ಮಡಿಕೇರಿ: ಏನು ಅರಿಯದ 3 ವರ್ಷದ ಮಗುವಿನ ಕಣ್ಣ ಮುಂದೆಯೇ ಆಕೆಯ ಹೆತ್ತವರು ನೇಣು ಹಾಕಿಕೊಂಡು ಬದುಕಿಗೆ ವಿದಾಯ ಹೇಳಿದ ದಾರುಣ ಘಟನೆ ನಗರದ ಎ.ವಿ.ಶಾಲೆ ಬಳಿಯ ಪಂಪಿನ ಕೆರೆ ಬಳಿ ನಡೆದಿದೆ. ನಗರದ ಖಾಸಗಿ ಕನ್ನಡ ಮಾಧ್ಯಮದ ಅನುದಾನಿತ ಶಾಲೆಯಲ್ಲಿ ಗಣಿತ ಶಿಕ್ಷಕರಾಗಿದ್ದ ಚೇತನ್ (34) ಮತ್ತು ವಾಣಿ(27) ದಂಪತಿಯೇ ಆತ್ಮಹತೈಗೆ ಶರಣಾದವರು. ಘಟನೆ ವಿವರ: ಚೇತನ್ ಮೂಲತಃ ತಿಪಟೂರು ನಿವಾಸಿಯಾಗಿದ್ದು, ಕಳೆದ 4 ವರ್ಷದ ಹಿಂದೆ ತುಮಕೂರು ಮೂಲದ ವಾಣಿ ಎಂಬವರನ್ನು ವಿವಾಹವಾಗಿದ್ದರು. ಈ…
ಭ್ರಷ್ಟಾಚಾರಿಗಳಿಗೆ ಮೋದಿ ಭಯ
April 1, 2019ಮಡಿಕೇರಿ: ಮೋದಿಯವರನ್ನು ಮತ್ತೊಮ್ಮೆ ದೇಶದ ಸೇವಕನನ್ನಾಗಿಸಲು ಪ್ರತೀ ಯೋರ್ವರ ಮತ ಕೂಡ ಮುಖ್ಯವಾಗಿದ್ದು, ಮಹಾ ಘಟಬಂಧನ್ ನಾಯಕರು ಈ ಚುನಾವಣೆಯಲ್ಲಿ ಒಗ್ಗಟ್ಟಿನ ಮಂತ್ರ ಜಪಿಸುತ್ತಿರುವುದೇ ಮೋದಿಯ ನಿಜವಾದ ಶಕ್ತಿಗೆ ನಿದರ್ಶನವಾಗಿದೆ ಎಂದು ಕೇಂದ್ರ ರೇಷ್ಮೆ ಸಚಿವೆ ಸ್ಮ್ರಿತಿ ಇರಾನಿ ಹೇಳಿದ್ದಾರೆ. ಕೊಡಗು ಜಿಲ್ಲೆಯ ಗೋಣಿಕೊಪ್ಪಲುವಿನಲ್ಲಿ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತ ನಾಡಿದ ಸ್ಮ್ರಿತಿ ಇರಾನಿ, ಭ್ರಷ್ಟಾಚಾರದಲ್ಲಿಯೇ ಮುಳುಗೆದ್ದಿರುವ ಕಾಂಗ್ರೆಸ್ ಮುಖಂಡರು ಈಗಾಗಲೇ ಜಾಮೀನು ಪಡೆದುಕೊಂಡು ತಿರು ಗುತ್ತಿದ್ದಾರೆ. ಭ್ರಷ್ಟಾಚಾರಿಗಳಿಗೆ ಮೋದಿ ಅವರ ಭಯ ಕಾಡುತ್ತಿದೆ ಎಂದು ಟೀಕಿಸಿದರು….
