ ಉತ್ಸವಕ್ಕೆ ಸಾರಾ ಚಾಲನೆ
January 12, 2019ಮಡಿಕೇರಿ: ಕೊಡಗು ಪ್ರವಾಸಿ ಉತ್ಸವ ಹಾಗೂ 3 ದಿನಗಳ ಕಾಲ ಹಮ್ಮಿ ಕೊಂಡಿರುವ `ಫಲಪುಷ್ಪ ಪ್ರದರ್ಶನ’ಕ್ಕೆ ರಾಜ್ಯ ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಶುಕ್ರವಾರ ಇಲ್ಲಿ ಚಾಲನೆ ನೀಡಿದರು. ನಂತರ ಪಟ್ಟಣದ ನೈಸರ್ಗಿಕ ಸೊಬಗಿನ ರಾಜಾಸೀಟ್ ನಲ್ಲಿ ಹೂವುಗಳಿಂದ ಅಲಂಕೃತವಾಗಿದ್ದ ಕಾವೇರಿ ಮಾತೆಯ ಪ್ರತಿಮೆಗೆ ಪುಷ್ಪಾ ರ್ಚನೆ ನೆರವೇರಿಸಿ, ಉದ್ಯಾನದೊಳಗೆ ವಿಹರಿಸಿದ ಸಚಿವರು ವಿವಿಧ ಕಲಾಕೃತಿ ಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಪ್ರಕೃತಿ ವಿಕೋಪದಿಂದ ಸಂತ್ರಸ್ತ ವಾಗಿದ್ದ…