ಚಿಕ್ಕಪ್ಪ-ಚಿಕ್ಕಮ್ಮನನ್ನು ಕೊಂದು ತಾನೂ ನೇಣಿಗೆ ಶರಣಾದ ಯುವಕ
March 28, 2019ಸೋಮವಾರಪೇಟೆ: ಚಿಕ್ಕಪ್ಪ ಮತ್ತು ಚಿಕ್ಕಮ್ಮನನ್ನು ಕೊಂದ ಯುವಕನೋರ್ವ ನೇಣಿಗೆ ಶರಣಾಗಿರುವ ದಾರುಣ ಘಟನೆ ತಾಲೂಕಿನ ಆಲೂರು ಸಿದ್ದಾಪುರ ಗ್ರಾಮದಲ್ಲಿ ಸಂಜೆ ನಡೆದಿದೆ. ಗ್ರಾಮದ ನಿವೃತ್ತ ಪೊಲೀಸ್ ಸೂದನ ಗಣೇಶ್(63), ಅವರ ಪತ್ನಿ ಮೋಹಿನಿ(48) ಕೊಲೆಯಾದವರು. ಆರೋಪಿ ಸೂದನ ದಿಲೀಪ್(30) ಅದೇ ಮನೆಯಲ್ಲಿ ನೇಣಿಗೆ ಶರ ಣಾಗಿದ್ದಾನೆ. ಇಂದು ಸಂಜೆ 6.30ರ ಸಮಯಕ್ಕೆ ಆರೋಪಿ ದಿಲೀಪ್, ತನ್ನ ಚಿಕ್ಕಪ್ಪನ ಮನೆಗೆ ತೆರಳಿ ಆಸ್ತಿ ವಿಷಯಕ್ಕೆ ಜಗಳ ಮಾಡಿದನೆನ್ನಲಾಗಿದೆ. ಈ ವೇಳೆ ಮಾತು ವಿಕೋಪಕ್ಕೆ ತಿರುಗಿ ಕತ್ತಿಯಿಂದ ಗಣೇಶ್ ಅವರ…
ಜಿಲ್ಲೆಯಲ್ಲಿ ಜೆಡಿಎಸ್ ಬಲವರ್ಧನೆಗೆ ಕ್ರಮ ಪಕ್ಷ ವಿರೋಧಿ ಚಟುವಟಿಕೆ ನಡೆಸಿದರೆ ಅಮಾನತು: ಎಚ್ಚರಿಕೆ
March 16, 2019ಮಡಿಕೇರಿ: ಕೊಡಗು ಜಿಲ್ಲಾ ಜಾತ್ಯತೀತ ಜನತಾದಳ ಪಕ್ಷವನ್ನು ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಬೂತ್ ಮಟ್ಟದಿಂದ ಸಶಕ್ತವಾಗಿ ಕಟ್ಟಿ, ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಲಾಗುತ್ತದೆ ಎಂದು ತಿಳಿಸಿರುವ ಜೆಡಿಎಸ್ ನೂತನ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್, ಪಕ್ಷ ವಿರೋಧಿ ಚಟುವಟಿಕೆ ನಡೆಸುವವರನ್ನು ಪಕ್ಷದಿಂದಲೇ ಅಮಾನತುಗೊಳಿಸಲಾಗುವುದು ಎಂದು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷಕ್ಕಿಂತ ದೊಡ್ಡವರು ಯಾರೂ ಇಲ್ಲ, ಕೀಳು ಮಟ್ಟದ ರಾಜಕೀಯ ಮಾಡುವವನು ನಾನಲ್ಲ, ಮೌಲ್ಯ ಯುತವಾದ ರಾಜಕೀಯ ಮಾಡುವ ವ್ಯಕ್ತಿ ತಾನೆಂದು ಟೀಕಾಕಾರರಿಗೆ ಪ್ರತ್ಯುತ್ತರ ನೀಡಿದರು….
ದೇಶದ್ರೋಹ ಪ್ರಕರಣ: ಲಭ್ಯವಾಗದ ಸೂಕ್ತ ಸಾಕ್ಷ್ಯಾಧಾರ
March 2, 2019ಸೋಮವಾರಪೇಟೆ: ಇಲ್ಲಿನ ಪೊಲೀಸ್ ಠಾಣೆಯಲ್ಲಿ ಫೆ.20ರಂದು ದಾಖ ಲಾಗಿದ್ದ ದೇಶ ದ್ರೋಹ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ವಿರುದ್ಧ ಸೂಕ್ತ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ. ಹೀಗಾಗಿ ಆರೋಪಿಯನ್ನು ಬಂಧಿಸದೇ ಕೂಲಂಕುಷ ತನಿಖೆ ಮುಂದುವರಿಸಲಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ಸುಮನ ಡಿ.ಪೆನ್ನೇಕರ್ ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಉಮೇಶ್ ಎಂಬುವರು ದೂರು ದಾಖಲಿಸಿದ್ದಾರೆ. ದೂರಿನಲ್ಲಿ ಆರೋಪಿ ಪುಲ್ವಾಮಾ ದುರಂತವನ್ನು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾನೆ ಎಂದು ತಿಳಿಸಲಾಗಿತ್ತು. ಈ ಕುರಿತು ಸೋಮವಾರಪೇಟೆ ಪೊಲೀಸರು ದೇಶದ್ರೋಹ ಪ್ರಕರಣ ದಾಖಲಿಸಿ, ತನಿಖೆ ನಡೆಸಿದ್ದರು. ಆದರೆ ಆರೋಪಿ…
ಉಗ್ರರ ವಿರುದ್ಧ ಹೋರಾಟ: ಬಿಜೆಪಿಯಿಂದ ತಪ್ಪು ಸಂದೇಶ ರವಾನೆ
March 1, 2019ಮಡಿಕೇರಿ: ಉಗ್ರರ ವಿರುದ್ಧ ಭಾರತೀಯ ಯೋಧರು ನಡೆಸಿರುವ ಕಾರ್ಯಾಚರಣೆಯ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷರು ನೀಡಿರುವ ಹೇಳಿಕೆ, ಆ ಪಕ್ಷದ ಭಾವನೆ ಏನು ಎನ್ನುವುದನ್ನು ಸಾಬೀತುಪಡಿಸಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಟೀಕಿಸಿದ್ದಾರೆ. ಕುಶಾಲನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಆಗಮಿಸಿದ್ದ ಅವರು, ಹಾರಂಗಿ ಹೆಲಿ ಪ್ಯಾಡ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ದೇಶ ರಕ್ಷಣೆ ಮಾಡುತ್ತಿರುವ ಯೋಧರ ವಿಚಾರದಲ್ಲಿ ಯಾರೂ ಚೆಲ್ಲಾಟವಾಡಬಾರದು, ಇದರಿಂದ ದೇಶಕ್ಕೆ ಮತ್ತು ದೇಶದ ಜನಕ್ಕೆ ಯಾವುದೇ ಲಾಭವಿಲ್ಲವೆಂದು ಅಭಿಪ್ರಾಯಪಟ್ಟ ಮುಖ್ಯಮಂತ್ರಿಗಳು, ವಾಸ್ತವಾಂಶಗಳನ್ನು ಮರೆಮಾಚಿ ಜನರಿಗೆ…
ಸಿದ್ದಾಪುರಲ್ಲಿ ರೈತ ಸಂಘದ ಸಭೆ: ಅಮಾಯಕ ಕಾರ್ಮಿಕರ ಮೇಲೆ ಹಲ್ಲೆ ಸಲ್ಲ
February 24, 2019ಗೋಣಿಕೊಪ್ಪಲು: ಸಿದ್ದಾಪು ರದ ತೋಟದಲ್ಲಿ ನಡೆದ ಸಂಧ್ಯಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು. ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆಯಾಗುವಂತೆ ಇಲಾಖೆ ಕ್ರಮ ವಹಿಸಬೇಕು. ಈ ಪ್ರಕರ ಣಕ್ಕೆ ಸಂಬಂಧಿಸಿದಂತೆ ಅಮಾಯಕ ಕಾರ್ಮಿ ಕರ ಮೇಲೆ ಹಲ್ಲೆ ಪ್ರಯತ್ನ ನಡೆಯಬಾ ರದು, ಬೆಳೆಗಾರರು ಹಾಗೂ ಕಾರ್ಮಿಕರ ನಡುವೆ ಇರುವ ಉತ್ತಮ ಬಾಂಧವ್ಯವನ್ನು ಹಾಳು ಮಾಡದಂತೆ ಎಚ್ಚರ ವಹಿಸಬೇ ಕೆಂದು ರೈತ ಸಂಘ ಆಗ್ರಹಿಸಿದೆ. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ…
ಮೂವರು ಅಂತರರಾಜ್ಯ ಕಳ್ಳರ ಬಂಧನ
February 22, 2019ಎರಡು ಬೈಕ್ ಸೇರಿದಂತೆ ಮೂರು ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ ಗೋಣಿಕೊಪ್ಪಲು: ಕಳ್ಳತನವನ್ನೇ ವೃತ್ತಿಯಾಗಿಸಿಕೊಂಡಿದ್ದ ಮೂವರು ಅಂತರ ರಾಜ್ಯ ಖದೀಮರನ್ನು ಬಂಧಿಸುವಲ್ಲಿ ಪೊಲೀ ಸರು ಯಶಸ್ವಿಯಾಗಿದ್ದು, ಆರೋಪಿಗಳಿಂದ 2 ಬೈಕ್ ಹಾಗೂ ಮೂರು ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಕೇರಳ ರಾಜ್ಯದ ಕಣ್ಣೂರು ಜಿಲ್ಲೆ ಇರಟಿ ತಾಲೂ ಕಿನ ಉಳಿಕಲ್ ಪಂಚಾಯ್ತಿಯ ಮಂಡವ ಪರಂಬು ಗ್ರಾಮದ ಮೊಯ್ದು ಅವರ ಪುತ್ರ ಟಿ.ಎ. ಸಲೀಂ(39), ಕಣ್ಣೂರು ಜಿಲ್ಲೆ ಮಟ್ಟ ನೂರಿನ ನಡುವಕಾಡು ಗ್ರಾಮದ ಕೀಯಕ್ಕೆ ವೀಡುವಿನ…
ಸಚಿವ ಸಾರಾ ಮಹೇಶ್ ಹೆಸರಲ್ಲಿ ಲಕ್ಷ ರೂ. ವಂಚನೆ: ಆರೋಪಿಗಳ ಬಂಧನ
February 22, 2019ಮಡಿಕೇರಿ: ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಹೆಸರಿ ನಲ್ಲಿ ವ್ಯಕ್ತಿಯೊಬ್ಬರಿಗೆ 1.1 ಲಕ್ಷ ರೂ. ವಂಚಿ ಸಿದ ಆರೋಪಿಗಳನ್ನು ಬಂಧಿಸುವಲ್ಲಿ ಮಡಿ ಕೇರಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಬ್ಯಾಡರಪೇಟೆ ನಿವಾಸಿ ಸಯ್ಯದ್ ಮುಬಾರಕ್(28) ಮತ್ತು ಸಯ್ಯದ್ ಖಲೀಲ್(28) ಬಂಧಿತ ಆರೋಪಿಗಳು. ಆರೋಪಿಗಳ ವಿರುದ್ಧ ಬೆಂಗಳೂರಿನ ಕೆ.ಆರ್. ಪುರಂ, ಕೆಂಗೇರಿ, ಕೋರಮಂಗಲ, ಮಡಿವಾಳ, ಜಯನಗರ, ಜಿಗಣಿ, ಮಾಲೂರು ಪೊಲೀಸ್ ಠಾಣೆಗಳಲ್ಲಿ 10ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಜನರನ್ನು ವಂಚಿಸುವುದನ್ನೇ…
ಸೇತುವೆಯಿಂದ ಕೆಳಗೆ ಬಿದ್ದ ಕಾರು
February 19, 2019ಸೋಮವಾರಪೇಟೆ: ಪಟ್ಟಣದಿಂದ ಮಡಿಕೇರಿಗೆ ತೆರಳುವ ಮಾರ್ಗ ಮಧ್ಯೆ, ಐಗೂರು-ಕಬ್ಬಿಣ ಸೇತುವೆ ಬಳಿ ಚಾಲ ಕನ ನಿಯಂತ್ರಣ ತಪ್ಪಿದ ಕಾರೊಂದು ಸೇತುವೆ ಯಿಂದ ಕೆಳ ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಅಪಾಯಗಳು ಸಂಭವಿಸಿಲ್ಲ. ಪಟ್ಟಣ ಸಮೀಪದ ಆಲೇಕಟ್ಟೆ ನಿವಾಸಿ ಪ್ರೇಮಾ ಎಂಬವರು ಚಾಲಿಸುತ್ತಿದ್ದ ಕಾರು ಕಬ್ಬಿಣ ಸೇತುವೆ ಬಳಿಯಲ್ಲಿ ತೆರಳುವ ಸಂದರ್ಭ, ಎದು ರಿನಿಂದ ಪಿಕ್ಅಪ್ ವಾಹನ ಆಗಮಿಸಿತೆನ್ನ ಲಾಗಿದೆ. ಆ ವಾಹನಕ್ಕೆ ಜಾಗ ಕಲ್ಪಿಸಲು ಮುಂದಾದ ಸಂದರ್ಭ ಕಾರು ನಿಯಂತ್ರಣ ಕಳೆದುಕೊಂಡಿದೆ. ಪರಿಣಾಮ ಸೇತುವೆಯಿಂದ ಕೆಳಭಾಗಕ್ಕೆ ಬಿದ್ದಿದೆ. ಕೆಳಭಾಗದ…